ಇತ್ತೀಚಿನ ಸುದ್ದಿ
ಜಯಪುರ: ಚಲಿಸುತ್ತಿದ್ದ ಆಟೋ ಮೇಲೆ ಮರ ಬಿದ್ದು ಚಾಲಕ ದಾರುಣ ಸಾವು
26/05/2025, 22:25

ಶಶಿಕುಮಾರ್ ಬೆತ್ತದಕೊಳಲು ಜಯಪುರ
info.reporterkarnataka@gmail.com
ಎರಡು ದಿನದಿಂದ ಸುರಿಯುತ್ತಿರುವ ಭಾರೀ ಗಾಳಿ ಮಳೆಗೆ ಶಾಂತಿಗ್ರಾಮ ಸಮೀಪದ ಹೊಸ್ತೋಟ ಎಂಬಲ್ಲಿ ಮಧ್ಯಾಹ್ನ ಚಲಿಸುತ್ತಿದ್ದ ಆಟೋದ ಮೇಲೆಯೇ ಬೃಹತ್ತಾಕಾರದ ಮರ ಬಿದ್ದು ಆಟೋ ಚಾಲಕ ರತ್ನಾಕರ ಶಿಡ್ಲೆಮನೆ (40) ಎಂಬವರು ಸ್ಥಳದಲ್ಲೇ ಮೃತರಾಗಿದ್ದಾರೆ.
ಗಡಿಕಲ್ಲುವಿನಿಂದ ಕೊಗ್ರೆ ಭಾಗಕ್ಕೆ ಬಾಡಿಗೆ ಬಂದು ವಾಪಸ್ ಗಡಿಕಲ್ ಗೆ ಹೋಗುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ.
ಸ್ಥಳೀಯರ ಸಹಕಾರದಿಂದ ಮರ ತೆರವು ಮಾಡಿಲಾಗಿದೆ.
ಜಯಪುರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.