6:18 PM Friday19 - June 2026
ಬ್ರೇಕಿಂಗ್ ನ್ಯೂಸ್
ವಿಧಾನ ಪರಿಷತ್ ಚುನಾವಣೆ ಫಲಿತಾಂಶ: ಫಲಿಸಿದ ಸಿಎಂ ಡಿಕೆಶಿ ರಣತಂತ್ರ; 5ರಲ್ಲಿ ಕೈ… ಬಾರ್ಬರ್ ಶಾಪ್‌ನಿಂದ ಬಿ-ಸ್ಕೂಲ್‌ವರೆಗೆ: ತಂದೆಯ ಕತ್ತರಿ ಹಿಡಿದ ಬಿಬಿಎ ವಿದ್ಯಾರ್ಥಿನಿ ಬಿಂದುಪ್ರಿಯಾ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ: ಕರಾವಳಿ ಸಹಿತ ರಾಜ್ಯಾದ್ಯಂತ ಬಿರುಸಿನ ಮಳೆ ನಿರೀಕ್ಷೆ ದುಬಾರೆ ದುರಂತದ ಬಳಿಕ ರಾಜ್ಯದ ಆನೆ ಶಿಬಿರಗಳಲ್ಲಿ ಹೊಸ ನಿಯಮ ಜಾರಿ: ಪ್ರವಾಸಿಗರ… ವಿದ್ಯಾರ್ಥಿನಿ ಜೊತೆ ಅನೈತಿಕ ಸಂಬಂಧ ಆರೋಪ: ಕರ್ನಾಟಕ ವಿವಿ ಪ್ರೊ. ದೇವರಾಜನ್ ತಂಗದುರೈ… ವಿಧಾನ ಪರಿಷತ್ ಚುನಾವಣೆ: ದೇವನಹಳ್ಳಿ ರೆಸಾರ್ಟ್‌ಗೆ ಜೆಡಿಎಸ್ ಶಾಸಕರು ಶಿಫ್ಟ್; ಜನಾರ್ದನ ರೆಡ್ಡಿ… ದೆಹಲಿ ಮಟ್ಟದಲ್ಲಿ ಹೈವೋಲ್ಟೇಜ್ ಸಂಧಾನ: ಬೆಂಗಳೂರು ಅಭಿವೃದ್ಧಿ ಸಚಿವರಾಗಿ ಕೃಷ್ಣ ಬೈರೇಗೌಡ ಅಧಿಕಾರ… ತೀರ್ಪು ಮುನ್ನವೇ ಶಂಕಿತ ಉಗ್ರ ಕೊಡಗು ಮೂಲದ ಅಬ್ದುಲ್ ಖಾದರ್ ಸಾವು ಮೈಸೂರು ದುರಂತ: ಅಕ್ರಮ ಪಬ್, ಬಾರ್, ರೆಸ್ಟೋರೆಂಟ್‌ಗಳ ಮೇಲೆ ಕ್ರಮ: ಸಚಿವ ಡಾ.… ವಿಜಯಪುರ | ಭೀಕರ ರಸ್ತೆ ಅಪಘಾತ: ಟಿಪ್ಪರ್-ಬಸ್ ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲೇ 3…

ಇತ್ತೀಚಿನ ಸುದ್ದಿ

ಅಡ್ಡ ಗೋಡೆ ಮೇಲೆ ದೀಪ ಇಟ್ಟ ಹಾಗೆ ಲಾಕ್‌ಡೌನ್ : ತಿರುಗಾಡುವವರಿಗೆ ಬ್ರೇಕ್ ಇಲ್ಲ, ಸರಕಾರಿ ನಿಯಮಗಳಿಗೆ ತಲೆಬುಡ ಇಲ್ಲ.!!

30/04/2021, 22:47

ಮಂಗಳೂರು(reporterkarnataka): ಕೊರೋನಾ ಎರಡನೇ ಅಲೆ ಹೆಚ್ಚುತ್ತಿರುವ ಹಿನ್ನೆಲೆ ಯಲ್ಲಿ ರಾಜ್ಯದಯಾಂತ ಲಾಕ್ ಡೌನ್ ಹೇರಿಕೆಯಾಗಿ 2 ದಿನ ಗಳು ಕಳೆದಿದೆ.
ಕೆಲವು ಕಟ್ಟು ನಿಟ್ಟಿನ ಕ್ರಮ ಜಾರಿಯಲ್ಲಿದೆ. ಅದರಂತೆ ದ.ಕ. ಜಿಲ್ಲೆಯಲ್ಲಿ ಎರಡನೇ ದಿನವಾದ ಇಂದು ಕೂಡ ಲಾಕ್ ಡೌನ್ ಜಾರಿಯಲ್ಲಿತ್ತು.

ಆದರೆ ನಗರದ ಹಲವು ಕಡೆಗಳಲ್ಲಿ ಅನಗತ್ಯ ತಿರುಗಾಟಗಳು ಹೆಚ್ಚಾಗಿದೆ. ಅಗತ್ಯ ಸೇವೆ ಹೊರತು ಪಡಿಸಿ ಇನ್ಯಾವ ಸೇವೆಗಳಿಗೂ ಅನುಮತಿ ಇಲ್ಲ, ಶಾಲಾ ಕಾಲೇಜು ಖಾಸಗಿ ಕಛೇರಿಗಳು ಬಂದ್ ಮಾಡುವಂತೆ ನಿರ್ಬಂಧವಿದ್ದರೂ., ಜನರು ನಗರಗಳಿಗೆ ಬರುತ್ತಿದ್ದಾರೆ. ಪೋಲಿಸರು ಅಲ್ಲಲ್ಲಿ ನಾಕಾಬಂದಿ ಹಾಕಿದ್ದರೂ ಲಾಕ್ ಡೌನ್‌ನ ಮಹತ್ವ ಜನರಿಗೆ ತಿಳಿದಿಲ್ಲವೇ. ಅಥವಾ ಇಲಾಖೆ ಮೈ ಮರೆತಿದೆಯೋ ಗೊತ್ತಾಗುತ್ತಿಲ್ಲ. ಪರಿಸ್ಥಿತಿ ಗಮನಿಸಿ ಜನರೇ ಹಿಡಿ ಶಾಪ ಹಾಕುತ್ತಿದ್ದಾರೆ.

ಜನರೇ ಹೇಳುವಂತೆ ಪೊಲೀಸರು ತಪಾಸಣೆ ನಡೆಸುತ್ತಿಲ್ಲ. ಹಾಗಿದ್ದರೆ 54 ಕಡೆ ಔಟ್ ಪೋಸ್ಟ್ ಯಾತಕ್ಕಾಗಿ ಬರಿ ತೋರಿಕೆಗಾಗಿಯೇ. ಅನಗತ್ಯ ಕಾರುಗಳ ಓಡಾಟ ಜಾಸ್ತಿಯಾಗಿದೆ. ತುರ್ತು ಸೇವೆ ರಹಿತ ವಾಹನಗಳು ಓಡಾಡುತ್ತಲಿವೆ.ಕಾಲೇಜು ಬಂದ್ ಎಂದು ಸರ್ಕಾರವೇ ಘೋಷಿಸಿ ದ ಮೇಲೆ ಕೆಲವು ಕಡೆ ಓಪನ್ ಇದೆ ಗುಮಾನಿ ಹರಡಿದ್ಧು ಆತಂಕಕ್ಕೆ ಕಾರಣವಾಗಿದೆ. ಎಲ್ಲಾ ನಿಯಮಗಳನ್ನು ಅಡ್ಡ ಗೋಡೆಯ ಮೇಲೆ ದೀಪ ಇಟ್ಟ ಹಾಗೆ ಈ ಲಾಕ್‌ಡೌನ್ ಪರಿಣಾಮಕಾರಿಯಾಗುವುದು ಸಾಧ್ಯ ಇದೆಯೇ ? ಇದ್ಯಾವ ಲಾಕ್ ಡೌನ್ ಎಂಬುದು ಜನ ಸಾಮಾನ್ಯರ ಪ್ರಶ್ನೆ.

ಇತ್ತೀಚಿನ ಸುದ್ದಿ

ಜಾಹೀರಾತು