1:09 AM Monday31 - August 2026
ಬ್ರೇಕಿಂಗ್ ನ್ಯೂಸ್
*ಡಿಸೆಂಬರ್ ಒಳಗೆ ಜಗತ್ತಿಗೆ ಗಂಡಾತರ: ‘ಅಷ್ಟಮಂಗಲ ಪ್ರಶ್ನೆ’ಯಲ್ಲಿ ಕಾಳಸರ್ಪ ದೋಷದ ಭವಿಷ್ಯ* ಚಾಮರಾಜನಗರ | ಒಂಟಿ ಸಲಗದ ಜತೆ ಪ್ರಾಣ ಪಣಕ್ಕಿಟ್ಟು ಸೆಲ್ಫಿ; ಬೈಕ್ ಸವಾರರ… ಸೆಪ್ಟೆಂಬರ್ 8 ಮಾತೆ ಮರಿಯಮ್ಮನವರ ಜನ್ಮದಿನ ಹಬ್ಬಕ್ಕೆ ಸಾರ್ವತ್ರಿಕ ರಜೆ ಘೋಷಿಸಲು ಆಗ್ರಹ ಕುಡಿದು ಗಾಡಿ ಚಲಾಯಿಸಿದ ಯುವಕನ ತಡೆಯಲೆತ್ನಿಸಿದ ಪೊಲೀಸ್ ಸಿಬ್ಬಂದಿ: ಖಾಕಿಗೆ ಕುಡುಕನಿಂದ ಅವಾಜ್;… ಕುಕ್ಕೆ ಸುಬ್ರಹ್ಮಣ್ಯ: ಭಕ್ತರ ಗಮನಕ್ಕೆ; ಈ ದಿನಗಳಲ್ಲಿ ಕ್ಷೇತ್ರದಲ್ಲಿ ಸರ್ಪಸಂಸ್ಕಾರ ಪೂಜೆ ಇರೋದಿಲ್ಲ ತುಳುನಾಡಿನ ದೈವಗಳಿಗೆ ನಟ ದರ್ಶನ್ ಪತ್ನಿ ಮೊರೆ: ಪತಿಯ ಸಂಕಷ್ಟದಿಂದ ಪಾರು ಮಾಡಲು… ಭಾರತ್ ಸಿನಿಮಾಸ್ ಗೆ ‘ವರ್ಷದ ಪ್ರಾದೇಶಿಕವಾಗಿ ಉದಯೋನ್ಮುಖ ಸಿನಿಮಾ ಸರಣಿ’ ಪ್ರಶಸ್ತಿ ಡಿ.ಕೆ. ಸುರೇಶ್, ಸಚಿವ ಬಾಲಕೃಷ್ಣ ಅವರದ್ದು ಸೂಟ್‌ಕೇಸ್ ಬೃಂದಾವನ: ಕೇಂದ್ರ ಸಚಿವ ಎಚ್.ಡಿ.… *ದುಬಾರಿ ಹಣ ಕೊಟ್ಟು ಜನ ನೀರಿನ ಬಾಟಲಿ ಖರೀದಿಸುತ್ತಾರೆ, 50 ರೂ. ಕೊಟ್ಟು… ವಾಕಿಂಗ್ ಮಾಡುತ್ತಿದ್ದ ಇಬ್ಬರಿಗೆ ಕಾರು ಡಿಕ್ಕಿ: ಓರ್ವ ದುರ್ಮರಣ; ಇನ್ನೋರ್ವ ಗಂಭೀರ

ಇತ್ತೀಚಿನ ಸುದ್ದಿ

Bangaluru | ವೈದ್ಯ ದಂಪತಿಯಿಂದ ಮನೆಯಲ್ಲೇ ನವದುರ್ಗೆಯರ ಆರಾಧನೆ: ಸಾಲು ಸಾಲು ದಸರಾ ಬೊಂಬೆಗಳ ಆಕರ್ಷಣೆ

03/10/2025, 14:17

ಡಿ.ಎಲ್. ಹರೀಶ್ ಬೆಂಗಳೂರು

info.reporterkarnataka@gmail.com

ದಸರಾ ಎಂದರೆ ವಿಜಯದ ಹಬ್ಬ. ಬಹಳಷ್ಟು ಜನರು ತಮ್ಮ ಆರ್ಥಿಕ ಗುರಿಗಳನ್ನು ಸಾಧಿಸಲು ನವ ದುರ್ಗೆಯರ ಪೂಜೆಯನ್ನು ಮಾಡುತ್ತಾರೆ. ದೇವಸ್ಥಾನ, ಮಠ, ಮಂದಿರಗಳಿಗೆ ತೆರಳಿ ಶರನ್ನವರಾತ್ರಿ ಆಚರಿಸುತ್ತಾರೆ. ಆದರೆ ಬೆಂಗಳೂರಿನ ಜೆ.ಪಿ.ನಗರದ ಎರಡನೇ ಹಂತದಲ್ಲಿ ಇರುವ ವೈದ್ಯ ದಂಪತಿ ತಮ್ಮ ಮನೆಯನ್ನು ದೇವಸ್ಥಾನವಾಗಿ ಪರಿವರ್ತಿಸುವ ಮೂಲಕ ವಿವಿಧ ರೀತಿಯ ದಸರಾ ಬೊಂಬೆಗಳನ್ನು ಕೂರಿಸಿ ಹತ್ತು ದಿನಗಳ ಕಾಲ ನೇಮ ನಿಷ್ಠೆ ಶ್ರದ್ಧೆ ವಹಿಸಿ ಪೂಜಿಸಿದ್ದಾರೆ.
ಹೃದ್ರೋಗ ತಜ್ಞರಾದ ಡಾ.ಹೆಚ್.ಎಸ್. ನಟರಾಜ್ ಶೆಟ್ಟಿ ಮತ್ತು ಸ್ಕಿನ್ ಸ್ಪೆಶಲಿಷ್ಟ ಡಾ.ಎ.ಬಿ.ಶಿಲಾ ನಟರಾಜ್ ತಮ್ಮ ಮನೆಯಲ್ಲಿ ಕೂರಿಸಿರುವ ಬೂಂಬೆಗಳು ಒಂದೊಂದು ಕ್ಷೇತ್ರದ ಮೇಲೆ ಬೆಳಕು ಚೆಲ್ಲುತ್ತದೆ.

ಮೈಸೂರು ಅರಮನೆ ದರ್ಬಾರ್ ಹಾಲ್, ಜಂಬೂ ಸವಾರಿ, ಜಟ್ಟಿ ಕಾಳಗ, ರಾಮ, ಲಕ್ಷ್ಮಣ, ಭರತ, ಶತೃಘ್ನ ತೊಟ್ಟಿಲು ಮಕ್ಕಳಾಗಿ ಹುಟ್ಟುವ ಮೂಲಕ ಶುರುವಾಗುವ ರಾಮಾಯಣದ ಕಥೆ ಸೀತಾ ಸ್ವಯಂವರ, ಸೀತಾ ಅಪಹರಣ, ಲಂಕಾಧೀಶ್ವರ ರಾವಣನ ಆಸ್ಥಾನದಲ್ಲಿ ಹನುಮಂತನ ಬಾಲದ ಸಿಂಹಾಸನ, ಅಶೋಕ ವನ, ರಾಮಸೇತು ನಿರ್ಮಾಣ, ರಾವಣನ ಸಂಹಾರ, ‌ಕುಂಭಕರ್ಣನ ಗಾಢವಾಗಿ ನಿದ್ರೆಗೆ ಜಾರಿರುವುದು, ತಿರುವಣ್ಣಾಮಲೈ ಅರುಣಾಚಲೇಶ್ವರ ದೇವಾಲಯ ಹೀಗೆ ಎಲ್ಲವೂ ಒಂದು ರೀತಿಯಲ್ಲಿ ಆಕರ್ಷಿಸುತ್ತದೆ. ಅದರಲ್ಲೂ ವಿಶೇಷವಾಗಿ ಕಾಶಿ ವಿಶ್ವನಾಥನ ಸನ್ನಿಧಿ ಪಕ್ಕದಲ್ಲಿ ಹರಿಯುವ ಗಂಗಾನದಿ. ಅದರ ತಟದಲ್ಲಿರುವ ಹರಿಶ್ಚಂದ್ರ ಘಾಟ್ .ಅಲ್ಲಿ ಮನುಷ್ಯನ ದೇಹವನ್ನು ಸುಡುವ ಚಿತ್ರಣವು ಮಾತ್ರ ಗಮನ ಸೆಳೆಯಿತು. ಮನುಷ್ಯ ಹುಟ್ಟಿನಿಂದ ಮರಣದ ವರಗೆ ಸಾರುವ ಒಂದು ವಿಶಿಷ್ಟವಾದ ಅನುಮತಿ ನೀಡುತ್ತದೆ.

ಹತ್ತನೇ ದಿನ ದುರ್ಗಾದೇವಿ ಮೂರ್ತಿ ಆರಾಧನೆ ಎಲ್ಲರ ಮನ ಸೂರೆಮಾಡುತ್ತದೆ. ಸಾಕ್ಷತ್ ದೇವಿ ಇಲ್ಲಿ ನೆಲೆಸಿದ್ದಾಳೆ ಎಂದು ಭಾಸವಾಗುತ್ತದೆ. ನಿಜಕ್ಕೂ ಬಹಳ ಅರ್ಥಪೂರ್ಣವಾಗಿ ತಿಳಿವಳಿಕೆ ನೀಡುವ ಉದ್ದೇಶದಿಂದಲೇ ದಸರಾ ಹಬ್ಬದ ಸಂದರ್ಭದಲ್ಲಿ ಬೊಂಬೆಗಳನ್ನು ವೈದ್ಯ ದಂಪತಿಗಳು ಕೂರಿಸಿದ್ದಾರೆ ಎನಿಸುತ್ತದೆ.

ಇತ್ತೀಚಿನ ಸುದ್ದಿ

ಜಾಹೀರಾತು