12:18 AM Saturday20 - June 2026
ಬ್ರೇಕಿಂಗ್ ನ್ಯೂಸ್
ಮಸ್ಕಿ: ರಾಯಚೂರಿಗೆ AIIMS ಮಂಜೂರಾತಿಗಾಗಿ 1500 ದಿನಗಳ ಧರಣಿ ಸತ್ಯಾಗ್ರಹ: ಕಲ್ಯಾಣ ಕರ್ನಾಟಕದಾದ್ಯಂತ… Chitradurga | ಪರಶುರಾಂಪುರ: ಕಂದಾಯ ಇಲಾಖೆ ರಾಜಸ್ವ ನಿರೀಕ್ಷಕ ಎಸ್. ಆರ್. ರಾಜೇಶ್… ವಿಧಾನ ಪರಿಷತ್‌ ಚುನಾವಣೆಯಲ್ಲಿ ಅಡ್ಡ ಮತದಾನ: ಬಿ.ವೈ. ವಿಜಯೇಂದ್ರಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ… Bangalore | ಕಳ್ಳನ ಹಿಡಿಯಬೇಕಿದ್ದ ಖಾಕಿಯಿಂದಲೇ ಲೂಟಿ!: 20 ಲಕ್ಷ ದೋಚಿದ ಸಿಐಡಿ… ಕುಶಾಲನಗರ | ಹೆತ್ತ ತಾಯಿಯಿಂದಲೇ ಮಗನ ಬಲವಂತದ ಮತಾಂತರ: ಇಬ್ಬರ ಬಂಧನ ಗ್ಯಾರಂಟಿ ಸೌಲಭ್ಯಕ್ಕೆ ಹೊಸದಾಗಿ ಅರ್ಜಿ ಬೇಡ, ಮರು ಪರಿಶೀಲನೆ ಮಾತ್ರ: ಸಿಎಂ ಸಭೆಯಲ್ಲಿ… ವಿಧಾನ ಪರಿಷತ್ ಚುನಾವಣೆ ಫಲಿತಾಂಶ: ಫಲಿಸಿದ ಸಿಎಂ ಡಿಕೆಶಿ ರಣತಂತ್ರ; 5ರಲ್ಲಿ ಕೈ… ಬಾರ್ಬರ್ ಶಾಪ್‌ನಿಂದ ಬಿ-ಸ್ಕೂಲ್‌ವರೆಗೆ: ತಂದೆಯ ಕತ್ತರಿ ಹಿಡಿದ ಬಿಬಿಎ ವಿದ್ಯಾರ್ಥಿನಿ ಬಿಂದುಪ್ರಿಯಾ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ: ಕರಾವಳಿ ಸಹಿತ ರಾಜ್ಯಾದ್ಯಂತ ಬಿರುಸಿನ ಮಳೆ ನಿರೀಕ್ಷೆ ದುಬಾರೆ ದುರಂತದ ಬಳಿಕ ರಾಜ್ಯದ ಆನೆ ಶಿಬಿರಗಳಲ್ಲಿ ಹೊಸ ನಿಯಮ ಜಾರಿ: ಪ್ರವಾಸಿಗರ…

ಇತ್ತೀಚಿನ ಸುದ್ದಿ

ಧಾರ್ಮಿಕ ಚಿಂತಕ ಅಮಾಯಕ ಜೈನ ಮುನಿಯ ಬರ್ಬರ ಹತ್ಯೆ: ಮಂಗಳೂರಿನಲ್ಲಿ ಮೌನ ಪ್ರತಿಭಟನಾ ಮೆರವಣಿಗೆ

10/07/2023, 21:40

ಮಂಗಳೂರು(reporterkarnataka.com): ಧಾರ್ಮಿಕ ಚಿಂತಕರು ಹಾಗೂ ಧಾರ್ಮಿಕ ಗ್ರಂಥ ಬರಹಗಾರರಾದ ಅಮಾಯಕ ಮುನಿಗಳ ಬರ್ಬರ ಹತ್ಯೆ ದೇಶ ಕೇಳರಿಯದ ಸತ್ಯ ಎಂದು ಮೂಡಬಿದ್ರೆ ಜೈನ ಬಸದಿಯ ಡಾ. ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು.

ಜೈನ್ ಮಿಲನ್ ಹಾಗೂ ಜೈನ ಸಮುದಾಯದ ಆಶ್ರಯದಲ್ಲಿ ಬೆಳಗಾವಿಯ ಚಿಕ್ಕೋಡಿಯಲ್ಲಿನ ಜೈನ ದಿಗಂಬರ ಜೈನ ಮುನಿ ಆಚಾರ್ಯ 108 ಕಾಮಕುಮಾರನಂದಿ ಹತ್ಯೆಯನ್ನು ಖಂಡಿಸಿ ನಡೆದ
ಮೌನ ಮೆರವಣಿಗೆ ಮುನ್ನ ಅವರು ಮಾತನಾಡಿದರು.
ನಗರದ ಮಿನಿ ವಿಧಾನಸೌಧದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಮೆರವಣಿಗೆ ಮಾಡಲಾಯಿತು.
ಅಮಾಯಕ ಮುನಿಗಳ ಹತ್ಯೆಯಾಗಿದೆ. ಪೊಲೀಸ್ ಇಲಾಖೆ ಅವರ ಬಂಧನ ಮಾಡಿದೆ. ಆದರೆ ನಾವು ಕೇಳುವುದು ಆ ಆರೋಪಿಗಳು ಹೊರ ಬರದಂತೆ ಕಠಿಣ ಶಿಕ್ಷೆ ಗುರಿ ಪಡಿಸಬೇಕು ಹಾಗೂ ನಮ್ಮ ರಾಜ್ಯದಲ್ಲಿನ ಅಸುರಕ್ಷತೆ ಮತ್ತು ಭಯದ ವಾತಾವರಣವನ್ನು ನಿರ್ಮಿಸಿ, ಸಂವಿಧಾನ ಮತ್ತು ನ್ಯಾಯದ ಮೇಲಿನ ಭರವಸೆ ಕಡಿಮೆ ಮಾಡುವಂತಾಗಿದೆ. ಆದ್ದರಿಂದ ಕಾನೂನು ಈ ತಕ್ಷಣವೇ ಅಪರಾಧಿಗಳಿಗೆ ಯಾವುದೇ ರಕ್ಷಣೆ ನೀಡದೆ ಕಠಿಣ ಶಿಕ್ಷೆ ನೀಡಬೇಕು ಎಂದು ಅಗ್ರಹಿಸಲಾಯಿತು.


ಮಿನಿ ವಿಧಾನಸೌಧ ಬಳಿ ಮಾತನಾಡಿದ ವೀರ ರಾಣಿ ಅಬ್ಬಕ್ಕ ಜೈನ ಮಹಿಳಾ ಸಂಘದ ಕಾರ್ಯದರ್ಶಿ ಅಕ್ಷತಾ ಆದರ್ಶ್,ಮಹವೀರರ ತತ್ವವನ್ನು ಅವಳಡಿಸಿಕೊಂಡತಹ ಹಾಗೂ ಮುನಿಗಳಾದ ಆಚಾರ್ಯ 108 ಶ್ರೀ ಕಾಮಕುಮಾರನಂದ ಸಾಗರ ಹತ್ಯೆ ಜೈನ ಸಮುದಾಯಕ್ಕೆ ಅನ್ಯಾಯವಾಗಿದೆ.ನಾವು ತೀವ್ರವಾಗಿ ಖಂಡಿಸುತ್ತದೆ.
ಜೈನ ಶ್ರೀ ಮುನಿಗಳು ಗಳು ವಿಹಾರಕ್ಕೆ ಹೋಗುವ ಸಮಯದಲ್ಲಿ ಸಂದಣಿ ಇರುವುದಿಲ್ಲ. ಹಾಗಾಗಿ ಇತರ ಸಂತ ಮುನಿಗಳ ಸುರಕ್ಷತೆಯನ್ನು ಕಾಪಾಡುವ ಬಗ್ಗೆ ಸರಕಾರ ಗಮನ ಹರಿಸಬೇಕೆಂದು ಅವರು ಹೇಳಿದರು.


ಜೈನ್ ಮಿಲನ್ ಮಾಜಿ ಅಧ್ಯಕ್ಷ ಪುಷ್ಪರಾಜ್ ಜೈನ್ ಮಾತನಾಡಿ,
ಎಲ್ಲಾ ಬಿಟ್ಟು ದಿಗಂಬರನಾಗಿದ್ದ ಸಂತರೊಬ್ಬ ಹತ್ಯೆಯು ಇತರ ಸಂತರಿಗೆ ಭಯ ಹುಟ್ಟಿಸಿದೆ.
ಜೈನ ಸಮುದಾಯಕ್ಕೆ ಹೆಚ್ಚಿನ ಭದ್ರತೆ ನೀಡಬೇಕು. ಈ ಕುರಿತು
ವಿಶೇಷ ತಂಡ ರಚಿಸಿ ಕ್ರಮ ಕೈಗೊಳ್ಳಬೇಕು ಎಂದು ನುಡಿದರು.
ನಂತರ ವಿಧಾನಸೌಧದ ಬಳಿಯಿಂದ ಮೌನ ಪ್ರತಿಭಟನಾ ಮೆರವಣಿಗೆಯಲ್ಲಿ ಡಿಸಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿಗೆ ಮನವಿ ನೀಡಿದರು.
ಜೈನ್ ಸಮುದಾಯದ ಚಾರು ಕೀರ್ತಿ ಭಟ್ಟಾರಕ ಪುಷ್ಪರಾಜ್ ಜೈನ್,ಸುರೇಶ್ ಬಲ್ಲಾಳ್, ಸುದರ್ಶನ್ ಜೈನ್ ಬಂಟ್ವಾಳ, ಸುದೇಶ್ ಜೈನ್ ಮಕ್ಕಿ ಮನೆ, ಶ್ವೇತ ಜೈನ್ ಮತ್ತಿತರರು. ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು