11:35 PM Friday1 - May 2026
ಬ್ರೇಕಿಂಗ್ ನ್ಯೂಸ್
ಕೃಷಿ ಅಧಿಕಾರಿಗಳ ದಾಳಿ: ಅಕ್ರಮ ಯೂರಿಯಾ ದಾಸ್ತಾನು ಪತ್ತೆ; 399 ಬ್ಯಾಗ್ ರಸಗೊಬ್ಬರ… ಜ್ಯುವೆಲ್ಲರಿ ಶಾಪ್ ಗೋಡೆ ಕೊರೆದು 1.20 ಕೋಟಿ ರೂಪಾಯಿ ಮೌಲ್ಯದ ಬೆಳ್ಳಿ ಆಭರಣ,… Mangaluru | ಪರಪ್ಪನ ಅಗ್ರಹಾರ ಜೈಲ್ ನಲ್ಲಿ ಕೈದಿಯಿಂದ ಮೊಬೈಲ್ ನಲ್ಲೇ ಪತ್ನಿಯ… ಮಗಳ ಮದುವೆ ಸಾಲ ತೀರಿಸಲು ಅಳಿಯನ ಮನೆಗೆ ಅತ್ತೆ ಕನ್ನ: 110 ಗ್ರಾಂ… ಹೇಮಾವತಿ ನಾಲೆಗೆ ಉರುಳಿ ಬಿದ್ದ ಕಾರು: ತಾಯಿ- ಮಗು ಸಾವು; ಧರ್ಮಸ್ಥಳದಿಂದ ದೇವನಹಳ್ಳಿಗೆ… ಧಾರವಾಡದಲ್ಲಿ ಟಿಬೇಟಿಯನ್ ಬಿಕ್ಕು ಹತ್ಯೆ: ಬೇರೆ ಕಡೆ ಕೊಲೆ ಮಾಡಿ ಎಸೆದಿರುವ ಶಂಕೆ ಉದ್ಯೋಗ ಖಾತ್ರಿ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ವ್ಯಕ್ತಿ ಸಾವು: ಬಿಸಿಲಿನ ತಾಪಮಾನಕ್ಕೆ… ರಾಜ್ಯದಲ್ಲಿ ಹೊಸ ಕನಿಷ್ಠ ವೇತನ ಜಾರಿಗೆ ತರಲು ಯತ್ನ: ಸಂಡೂರಿನಲ್ಲಿ ಕಾರ್ಮಿಕ ಸಚಿವ… ಬಿಜೆಪಿ ಪಕ್ಷದಿಂದಲೇ ಮಹಿಳೆಯರಿಗೆ ಶೇ. 30ರಷ್ಟು ಮೀಸಲಾತಿ ಪ್ರಕಟಿಸಲಿ: ಸಚಿವ ಸಂತೋಷ್ ಲಾಡ್… Mangaluru | ಕುಕ್ಕರ್‌ ಬಾಂಬ್‌ ಸ್ಫೋಟದ ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಬೇಕಿತ್ತು: ಸಂತ್ರಸ್ತ…

ಇತ್ತೀಚಿನ ಸುದ್ದಿ

Bangalore | ರಕ್ತದ ಕ್ಯಾನ್ಸರ್‌ ರೋಗಿಗಳಿಗೆ ಆಶಾಕಿರಣವಾದ “ಕಾರ್‌ ಟಿ-ಸೆಲ್‌ ಥೆರಪಿ”: ಕಿರಣ್‌ ಮಂಜುಂದಾರ್‌ ಶಾ

10/08/2025, 13:39

* ದೇಶದಲ್ಲೇ ಮೊದಲ ಬಾರಿಗೆ ದೇಶಿಯ ಸಂಸ್ಥೆಯಾದ ಇಮ್ಯುನೀಲ್‌ ಥೆರಪ್ಯೂಟಿಕ್ಸ್‌ ಸಂಸ್ಥೆ ವತಿಯಿಂದ ಕಾರ್‌ ಟಿ-ಸೆಲ್‌ ಥೆರಪಿ ಅಭಿವೃದ್ಧಿ

ಬೆಂಗಳೂರು(reporterkarnataka.com): ಲಿಂಫೋಮಾ (ರಕ್ತದ ಕ್ಯಾನ್ಸರ್‌) ನಿಂದ ಬಳುತ್ತಿರುವ ರೋಗಿಗಳಿಗೆ ಆಶಾಕಿರಣವಾಗಿ “ಕಾರ್‌ ಟಿ-ಸೆಲ್ ಥೆರಪಿ” ಯನ್ನು ಇಮ್ಯುನೀಲ್ ಥೆರಪ್ಯೂಟಿಕ್ಸ್‌ ಸಂಸ್ಥೆ ಅಭಿವೃದ್ಧಿ ಪಡಿಸಿದ್ದು, ಇದು ದೇಶಿಯವಾಗಿ ಅಭಿವೃದ್ಧಿ ಪಡಿಸಿದ ಭಾರತದ ಮೊದಲ ಚಿಕಿತ್ಸೆಯಾಗಿದೆ.
ಅಷ್ಟೆ ಅಲ್ಲದೆ, ಈ ಥೆರಪಿ ಬಳಿಕ ಏಳು ರೋಗಿಗಳು ದೀರ್ಘಕಾಲಿಕವಾಗಿ ಬದುಕುಳಿಯುವ ಮೂಲಕ ಈ ಥೆರಪಿ ರಕ್ತದ ಕ್ಯಾನ್ಸರ್‌ ರೋಗಿಗಳಿಗೆ ಅತ್ಯಂತ ಯಶಸ್ವಿ ಥೆರಪಿ ಎಂಬುದನ್ನು ಸಾಬೀತುಪಡಿಸಲಾಗಿದೆ.
ಇಮ್ಯುನೀಲ್ ಥೆರಪ್ಯೂಟಿಕ್ಸ್‌ ಮಂಡಳಿಯ ನಿರ್ದೇಶಕಿ ಹಾಗೂ ಸಹ-ಸಂಸ್ಥಾಪಕಿ ಕಿರಣ್ ಮಜುಂದಾರ್ ಶಾ ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಮ್ಮ ದೇಶದಲ್ಲಿ ಸಾಕಷ್ಟು ಜನರು ರಕ್ತದ ಕ್ಯಾನ್ಸರ್‌ ಆದ ಲಿಂಫೋಮಾದಿಂದ ಬಳಲುತ್ತಿದ್ದಾರೆ. ಅದರಲ್ಲೂ ಮರುಕಳುಹಿಸುವ ಕ್ಯಾನ್ಸರ್‌ಗೆ ಶಾಶ್ವತ ಪರಿಹಾರವಾಗಿ ಇದೀಗ ಕಾರ್‌ ಟಿ-ಸೆಲ್‌ ಥೆರಪಿಯನ್ನು ಅಭಿವೃದ್ಧಿ ಪಡಿಸಲಾಗಿದೆ. 2022ರಲ್ಲಿ ನಾವು ಅಭಿವೃದ್ಧಿ ಪಡಿಸಿದ ಕಾರ್‌ ಟಿ-ಸೆಲ್‌ ಥೆರಪಿಗೆ ಒಳಗಾದ ಏಳು ರಕ್ತದ ಕ್ಯಾನ್ಸರ್‌ ರೋಗಿಗಳು ಸಂಪೂರ್ಣ ಗುಣಮುಖರಾಗಿದ್ದು, ಅವರ ಬದುಕುಳಿಯುವಿಕೆಯ ಪ್ರಮಾಣ ಹೆಚ್ಚಾಗಿದೆ ಎಂದರು.
ಕ್ಲಿನಿಕಲ್ ಪ್ರಯೋಗದ ಅಡಿಯಲ್ಲಿ, ವಾರ್ನಿಮ್‌ ಕ್ಯಾಬ್ಟಜೀನ್ ಆಟೋಲ್ಯೂಸೆಲ್ (IMN-003A) ಎಂದು ಕರೆಯಲ್ಪಡುವ CAR ಟಿ-ಸೆಲ್ ಥೆರಪಿಯು ಮರುಕಳುಹಿಸುವ ಅಥವಾ CD19-ಪಾಸಿಟಿವ್ ಬಿ-ಸೆಲ್ ನಾನ್-ಹಾಡ್ಗ್ಕಿನ್ ಲಿಂಫೋಮಾ (B-NHL) ಹೊಂದಿರುವ ವಯಸ್ಕ ರೋಗಿಗಳಿಗೆ ಈ ಥೆರಪಿ ಹೆಚ್ಚು ಪರಿಣಾಮಕಾರಿ, ರಕ್ತದ ಕ್ಯಾನ್ಸರ್‌ ಹೆಚ್ಚು ಆಕ್ರಮಣಕಾರಿ ರೂಪದಲ್ಲಿದ್ದರೂ ಈ ಥೆರಪಿ ಮೂಲಕ ಗುಣಪಡಿಸುವ ಪ್ರಮಾಣ ಜಾಸ್ತಿ. ಇದುವರೆಗೂ ರಕ್ತದ ಕ್ಯಾನ್ಸರ್‌ಗೆ ಇರುವ ಚಿಕಿತ್ಸೆಯ ಫಲಿತಾಂಶದ ಪ್ರಮಾಣ ಶೆ.೭೦ಕ್ಕಿಂತ ಕಡಿಮೆ ಇದೆ, ಆದರೆ, ಕಾರ್‌ ಟಿ-ಸೆಲ್‌ ಥೆರಪಿಯ ಫಲಿತಾಂಶದ ಪ್ರಮಾಣ ಶೇ.83ರಷ್ಟಿದ್ದು, ಇಷ್ಟು ಪ್ರಮಾಣದ ಫಲಿತಾಂಶ ಹೊಂದಿರುವ ದೇಶದ ಮೊದಲ ಚಿಕಿತ್ಸೆ ಇದಾಗಿದೆ. ಈಗಾಗಲೇ ಏಳು ರೋಗಿಗಳು ಕಾರ್‌ ಟಿ-ಸೆಲ್‌ ಥೆರಪಿ ಮೂಲಕ ಸಂಪೂರ್ಣ ಗುಣಮುಖರಾಗಿದ್ದು, ಚಿಕಿತ್ಸೆ ಪಡೆದ ಬಳಿಕ ದೀರ್ಘಕಾಲೀನ ಬದುಕುಳಿದವರಾಗಿದ್ದಾರೆ. ಭಾರತದಲ್ಲಿ ಇದೀಗ 50 ಕ್ಕೂ ಹೆಚ್ಚು ರೋಗಿಗಳಿಗೆ ಈ ಚಿಕಿತ್ಸೆಯನ್ನು ನೀಡಲಾಗಿದೆ ಎಂದು ವಿವರಿಸಿದರು. ಇನ್ನು, 2047 ರ ವೇಳೆಗೆ ಕ್ಯಾನ್ಸರ್‌ ನಾವೀನ್ಯತೆಯಲ್ಲಿ ಭಾರತ ಮುಂಚೂಣಿಗೆ ಬರಲಿದೆ ಎಂದು ಹೇಳಿದರು.
ಇಮ್ಯುನೀಲ್ ಥೆರಪ್ಯೂಟಿಕ್ಸ್‌ನ ಮಂಡಳಿಯ ನಿರ್ದೇಶಕ ಮತ್ತು ಸಿಇಒ ಅಮಿತ್ ಮೂಕಿಮ್ ಮಾತನಾಡಿ, ಈ ವಿಧಾದಲಿ ರೋಗಿಯ ಬಿಳಿ ರಕ್ತಕಣವನ್ನು ಹೊರತೆಗೆದು ಸಂಸ್ಕರಣೆ ಮಾಡಲಾಗುತ್ತದೆ, ಕ್ಯಾನ್ಸರ್‌ ಕೋಶಗಳನ್ನು ಗುರುತಿಸಿ, ನಾಶಗೊಳಿಸುವಂತೆ ಅದರ ವಂಶವಾಯಿಯಲ್ಲಿ ಬದಲಾವಣೆ ಮಾಡಲಾಗುತ್ತದೆ. ಹೀಗಾಗಿ ಕ್ಯಾನ್ಸರ್‌ ಕೋಶವನ್ನು ಸಂಪೂರ್ಣ ನಾಶ ಮಾಡುವ ಶಕ್ತಿ ಈ ಥೆರಪಿಗಿದ್ದು, ಕ್ಯಾನ್ಸರ್‌ ಮರುಕಳುಹಿಸುವ ಸಾಧ್ಯತೆ ಇರುವುದಿಲ್ಲ. ಕಾರ್‌ ಟಿ-ಸೆಲ್‌ ಥೆರಪಿ ರಕ್ತದ ಕ್ಯಾನ್ಸರ್‌ ರೋಗಿಗಳಿಗೆ ವರವಾಗಿ ಪರಿಗಣಿಸಲಿದೆ, ಈ ಥೆರಪಿಯು ದೇಶಿಯವಾಗಿ ಅಭಿವೃದ್ಧಿಪಡಿಸಿರುವದರಿಂದ ಎಲ್ಲರಿಗೂ ಕೈಗೆಟುವ ಚಿಕಿತ್ಸೆ ಆಗಲಿದೆ. ಜಾಗತಿಕವಾಗಿಯೂ ಕಾರ್‌ ಟಿ-ಸೆಲ್‌ ಹೆಚ್ಚು ಕ್ರಾಂತಿಕಾರಿಯಾಗಿದೆ ಎಂದು ನುಡಿದರು.

ಇತ್ತೀಚಿನ ಸುದ್ದಿ

ಜಾಹೀರಾತು