8:10 AM Wednesday4 - March 2026
ಬ್ರೇಕಿಂಗ್ ನ್ಯೂಸ್
ಡಿಕೆಶಿ ಮೇಲೆ ಕಣ್ಗಾವಲು | ಎಚ್ ಡಿಕೆ, ಆರ್. ಅಶೋಕ್ ಹೇಳಿಕೆ ‘’ತಾ… ಚೆನ್ನೈ ವಿಶೇಷ ಸಮಾವೇಶದಲ್ಲಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್: ಸಾರ್ವಜನಿಕ ಆರೋಗ್ಯ ಮೂಲಸೌಕರ್ಯ ಕುರಿತು… ಚೆನ್ನಪಟ್ಟಣ | ಕೊಡಗಿನ ಸಾಕಾನೆಗಳ ಯಶಸ್ವಿ ಕಾರ್ಯಾಚರಣೆ: ನಿರಂತರ ಉಪಟಳ ನೀಡುತ್ತಿದ್ದ ಮಕ್ನಾ… ಬೆಂಗಳೂರಿನ ನೈಜೆಲ್ ಫೆರ್ನಾಂಡಿಸ್‌ಗೆ ಅಪರೂಪದ ‘ಪಾಪಲ್ ನೈಟ್‌ಹುಡ್’ ಗೌರವ ಪ್ರದಾನ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಜಾಗತಿಕ ಮುಂಚೂಣಿಯತ್ತ ಸಾಗಿದೆ: ಕೃಷಿ ವಿಜ್ಞಾನಿ ಡಾ. ತಿಮಕಾಪುರ ನಿರಂತರ ಕಾಡಾನೆ ದಾಳಿಗೆ ಕಂಗಾಲಾದ ಮಲೆನಾಡಿಗರು: ಕಳೆದೊಂದು ವರ್ಷದಲ್ಲಿ 9 ಜನ ಕಾಡಾನೆ… ನಾಪೋಕ್ಲು: ಹಿಂದೂ ಸಂಗಮ ಸಮಾವೇಶ ಪ್ರಚಾರ ವೇಳೆ ಮಾತಿನ ಚಕಮಕಿ; ಓರ್ವನಿಗೆ ಗಾಯ ಯೋಗೀಶ್ ಗೌಡ ಕೊಲೆ ಪ್ರಕರಣ: ಶಾಸಕ ವಿನಯ್ ಕುಲಕರ್ಣಿಗೆ ಸುಪ್ರೀಂ ಕೋರ್ಟ್‌ನಿಂದ ಜಾಮೀನು… “ನಾನು ಭ್ರಷ್ಟನಲ್ಲ”: ದಿಲ್ಲಿ ಅಬಕಾರಿ ಪ್ರಕರಣದಲ್ಲಿ ಖುಲಾಸೆಗೊಂಡ ಅರವಿಂದ್ ಕೇಜ್ರಿವಾಲ್ ಕಣ್ಣೀರು ಪಾದಚಾರಿಗೆ ಸ್ಕೂಟಿ ಡಿಕ್ಕಿ: ಅದೇ ವ್ಯಕ್ತಿ ಮೇಲೆ ಹರಿದ ಕಾರು; ಸ್ಥಳದಲ್ಲೇ ಸಾವು

ಇತ್ತೀಚಿನ ಸುದ್ದಿ

ಅಥಣಿ ಗ್ರಾಮೀಣ ಭಾಗದಲ್ಲಿ ರಸ್ತೆ ಕಾಮಗಾರಿಗೆ ಚಾಲನೆ: ಚುನಾಯಿತ ಪ್ರತಿನಿಧಿಗಳ ಸಹಕಾರಕ್ಕೆ ಕೋರಿಕೆ

30/07/2021, 18:27

ರಾಹುಲ್ ಅಥಣಿ ಬೆಳಗಾವಿ

info.reporterkarnataka@gmail.com

ಅಥಣಿ ಗ್ರಾಮೀಣ ಭಾಗದ ರಸ್ತೆಗಳು ಅಚ್ಚುಕಟ್ಟಾಗಿ ಇದ್ದರೆ ಮಾತ್ರ ಸಾರ್ವಜನಿಕರು  ಸುಲಭವಾಗಿ ಸಂಚರಿಸಲು ಸಾಧ್ಯ ಹಾಗಾಗಿ ಅಥಣಿ ಗ್ರಾಮೀಣ ಭಾಗದ ಎಲ್ಲ ರಸ್ತೆಗಳು ಉತ್ತಮವಾಗಿ ನಿರ್ಮಾಣವಾಗಬೇಕು. ಈ ಕಾರ್ಯಕ್ಕೆ ಎಲ್ಲ ಚುನಾಯಿತ ಪ್ರತಿನಿಧಿಗಳು ಕೈ ಜೋಡಿಸಬೇಕು ಎಂದು ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಶೇಖರ ಕರಬಸಪ್ಪಗೋಳ ಹೇಳಿದರು.

ಅವರು ಸ್ಥಳೀಯ ಮಸರಗುಪ್ಪಿ ರಸ್ತೆಗೆ ಅಡ್ಡಲಾಗಿ ಅಥಣಿಕರ ವಸತಿ ವರೆಗೆ (ಅಥಣಿ ಗ್ರಾ) ದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ 02.10 ಲಕ್ಷ ರೂ ರಸ್ತೆಗೆ ಮುರುಮ ಹಾಕುವ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.

ನಂತರ ಮಾತನಾಡಿದ ಗ್ರಾ.ಪಂ ಸದಸ್ಯ ಪರಶುರಾಮ್ ಸೊಂಕರ್, ನಮ್ಮ ವಾರ್ಡಿನ ಜನತೆ ನನಗೆ ಮತಹಾಕಿ ಗೆಲ್ಲಿಸಿ ಸಾರ್ವಜನಿಕರ ಸೇವೆ ಮಾಡಲು ಅವಕಾಶ ಕೊಟ್ಟಿದ್ದು ಅದಕ್ಕಾಗಿ ಮೊದಲನೇಯ ಕೆಲಸವಾಗಿ ಈ ರಸ್ತೆ ಕಾಮಗಾರಿ ನಂತರ ದಿನಗಳಲ್ಲಿ ವಾರ್ಡಿನ ಎಲ್ಲ ಕೆಲಸ ಮಾಡಿ ಜನರ ಹಿತಕಾಪಾಡುತ್ತೆನೆ ಈ ಕೆಲಸಕ್ಕೆ ಪಂಚಾಯತಿಯ ಎಲ್ಲ ಸದಸ್ಯ, ಅಧ್ಯಕ್ಷ ಹಾಗೂ ಎಲ್ಲ ಅಧಿಕಾರಿಗಳ ಬೆಂಬಲವಿದೆ ಎಂದರು.


ಈ ವೇಳೆ ಜಿಪಂ ಅಭಿಯಂತರ ವೀರಣ್ಣಾ ವಾಲಿ, ಗ್ರಾಪಂ ಸದಸ್ಯ ಪರಶುರಾಮ ಸೋನಕರ, ಭರಮು ಸೋನಕರ, ಅಪ್ಪಾಸಾಬ ಆಲಬಾಳ, ಅರುಣ ಭಾಸಿಂಗಿ, ಸಂಜೀವ ಹಣಮಾಪೂರೆ, ಶಂಕರ ಗಡದೆ, ಮಹಿಬೂಬ ಮಕಾಂದಾರ, ಅಪ್ಪಾಸಾಬ ಕೋರಿಶೇಟ್ಟಿ, ಗ್ರಾ‌ಪಂ ಅಭಿವೃದ್ದಿ ಅಧಿಕಾರಿ ಸುಭಾಷ ಹುಬ್ಬಳ್ಳಿ, ಗೌತಮ ಪರಾಂಜಪೆ, ಸಂಜೀವ ಭಜಂತ್ರಿ, ದುಂಡಪ್ಪಾ ಕಲಗುಣಿ, ಭೀರಪ್ಪ ಕಾಂಬಳೆ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು