11:11 AM Monday14 - September 2026
ಬ್ರೇಕಿಂಗ್ ನ್ಯೂಸ್
‘ಮಂಗಳೂರು ಟೆಕ್ನೋವಾಂಜಾ 2026’: ಕರಾವಳಿಯಲ್ಲಿ ತಂತ್ರಜ್ಞಾನ ಕ್ರಾಂತಿ ಸೆ. 23ರಂದು ಅನಾವರಣ ಬಹುರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೊ ದಾಖಲೆ ಸಾಧನೆ: 2025-26ನೇ ಸಾಲಿನಲ್ಲಿ 3,735 ಕೋಟಿ… ಮಹಿಳಾ ಉದ್ಯೋಗಿಗಳಿಗೆ ಕಾರ್ಪೊರೇಟ್ ಎನ್‌ಪಿಎಸ್: ಪೆನ್ಷನ್‌ ಬಜಾರ್ -ಉಬುಂಟು ಒಪ್ಪಂದ ಪುತ್ತೂರು ಶಾಸಕರ ಆರೋಪ | ಕೆಆರ್ ಐಡಿಎಲ್ ಸಂಸ್ಥೆಗೆ ಗುತ್ತಿಗೆ: ಉಸ್ತುವಾರಿ ಸಚಿವ… ಕ್ರೈಂ ಡೈರಿ | ಸೆರೆ ಸಿಕ್ಕ ‘ರಿಪ್ಪರ್ ಚಂದ್ರನ್’ ಎಂಬ ಸರಣಿ ಹಂತಕ:… ತುಮಕೂರು-ರಾಯದುರ್ಗ- ಚಿತ್ರದುರ್ಗ | 2027 ಡಿಸೆಂಬರ್ ಅಂತ್ಯಕ್ಕೆ ರೈಲು ಮಾರ್ಗ ಆರಂಭ ಕಸ್ತೂರಿ ರಂಗನ್ ವರದಿ ವಿರೋಧಿಸಿ ನವೆಂಬರ್ 16ರಿಂದ ತೀರ್ಥಹಳ್ಳಿ ಟು ಶಿವಮೊಗ್ಗ ಪಾದಯಾತ್ರೆ:… *ಡಿಸೆಂಬರ್ ಒಳಗೆ ಜಗತ್ತಿಗೆ ಗಂಡಾತರ: ‘ಅಷ್ಟಮಂಗಲ ಪ್ರಶ್ನೆ’ಯಲ್ಲಿ ಕಾಳಸರ್ಪ ದೋಷದ ಭವಿಷ್ಯ* ಚಾಮರಾಜನಗರ | ಒಂಟಿ ಸಲಗದ ಜತೆ ಪ್ರಾಣ ಪಣಕ್ಕಿಟ್ಟು ಸೆಲ್ಫಿ; ಬೈಕ್ ಸವಾರರ… ಸೆಪ್ಟೆಂಬರ್ 8 ಮಾತೆ ಮರಿಯಮ್ಮನವರ ಜನ್ಮದಿನ ಹಬ್ಬಕ್ಕೆ ಸಾರ್ವತ್ರಿಕ ರಜೆ ಘೋಷಿಸಲು ಆಗ್ರಹ

ಇತ್ತೀಚಿನ ಸುದ್ದಿ

ರಾಘವೇಂದ್ರ ಸ್ವಾಮಿ ಮಠದಲ್ಲಿ 350ನೇ ಉತ್ತರಾಧನೆ ಸಂಭ್ರಮ: ರಥೋತ್ಸವ ಸಂಪನ್ನ

25/08/2021, 23:10

ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ
ರಾಯಚೂರು
info.reporterkarnataka@gmail.com

ಮಸ್ಕಿ ಸಮೀಪದ ಮುದುಗಲ್ ಪಟ್ಟಣದ       ಬೇಡಿದ ಭಕ್ತರಿಗೆ ಇಷ್ಟಾರ್ಥ ವನ್ನು ಕರುಣಿಸುವ ಕಲಿಯುಗದ ಕಲ್ಪವೃಕ್ಷ, ತೃತೀಯ ಮಂತ್ರಾಲಯವೆಂದೇ ಕರೆಯಲ್ಪಡುವ ಮುದಗಲ್ಲ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಮಠದಲ್ಲಿ 350 ನೇ ಉತ್ತರಾಧನೆ ರಥೋತ್ಸವದ ಸಂಭ್ರಮ ಜರುಗಿತು.

ಏಳು ದಿನಗಳ ಕಾಲ ಗುರುರಾಯರ ಆರಾಧನೆಯ ಬುಧವಾರದಂದು ಉತ್ತರಾಧನೆ ಶ್ರದ್ಧಾ ಭಕ್ತಿಯೊಂದಿಗೆ ಬೆಳಗ್ಗೆ ಅಷ್ಟೋತ್ತರ ಕಾರ್ಯಕ್ರಮದಿಂದ ಪ್ರಾರಂಭವಾಗಿ ರಾಯರ ಬೃಂದಾವನಕ್ಕೆ ವಿಶೇಷ ಪೂಜೆ, ಅಲಂಕಾರ ಸೇವೆ, ರಥೋತ್ಸವಕ್ಕೆ ಮುನ್ನ ಪ್ರಹ್ಲಾದರಾಜರ ಉತ್ಸವ ಮೂರ್ತಿಯ ಪಲ್ಲಕ್ಕಿ ಸೇವೆ, ತೋಟ್ಟಿಲು ಸೇವೆ ಕಾರ್ಯಕ್ರಮ ನೆರವೇರಿತು. 

ಕೋವಿಡ್ ನಿಯಮಾನುಸಾರವಾಗಿ  ಗುರುರಾಯರ ಆರಾಧನೆ ಜರುಗಿತು. ರಥೋತ್ಸವುದ್ದಕ್ಕೂ ಭಕ್ತರು ದೇವರ ನಾಮ ಸ್ಮರಣೆ ಹಾಡುಗಳು, ಭಜನೆ, ಕೋಲಾಟ ದೊಂದಿಗೆ ವಿಜ್ರಂಭಣೆಯಿಂದ ಆರಾಧನೆ ಜರುಗಿತು.

ಆರಾಧನೆಯ ನಿಮಿತ್ಯವಾಗಿ ಭಕ್ತರಿಗೆ ವಿಶೇಷ ಗೌರವ ಆಶಿರ್ವಾದ ನೀಡಲಾಯಿತು. ಈ ಸಂದರ್ಭದಲ್ಲಿ ಮಠದ ಅರ್ಚಕ ಮಧ್ವಾಚಾರ್ಯ ಸಾನಿಧ್ಯದಲ್ಲಿ ಅನಂತಾಚಾರ್ಯ, 

ಮಠದ ಅದ್ಯಕ್ಷ ನಾರಾಯಣರಾವ್ ದೇಶಪಾಂಡೆ, ನರಸಿಂಗರಾವ್ ದೇಶಪಾಂಡೆ, ಡಾ. ಗುರುರಾಜ ದೇಶಪಾಂಡೆ, ಕರ್ಣಾಟಕ ಬ್ಯಾಂಕ್‌ನ ಶ್ರೀನಿವಾಸ ದೇಶಪಾಂಡೆ, ಡಾ. ಎಂ.ವಿ. ಜೋಶಿ, ನಿವೃತ್ತ ಶಿಕ್ಷಕರಾದ ರಂಗರಾವ್ ದೇಶಪಾಂಡೆ, ವಿ.ಎಸ್. ಶೆಡ್ಲಿಗೇರಿ, ಪಾಲಾಕ್ಷಿರಾವ್ ದೇಶಪಾಂಡೆ, ಪ್ರಾಣೇಶರಾವ್ ಮುತಾಲಿಕ, ಗುರುರಾಜ ದೇಶಪಾಂಡೆ,  ಹಿರಿಯ ಪತ್ರಕರ್ತರಾದ ಆರ್.ವಿ. ಗುಮಾಸ್ತೆ, ಲೇಶರಾವ್ ಕುಲಕರ್ಣಿ, ಅನಂತ ರಾವ್ ದೇಶಪಾಂಡೆ, ರಾಘವೇಂದ್ರ ದೇಶಪಾಂಡೆ, ಯಲ್ಲೋಜಿರಾವ್ ಕೋರೇಕರ್, ಯೋಗೇಶಪ್ಪ ಗೌರಿಪೂರ, ನಾರಾಯಣಪ್ಪ ತಾವರಗೇರಿ, ರಾಘವೇಂದ್ರ ತಾವರಗೇರಿ ಸೇರಿದಂತೆ ವಿಪ್ರ ಸಮಾಜದ ಹಾಗೂ ಆರ್ಯ ವೈಶ್ಯ ಸಮಾಜ ಮಹಿಳೆಯರು ಸೇರಿದಂತೆ ಭಕ್ತ ಸಮೂಹ ಭಾಗವಹಿಸಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು