1:41 PM Thursday30 - April 2026
ಬ್ರೇಕಿಂಗ್ ನ್ಯೂಸ್
ಉದ್ಯೋಗ ಖಾತ್ರಿ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ವ್ಯಕ್ತಿ ಸಾವು: ಬಿಸಿಲಿನ ತಾಪಮಾನಕ್ಕೆ… ರಾಜ್ಯದಲ್ಲಿ ಹೊಸ ಕನಿಷ್ಠ ವೇತನ ಜಾರಿಗೆ ತರಲು ಯತ್ನ: ಸಂಡೂರಿನಲ್ಲಿ ಕಾರ್ಮಿಕ ಸಚಿವ… ಬಿಜೆಪಿ ಪಕ್ಷದಿಂದಲೇ ಮಹಿಳೆಯರಿಗೆ ಶೇ. 30ರಷ್ಟು ಮೀಸಲಾತಿ ಪ್ರಕಟಿಸಲಿ: ಸಚಿವ ಸಂತೋಷ್ ಲಾಡ್… Mangaluru | ಕುಕ್ಕರ್‌ ಬಾಂಬ್‌ ಸ್ಫೋಟದ ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಬೇಕಿತ್ತು: ಸಂತ್ರಸ್ತ… ಗಾದಿ ಪೈಪೋಟಿ | ದೆಹಲಿಗೆ ಹೋಗಲು 50 ಶಾಸಕರ ಟಿಕೆಟ್‌ ಬುಕ್ಕಿಂಗ್‌: ಕೇಂದ್ರ… Koppala | ಕುಷ್ಟಗಿಯಲ್ಲಿ ಗುಡುಗು ಸಹಿತ ಮಳೆ: ಸಿಡಿಲು ಬಡಿದು ವ್ಯಕ್ತಿ ಬಲಿ ಕೊಡಗು-ಮೈಸೂರು ರಾಜ್ಯ ಹೆದ್ದಾರಿ ಬಳಿ ಹುಲಿ ದಾಳಿಗೆ ಹಸು ಬಲಿ: ರೊಚ್ಚಿಗೆದ್ದ ಗ್ರಾಮಸ್ಥರಿಂದ… New Delhi | 228 ಪ್ರಯಾಣಿಕರಿದ್ದ ವಿಮಾನದಲ್ಲಿ ಬೆಂಕಿ: ಸ್ವಲ್ಪದರಲ್ಲೇ ತಪ್ಪಿತು ಮತ್ತೊಂದು… ಶಿಕ್ಷಕರೇ ಇಲ್ಲದ ಶಾಲೆಗಳಿಗೆ ಶೇ. 94 ಬಂದಿದ್ದು ಹೇಗೆ? ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ದೊಡ್ಡ… ತಂದೆ ಬೈದ ಕ್ಷುಲ್ಲಕ ಕಾರಣಕ್ಕೆ ಯುವತಿ ಆತ್ಮಹತ್ಯೆಗೆ ಶರಣು

ಇತ್ತೀಚಿನ ಸುದ್ದಿ

ಅಥಣಿ ಗ್ರಾಮೀಣ ಭಾಗದಲ್ಲಿ ರಸ್ತೆ ಕಾಮಗಾರಿಗೆ ಚಾಲನೆ: ಚುನಾಯಿತ ಪ್ರತಿನಿಧಿಗಳ ಸಹಕಾರಕ್ಕೆ ಕೋರಿಕೆ

30/07/2021, 18:27

ರಾಹುಲ್ ಅಥಣಿ ಬೆಳಗಾವಿ

info.reporterkarnataka@gmail.com

ಅಥಣಿ ಗ್ರಾಮೀಣ ಭಾಗದ ರಸ್ತೆಗಳು ಅಚ್ಚುಕಟ್ಟಾಗಿ ಇದ್ದರೆ ಮಾತ್ರ ಸಾರ್ವಜನಿಕರು  ಸುಲಭವಾಗಿ ಸಂಚರಿಸಲು ಸಾಧ್ಯ ಹಾಗಾಗಿ ಅಥಣಿ ಗ್ರಾಮೀಣ ಭಾಗದ ಎಲ್ಲ ರಸ್ತೆಗಳು ಉತ್ತಮವಾಗಿ ನಿರ್ಮಾಣವಾಗಬೇಕು. ಈ ಕಾರ್ಯಕ್ಕೆ ಎಲ್ಲ ಚುನಾಯಿತ ಪ್ರತಿನಿಧಿಗಳು ಕೈ ಜೋಡಿಸಬೇಕು ಎಂದು ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಶೇಖರ ಕರಬಸಪ್ಪಗೋಳ ಹೇಳಿದರು.

ಅವರು ಸ್ಥಳೀಯ ಮಸರಗುಪ್ಪಿ ರಸ್ತೆಗೆ ಅಡ್ಡಲಾಗಿ ಅಥಣಿಕರ ವಸತಿ ವರೆಗೆ (ಅಥಣಿ ಗ್ರಾ) ದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ 02.10 ಲಕ್ಷ ರೂ ರಸ್ತೆಗೆ ಮುರುಮ ಹಾಕುವ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.

ನಂತರ ಮಾತನಾಡಿದ ಗ್ರಾ.ಪಂ ಸದಸ್ಯ ಪರಶುರಾಮ್ ಸೊಂಕರ್, ನಮ್ಮ ವಾರ್ಡಿನ ಜನತೆ ನನಗೆ ಮತಹಾಕಿ ಗೆಲ್ಲಿಸಿ ಸಾರ್ವಜನಿಕರ ಸೇವೆ ಮಾಡಲು ಅವಕಾಶ ಕೊಟ್ಟಿದ್ದು ಅದಕ್ಕಾಗಿ ಮೊದಲನೇಯ ಕೆಲಸವಾಗಿ ಈ ರಸ್ತೆ ಕಾಮಗಾರಿ ನಂತರ ದಿನಗಳಲ್ಲಿ ವಾರ್ಡಿನ ಎಲ್ಲ ಕೆಲಸ ಮಾಡಿ ಜನರ ಹಿತಕಾಪಾಡುತ್ತೆನೆ ಈ ಕೆಲಸಕ್ಕೆ ಪಂಚಾಯತಿಯ ಎಲ್ಲ ಸದಸ್ಯ, ಅಧ್ಯಕ್ಷ ಹಾಗೂ ಎಲ್ಲ ಅಧಿಕಾರಿಗಳ ಬೆಂಬಲವಿದೆ ಎಂದರು.


ಈ ವೇಳೆ ಜಿಪಂ ಅಭಿಯಂತರ ವೀರಣ್ಣಾ ವಾಲಿ, ಗ್ರಾಪಂ ಸದಸ್ಯ ಪರಶುರಾಮ ಸೋನಕರ, ಭರಮು ಸೋನಕರ, ಅಪ್ಪಾಸಾಬ ಆಲಬಾಳ, ಅರುಣ ಭಾಸಿಂಗಿ, ಸಂಜೀವ ಹಣಮಾಪೂರೆ, ಶಂಕರ ಗಡದೆ, ಮಹಿಬೂಬ ಮಕಾಂದಾರ, ಅಪ್ಪಾಸಾಬ ಕೋರಿಶೇಟ್ಟಿ, ಗ್ರಾ‌ಪಂ ಅಭಿವೃದ್ದಿ ಅಧಿಕಾರಿ ಸುಭಾಷ ಹುಬ್ಬಳ್ಳಿ, ಗೌತಮ ಪರಾಂಜಪೆ, ಸಂಜೀವ ಭಜಂತ್ರಿ, ದುಂಡಪ್ಪಾ ಕಲಗುಣಿ, ಭೀರಪ್ಪ ಕಾಂಬಳೆ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು