2:40 PM Friday13 - March 2026
ಬ್ರೇಕಿಂಗ್ ನ್ಯೂಸ್
ವಿವಿಧ ಬೇಡಿಕೆ ಆಗ್ರಹಿಸಿ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದಿಂದ ಫ್ರೀಡಂ… ರಾಯಚೂರು | ಒಳ ಮೀಸಲಾತಿ ಹೋರಾಟ: ಪೆಟ್ರೋಲ್ ಸುರಿದುಕೊಂಡು ಯುವಕ ಆತ್ಮಹತ್ಯೆಗೆ ಯತ್ನ ಮಲೆಮಹದೇಶ್ವರ ಬೆಟ್ಟದ ರಸ್ತೆಯಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ: ಭಕ್ತರಲ್ಲಿ ಹೆಚ್ಚಿದ ಆತಂಕ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್‌: ಮೌಲ್ಯ 10 ಪಟ್ಟು ಹೆಚ್ಚು,… ಪೆಟಾ ಮೇಲ್ಮನವಿ ವಜಾ: ರಾಜ್ಯದೆಲ್ಲೆಡೆ ಕಂಬಳ ಆಯೋಜನೆಗೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್ ನಿಗಮಗಳಿಗೆ ಅನುದಾನ ಕಡಿತ, ಆಸ್ಪತ್ರೆಗಳಲ್ಲಿ ಔಷಧಿ ಇಲ್ಲ: ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಟೀಕೆ ಚಿಕ್ಕಮಗಳೂರು: ಹಸುವನ್ನು ತುಳಿದು ಕೊಂದ ಕಾಡಾನೆ; ಮಾಣಿಮಕ್ಕಿ ಗ್ರಾಮಸ್ಥರಲ್ಲಿ ಆತಂಕ ತೀರ್ಥಹಳ್ಳಿ: ಕುವೆಂಪು ಜೈವಿಕ ಅರಣ್ಯದಲ್ಲಿ ಹತ್ತಿಕೊಂಡ ಬೆಂಕಿ; ಅರಣ್ಯಾಧಿಕಾರಿಗಳ ದೌಡು ಝೂ ಅಭಿ ಇನ್ನಿಲ್ಲ: ಕಾಲು ನೋವಿನಿಂದ ಬಳಲುತ್ತಿದ್ದ ಮತ್ತಿಗೋಡು ಶಿಬಿರದ ಸಾಕಾನೆ ವಿವಿಧ ಬೇಡಿಕೆ ಆಗ್ರಹಿಸಿ ವಿದ್ಯುತ್ ಗುತ್ತಿಗೆದಾರರ ಸಂಘದಿಂದ ಮಾ.11ರಂದು ಪ್ರತಿಭಟನೆ

ಇತ್ತೀಚಿನ ಸುದ್ದಿ

Foreign News | ಮಲೇಷ್ಯಾದಲ್ಲಿ ಗ್ಯಾಸ್ ಪೈಪ್‌ಲೈನ್ ಸ್ಫೋಟ: ನೂರಾರು ಮಂದಿಗೆ ಸುಟ್ಟ ಗಾಯ; ಉಸಿರಾಟ ತೊಂದರೆ

02/04/2025, 22:42

ಕೌಲಾಲಂಪುರ(reporterkarnataka.com): ಮಲೇಷ್ಯಾದ ಕೌಲಾಲಂಪುರ ನಗರದ ಹೊರವಲಯದಲ್ಲಿ ಪುಚಾಂಗ್ ಎಂಬಲ್ಲಿ ಗ್ಯಾಸ್ ಪೈಪ್‌ಲೈನ್‌ನಲ್ಲಿ ಸ್ಫೋಟ ಸಂಭವಿಸಿದ ಪರಿಣಾಮ 100ಕ್ಕೂ ಹೆಚ್ಚು ಮಂದಿ ಸುಟ್ಟಗಾಯಗೊಂಡಿದ್ದಾರೆ.
ಗ್ಯಾಸ್ ಪೈಪ್ವಲೈನ್ ಸ್ಫೋಟದಿಂದ ನಾಗರಿಕರಿಗೆ
ಉಸಿರಾಟದ ತೊಂದರೆಗೀಡಾಗಿದ್ದಾರೆ. ಅಸ್ವಸ್ಥಗೊಂಡವರನ್ನು ಆಸ್ಪತ್ರೆಗೆ ದಾಖಲಾಗಿದೆ. ಸಾವಿನ ಪ್ರಮಾಣ ಇನ್ನೂ ವರದಿ ಆಗಿಲ್ಲ.
ಈ ಅವಘಡದಲ್ಲಿ ಬೆಂಕಿಯ ಕೆನ್ನಾಲಗೆ 20 ಮಹಡಿಗಳ ಮನೆಯಷ್ಟು ಎತ್ತರಕ್ಕೆ ಹರಡಿದ್ದು, ಐದಾರು ಮೈಲಿ ದೂರದಿಂದಲೂ ಕಾಣಿಸುತ್ತಿದೆ ಅಂತೆ. ಇದು ಎಲ್ಲೋ ದೂರದ ಕಥೆ. ನಮ್ಮ ಕರಾವಳಿಯಲ್ಲೂ ನಾವು ಇಂತಹದೇ ಅಗ್ನಿಕುಂಡದ ಮೇಲೆ ಬದುಕುತ್ತಿದ್ದೇವೆ ಎಂಬುದನ್ನು ಮರೆಯುವಂತಿಲ್ಲ. ಮಂಗಳೂರು-ಕೊಚ್ಚಿ ಗ್ಯಾಸ್ ಪೈಪ್‌ಲೈನ್, ಮಂಗಳೂರು – ಹಾಸನ – ಬೆಂಗಳೂರು ಪೈಪ್ ಲೈನ್, ಪೆರ್ಮುದೆಯಿಂದ ಪಾದೂರಿಗೆ ISPRL ಪೈಪ್‌ಲೈನ್.. ಹೀಗೆ.
ರಾಜಕಾರಣಿಗಳ ಗದ್ದಲ, ಬೇಜವಾಬ್ದಾರಿಗಳೆಲ್ಲ ಏನೇ ಇರಲಿ…. ಇಂತಹ ಅಪಾಯಕಾರಿ ಪೈಪ್‌ಲೈನ್‌ಗಳು, ಪೆಟ್ರೋಲಿಯಂ ರಿಸರ್ವ್ ಎಲ್ಲವೂ ಸುವ್ಯವಸ್ಥಿತ ಮತ್ತು ಸುರಕ್ಷಿತವಾಗಿ ಇರುವಂತೆ ಜವಾಬ್ದಾರಿ ಹೊಂದುವ ಬುದ್ಧಿಯನ್ನು ನಮ್ಮ ದೈವದೇವರುಗಳು ನಮ್ಮ ರಾಜಕಾರಣಿಗಳಿಗೆ, ಅಧಿಕಾರಿಗಳಿಗೆ ಕರುಣಿಸಲಿ. ಈ ಎಲ್ಲ ಪೈಪ್‌ಲೈನ್‌ಗಳು ದಟ್ಟ ಜನಸಂದಣಿಗಳ-ಫಲವತ್ತಾದ ಭೂಮಿಗಳ ನಡುವೆಯೇ ಇರುವಂತಹವು. ಹಾಗಾಗಿ ಕರಾವಳಿಯನ್ನು ಇಂತಹ ಅಗ್ನಿ ಅವಘಡಗಳಿಂದ ರಕ್ಷಿಸುವ ಜವಾಬ್ದಾರಿಯನ್ನು ನಾವು ನಂಬಿದ ದೈವಗಳಿಗೇ ಬಿಡೋಣ.
ಮಲೇಷ್ಯಾದಲ್ಲಿ ಸಂಭವಿಸಿದಂತಹ ಈ ಅವಘಡಗಳ ಸುದ್ದಿ ಕೇಳಿದಾಗಲೆಲ್ಲ, ಮನಸ್ಸು ತಳಮಳಿಸುತ್ತದೆ. ಯಾರದ್ದೋ “ವಿಕಾಸಕ್ಕೆ” ನಮ್ಮ ಜೀವಗಳನ್ನೆಲ್ಲ ನಾವು ಅಡಾವು ಇಟ್ಟು ಕುಳಿತುಕೊಳ್ಳುವ ಸ್ಥಿತಿ ಬಂದಿದೆಯಲ್ಲಾ ಎಂದು.

(ಚಿತ್ರ ಸೌಜನ್ಯ: ರಾಯಿಟರ್)

ಇತ್ತೀಚಿನ ಸುದ್ದಿ

ಜಾಹೀರಾತು