7:01 AM Wednesday11 - March 2026
ಬ್ರೇಕಿಂಗ್ ನ್ಯೂಸ್
ಚಿಕ್ಕಮಗಳೂರು: ಹಸುವನ್ನು ತುಳಿದು ಕೊಂದ ಕಾಡಾನೆ; ಮಾಣಿಮಕ್ಕಿ ಗ್ರಾಮಸ್ಥರಲ್ಲಿ ಆತಂಕ ತೀರ್ಥಹಳ್ಳಿ: ಕುವೆಂಪು ಜೈವಿಕ ಅರಣ್ಯದಲ್ಲಿ ಹತ್ತಿಕೊಂಡ ಬೆಂಕಿ; ಅರಣ್ಯಾಧಿಕಾರಿಗಳ ದೌಡು ಝೂ ಅಭಿ ಇನ್ನಿಲ್ಲ: ಕಾಲು ನೋವಿನಿಂದ ಬಳಲುತ್ತಿದ್ದ ಮತ್ತಿಗೋಡು ಶಿಬಿರದ ಸಾಕಾನೆ ವಿವಿಧ ಬೇಡಿಕೆ ಆಗ್ರಹಿಸಿ ವಿದ್ಯುತ್ ಗುತ್ತಿಗೆದಾರರ ಸಂಘದಿಂದ ಮಾ.11ರಂದು ಪ್ರತಿಭಟನೆ ಮೋದಿ ದೇಶದ ಮಾರ್ಯಾದೆ ಹಾಳು‌‌ ಮಾಡುತ್ತಿದ್ದಾರೆ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಟು‌… ಕಂಬಳಕ್ಕೆ ರಾಜ್ಯ ಸರಕಾರದಿಂದ ಹಣಕಾಸಿನ ನೆರವು: ಬಂಟ್ವಾಳದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ಹೈಕಮಾಂಡ್ ಸೂಚಿಸಿದರೆ ಕ್ಷಣಾರ್ಧದಲ್ಲಿ ಕುರ್ಚಿ ಬಿಡಲು ಸಿದ್ಧ: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ಜನಾಶೀರ್ವಾದವಿದ್ದರೆ ಮಾತ್ರ ಮುಖ್ಯಮಂತ್ರಿಯಾಗಲು ಸಾಧ್ಯ: ಮೈಸೂರಿನಲ್ಲಿ‌ ಸಿಎಂ ಸಿದ್ದರಾಮಯ್ಯ Kodagu | ಮಹಿಳೆಯ ಗರ್ಭಾಶಯದಲ್ಲಿ 7 ಕೆಜಿ ಗೆಡ್ಡೆ: ಶಸ್ತ್ರಚಿಕಿತ್ಸೆ ಮೂಲಕ ಹೊರಕ್ಕೆ Kodagu | ದೊಡ್ಡಕೊಡ್ಲಿ ಗ್ರಾಮದಲ್ಲಿ ಕೋವಿಯಿಂದ ಗುಂಡು ಸಿಡಿದು ಯುವಕ ಸಾವು

ಇತ್ತೀಚಿನ ಸುದ್ದಿ

ಮಕ್ಕಳು ಶಾಲೆಗೆ ಹೋಗಿದ್ದಾರಾ.!?_ ಚಕ್ಕರ್ ಹೊಡಿದಿದ್ದಾರಾ.!? ಖಚಿತ ಪಡಿಸಿಕೊಳ್ಳಿ ಪೋಷಕರೇ

13/12/2023, 19:28

ವಿ.ಜಿ.ವೃಷಭೆಂದ್ರ ಕೂಡ್ಲಿಗಿ ವಿಜಯನಗರ

info.reporterkarnataka@gmail.com

ಮಕ್ಕಳು ಶಾಲೆಗೆಂದು ಮನೆಯಿಂದ ಹೆಗಲಿಗೆ ಬ್ಯಾಗ್ ಹಾಕಿಕೊಂಡು ಹೊರಟಿದ್ದಾರೆಂದರೆ, ಪೋಷಕರಿಗೆ ಅದೇನೆೋ ಖುಷಿ ಅದೆಂತಹದ್ದೋ ಕನಸಿನ ಮನೆಯ ಕದ ತೆರೆದು ಬಿಡುತ್ತದೆ. ಆದ್ರೆ ಮೊಬೈಲ್ ಗೀಳು ಅವರ ವಿದ್ಯಾರ್ಥಿ ಜೀವನವನ್ನೇ ಹಾಳು ಮಾಡುತ್ತಿದೆ, ಅದಕ್ಕೆ ಸಾಕ್ಷಿ ಇಲ್ಲಿದೆ ನೋಡಿ ಈ ವೀಡಿಯೋ ಉದಾಹರಣೆಗೆ ಮಾತ್ರ. ಆದ್ರೆ ಇಂತಹ ನೂರಾರು ವಿದ್ಯಾರ್ಥಿಗಳು ನಿತ್ಯ ಶಾಲೆಗೆ ಚಕ್ಕರ್ ಹೊಡೆದು, ವಿದ್ಯಾಭ್ಯಾಸ ಬಿಟ್ಟು ಮೊಬೇಲ್ ನಲ್ಲಿ ಮುಳುಗುತ್ತಿದ್ದಾರೆ. ಮತ್ತು ಮೊಬೈಲ್ ಮೂಲಕ ಹತ್ತಾರು ದುರ್ವ್ಯೆಸನಗಳ ದಾಸರಾಗುತ್ತಿದ್ದಾರೆ, ಮಾನಸಿಕವಾಗಿ ಮೊಬೈಲ್ ದಾಸರಾಗಿ ಮಾನಸಿಕ ರೋಗಕ್ಕೆ ತುತ್ತಾಗುತ್ತಿದ್ದಾರೆ. ಮೊಬೈಲ್ ನ್ನು ಮಕ್ಕಳಿಗೆ ಮಾತ್ರವಲ್ಲ ವಿವೇಚನೆ ರಹಿತ ವಿದ್ಯಾರ್ಥಿಗಳಿಗೆ, ಅಂದರೆ ಪದವಿ ಹಂತದವರೆಗೆ ಮೊಬೈಲ್‌ ಕೊಡಬಾರದು. ಇದು ತುಂಬಾ ವೈರಲ್ ಆಗಿರೋ ವೀಡಿಯೋ ವಿದ್ಯಾರ್ಥಿಗಳಿಬ್ಬರೂ, ಒಬ್ಬ ಶಾಲಾ ಸಮವಸ್ತ್ರದಲ್ಲಿದ್ದು ಮತ್ತೋರ್ವ ಸಮವಸ್ತ್ರದಲ್ಲಿಲ್ಲ. ಇವರಿಬ್ಬರೂ ಶಾಲೆಗೆ ತೆರಳದೇ ನಿರ್ಜನ ಪ್ರದೇಶದಲ್ಲಿ ಮೊಬೈಲ್‌ ನ್ನು ವೀಕ್ಷಿಸುವುದರಲ್ಲಿಯೇ ಕಾಲ ಹರಣ ಮಾಡಿದ್ದಾರೆ, ಮತ್ತು ಊಟ ಪಾಠವಿಲ್ಲದೇ ಮೊಬೈಲ್‌ ನ್ನು ಕೈ ಬಿಡದೇ ಹಿಡಿದಿದ್ದಾರೆ.


ಪುಸ್ತಕ ಪೆನ್ನು ಹಿಡಿಯಬೇಕಿರುವ ವಿದ್ಯಾರ್ಥಿಗಳು ಶಾಲೆಗೆ ತೆರಳಬೇಕಾಗಿರುವ ವಿದ್ಯಾರ್ಥಿಗಳು, ಇಂದು ಮೊಬೈಲ್ ಹಿಡಿದು ಶಾಲೆಗೆ ಚಕರ್ ಹೊಡೆದು ನಿರ್ಜನ ಪ್ರದೇಶದಲ್ಲಿ ಅಹಿತಕರ ಚಟುವಟಿಕೆಗಳಲ್ಲಿ ಲೀನವಾಗಿತ್ತಿದ್ದಾರೆ. ಎಚ್ಚರ ಪೋಷಕರೇ ನಿಮ್ಮ ಮಕ್ಕಳಿಗೆ ಮೊಬೈಲ್‌ ಕೊಡದಿರಿ, ನಿಮ್ಮ ಮಕ್ಕಳು ಶಾಲೆಗೆ ತೆರಳಿದ್ದಾನಾ ಅಥವಾ ನಿಮ್ಮ ಮಗ ಹಾಸ್ಟೆಲ್ ನಲ್ಲಿದ್ದಾನಾ ಖಚಿತ ಪಡಿಸಿಕೊಳ್ಳಿ. ಅಪ್ಪಿತಪ್ಪಿ ಮೊಬೈಲ್‌ ಕೊಡದಿರಿ ಹಾಗೊಮ್ಮೆ ಮೊಬೈಲ್‌ ಕೊಟ್ಟಿದ್ದರೆ, ವಾಪಾಸು ಪಡೆಯಿರಿ ಅಥವಾ ಅವರ ಪ್ರತಿಯೊಂದು ನಡೆಗಳನ್ನ ತೀವ್ರ ನಿಗಾವಹಿಸಿ ಗಮನಿಸಿ. ಅವರ ದಿನಚರಿಯನ್ನು ಅಧ್ಯಯನ ಮಾಡಿ ಅವರು ತರಗತಿಗೆ ಹಾಜರಾಗುವುದರ ಬಗ್ಗೆ ಖಚಿತ ಪಡಿಸಿಕೊಳ್ಳಿ, ಅವರ ಸಹವಾಸದಲ್ಲಿರುವ ಸ್ನೇಹಿತರ ಹಿನ್ನಲೆ ಮತ್ತು ಪೂರ್ವ ಪರ ಬಗ್ಗೆ ಮಾಹಿತಿ ಹೊಂದಿ. ಇಲ್ಲವಾದಲ್ಲಿ ನಿಮ್ಮ ಮಕ್ಕಳಿಗೆ ನೀವೇ ಮೊಬೈಲ್‌ ಕೊಟ್ಟು, ಅವರ ಜೀವನವನ್ನು ನೀವೇ ಹಾಳು ಮಾಡಿದಂತೆ.. ಎಚ್ಚರ.!ಪೋಷಕರೇ ಎಚ್ಚರ.!

ಇತ್ತೀಚಿನ ಸುದ್ದಿ

ಜಾಹೀರಾತು