10:26 PM Wednesday5 - August 2026
ಬ್ರೇಕಿಂಗ್ ನ್ಯೂಸ್
2029ರಲ್ಲಿ ರಾಹುಲ್ ಗಾಂಧಿ ಪ್ರಧಾನಿ ಮಾಡುವುದೇ ನಮ್ಮ ಗುರಿ: ಕೊಡಗು ಜಿಲ್ಲಾ ಉಸ್ತುವಾರಿ… ಮಹಾಮಳೆಗೆ ಕೇರಳ ತತ್ತರ; ಬಹುತೇಕ ಪ್ರದೇಶ ಮುಳುಗಡೆ; ಅಪಾಯ ಮಟ್ಟ ಮೀರಿ ಹರಿಯುತ್ತಿರುವ… *ಬಿರುಗಾಳಿಗೆ ಸಿಲುಕಿ ಆಗಸದಲ್ಲೇ 300 ಅಡಿ ಕೆಳಗೆ ಕುಸಿದ ಏರ್ ಇಂಡಿಯಾ ವಿಮಾನ:… *10 ಲಕ್ಷ ರೂ. ಲಂಚಕ್ಕೆ ಬೇಡಿಕೆ; ಲೋಕಾಯುಕ್ತ ಬಲೆಗೆ ಬಿದ್ದ ಹುಣಸೂರು ಉಪವಿಭಾಗಾಧಿಕಾರಿ… ವಿಧಾನ ಪರಿಷತ್‌ ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ ರಾಜೀನಾಮೆ ಸಂಪುಟ ವಿಸ್ತರಣೆ | ಕೊನೆ ಕ್ಷಣದಲ್ಲಿ 3 ಬಾರಿ ಪಟ್ಟಿ ಬದಲು: ಗಾಯತ್ರಿ… ಸಂಪುಟ ವಿಸ್ತರಣೆ | ಈ ಬಾರಿಯೂ ಕೊಡಗಿಗೆ ಒಲಿಯದ ಮಂತ್ರಿಗಿರಿ: ವಿರಾಜಪೇಟೆ ಶಾಸಕ… ಮೈಸೂರಿಗೆ ಪ್ರಧಾನಿ ಮೋದಿ: ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಯುವ ಕೇಂದ್ರ ವಿವೇಕ ಸ್ಮಾರಕ… ಭಾರತದ ಭವ್ಯ ಪರಂಪರೆ ಮೈಸೂರಿನ ಕಣಕಣದಲ್ಲಿದೆ: ವಿವೇಕ ಸ್ಮಾರಕ ಉದ್ಘಾಟಿಸಿ ಪ್ರಧಾನಿ ಮೋದಿ… ಸಿದ್ದಾಪುರ: ದೇವಾಲಯ ಆವರಣದಲ್ಲಿ ಗೋರಿ ನಿರ್ಮಾಣ ಪ್ರಕರಣ; 8 ಮಂದಿ ಬಂಧನ

ಇತ್ತೀಚಿನ ಸುದ್ದಿ

ಅಡ್ಡ ಗೋಡೆ ಮೇಲೆ ದೀಪ ಇಟ್ಟ ಹಾಗೆ ಲಾಕ್‌ಡೌನ್ : ತಿರುಗಾಡುವವರಿಗೆ ಬ್ರೇಕ್ ಇಲ್ಲ, ಸರಕಾರಿ ನಿಯಮಗಳಿಗೆ ತಲೆಬುಡ ಇಲ್ಲ.!!

30/04/2021, 22:47

ಮಂಗಳೂರು(reporterkarnataka): ಕೊರೋನಾ ಎರಡನೇ ಅಲೆ ಹೆಚ್ಚುತ್ತಿರುವ ಹಿನ್ನೆಲೆ ಯಲ್ಲಿ ರಾಜ್ಯದಯಾಂತ ಲಾಕ್ ಡೌನ್ ಹೇರಿಕೆಯಾಗಿ 2 ದಿನ ಗಳು ಕಳೆದಿದೆ.
ಕೆಲವು ಕಟ್ಟು ನಿಟ್ಟಿನ ಕ್ರಮ ಜಾರಿಯಲ್ಲಿದೆ. ಅದರಂತೆ ದ.ಕ. ಜಿಲ್ಲೆಯಲ್ಲಿ ಎರಡನೇ ದಿನವಾದ ಇಂದು ಕೂಡ ಲಾಕ್ ಡೌನ್ ಜಾರಿಯಲ್ಲಿತ್ತು.

ಆದರೆ ನಗರದ ಹಲವು ಕಡೆಗಳಲ್ಲಿ ಅನಗತ್ಯ ತಿರುಗಾಟಗಳು ಹೆಚ್ಚಾಗಿದೆ. ಅಗತ್ಯ ಸೇವೆ ಹೊರತು ಪಡಿಸಿ ಇನ್ಯಾವ ಸೇವೆಗಳಿಗೂ ಅನುಮತಿ ಇಲ್ಲ, ಶಾಲಾ ಕಾಲೇಜು ಖಾಸಗಿ ಕಛೇರಿಗಳು ಬಂದ್ ಮಾಡುವಂತೆ ನಿರ್ಬಂಧವಿದ್ದರೂ., ಜನರು ನಗರಗಳಿಗೆ ಬರುತ್ತಿದ್ದಾರೆ. ಪೋಲಿಸರು ಅಲ್ಲಲ್ಲಿ ನಾಕಾಬಂದಿ ಹಾಕಿದ್ದರೂ ಲಾಕ್ ಡೌನ್‌ನ ಮಹತ್ವ ಜನರಿಗೆ ತಿಳಿದಿಲ್ಲವೇ. ಅಥವಾ ಇಲಾಖೆ ಮೈ ಮರೆತಿದೆಯೋ ಗೊತ್ತಾಗುತ್ತಿಲ್ಲ. ಪರಿಸ್ಥಿತಿ ಗಮನಿಸಿ ಜನರೇ ಹಿಡಿ ಶಾಪ ಹಾಕುತ್ತಿದ್ದಾರೆ.

ಜನರೇ ಹೇಳುವಂತೆ ಪೊಲೀಸರು ತಪಾಸಣೆ ನಡೆಸುತ್ತಿಲ್ಲ. ಹಾಗಿದ್ದರೆ 54 ಕಡೆ ಔಟ್ ಪೋಸ್ಟ್ ಯಾತಕ್ಕಾಗಿ ಬರಿ ತೋರಿಕೆಗಾಗಿಯೇ. ಅನಗತ್ಯ ಕಾರುಗಳ ಓಡಾಟ ಜಾಸ್ತಿಯಾಗಿದೆ. ತುರ್ತು ಸೇವೆ ರಹಿತ ವಾಹನಗಳು ಓಡಾಡುತ್ತಲಿವೆ.ಕಾಲೇಜು ಬಂದ್ ಎಂದು ಸರ್ಕಾರವೇ ಘೋಷಿಸಿ ದ ಮೇಲೆ ಕೆಲವು ಕಡೆ ಓಪನ್ ಇದೆ ಗುಮಾನಿ ಹರಡಿದ್ಧು ಆತಂಕಕ್ಕೆ ಕಾರಣವಾಗಿದೆ. ಎಲ್ಲಾ ನಿಯಮಗಳನ್ನು ಅಡ್ಡ ಗೋಡೆಯ ಮೇಲೆ ದೀಪ ಇಟ್ಟ ಹಾಗೆ ಈ ಲಾಕ್‌ಡೌನ್ ಪರಿಣಾಮಕಾರಿಯಾಗುವುದು ಸಾಧ್ಯ ಇದೆಯೇ ? ಇದ್ಯಾವ ಲಾಕ್ ಡೌನ್ ಎಂಬುದು ಜನ ಸಾಮಾನ್ಯರ ಪ್ರಶ್ನೆ.

ಇತ್ತೀಚಿನ ಸುದ್ದಿ

ಜಾಹೀರಾತು