12:09 PM Thursday6 - August 2026
ಬ್ರೇಕಿಂಗ್ ನ್ಯೂಸ್
2029ರಲ್ಲಿ ರಾಹುಲ್ ಗಾಂಧಿ ಪ್ರಧಾನಿ ಮಾಡುವುದೇ ನಮ್ಮ ಗುರಿ: ಕೊಡಗು ಜಿಲ್ಲಾ ಉಸ್ತುವಾರಿ… ಮಹಾಮಳೆಗೆ ಕೇರಳ ತತ್ತರ; ಬಹುತೇಕ ಪ್ರದೇಶ ಮುಳುಗಡೆ; ಅಪಾಯ ಮಟ್ಟ ಮೀರಿ ಹರಿಯುತ್ತಿರುವ… *ಬಿರುಗಾಳಿಗೆ ಸಿಲುಕಿ ಆಗಸದಲ್ಲೇ 300 ಅಡಿ ಕೆಳಗೆ ಕುಸಿದ ಏರ್ ಇಂಡಿಯಾ ವಿಮಾನ:… *10 ಲಕ್ಷ ರೂ. ಲಂಚಕ್ಕೆ ಬೇಡಿಕೆ; ಲೋಕಾಯುಕ್ತ ಬಲೆಗೆ ಬಿದ್ದ ಹುಣಸೂರು ಉಪವಿಭಾಗಾಧಿಕಾರಿ… ವಿಧಾನ ಪರಿಷತ್‌ ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ ರಾಜೀನಾಮೆ ಸಂಪುಟ ವಿಸ್ತರಣೆ | ಕೊನೆ ಕ್ಷಣದಲ್ಲಿ 3 ಬಾರಿ ಪಟ್ಟಿ ಬದಲು: ಗಾಯತ್ರಿ… ಸಂಪುಟ ವಿಸ್ತರಣೆ | ಈ ಬಾರಿಯೂ ಕೊಡಗಿಗೆ ಒಲಿಯದ ಮಂತ್ರಿಗಿರಿ: ವಿರಾಜಪೇಟೆ ಶಾಸಕ… ಮೈಸೂರಿಗೆ ಪ್ರಧಾನಿ ಮೋದಿ: ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಯುವ ಕೇಂದ್ರ ವಿವೇಕ ಸ್ಮಾರಕ… ಭಾರತದ ಭವ್ಯ ಪರಂಪರೆ ಮೈಸೂರಿನ ಕಣಕಣದಲ್ಲಿದೆ: ವಿವೇಕ ಸ್ಮಾರಕ ಉದ್ಘಾಟಿಸಿ ಪ್ರಧಾನಿ ಮೋದಿ… ಸಿದ್ದಾಪುರ: ದೇವಾಲಯ ಆವರಣದಲ್ಲಿ ಗೋರಿ ನಿರ್ಮಾಣ ಪ್ರಕರಣ; 8 ಮಂದಿ ಬಂಧನ

ಇತ್ತೀಚಿನ ಸುದ್ದಿ

ಅಂದು ಪಂಪವೆಲ್ ಗ್ ಬಲೆ! ಇಂದು ಪಂಪವೆಲ್ ಗ್ ಬರೋಚ್ಚಿ !!

29/05/2021, 16:48

ಮಂಗಳೂರು: ಇಂದು ಪಂಪವೆಲ್ ನೀರಿನಲ್ಲಿ ತೇಲಾಡುತ್ತಿದೆ. ಪಂಪವೆಲ್ ಮಾರ್ಗವಾಗಿ ಹೋಗುವವರು ಬೇರೆದಾರಿ ಹುಡುಕುವುದು ಉತ್ತಮ. ಯಾಕೆಂದರೆ ಪಂಪವೆಲ್ ಮೇಲ್ಸೆತುವೆ ಅಡಿಯಲ್ಲಿ ನೀರುತುಂಬಿ ವಾಹನ ಸವಾರರು ಪರದಾಡುತ್ತಿದ್ದಾರೆ.  ಪಂಪವೆಲ್ ಪ್ಲೈಒವರ್ ಆಗುವಾಗಲೂ ನಮ್ಮದು ಅವಸ್ಥೆ ! ಈಗ ಆದಮೇಲೂ ದುರವಸ್ಥೆ. ಒಟ್ಟು ನಮ್ಮೂರಿನ ಹಣೆಬರಹ ಸರಿ ಇಲ್ಲವಾ ಅಂತ ಅನುಸುತ್ತೆ.  


ಪ್ಲೈಒವರ್ ದಶಮಾನೋತ್ಸವ ಆಚರಿಸಿಕೊಂಡ ಬಳಿಕ ಅಳುತ್ತ ಅಳುತ್ತ ಉದ್ಘಾಟನಾ ಭಾಗ್ಯ ಕಂಡಿದ್ದ ಮೇಲ್ಸೇತುವೆ ಅಂದು ಪಂಪವೆಲ್ ಗೆ ಬಲೆ! ಎಂದು ಪ್ರಸಿದ್ಧಿಯಾಗಿದ್ದರೆ ಇಂದು ತನ್ನ ಕಳಪೆ ಕಾಮಗಾರಿಯಿಂದಾಗಿ ಮಂಗಳೂರಿನ ಜನರ ಬಾಯಲ್ಲಿ ಪಂಪವೆಲ್ ಗೆ ಬರೋಚ್ಚಿ!! ಎಂದು ಪ್ರಸಿದ್ದಿಯಗುತ್ತಿದೆ. ಕಾರಣವಿಷ್ಟೆ! ನವಯುಗ ಎಂಬ ದರಿದ್ರ ಕಂಪನಿಯ ಬೇಜವಾಬ್ದಾರಿ, ದರಿದ್ರತನ, ಬುದ್ದಿಗೇಡಿತನದ ಹಾಗೂ ನಿಷ್ಕ್ರಿಯ ತನದ ಫಲವನ್ನು ಮಂಗಳೂರಿಗರು ಅನುಭವಿಸಬೇಕಿದೆ. ಇದನ್ನೆಲ್ಲ ಗಮನಿಸಿ ಎಚ್ಚೆತ್ತುಕೊಂಡು ಆವಾಂತರಗಳನ್ನು ಸರಿಪಡಿಸಬೇಕಿದ್ದ ಜನಪ್ರತಿನಿಧಿಗಳು ಮಾತ್ರ ನಿದ್ದೆಮಾಡುತ್ತಿರುವುದು ನಮ್ಮೂರಿಗಿರುವ ಮತ್ತೊಂದು ಶಾಪ. ಒಟ್ಟಿನಲ್ಲಿ ಹೇಳುವುದಾದ್ರೆ ಅಪ್ಪ ಅಮ್ಮನ ಜಗಳದಲ್ಲಿ ಕೂಸುಬಡವಾದಂತೆ ಮಂಗಳೂರಿಗರ ಸ್ಥಿತಿಯಾಗಿದೆ.

– ದಿಲ್ ರಾಜ್ ಆಳ್ವ

ಇತ್ತೀಚಿನ ಸುದ್ದಿ

ಜಾಹೀರಾತು