5:32 PM Sunday16 - August 2026
ಬ್ರೇಕಿಂಗ್ ನ್ಯೂಸ್
ಭಾಗಮಂಡಲಕ್ಕೆ ಮಳೆ ನಡುವೆಯೇ ಬಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜಿಲ್ಲಾ ಉಸ್ತುವಾರಿ ಸಚಿವ ಜವಾಬ್ದಾರಿ ಬೇಡ: ದಿಢೀರನೇ ಸಿಎಂ ಡಿಕೆಶಿಗೆ ಸಚಿವ ಜಮೀರ್… ಕಾವಳಪಡೂರು: ನಿಷೇಧಿತ ಎಂಡಿಎಂಎ ಸೇರಿದಂತೆ 4.90 ಲಕ್ಷ ಮೌಲ್ಯದ ಮೌಲ್ಯದ ಸೊತ್ತು ವಶ;… ಎಚ್‌ಡಿಕೆ ದೊಡ್ಡ ನಾಟಕರತ್ನ: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಶಾಸಕ ಪ್ರದೀಪ್ ಈಶ್ವರ್… ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಗಸ್ಟ್ 16ರಂದು ಕೊಡಗಿಗೆ ಭೇಟಿ: ತಲಕಾವೇರಿಯಲ್ಲಿ ಪೂಜೆ ಸಲ್ಲಿಕೆ ಯು.ಟಿ. ಖಾದರ್‌ಗೆ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆ ಹೆಚ್ಚುವರಿ ಖಾತೆ… Surathkal | ಸುರತ್ಕಲ್ : ಶೀಟ್ ಅಳವಡಿಸುವ ಸಂದರ್ಭ ವಿದ್ಯುತ್ ತಂತಿ ಸ್ಪರ್ಶಿಸಿ… ಆಗುಂಬೆ | ಚಲಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ ನಿಂದ ಕಳಚಿ ಬಿದ್ದ ಟಯರ್ :… Maravoor | ಮರವೂರಿನ ಹೋಟೆಲ್‌ನಲ್ಲಿ ಕೇರಳದ ಕಾಸರಗೋಡು ಮೂಲದ 24 ವರ್ಷದ ಯುವಕ… ತೊಕ್ಕೊಟ್ಟು | ಬಾರ್ ಮುಂಭಾಗ ತಲವಾರು ಝಳಪಿಸಿ ದಾಂಧಲೆ ; ರೌಡಿ ಶೀಟರ್…

ಇತ್ತೀಚಿನ ಸುದ್ದಿ

ಉಡುಪಿ ಪ್ರವಾಹ: ಜೀವದ ಹಂಗು ತೊರೆದು 75ಕ್ಕೂ ಹೆಚ್ಚು ಮಂದಿಯ ರಕ್ಷಿಸಿದ ಇನ್ತಿಯಾಜ್ ಕೆಮ್ಮಣ್ಣು

07/07/2023, 17:04

ಉಡುಪಿ(reporterkarnataka.com):ಇದು ಅಂತಿಂಥ ಸಾಹಸವಲ್ಲ, ಜೀವವನ್ನೇ ಪಣಕ್ಕಿಟ್ಟು ಇತರರ ಜೀವ ಉಳಿಸುವ ಸಾಹಸ. ಇದು ನಡೆದಿದ್ದು ಉಡುಪಿ ಜಿಲ್ಲೆಯಲ್ಲಿ. ಸಾಹಸಿ ಅಪದ್ಭಾಂಧವ ಬೇರೆ ಯಾರೂ ಅಲ್ಲ, ನಮ್ಮಕನ್ನಡಿಗರೇ ಆದ ಇನ್ತಿಯಾಜ್ ಕೆಮ್ಮಣ್ಣು ಅವರು.
ಕರಾವಳಿಯಲ್ಲಿ ಕಳೆದ 5 ದಿನಗಳಿಂದ ಅವ್ಯಾಹತವಾಗಿ ಸುರಿದ ಭಾರಿ ಮಳೆಗೆ ಉಡುಪಿ ಜಿಲ್ಲೆ ಭಾಗಶಃ ತತ್ತರಿಸಿ ಹೋಗಿತ್ತು. ನೂರಾರು ಮಂದಿ ಪ್ರವಾಹಕ್ಕೆ ಸಿಲುಕಿ ಬದುಕಿಗಾಗಿ ಹೋರಾಟ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಆಸರೆಯಾದ ಅಪದ್ಭಾಂಧವ ಇನ್ತಿಯಾಜ್. ಇವರು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಶೌರ್ಯ ವಿಪತ್ತು ನಿರ್ವಹಣಾ ತಂಡದ ಸದಸ್ಯರು.
ಉಡುಪಿ ಜಿಲ್ಲೆಯಲ್ಲಿ ಭಾರಿ ಮಳೆ ಸುರಿದಿದ್ದು ಉಡುಪಿಯ ಇಂದ್ರಾಣಿ ನದಿಯ ಪ್ರವಾಹವು ಉಡುಪಿಯ ನಗರವನ್ನು ಅವರಿಸಿತ್ತು. ಉಡುಪಿ ಕೊಡಂಕೂರಿನ 7ನೇ ವಾರ್ಡ್ ಕೌನ್ಸಿಲರ್ ಸಂಪಾವತಿಯ ಕರೆಯ ಮೇರೆಗೆ
ಇನ್ತಿಯಾಜ್ ಕೋಡಂಕೂರು ಬಳಿ ಪ್ರವಾಹದಲ್ಲಿ ಸಿಲುಕಿದ್ದ ಅನಾರೋಗ್ಯಪೀಡಿತ ಕೊಡಂಕೂರಿನ ತೋಮ ಪೂಜಾರಿ ಅವರನ್ನು ಕಯಾಕ್ ಬೋಟ್ ನಲ್ಲಿ ರಕ್ಷಿಸಿ ಜನಮನ್ನಣೆ ಗೆ ಪಾತ್ರರಾಗಿದ್ದಾರೆ. ಈ ನಡುವೆ ಪ್ರವಾಹಕ್ಕೆ ಸುಮಾರು 75 ಕ್ಕೂ ಹೆಚ್ಚು ಜನರನ್ನು ಸುರಕ್ಷತಾ ಸ್ಥಳಕ್ಕೆ ಕರೆದು ತಂದು ರಕ್ಷಿಸಿದ್ದಾರೆ.

ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಣೆ ಬಳಿಕ ಕರಾವಳಿ ಭಾಗದಲ್ಲಿ ಆರಂಭವಾದ ಮಳೆ ವಿರಾಮ ನೀಡದೆ ಏಕಾಏಕಿ ಸುರಿಯುತಿತ್ತು. ಬೆಳಗ್ಗೆ ಯಿಂದ ಕಯಾಕ್ ಮೂಲಕ ರಕ್ಷಣೆಗೆ ಸಾಹಸಕ್ಕೆ ಇಳಿದ ಇನ್ತಿಯಾಜ್ ಕೆಮ್ಮಣ್ಣು , ನಿಟ್ಟೂರು, ಕೊಡಂಕೂರು, ತಾರಕಟ್ಟೆ , ಕೊಡವೂರು,
ನಿಟ್ಟೂರು, ಕಾಂಚನ ಹೂಂಡಾಯಿ ಶೋ ರೂಂ ಹಿಂಭಾಗದಲ್ಲಿನ 75ಕ್ಕೂ ಹೆಚ್ಚು ಜನರನ್ನು ರಕ್ಷಿಸಿದ್ದಾರೆ.
2020ರಲ್ಲಿ ಉಡುಪಿ ಜಿಲ್ಲೆಯಲ್ಲಿ ಘಟಿಸಿದ ಸ್ವರ್ಣ ನದಿ, ಇಂದ್ರಾಣಿ ನದಿಗಳ ಪ್ರವಾಹದಲ್ಲಿ ಸುಮಾರು 250 ಕ್ಕೂ ಹೆಚ್ಚು ಜನರನ್ನು ಇನ್ತಿಯಾಜ್ ಕೆಮ್ಮಣ್ಣು, ಇಲ್ಯಾಸ್ , ಅಣ್ಣತಮ್ಮಂದಿರು ರಕ್ಷಿಸಿದ್ದರು. ಇವರ ಸಾಹಸವನ್ನು ಮನಗಂಡು ಅಂದಿನ ಜಿಲ್ಲಾಧಿಕಾರಿ ಜಿ ಜಗದೀಶ್ ಇನ್ತಿಯಾಜ್ ಕೆಮ್ಮಣ್ಣು ಅವರನ್ನು ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಯನ್ನು ನೀಡಿ ಗೌರವಿಸಿದ್ದರು. ಇವರು ಕೆಮ್ಮಣ್ಣು ತೂಗು ಸೇತುವೆ ಬಳಿ ವಾಟರ್ ಅಡ್ವೆಂಚರ್‌ ಕೆಮ್ಮಣ್ಣು ಕಯಾಕಿಂಗ್ ಸಂಸ್ಥೆ ನಡೆಸುತ್ತಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು