11:19 PM Wednesday29 - April 2026
ಬ್ರೇಕಿಂಗ್ ನ್ಯೂಸ್
ಉದ್ಯೋಗ ಖಾತ್ರಿ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ವ್ಯಕ್ತಿ ಸಾವು: ಬಿಸಿಲಿನ ತಾಪಮಾನಕ್ಕೆ… ರಾಜ್ಯದಲ್ಲಿ ಹೊಸ ಕನಿಷ್ಠ ವೇತನ ಜಾರಿಗೆ ತರಲು ಯತ್ನ: ಸಂಡೂರಿನಲ್ಲಿ ಕಾರ್ಮಿಕ ಸಚಿವ… ಬಿಜೆಪಿ ಪಕ್ಷದಿಂದಲೇ ಮಹಿಳೆಯರಿಗೆ ಶೇ. 30ರಷ್ಟು ಮೀಸಲಾತಿ ಪ್ರಕಟಿಸಲಿ: ಸಚಿವ ಸಂತೋಷ್ ಲಾಡ್… Mangaluru | ಕುಕ್ಕರ್‌ ಬಾಂಬ್‌ ಸ್ಫೋಟದ ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಬೇಕಿತ್ತು: ಸಂತ್ರಸ್ತ… ಗಾದಿ ಪೈಪೋಟಿ | ದೆಹಲಿಗೆ ಹೋಗಲು 50 ಶಾಸಕರ ಟಿಕೆಟ್‌ ಬುಕ್ಕಿಂಗ್‌: ಕೇಂದ್ರ… Koppala | ಕುಷ್ಟಗಿಯಲ್ಲಿ ಗುಡುಗು ಸಹಿತ ಮಳೆ: ಸಿಡಿಲು ಬಡಿದು ವ್ಯಕ್ತಿ ಬಲಿ ಕೊಡಗು-ಮೈಸೂರು ರಾಜ್ಯ ಹೆದ್ದಾರಿ ಬಳಿ ಹುಲಿ ದಾಳಿಗೆ ಹಸು ಬಲಿ: ರೊಚ್ಚಿಗೆದ್ದ ಗ್ರಾಮಸ್ಥರಿಂದ… New Delhi | 228 ಪ್ರಯಾಣಿಕರಿದ್ದ ವಿಮಾನದಲ್ಲಿ ಬೆಂಕಿ: ಸ್ವಲ್ಪದರಲ್ಲೇ ತಪ್ಪಿತು ಮತ್ತೊಂದು… ಶಿಕ್ಷಕರೇ ಇಲ್ಲದ ಶಾಲೆಗಳಿಗೆ ಶೇ. 94 ಬಂದಿದ್ದು ಹೇಗೆ? ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ದೊಡ್ಡ… ತಂದೆ ಬೈದ ಕ್ಷುಲ್ಲಕ ಕಾರಣಕ್ಕೆ ಯುವತಿ ಆತ್ಮಹತ್ಯೆಗೆ ಶರಣು

ಇತ್ತೀಚಿನ ಸುದ್ದಿ

ಫಾದರ್‌ ಮುಲ್ಲರ್ಸ್‌ ಮೆಡಿಕಲ್‌ ಕಾಲೇಜು ಎಂಬಿಬಿಎಸ್‌ 27ನೇ ಬ್ಯಾಚ್‌ ಶೈಕ್ಷಣಿಕ ವರ್ಷಕ್ಕೆ ಚಾಲನೆ: ವೈಟ್‌ ಕೋಟ್‌ ಸಮಾರಂಭ

11/10/2025, 20:33

ಮಂಗಳೂರು(reporterkarnataka.com): ನಗರದ ಫಾದರ್‌ ಮುಲ್ಲರ್ಸ್‌ ಮೆಡಿಕಲ್‌ ಕಾಲೇಜಿನ ಎಂಬಿಬಿಎಸ್‌ ವಿದ್ಯಾರ್ಥಿಗಳ ಈ ಸಾಲಿನ 27ನೇ ಬ್ಯಾಚ್‌ ಶೈಕ್ಷಣಿಕ ವರ್ಷಕ್ಕೆ ಚಾಲನೆ ನೀಡುವುದು ಹಾಗೂ ವೈಟ್‌ ಕೋಟ್‌ ಸಮಾರಂಭವು ಕಾಲೇಜು ಸಭಾಂಗಣದಲ್ಲಿ ಶನಿವಾರ ನಡೆಯಿತು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಕೆಥೋಲಿಕ್ ಶೈಕ್ಷಣಿಕ ಮಂಡಳಿಯ ಕಾರ್ಯದರ್ಶಿ ವಂ.ಡಾ|ಲಿಯೋ ಲಸ್ರಾಡೊ ಅವರು ಮಾತನಾಡುತ್ತಾ ಮೂರು ದಶಕಗಳ ಹಿಂದೆ ವೈದ್ಯರಾಗುವುದಕ್ಕೆ ತಮಗೆ ಇದ್ದ ಉತ್ಸಾಹವನ್ನು ನೆನಪಿಸಿಕೊಂಡು, ನನಗೆ ಆ ಕನಸು ನನಸಾಗಿಸಲು ಅಸಾಧ್ಯವಾದರೂ ವೈದ್ಯಕೀಯ ವೃತ್ತಿ ಬಗ್ಗೆ ಎಂದೆಂದೂ ಗೌರವ ಹೊಂದಿದ್ದೇನೆ ಎಂದರು.
ವಿದ್ಯಾರ್ಥಿಗಳು ಯಾವಾಗಲೂ ಜೀವನ ಪರ್ಯಂತ ಕಲಿಕೆ ಹಾಗೂ ಸೇವೆಯ ಪ್ರಯಾಣವನ್ನು ತಮ್ಮದಾಗಿಸಿಕೊಳ್ಳಬೇಕು, ಇತರರ ನೋವುಗಳನ್ನು ಅರಿತುಕೊಂಡು ಅವರಿಗಾಗಿ ಸೇವೆ ಸಲ್ಲಿಸುವುದರತ್ತ ಗಮನ ಹರಿಸಬೇಕು, ಅಲ್ಲದೆ ತಮ್ಮ ಹೆತ್ತವರ ಹಾಗೂ ಹಿತೈಷಿಗಳ ತ್ಯಾಗಗಳನ್ನು ಮರೆಯಬಾರದು, ಭಗವಂತನ ಮಾರ್ಗದರ್ಶನವನ್ನು ಎಂದಿಗೂ ಕೈಬಿಡಬಾರದು ಎಂದು ಸಲಹೆ ನೀಡಿದರು.
ಫಾದರ್‌ ಮುಲ್ಲರ್ಸ್‌ ವೈದ್ಯಕೀಯ ಕಾಲೇಜು ಚಿಕಿತ್ಸೆಯ ತನ್ನ ದೈವೀಕ ಅಭಿಯಾನವನ್ನು ಮುಂದುವರಿಸುತ್ತಾ ಬಂದಿದೆ, ಯಾವುದೇ ಲಾಭ ನಷ್ಟದ ಬಗ್ಗೆ ಚಿಂತಿಸದೆ ಸೇವಾ ನಿರತವಾಗಿರುವುದು ಶ್ಲಾಘನೀಯ ಎಂದರು.
ಫಾ.ಮುಲ್ಲರ್ಸ್‌ ಚಾರಿಟಬಲ್‌ ಟ್ರಸ್ಟ್‌ ನಿರ್ದೇಶಕ ವಂ.ಫಾ.ಫಾವೊಸ್ತಿನ್‌ ಲ್ಯೂಕಸ್‌ ಲೋಬೊ ಅವರು ಮಾತನಾಡುತ್ತಾ, ವಿದ್ಯಾರ್ಥಿಗಳು ದೈವಿಕ ಶಕ್ತಿಯ ಕರೆಯನ್ನು ಸ್ವೀಕರಿಸಿ ಆರೈಕೆ, ಚಿಕಿತ್ಸೆಯ ಕ್ಷೇತ್ರವನ್ನು ಪ್ರವೇಶಿಸುತ್ತಿದ್ದೀರಿ, ಇದು ಕೇವಲ ಜ್ಞಾನ ಮಾತ್ರವಲ್ಲದೆ ಅನುಭೂತಿ, ಮಾನವೀಯತೆ ಹಾಗೂ ನಂಬಿಕೆಯನ್ನೂ ಕೇಳುತ್ತದೆ ಎಂದು ನೆನಪಿಸಿದರು.
ವೈದ್ಯಕೀಯ ವೃತ್ತಿಗೆ ಹೊಸದಾಗಿ ಪಾದಾರ್ಪಣೆ ಮಾಡುವ ವಿದ್ಯಾರ್ಥಿಗಳ ಸೇರ್ಪಡೆಯನ್ನು ಸಂಕೇತಿಸುವ ವೈಟ್‌ ಕೋಟ್‌ ಸಮಾರಂಭದಲ್ಲಿ ವೈದ್ಯಕೀಯ ಶಿಕ್ಷಣ ಘಟಕ ಮುಖ್ಯಸ್ಥ ಪ್ರೊ.ಡಾ.ನಾಗೇಶ್‌ ಕೆ ಅವರು ರಾಷ್ಟ್ರೀಯ ವೈದ್ಯಕೀಯ ಆಯೋಗದ ಮಾರ್ಗಸೂಚಿಯಂತೆ ಪ್ರತಿಜ್ಞಾವಿಧಿ ಬೋಧಿಸಿದರು. ಮೊದಲಬಾರಿಗೆ ವೈದ್ಯರು ಧರಿಸುವ ವೈಟ್‌ ಕೋಟ್‌ ಧರಿಸುವ ಮೂಲಕ ವಿದ್ಯಾರ್ಥಿಗಳು ಹೆಮ್ಮೆ ವ್ಯಕ್ತಪಡಿಸಿ, ಆರೈಕೆ, ಚಿಕಿತ್ಸೆಯ ಪವಿತ್ರ ಜವಾಬ್ದಾರಿ ನಿರ್ವಹಿಸುವ ಪ್ರತಿಜ್ಞೆ ಸ್ವೀಕರಿಸಿದರು.
ಸಮಾರಂಭದ ಭಾಗವಾಗಿ ಫಾ.ಮುಲ್ಲರ್ಸ್‌ ಆಸ್ಪತ್ರೆಯ ಆಡಳಿತಾಧಿಕಾರಿ ಫಾ.ಜಾರ್ಜ್‌ ಜೀವನ್‌ ಸಿಕ್ವೇರ ಅವರು ಪ್ಲಾಸ್ಟಿಕ್‌ ಫ್ರೀ ಕ್ಯಾಂಪಸ್‌ ಅಭಿಯಾನಕ್ಕೆ ಚಾಲನೆ ನೀಡಿದರು.
ಫಾ.ಮುಲ್ಲರ್ಸ್‌ ಮೆಡಿಕಲ್‌ ಕಾಲೇಜು ಆಡಳಿತಾಧಿಕಾರಿ ವಂ.ಡಾ.ಮೈಕೇಲ್‌ ಸಾಂತುಮಯೊರ್‌ ಸ್ವಾಗತಿಸಿ, ವೈದ್ಯಕೀಯ ಕಾಲೇಜಿನ ಡೀನ್ ಡಾ.ಆಂಟನಿ ಸಿಲ್ವನ್‌ ಡಿʼಸೋಜ ವಂದಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು