ಇತ್ತೀಚಿನ ಸುದ್ದಿ
Convocation | ಪ್ರಾಕ್ರಮಿಕಾ ವೊಕೇಶನಲ್ ಇನ್ಸ್ಟಿಟ್ಯೂಟ್ ವತಿಯಿಂದ ನ್ಯೂರೋಡೈವಜೆರ್ಂಟ್ ವೃತ್ತಿಪರರಿಗೆ ಘಟಿಕೋತ್ಸವ
04/03/2025, 22:03

ಬೆಂಗಳೂರು(reporterkarnataka.com):ಪ್ರಾಕ್ರಮಿಕಾ ವೃತ್ತಿಪರ ಸಂಸ್ಥೆ (ಪಿವಿಐ), ತನ್ನ ಸಹ ಕಂಪನಿಗಳಾದ ಎಂಪ್ಲುಸಿವ್ ತರಬೇತಿ ಕೇಂದ್ರ ಮತ್ತು ಮುದಿತಾ ಕ್ರಿಯೇಟಿವ್ ಸ್ಕೂಲ್ ಸಹಯೋಗದಲ್ಲಿ ಬೆಂಗಳೂರಿನ ಶೇಷಾದ್ರಿಪುರಂ ಪ್ರಥಮ ದರ್ಜೆ ಕಾಲೇಜಿನಲ್ಲಿ ತನ್ನ ಎರಡನೇ ಘಟಿಕೋತ್ಸವ ಸಮಾರಂಭವನ್ನು ಹೆಮ್ಮೆಯಿಂದ ಆಯೋಜಿಸಿತ್ತು. ಈ ಭವ್ಯ ಕಾರ್ಯಕ್ರಮವು ವಿಶಿಷ್ಟ ವ್ಯಕ್ತಿಗಳಿಗೆ ಅಂತರ್ಗತ ಶಿಕ್ಷಣ ಮತ್ತು ವೃತ್ತಿಪರ ಸಬಲೀಕರಣದ ಪ್ರಯಾಣದಲ್ಲಿ ಮಹತ್ವದ ಮೈಲಿಗಲ್ಲು ಎನಿಸಿತು. ವೃತ್ತಿಪರರು (ಪಿವಿಐ ತನ್ನ ವಿದ್ಯಾರ್ಥಿಗಳನ್ನು ಹೀಗೆ ಸಂಬೋಧಿಸುತ್ತಾರೆ) ಘಟಿಕೋತ್ಸವದ ನಿಲುವಂಗಿಗಳನ್ನು ಧರಿಸಿ ಸಮಾರಂಭದ ಕೇಂದ್ರ ಬಿಂದುಗಳಾಗಿ ಗಣ್ಯ ವ್ಯಕ್ತಿಗಳಿಂದ ಪೂರ್ಣಗೊಳಿಸುವಿಕೆ ಪ್ರಮಾಣಪತ್ರಗಳು, ಶೀಲ್ಡ್, ಟ್ರೋಫಿಗಳು ಮತ್ತು ಪದಕಗಳನ್ನು ಪಡೆದರು.
ಈ ಕಾರ್ಯಕ್ರಮವದಲ್ಲಿ ಮುಖ್ಯ ಅತಿಥಿಗಳಾಗಿ ಕೇರಳದ ಡಿಜಿಪಿ, ಐಪಿಎಸ್ ಅಧಿಕಾರಿ ಡಾ. ಸಂಜೀಬ್ ಪಟ ಜೋಶಿ ಮತ್ತು ಗೌರವ ಅತಿಥಿಗಳಾಗಿ ಶಿಕ್ಷಣ ಮತ್ತು ಸಾಮಾಜಿಕ ಸೇವೆಯಲ್ಲಿ ಗಣನೀಯ ಸೇವೆ ಸಲ್ಲಿಸಿದ ಡಾ. ವುಡೇ ಪಿ. ಕೃಷ್ಣ ಭಾಗಹಿಸಿದ್ದರು. ಅವರ ಸ್ಪೂರ್ತಿದಾಯಕ ಮಾತುಗಳು ಇಂದಿನ ಜಗತ್ತಿನಲ್ಲಿ ಕೌಶಲ್ಯ ಅಭಿವೃದ್ಧಿ ಮತ್ತು ಸೇರ್ಪಡೆಯ ಮಹತ್ವವನ್ನು ಒತ್ತಿ ಹೇಳಿದವು.
ಈ ಘಟಿಕೋತ್ಸವವು ಅದ್ಭುತ ಯಶಸ್ಸನ್ನು ಕಂಡಿತು, ಕೌಶಲ್ಯ ಆಧಾರಿತ ಕಲಿಕಾ ಕಾರ್ಯಕ್ರಮಗಳನ್ನು ಪೂರ್ಣಗೊಳಿಸಿದ ಪಿವಿಐನ ವೃತ್ತಿಪರರನ್ನು ಸನ್ಮಾನಿಸಲಾಯಿತು. ಪಿವಿಐಗಳನ್ನು ಸಬಲೀಕರಣದ ದಾರಿದೀಪವನ್ನಾಗಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ ಸಮರ್ಪಿತ ಅಧ್ಯಾಪಕರು, ಪ್ರಾಯೋಜಕರು, ಮಂಡಳಿಯ ಸದಸ್ಯರು ಮತ್ತು ಪ್ರಮುಖ ಬೆಂಬಲಿಗರನ್ನು ಈ ಕಾರ್ಯಕ್ರಮದಲ್ಲಿ ಗೌರವಿಸಲಾಯಿತು.
ಈ ಘಟಿಕೋತ್ಸವದ ವಿಶೇಷ ಆಕರ್ಷಣೆ ಎನಿಸಿದ ‘ಬಿಯಾಂಡ್ ಲೇಬಲ್ಸ್ – ಆನ್ ಅಕಾಡೆಮಿಕ್ ಗೈಡ್ ಫಾರ್ ಸ್ಪೆಷಲ್ ಎಜುಕೇಟರ್ಸ್’ ಎಂಬ ಶೀರ್ಷಿಕೆಯ ಮುಂಬರುವ 1200 ಕ್ಕೂ ಹೆಚ್ಚು ಪುಟಗಳ ಬೃಹತ್ ಕೃತಿಯ ‘ಪುಸ್ತಕ ಮುಖಪುಟ’ವನ್ನು ಅನಾವರಣಗೊಳಿಸಲಾಯಿತು. ತಜ್ಞರು, ಶಿಕ್ಷಕರು ಮತ್ತು ಪೆÇೀಷಕರು ಸಹ-ಲೇಖಕರಾಗಿರುವ ಈ ಕೃತಿಯಲ್ಲಿ ವೈವಿಧ್ಯಮಯ ವೃತ್ತಿಪರರಿಗೆ ರಚನಾತ್ಮಕ ಕಲಿಕಾ ಕಾರ್ಯಕ್ರಮಗಳು ಮತ್ತು ಕೌಶಲ್ಯ-ಆಧಾರಿತ ಶಿಕ್ಷಣದ ಜ್ಞಾನವನ್ನು ರವಾನಿಸುವ ಪಿವಿಐನ ಬದ್ಧತೆಯನ್ನು ಮತ್ತಷ್ಟು ಒತ್ತಿ ಹೇಳಿತು.
ಈ ಕಾರ್ಯಕ್ರಮವು ವೃತ್ತಿಪರರ ಅದ್ಭುತ ಪ್ರದರ್ಶನಗಳಿಂದ ಮತ್ತಷ್ಟು ಶ್ರೀಮಂತವಾಯಿತು, ಇದರಲ್ಲಿ ವಿಶಿಷ್ಟ ವ್ಯಕ್ತಿಗಳ ವೈವಿಧ್ಯಮಯ ಪ್ರತಿಭೆಗಳನ್ನು ಆಚರಿಸಲಾಯಿತು. ಸಮಗ್ರ ಸಂಗೀತ ಉಪಕ್ರಮವನ್ನೂ ಇದು ಒಳಗೊಂಡಿತ್ತು, ಇದು ಪ್ರದರ್ಶನ ಕಲೆಗಳಲ್ಲಿ ಸೇರ್ಪಡೆಯ ಅಪರಿಮಿತ ಸಾಧ್ಯತೆಗಳನ್ನು ಪ್ರದರ್ಶಿಸಿತು. ಕಾರ್ಯಕ್ರಮದ ಗಮನಾರ್ಹ ವೈಶಿಷ್ಟ್ಯವೆಂದರೆ ಪ್ರಮಾಣಪತ್ರಗಳು, ಸ್ಮರಣಿಕೆಗಳು, ಶಾಲುಗಳು ಮತ್ತು ಉಡುಗೊರೆಗಳು. ವಿಶಿಷ್ಟ ಸಾಮಥ್ರ್ಯದ ಪ್ರತಿಭೆಗಳು ಇಡೀ ಕಾರ್ಯಕ್ರಮವನ್ನು ನಿರ್ವಹಿಸಿದರು.
ಪಿವಿಐನ ಸಂಸ್ಥಾಪಕಿ ಮತ್ತು ನಿರ್ದೇಶಕಿ ಡಾ. ಗಾಯತ್ರಿ ನರಸಿಂಹನ್ ಅವರು ಕೃತಜ್ಞತೆಯನ್ನು ವ್ಯಕ್ತಪಡಿಸುತ್ತಾ, “ಈ ಘಟಿಕೋತ್ಸವವು ಕೇವಲ ಸಮಾರಂಭ ಮಾತ್ರವಾಗಿರದೇ ಶಿಕ್ಷಣ, ಸೇರ್ಪಡೆ ಮತ್ತು ಪರಿಶ್ರಮದ ಶಕ್ತಿಗೆ ಸಾಕ್ಷಿಯಾಗಿದೆ. ನಮ್ಮ ಕಲಿಕಾ ಕಾರ್ಯಕ್ರಮಗಳನ್ನು ಪೂರ್ಣಗೊಳಿಸಲು ಘಟಿಕೋತ್ಸವ ಸಮಾರಂಭವನ್ನು ನಡೆಸುವ ಮೂಲಕ, ನಾವು ನಮ್ಮ ವೃತ್ತಿಪರರ ದೀರ್ಘಾವಧಿಯ ಕಠಿಣ ಪರಿಶ್ರಮವನ್ನು ಶ್ಲಾಘಿಸುತ್ತೇವೆ ಮತ್ತು ಗುರುತಿಸುತ್ತೇವೆ, ಆದರೆ ನಾವು ಜಗತ್ತಿಗೆ, ವಿಶೇಷವಾಗಿ ಸಂಭಾವ್ಯ ಉದ್ಯೋಗದಾತರಿಗೆ, ನಮ್ಮ ವೃತ್ತಿಪರರು ಅಗತ್ಯ ಕೌಶಲ್ಯಗಳನ್ನು ಪಡೆದುಕೊಂಡಿದ್ದಾರೆ ಮತ್ತು ಉದ್ಯೋಗಕ್ಕೆ ಸಿದ್ಧರಾಗಿದ್ದಾರೆ ಎಂದು ಪ್ರದರ್ಶಿಸುತ್ತೇವೆ. ನಮ್ಮ ಮಂಡಳಿಯ ಸದಸ್ಯರು, ಪಾಲುದಾರರು ಮತ್ತು ಮುಖ್ಯವಾಗಿ, ಈ ಧ್ಯೇಯವನ್ನು ನಂಬುವ ನಮ್ಮ ವೃತ್ತಿಪರರು (ನಾವು ನಮ್ಮ ವಿದ್ಯಾರ್ಥಿಗಳನ್ನು ಹಾಗೆ ಕರೆಯುತ್ತೇವೆ) ಮತ್ತು ಅವರ ಕುಟುಂಬಗಳ ಅಚಲ ಬೆಂಬಲಕ್ಕಾಗಿ ನಾವು ಕೃತಜ್ಞರಾಗಿರುತ್ತೇವೆ” ಎಂದು ಹೇಳಿದರು.
ಈ ಪ್ರತಿಷ್ಠಿತ ಕಾರ್ಯಕ್ರಮವನ್ನು ಆಯೋಜಿಸುವಲ್ಲಿ ಉದಾರ ಮತ್ತು ನಿರಂತರ ಸಹಯೋಗಕ್ಕಾಗಿ ನಮ್ಮ ಶಿಕ್ಷಣ ಪಾಲುದಾರರಾದ ಶೇಷಾದ್ರಿಪುರಂ ಪ್ರಥಮ ದರ್ಜೆ ಕಾಲೇಜಿಗೆ ಪಿವಿಐ ತನ್ನ ಪ್ರಾಮಾಣಿಕ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತದೆ. ವಿಶಿಷ್ಟ ಸಾಮಥ್ರ್ಯದ ವ್ಯಕ್ತಿಗಳಿಗೆ ಉಚಿತ, ಕೌಶಲ್ಯ ಆಧಾರಿತ ತರಬೇತಿಯನ್ನು ಒದಗಿಸುವ ಸಂಸ್ಥೆಯ ಧ್ಯೇಯವನ್ನು ಸಕ್ರಿಯಗೊಳಿಸುತ್ತಿರುವ ನಮ್ಮ ಪ್ರಾಯೋಜಕರು ಮತ್ತು ಬೆಂಬಲಿಗರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತಿದ್ದೇವೆ ಎಂದರು.
ಕೀನ್ಯಾದಲ್ಲಿ ವಿಶ್ವಸಂಸ್ಥೆಯಲ್ಲಿ ಜಾಗತಿಕ ಮನ್ನಣೆ ಮತ್ತು ಅಮೆರಿಕದಲ್ಲಿ ವಿಎಂಬರ್ಸ್ ಸಹಯೋಗದಲ್ಲಿ ಪಿವಿಐ ಪ್ರಗತಿ ಸಾಧಿಸುತ್ತಲೇ ಇದ್ದು, ವಿಶಿಷ್ಟ ಸಾಮಥ್ರ್ಯದ ಪ್ರತಿಭೆಗಳು ಘನತೆ ಮತ್ತು ಸ್ವಾತಂತ್ರ್ಯದೊಂದಿಗೆ ಅಭಿವೃದ್ಧಿ ಹೊಂದುವ ಅಂತರ್ಗತ ಜಗತ್ತನ್ನು ಸೃಷ್ಟಿಸುವ ತನ್ನ ಬದ್ಧತೆಯನ್ನು ಬಲಪಡಿಸುತ್ತದೆ.