ಇತ್ತೀಚಿನ ಸುದ್ದಿ
ಅರೆಸ್ಟ್ ವಾರೆಂಟ್ ನೀಡಲು ತೆರಳಿದ ಪೊಲೀಸರು: ಖಾಕಿ ಎದುರೇ ಬೆಂಕಿ ಹಚ್ಚಿಕೊಂಡ ಕಳ್ಳ; ಗಂಭೀರ ಗಾಯ
05/11/2025, 14:09
ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಹಲವು ಕಳ್ಳತನ ಪ್ರಕರಣದಲ್ಲಿ ಪೊಲೀಸರಿಗೂ ಸಿಗದೆ, ನ್ಯಾಯಾಲಯಕ್ಕೂ ಹಾಜರಾಗದೆ ಚಳ್ಳೆ ಹಣ್ಣು ತಿನ್ನಿಸುತ್ತಿದ್ದ ಕಳ್ಳನೊಬ್ಬನಿಗೆ ಕೋರ್ಟ್ ವಾರೆಂಟ್ ನೀಡಿ ಬಂಧಿಸಲು ತೆರಳಿದ ವೇಳೆ ಆತ ಬೆಂಕಿ ಹಚ್ಚಿಕೊಂಡು ತಪ್ಪಿಸಿಕೊಳ್ಳಲು ಯತ್ನಿಸಿದ ಘಟನೆ ಸೋಮವಾರ ಪೇಟೆ ಪಟ್ಟಣದ ಗಾಂಧಿ ನಗರದಲ್ಲಿ ನಡೆದಿದೆ.
ಪೊಲೀಸರು ಮನೆಯ ಮುಂದೆ ಪೊಲೀಸರು ಬರುತ್ತಿದ್ದಂತೆ ಬಟ್ಟೆ ಬದಲಾಯಿಸಿ ಬರುವುದಾಗಿ ಹೇಳಿ ಒಳಗೆ ಹೋದ ಕಳ್ಳ ಸಂಜಯ್ ಮೈ ಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾನೆ. ತಕ್ಷಣ ಏಚೆತ್ತುಕೊಂಡ ಪೊಲೀಸ್ ಸಿಬ್ಬಂದಿಗಳಾದ ಮಲ್ಲೇಶ್ ಮತ್ತು ಸಾಜನ್ ರಕ್ಷಿಸಲು ಮನೆಯೊಳಗೆ ನುಗ್ಗಿದ್ದು, ಪೊಲೀಸರಿಗೂ ಸುಟ್ಟ ಗಾಯಗಳೊಂದಿಗೆ ಕಳ್ಳ ಸಂಜಯ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಂಜಯ್ ಮೈ ಗಂಭೀರವಾಗಿ ಸುಟ್ಟು ಹೋಗಿದ್ದು ಮೈಸೂರಿನ ಕೆ. ಆರ್. ಆಸ್ಪತ್ರೆಗೆ ದಾಖಲು ಮಾಡಲಾಗಿದೆ.













