4:57 AM Monday17 - August 2026
ಬ್ರೇಕಿಂಗ್ ನ್ಯೂಸ್
ಭಾಗಮಂಡಲಕ್ಕೆ ಮಳೆ ನಡುವೆಯೇ ಬಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜಿಲ್ಲಾ ಉಸ್ತುವಾರಿ ಸಚಿವ ಜವಾಬ್ದಾರಿ ಬೇಡ: ದಿಢೀರನೇ ಸಿಎಂ ಡಿಕೆಶಿಗೆ ಸಚಿವ ಜಮೀರ್… ಕಾವಳಪಡೂರು: ನಿಷೇಧಿತ ಎಂಡಿಎಂಎ ಸೇರಿದಂತೆ 4.90 ಲಕ್ಷ ಮೌಲ್ಯದ ಮೌಲ್ಯದ ಸೊತ್ತು ವಶ;… ಎಚ್‌ಡಿಕೆ ದೊಡ್ಡ ನಾಟಕರತ್ನ: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಶಾಸಕ ಪ್ರದೀಪ್ ಈಶ್ವರ್… ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಗಸ್ಟ್ 16ರಂದು ಕೊಡಗಿಗೆ ಭೇಟಿ: ತಲಕಾವೇರಿಯಲ್ಲಿ ಪೂಜೆ ಸಲ್ಲಿಕೆ ಯು.ಟಿ. ಖಾದರ್‌ಗೆ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆ ಹೆಚ್ಚುವರಿ ಖಾತೆ… Surathkal | ಸುರತ್ಕಲ್ : ಶೀಟ್ ಅಳವಡಿಸುವ ಸಂದರ್ಭ ವಿದ್ಯುತ್ ತಂತಿ ಸ್ಪರ್ಶಿಸಿ… ಆಗುಂಬೆ | ಚಲಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ ನಿಂದ ಕಳಚಿ ಬಿದ್ದ ಟಯರ್ :… Maravoor | ಮರವೂರಿನ ಹೋಟೆಲ್‌ನಲ್ಲಿ ಕೇರಳದ ಕಾಸರಗೋಡು ಮೂಲದ 24 ವರ್ಷದ ಯುವಕ… ತೊಕ್ಕೊಟ್ಟು | ಬಾರ್ ಮುಂಭಾಗ ತಲವಾರು ಝಳಪಿಸಿ ದಾಂಧಲೆ ; ರೌಡಿ ಶೀಟರ್…

ಇತ್ತೀಚಿನ ಸುದ್ದಿ

ಧಾರ್ಮಿಕ ಚಿಂತಕ ಅಮಾಯಕ ಜೈನ ಮುನಿಯ ಬರ್ಬರ ಹತ್ಯೆ: ಮಂಗಳೂರಿನಲ್ಲಿ ಮೌನ ಪ್ರತಿಭಟನಾ ಮೆರವಣಿಗೆ

10/07/2023, 21:40

ಮಂಗಳೂರು(reporterkarnataka.com): ಧಾರ್ಮಿಕ ಚಿಂತಕರು ಹಾಗೂ ಧಾರ್ಮಿಕ ಗ್ರಂಥ ಬರಹಗಾರರಾದ ಅಮಾಯಕ ಮುನಿಗಳ ಬರ್ಬರ ಹತ್ಯೆ ದೇಶ ಕೇಳರಿಯದ ಸತ್ಯ ಎಂದು ಮೂಡಬಿದ್ರೆ ಜೈನ ಬಸದಿಯ ಡಾ. ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು.

ಜೈನ್ ಮಿಲನ್ ಹಾಗೂ ಜೈನ ಸಮುದಾಯದ ಆಶ್ರಯದಲ್ಲಿ ಬೆಳಗಾವಿಯ ಚಿಕ್ಕೋಡಿಯಲ್ಲಿನ ಜೈನ ದಿಗಂಬರ ಜೈನ ಮುನಿ ಆಚಾರ್ಯ 108 ಕಾಮಕುಮಾರನಂದಿ ಹತ್ಯೆಯನ್ನು ಖಂಡಿಸಿ ನಡೆದ
ಮೌನ ಮೆರವಣಿಗೆ ಮುನ್ನ ಅವರು ಮಾತನಾಡಿದರು.
ನಗರದ ಮಿನಿ ವಿಧಾನಸೌಧದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಮೆರವಣಿಗೆ ಮಾಡಲಾಯಿತು.
ಅಮಾಯಕ ಮುನಿಗಳ ಹತ್ಯೆಯಾಗಿದೆ. ಪೊಲೀಸ್ ಇಲಾಖೆ ಅವರ ಬಂಧನ ಮಾಡಿದೆ. ಆದರೆ ನಾವು ಕೇಳುವುದು ಆ ಆರೋಪಿಗಳು ಹೊರ ಬರದಂತೆ ಕಠಿಣ ಶಿಕ್ಷೆ ಗುರಿ ಪಡಿಸಬೇಕು ಹಾಗೂ ನಮ್ಮ ರಾಜ್ಯದಲ್ಲಿನ ಅಸುರಕ್ಷತೆ ಮತ್ತು ಭಯದ ವಾತಾವರಣವನ್ನು ನಿರ್ಮಿಸಿ, ಸಂವಿಧಾನ ಮತ್ತು ನ್ಯಾಯದ ಮೇಲಿನ ಭರವಸೆ ಕಡಿಮೆ ಮಾಡುವಂತಾಗಿದೆ. ಆದ್ದರಿಂದ ಕಾನೂನು ಈ ತಕ್ಷಣವೇ ಅಪರಾಧಿಗಳಿಗೆ ಯಾವುದೇ ರಕ್ಷಣೆ ನೀಡದೆ ಕಠಿಣ ಶಿಕ್ಷೆ ನೀಡಬೇಕು ಎಂದು ಅಗ್ರಹಿಸಲಾಯಿತು.


ಮಿನಿ ವಿಧಾನಸೌಧ ಬಳಿ ಮಾತನಾಡಿದ ವೀರ ರಾಣಿ ಅಬ್ಬಕ್ಕ ಜೈನ ಮಹಿಳಾ ಸಂಘದ ಕಾರ್ಯದರ್ಶಿ ಅಕ್ಷತಾ ಆದರ್ಶ್,ಮಹವೀರರ ತತ್ವವನ್ನು ಅವಳಡಿಸಿಕೊಂಡತಹ ಹಾಗೂ ಮುನಿಗಳಾದ ಆಚಾರ್ಯ 108 ಶ್ರೀ ಕಾಮಕುಮಾರನಂದ ಸಾಗರ ಹತ್ಯೆ ಜೈನ ಸಮುದಾಯಕ್ಕೆ ಅನ್ಯಾಯವಾಗಿದೆ.ನಾವು ತೀವ್ರವಾಗಿ ಖಂಡಿಸುತ್ತದೆ.
ಜೈನ ಶ್ರೀ ಮುನಿಗಳು ಗಳು ವಿಹಾರಕ್ಕೆ ಹೋಗುವ ಸಮಯದಲ್ಲಿ ಸಂದಣಿ ಇರುವುದಿಲ್ಲ. ಹಾಗಾಗಿ ಇತರ ಸಂತ ಮುನಿಗಳ ಸುರಕ್ಷತೆಯನ್ನು ಕಾಪಾಡುವ ಬಗ್ಗೆ ಸರಕಾರ ಗಮನ ಹರಿಸಬೇಕೆಂದು ಅವರು ಹೇಳಿದರು.


ಜೈನ್ ಮಿಲನ್ ಮಾಜಿ ಅಧ್ಯಕ್ಷ ಪುಷ್ಪರಾಜ್ ಜೈನ್ ಮಾತನಾಡಿ,
ಎಲ್ಲಾ ಬಿಟ್ಟು ದಿಗಂಬರನಾಗಿದ್ದ ಸಂತರೊಬ್ಬ ಹತ್ಯೆಯು ಇತರ ಸಂತರಿಗೆ ಭಯ ಹುಟ್ಟಿಸಿದೆ.
ಜೈನ ಸಮುದಾಯಕ್ಕೆ ಹೆಚ್ಚಿನ ಭದ್ರತೆ ನೀಡಬೇಕು. ಈ ಕುರಿತು
ವಿಶೇಷ ತಂಡ ರಚಿಸಿ ಕ್ರಮ ಕೈಗೊಳ್ಳಬೇಕು ಎಂದು ನುಡಿದರು.
ನಂತರ ವಿಧಾನಸೌಧದ ಬಳಿಯಿಂದ ಮೌನ ಪ್ರತಿಭಟನಾ ಮೆರವಣಿಗೆಯಲ್ಲಿ ಡಿಸಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿಗೆ ಮನವಿ ನೀಡಿದರು.
ಜೈನ್ ಸಮುದಾಯದ ಚಾರು ಕೀರ್ತಿ ಭಟ್ಟಾರಕ ಪುಷ್ಪರಾಜ್ ಜೈನ್,ಸುರೇಶ್ ಬಲ್ಲಾಳ್, ಸುದರ್ಶನ್ ಜೈನ್ ಬಂಟ್ವಾಳ, ಸುದೇಶ್ ಜೈನ್ ಮಕ್ಕಿ ಮನೆ, ಶ್ವೇತ ಜೈನ್ ಮತ್ತಿತರರು. ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು