7:54 PM Sunday20 - September 2026
ಬ್ರೇಕಿಂಗ್ ನ್ಯೂಸ್
*ರೈತರ ಬದುಕು ಉಳಿಸಲು ನಮ್ಮ ಸರ್ಕಾರ ಕೆಲಸ ಮಾಡಲಿದೆ: ಸಿಎಂ ಡಿ ಕೆ… *ರಾಜ್ಯದ ಹಿತವೇ ಸರ್ಕಾರದ ಮೊದಲ ಆದ್ಯತೆ: ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ* ಕೊಳತ್ತಮಜಲು ಅಬ್ದುಲ್ ರಹ್ಮಾನ್ ಕೊಲೆ ಆರೋಪಿಗಳಿಗೆ ಜಾಮೀನು: ಸರ್ಕಾರದ ವಿರುದ್ಧ ಎಸ್‌ಡಿಪಿಐ ಆಕ್ರೋಶ ಮಂಗಳೂರು ಜಿಲ್ಲಾ ಕಾರಾಗೃಹದ ಸುತ್ತಮುತ್ತ ಮೊಬೈಲ್ ನೆಟ್‌ವರ್ಕ್ ವ್ಯತ್ಯಯ ತಗ್ಗಿಸಲು ಕ್ರಮ: ಗೃಹ… ಶಾರ್ಜಾದ ‘ಸ್ಟ್ರಿಂಗ್ ಟ್ರಾನ್ಸ್‌ಪೋರ್ಟ್’ ವ್ಯವಸ್ಥೆ: ಟೂರಿಸಂ ಸಚಿವ ಕೆ.ಜೆ. ಜಾರ್ಜ್ ನೇತೃತ್ವದ ನಿಯೋಗ… ರಾಜ್ಯ ಸಚಿವ ಸಂಪುಟ ಸಭೆ | ಸಂಚಾರ ವ್ಯತ್ಯಯ; ಬದಲಿ ಮಾರ್ಗ ವ್ಯವಸ್ಥೆ ಹ್ಯಾಂಡ್ಪಿಕ್ಡ್: ಬೆಂಗಳೂರಿನಲ್ಲಿ ತಾಜಾ ಹಿಟ್ಟು, ಮಸಾಲೆ ಹಾಗೂ ಎಣ್ಣೆ ಉತ್ಪನ್ನ ಮಾರಾಟ ಆರಂಭ ‘ಮಂಗಳೂರು ಟೆಕ್ನೋವಾಂಜಾ 2026’: ಕರಾವಳಿಯಲ್ಲಿ ತಂತ್ರಜ್ಞಾನ ಕ್ರಾಂತಿ ಸೆ. 23ರಂದು ಅನಾವರಣ ಬಹುರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೊ ದಾಖಲೆ ಸಾಧನೆ: 2025-26ನೇ ಸಾಲಿನಲ್ಲಿ 3,735 ಕೋಟಿ… ಮಹಿಳಾ ಉದ್ಯೋಗಿಗಳಿಗೆ ಕಾರ್ಪೊರೇಟ್ ಎನ್‌ಪಿಎಸ್: ಪೆನ್ಷನ್‌ ಬಜಾರ್ -ಉಬುಂಟು ಒಪ್ಪಂದ

ಇತ್ತೀಚಿನ ಸುದ್ದಿ

ಕೋಲಾರ ಜಿಲ್ಲೆ: ಎಸ್ಸೆಸ್ಸೆಲ್ಸಿ ಸಾಧಕಿಯರಾದ ವರ್ಷಿಣಿ, ಪೂರ್ವಿ ಗೆ ರೋಟರಿ ಸೆಂಟ್ರಲ್ ಸನ್ಮಾನ

11/08/2021, 08:27

ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ ಕೋಲಾರ

info.reporterkarnataka@gmail.com

ಜಿಲ್ಲೆಯ ಎಸ್ಸೆಸ್ಸೆಲ್ಸಿ ಸಾಧಕಿಯರಾದ ಸಿ.ವರ್ಷಿಣಿ , ಕೆ. ಪೂರ್ವಿ ಹಾಗೂ ಫಲಿತಾಂಶದಲ್ಲಿನ ಕ್ರಾಂತಿಗೆ ಹಗಲಿರುಳು ಶ್ರಮಿಸಿದ ಎಸ್ಸೆಸ್ಸೆಲ್ಸಿ ಪರೀಕ್ಷಾ ನೋಡಲ್ ಅಧಿಕಾರಿ ಎ.ಎನ್. ನಾಗೇಂದ್ರಪ್ರಸಾದ್ ಅವರನ್ನು ರೋಟರಿ ಸೆಂಟ್ರಲ್‌ ವತಿಯಿಂದ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಕೋಲಾರ ರೋಟರಿ ಸೆಂಟಲ್ಸ್ ಅಧ್ಯಕ್ಷ ಹಾಗೂ ಸಮಾಜ ಸೇವಕ ಸಿ.ಎಂ.ಆರ್. ಶ್ರೀನಾಥ್ , ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಕೊನೆ ಸ್ಥಾನಗಳಲ್ಲಿದ್ದ ಜಿಲ್ಲೆಯನ್ನು ಉನ್ನತ ಸ್ಥಾನ ಗಳಿಸುವಂತೆ ಕ್ರಿಯಾಯೋಜನೆ ರೂಪಿಸಿ ಶ್ರಮಿಸಿದ ನಾಗೇಂದ್ರ ಪ್ರಸಾದ್ ಅವರ ಪರಿಶ್ರಮ ಶ್ಲಾಘನೀಯ ಎಂದರು . 

೬೨೫ ಕ್ಕೆ ೬೨೫ ಅಂಕ ಗಳಿಸುವ ಮೂಲಕ ರಾಜ್ಯಮಟ್ಟದಲ್ಲಿ ಮೊದಲಿಗರಾಗಿ ಜಿಲ್ಲೆಗೆ ಕೀರ್ತಿ ತಂದ ಈ ವಿದ್ಯಾರ್ಥಿನಿಯರು ರಾಜ್ಯದಲ್ಲೇ ಕೋಲಾರ ಜಿಲ್ಲೆಯನ್ನು ಗುರುತಿಸುವಂತೆ ಮತ್ತಷ್ಟು ಸಾಧನೆ ಮಾಡಲಿ ಎಂದು ಹಾರೈಸಿದರು.

ಕೋಲಾರ ಜಿಲ್ಲೆ ಐಪಿಎಸ್, ಐಎಎಸ್ ಸಾಧನೆಗಿಂತಲೂ ಹೆಚ್ಚಿನದಾಗಿ ಕೃಷಿ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಿದೆ. ಇಲ್ಲಿ ಕೃಷಿ ತಜ್ಞರನ್ನು ಮೀರಿಸುವ ರೈತರಿದ್ದಾರೆ ಎಂದು ತಿಳಿಸಿದರು. 

ಈ ವಿದ್ಯಾರ್ಥಿನಿಯರ ಕಲಿಕೆಗೆ ಅಗತ್ಯವಾದಲ್ಲಿ ನೆರವು ಒದಗಿಸುವ ಭರವಸೆ ನೀಡಿದ ಅವರು , ರೋಟರಿ ಸಂಸ್ಥೆಯಿಂದ ಸನ್ಮಾನಿಸಿ ನನಪಿನ ಕಾಣಿಕೆ ಹಾಗೂ ನಗದು ಪುರಸ್ಕಾರ ನೀಡಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಪರೀಕ್ಷಾ ನೋಡಲ್ ಅಧಿಕಾರಿ ಎ.ಎನ್. ನಾಗೇಂದ್ರಪ್ರಸಾದ್ , ೨೦೦೭ ರಲ್ಲಿ ನಾನು ಜಿಲ್ಲೆಗೆ ಬಂದೆ ನನ್ನ ಪ್ರಯತ್ನಕ್ಕೆ ಮಾಧ್ಯಮ ನೀಡಿದ ಸಹಕಾರ ಮರೆಯುವುದಿಲ್ಲ , ನನ್ನ ವರ್ಗಾವಣೆಯನ್ನು ತಡೆದು ಇಲ್ಲಿನ ಮಾಧ್ಯಮ ಸ್ನೇಹಿತರು ಜಿಲ್ಲೆ ಫಲಿತಾಂಶದಲ್ಲಿ ಸಾಧನೆ ವರಾಡಲು ನೆರವಾದರು ಎಂದರು.

ಮಕ್ಕಳಿಗೆ ಅನ್ಯಾಯವಾಗಬಾರದು ಎಂಬುದೇ ನನ್ನ ಧೈಯ , ಅದಕ್ಕಾಗಿಯೇ ಶಿಕ್ಷಕರಿಗೆ ತರಬೇತಿ , ಮಾದರಿ ಪ್ರಶ್ನೆಪತ್ರಿಕೆ , ಅಧ್ಯಾಯವಾರು ಪ್ರಶ್ನೆಪತ್ರಿಕೆ ತಯಾರು , ವರ್ಕ್ ಶೀಟ್ , ‘ ನನ್ನನ್ನೊಮ್ಮೆ ಗಮನಿಸು’ಪಶ್ನೆಕೋಠಿ ಇವೆಲ್ಲವನ್ನು ಸಿದ್ದಪಡಿಸಿ ಮಕ್ಕಳಿಗೆ ಆತ್ಮಸ್ಥೆರ್ಯ ತುಂಬುವ ಕೆಲಸ ಮಾಡಿದ್ದಾಗಿ ನುಡಿದರು .

ಜಿಲ್ಲಾ ಸೇವಾದಳ ಅಧ್ಯಕ್ಷ ಹಾಗೂ ಕೋಲಾರ ಮತ್ತು ಚಿಕ್ಕಬಳ್ಳಾಪುರ ಕಾರ್ಯನಿರತ ಪತ್ರಕರ್ತರ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಕೆ.ಎಸ್. ಗಣೇಶ್‌ , ಫಲಿತಾಂಶ ಪಟ್ಟಿಯಲ್ಲಿ ಜಿಲ್ಲೆಯನ್ನು ಕೊನೆ ಸ್ಥಾನದಿಂದ ಗುರುತಿಸಬೇಕಾದ ದುಸ್ಥಿತಿ ಇತ್ತು. ಅಂತಹ ಸಂದರ್ಭದಲ್ಲಿ ಜಿಲ್ಲೆಗೆ ಬಂದ ನಾಗೇಂದ್ರಪ್ರಸಾದ್ ನಿರಂತರ ಪರಿಶ್ರಮದ ಮೂಲಕ ಫಲಿತಾಂಶ ಹೆಚ್ಚಿಸಲು ಕೈಗೊಂಡ ಕ್ರಮಗಳಿಂದ ಇಂದು ಜಿಲ್ಲೆ ಫಲಿತಾಂಶದಲ್ಲಿ ಮೊದಲ ಆರೇಳು ಸ್ಥಾನಗಳೊಳಗೆ ಕಾಣಿಸಿಕೊಂಡಿದೆ ಎಂದರು.

ಈ ಬಾರಿ ಇಬ್ಬರು ವಿದ್ಯಾರ್ಥಿನಿಯರಾದ ವರ್ಷಿಣಿ , ಪೂರ್ವ ಸಾಧನೆ ಮಾಡುವ ಮೂಲಕ ಜಿಲ್ಲೆಯ ಗೌರವ ಹೆಚ್ಚಿಸಿದ್ದಾರೆ , ಈ ಮಕ್ಕಳಿಗೆ ಆತ್ಮವಿಶ್ವಾಸ ತುಂಬುವ ಕೆಲಸವನ್ನು ರೋಟರಿ ಮತ್ತು ಸೇವಾದಳ ಮಾಡುತ್ತಿದ್ದು , ಈ ಮಕ್ಕಳಿಗೆ ಉಜ್ವಲ ಭವಿಷ್ಯ ಸಿಗಲಿ ಎಂದು ಹಾರೈಸಿದರು .

ರೋಟರಿ ಮತ್ತು ಭಾರತ ಸೇವಾದಳ ಕಾರ್ಯದರ್ಶಿ ಎಸ್‌.ಸುಧಾಕರ್ ಮಾತನಾಡಿ , ಕೋವಿಡ್ ಸಂದರ್ಭದಲ್ಲೂ ಭಾರತದಲ್ಲೇ ಯಶಸ್ವಿಯಾಗಿ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಿದ್ದು ನಮ್ಮ ಕರ್ನಾಟಕ ರಾಜ್ಯದ ಹೆಗ್ಗಳಿಕೆ ಎಂದ ಅವರು , ಪರೀಕ್ಷಾ ಸಂದರ್ಭದಲ್ಲಿ ಮಕ್ಕಳಿಗೆ ರಾಜ್ಯಾದ್ಯಂತ ರೋಟರಿಯಿಂದ ೧೪ ಲಕ್ಷ ಮಾಸ್ಕ್ ವಿತರಿಸಿದ್ದೇವೆ ಎಂದು ತಿಳಿಸಿ ಜಿಲ್ಲೆಯ ಸಾಧಕಿಯರಿಗೆ ರೋಟರಿಯಿಂದ ಅಗತ್ಯ ನೆರವು ಒದಗಿಸುವ ಭರವಸೆ ನೀಡಿದರು .

ಸನ್ಮಾನ ಸ್ವೀಕರಿಸಿದ ವಿದ್ಯಾರ್ಥಿನಿ ಸಿ.ವರ್ಷಿಣಿ , ಕಾಮಸಮುದ್ರ , ಸಮೀಪದ ಬೊಡಗುರ್ಕಿ ಗ್ರಾಮದವಳಾದ ನಾನು ಅಲ್ಲಿ ಆನ್ ಲೈನ್ ತರಗತಿಗೆ ಸಿಗ್ನಲ್ ಸಿಗದ ಕಾರಣ ಕೆಜಿಎಫ್‌ಗೆ ಬಂದೆ . ಶಾಲೆಯ ಶಿಕ್ಷಕರ ಸಹಕಾರ , ವಿದ್ಯಾಗಮ , ಚಂದನ ಟಿವಿ. ಸಂವೇದ ತರಗತಿಗಳ ಪ್ರಯೋಜನ , ನಾಗೇಂದ್ರಪ್ರಸಾದ್ ಅವರು ನೀಡಿದ ಮಾರ್ಗದರ್ಶನ , ತಂದೆತಾಯಿಯ ನೆರವು ನನ್ನೀ ಸಾಧನೆಗೆ ಕಾರಣ ಎಂದು ತಿಳಿಸಿದರು . ವಿದ್ಯಾರ್ಥಿನಿ ಕೆ. ಪೂರ್ವಿ ಮಾತನಾಡಿ , ಪರೀಕ್ಷಾ ವಿಧಾನ ಬದಲಾದಾಗ ಭಯವಾಯಿತು ಆದರೆ ಆನ್‌ಲೈನ್ ತರಗತಿ , ಚಂದನಾ ತರಗತಿ , ನಮ್ಮ ಶಿಕ್ಷಕರ ನೆರವಿನಿಂದ ಈ ಸಾಧನೆ ಸಾಧ್ಯವಾಯಿತು ಎಂದರು .ಈ ಸಂದರ್ಭದಲ್ಲಿ ರೋಟರಿ ನಿರ್ದೇಶಕ ಬಿಎಸನಲ್ ರಮೇಶ್‌ಬಾಬು , ನೌಕರರ ಸಂಘದ ಜಂಟಿ ಕಾರ್ಯದರ್ಶಿ ಶ್ರೀನಿವಾಸಲು , ಕೋಲಾರ ಕಿರಣ ಕನ್ನಡ ದಿನಪತ್ರಿಕೆ ಸಂಪಾದಕರು ಎಂ ಡಿ ಚಾಂದ್ ಪಾಷ , ಪೋಷಕರಾದ ಚಂದ್ರಶೇಖರ್ , ಶೋಭಾರಾಣಿ , ಕೃಷ್ಣಾರೆಡ್ಡಿ , ಬೈಯ್ಯಮ್ಮಗಂಗಾಧರ್‌ ಮತ್ತಿತರರಿದ್ದರು .

ಇತ್ತೀಚಿನ ಸುದ್ದಿ

ಜಾಹೀರಾತು