9:21 PM Saturday27 - June 2026
ಬ್ರೇಕಿಂಗ್ ನ್ಯೂಸ್
ವಿರಾಜಪೇಟೆ: ಕಾಡಾನೆ ದಾಳಿಯಿಂದ ಕೂದಲೆಳೆ ಅಂತರದಲ್ಲಿ ಮಹಿಳೆ ಪಾರು ಮಂಗಳೂರಿನಲ್ಲೇ ಇದ್ದಿದ್ದರೆ ಶಿಕ್ಷಕನಾಗಿರುತ್ತಿದ್ದೆ: ಬಾಲಿವುಡ್ ಬಾದ್ ಶಾ ಶಾರುಖ್‌ ಖಾನ್ ಎಐ ತಂತ್ರಜ್ಞಾನದಲ್ಲಿ ಗೃಹಿಣಿಯ ಫೋಟೋ ಎಡಿಟ್; 30 ಲಕ್ಷಕ್ಕೆ ಬೇಡಿಕೆ; ಮಹಿಳೆ ಆತ್ಮಹತ್ಯೆಗೆ… ಟ್ರಾಫಿಕ್ ಸಮಸ್ಯೆಯಾಗಿದ್ದು ನಿಜ, ನೀಟ್ ವಿದ್ಯಾರ್ಥಿಗಳಿಗೆ ತೊಂದರೆಯಾಗಿದ್ದರೆ ಸಹಾಯ ಮಾಡ್ತೀವಿ: ಕೆಪಿಸಿಸಿ ಅಧ್ಯಕ್ಷ… ಚನ್ನಪಟ್ಟಣ | ಎಕ್ಸ್​ಪ್ರೆಸ್​ ರಸ್ತೆಯಲ್ಲಿ ಭೀಕರ ಅಪಘಾತ: ಕಾರಿನ ಚಕ್ರ ಸ್ಫೋಟಗೊಂಡು ಚಾಲಕ… ಹಸೆಮಣೆ ಏರಬೇಕಿದ್ದಾಕೆಗೆ ಪಾಪಿ ಯುವಕನಿಂದ ಬೆದರಿಕೆ: ಮಾನಕ್ಕೆ ಅಂಜಿ ಒಂದೇ ಕುಟುಂಬದ ಮೂವರು… ಚುನಾವಣೆಗಷ್ಟೇ ಅಲ್ಲ, ಸಿದ್ಧಾಂತದ ಬಲವರ್ಧನೆಗೆ ಕೆಪಿಸಿಸಿ ಅಧ್ಯಕ್ಷರಾಗಿ ಹರಿಪ್ರಸಾದ್ ಆಯ್ಕೆ: ಮಾಜಿ ಸಿಎಂ… ತೀರ್ಥಹಳ್ಳಿ | ಶಿವರಾಜಪುರ ಬಳಿ ಎರಡು ಕಾರುಗಳ ನಡುವೆ ಭೀಕರ ಅಪಘಾತ: ಸಂಪೂರ್ಣ… Bangalore | ಬಿಡದಿ ಟೌನ್‌ಶಿಪ್ ವಿರುದ್ಧ ನಿಖಿಲ್ ಕುಮಾರಸ್ವಾಮಿ ಪಾದಯಾತ್ರೆಗೆ ಗ್ರಾಮಸ್ಥರ ತಡೆ:… ಬೆಂಗಳೂರು ಅರಮನೆ ಮೈದಾನದಲ್ಲಿ ಬೃಹತ್ ಸಮಾರಂಭ: ಕೆಪಿಸಿಸಿ ಅಧ್ಯಕ್ಷ ಗದ್ದುಗೆ ಏರಿದ ಖಡಕ್…

ಇತ್ತೀಚಿನ ಸುದ್ದಿ

America | ‘ರಮೇಶ್ ಅರವಿಂದ್ ಡೇ’: ಅಮೆರಿಕದ ಟೆಕ್ಸಸ್ ಆಸ್ಟಿನ್ ಪಟ್ಟಣದ ಜನತೆಯಿಂದ ಕನ್ನಡದ ಖ್ಯಾತ ನಟನಿಗೆ ಗೌರವ

26/08/2025, 15:52

ಟೆಕ್ಸೆಸ್(reporterkarnataka.com): ಅಮೆರಿಕದ ಟೆಕ್ಸೆಸ್, ಆಸ್ಟಿನ್ ನಗರದಲ್ಲಿ ನಡೆದ “ಡೇ ಆಫ್ ಗ್ರಾಟಿಟ್ಯೂಡ್ 2025” ಸಮಾರಂಭದಲ್ಲಿ ರಮೇಶ್ ಅರವಿಂದ್ ಇವರ ಜೀವನ ಅನುಭವದ -ನಟನೆ, ನಿರ್ದೇಶನ ಮತ್ತು ಸಿನಿಮಾ ಹಾಗೂ ತನ್ನ ಸ್ಪೂರ್ತಿದಾಯಕ ಮಾತುಗಳಿಂದ ಜನ-ಮಾನಸದಲ್ಲಿ ಬೆಳೆದು ನಿಂತ ಕಾರಣಕ್ಕಾಗಿ “ರಮೇಶ್ ಅರವಿಂದ್ ಡೇ” ಆಚರಿಸಿ ಅವರನ್ನು ಗೌರವಿಸಲಾಯಿತು.
ಆಸ್ಟಿನ್ ನಗರದ “ಪ್ರೋಕ್ಲಮೇಷನ್ ಡೇ” ದಿನದಂದು ಅಲ್ಲಿನ ಮೇಯರ್, ಪ್ರೊಟೆಮ್ ವನೀಸಾ ಇವರು ಟೆಕ್ಸನ್ ಗವರ್ನರ್ ಗ್ರೆಗ್ ಅಬೌಟ್ ಅವರ ಸಂದೇಶದ ಸನ್ಮಾನ ಪತ್ರವನ್ನು ನೀಡಿ ಗೌರವಿಸಿದರು.

ಗ್ರಾಟಿಟ್ಯೂಟ್ ಡೇ , ಸಂಸ್ಥಾಪಕ ಎಂ. ಜೆ. ಚಾರ್ಮನಿ ಇವರ ಸ್ವಾಗತದೊಂದಿಗೆ .ಅಗಸ್ಟ್ 23 ರಂದು , ಸಾವಿರಾರು ಗಣ್ಯರ ಸಮ್ಮುಖದಲ್ಲಿ ಈ ಸನ್ಮಾನ ಕಾರ್ಯಕ್ರಮ ನಡೆಯಿತು. ಆಸ್ಟಿನ್ ನಗರದ ಚೀಫ್ ಲರ್ನಿಂಗ್ ಆಫೀಸರ್, ಮೀಚಲೇ ಲಾ ಟೋರನ್ ಉಪಸ್ಥಿತರಿದ್ದರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ರಮೇಶ್ ಅರವಿಂದ್, “ಈ ಕಾರ್ಯಕ್ರಮ ನನ್ನ ಜೀವನದ ಅಭೂತಪೂರ್ವ ಕ್ಷಣ. ಇದನ್ನು ನಾನು ಮರೆಯಲಾರೆ” ಎಂದರು.

ಇತ್ತೀಚಿನ ಸುದ್ದಿ

ಜಾಹೀರಾತು