7:57 AM Thursday3 - July 2025
ಬ್ರೇಕಿಂಗ್ ನ್ಯೂಸ್
ಮುಖ್ಯಮಂತ್ರಿ ಸ್ಥಾನಕ್ಕೆ ಯಾವುದೇ ಪೈಪೋಟಿಯಿಲ್ಲ: ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ Accident | ಸುರತ್ಕಲ್ ಬಳಿ ಎರಡು ಖಾಸಗಿ ಬಸ್ಸುಗಳು ಮುಖಾಮುಖಿ ಡಿಕ್ಕಿ: 28… Chikkaballapura | ರಾಜ್ಯ ಸಚಿವ ಸಂಪುಟ ಸಭೆ: ಮುಖ್ಯಮಂತ್ರಿ ಘೋಷಿಸಿದ ಯೋಜನೆ, ತೀರ್ಮಾನಗಳೇನು? JDS Protest | ರಾಜ್ಯದಲ್ಲಿ ಆರ್ಥಿಕ ಅರಾಜಕತೆ: ಬೆಂಗಳೂರು ಪ್ರತಿಭಟನೆಯಲ್ಲಿ ಜೆಡಿಎಸ್ ಆರೋಪ Dharwad | ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರದಿಂದ ಕ್ರಾಂತಿಕಾರಕ ಯೋಜನೆ ಜಾರಿ: ಕಾರ್ಮಿಕ… ಬೆಂಗಳೂರು ಕಾಲ್ತುಳಿತದ ಪ್ರಕರಣ; ಸಿಎಟಿ ಆದೇಶ ವಿರುದ್ಧ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ: ಮುಖ್ಯಮಂತ್ರಿ Karnataka CM | ಮಾಧ್ಯಮಗಳು ನನ್ನನ್ನೂ ಸೇರಿ ಅಧಿಕಾರಸ್ಥರ ಓಲೈಕೆ ಮಾಡಬಾರದು: ಮುಖ್ಯಮಂತ್ರಿ… Kodagu | ಕುಶಾಲನಗರದ ಕೂಡಿಗೆಯಲ್ಲಿ ಚಿನ್ನದಂಗಡಿ ಮಾಲೀಕನ ಮನೆಗೆ ಕನ್ನ: 14 ಲಕ್ಷ… ಕವಿಕಾದಲ್ಲಿ 14 ಕೋಟಿ ರೂ. ವೆಚ್ಚದಲ್ಲಿ ವಿದ್ಯುತ್ ಪರಿವರ್ತಕ ದುರಸ್ತಿ ಕೇಂದ್ರ: ಇಂಧನ… Kodagu Crime | ಸುಳ್ಳು ಕೊಲೆ ಕೇಸ್ ಮೂಲಕ ಅಮಾಯಕ ಜೈಲಿಗೆ: ಇನ್ಸ್​ಪೆಕ್ಟರ್,…

ಇತ್ತೀಚಿನ ಸುದ್ದಿ

ರಾಘವೇಂದ್ರ ಸ್ವಾಮಿ ಮಠದಲ್ಲಿ 350ನೇ ಉತ್ತರಾಧನೆ ಸಂಭ್ರಮ: ರಥೋತ್ಸವ ಸಂಪನ್ನ

25/08/2021, 23:10

ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ
ರಾಯಚೂರು
info.reporterkarnataka@gmail.com

ಮಸ್ಕಿ ಸಮೀಪದ ಮುದುಗಲ್ ಪಟ್ಟಣದ       ಬೇಡಿದ ಭಕ್ತರಿಗೆ ಇಷ್ಟಾರ್ಥ ವನ್ನು ಕರುಣಿಸುವ ಕಲಿಯುಗದ ಕಲ್ಪವೃಕ್ಷ, ತೃತೀಯ ಮಂತ್ರಾಲಯವೆಂದೇ ಕರೆಯಲ್ಪಡುವ ಮುದಗಲ್ಲ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಮಠದಲ್ಲಿ 350 ನೇ ಉತ್ತರಾಧನೆ ರಥೋತ್ಸವದ ಸಂಭ್ರಮ ಜರುಗಿತು.

ಏಳು ದಿನಗಳ ಕಾಲ ಗುರುರಾಯರ ಆರಾಧನೆಯ ಬುಧವಾರದಂದು ಉತ್ತರಾಧನೆ ಶ್ರದ್ಧಾ ಭಕ್ತಿಯೊಂದಿಗೆ ಬೆಳಗ್ಗೆ ಅಷ್ಟೋತ್ತರ ಕಾರ್ಯಕ್ರಮದಿಂದ ಪ್ರಾರಂಭವಾಗಿ ರಾಯರ ಬೃಂದಾವನಕ್ಕೆ ವಿಶೇಷ ಪೂಜೆ, ಅಲಂಕಾರ ಸೇವೆ, ರಥೋತ್ಸವಕ್ಕೆ ಮುನ್ನ ಪ್ರಹ್ಲಾದರಾಜರ ಉತ್ಸವ ಮೂರ್ತಿಯ ಪಲ್ಲಕ್ಕಿ ಸೇವೆ, ತೋಟ್ಟಿಲು ಸೇವೆ ಕಾರ್ಯಕ್ರಮ ನೆರವೇರಿತು. 

ಕೋವಿಡ್ ನಿಯಮಾನುಸಾರವಾಗಿ  ಗುರುರಾಯರ ಆರಾಧನೆ ಜರುಗಿತು. ರಥೋತ್ಸವುದ್ದಕ್ಕೂ ಭಕ್ತರು ದೇವರ ನಾಮ ಸ್ಮರಣೆ ಹಾಡುಗಳು, ಭಜನೆ, ಕೋಲಾಟ ದೊಂದಿಗೆ ವಿಜ್ರಂಭಣೆಯಿಂದ ಆರಾಧನೆ ಜರುಗಿತು.

ಆರಾಧನೆಯ ನಿಮಿತ್ಯವಾಗಿ ಭಕ್ತರಿಗೆ ವಿಶೇಷ ಗೌರವ ಆಶಿರ್ವಾದ ನೀಡಲಾಯಿತು. ಈ ಸಂದರ್ಭದಲ್ಲಿ ಮಠದ ಅರ್ಚಕ ಮಧ್ವಾಚಾರ್ಯ ಸಾನಿಧ್ಯದಲ್ಲಿ ಅನಂತಾಚಾರ್ಯ, 

ಮಠದ ಅದ್ಯಕ್ಷ ನಾರಾಯಣರಾವ್ ದೇಶಪಾಂಡೆ, ನರಸಿಂಗರಾವ್ ದೇಶಪಾಂಡೆ, ಡಾ. ಗುರುರಾಜ ದೇಶಪಾಂಡೆ, ಕರ್ಣಾಟಕ ಬ್ಯಾಂಕ್‌ನ ಶ್ರೀನಿವಾಸ ದೇಶಪಾಂಡೆ, ಡಾ. ಎಂ.ವಿ. ಜೋಶಿ, ನಿವೃತ್ತ ಶಿಕ್ಷಕರಾದ ರಂಗರಾವ್ ದೇಶಪಾಂಡೆ, ವಿ.ಎಸ್. ಶೆಡ್ಲಿಗೇರಿ, ಪಾಲಾಕ್ಷಿರಾವ್ ದೇಶಪಾಂಡೆ, ಪ್ರಾಣೇಶರಾವ್ ಮುತಾಲಿಕ, ಗುರುರಾಜ ದೇಶಪಾಂಡೆ,  ಹಿರಿಯ ಪತ್ರಕರ್ತರಾದ ಆರ್.ವಿ. ಗುಮಾಸ್ತೆ, ಲೇಶರಾವ್ ಕುಲಕರ್ಣಿ, ಅನಂತ ರಾವ್ ದೇಶಪಾಂಡೆ, ರಾಘವೇಂದ್ರ ದೇಶಪಾಂಡೆ, ಯಲ್ಲೋಜಿರಾವ್ ಕೋರೇಕರ್, ಯೋಗೇಶಪ್ಪ ಗೌರಿಪೂರ, ನಾರಾಯಣಪ್ಪ ತಾವರಗೇರಿ, ರಾಘವೇಂದ್ರ ತಾವರಗೇರಿ ಸೇರಿದಂತೆ ವಿಪ್ರ ಸಮಾಜದ ಹಾಗೂ ಆರ್ಯ ವೈಶ್ಯ ಸಮಾಜ ಮಹಿಳೆಯರು ಸೇರಿದಂತೆ ಭಕ್ತ ಸಮೂಹ ಭಾಗವಹಿಸಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು