3:37 AM Saturday19 - April 2025
ಬ್ರೇಕಿಂಗ್ ನ್ಯೂಸ್
Chikkamagaluru | ಜನಿವಾರ ತೆಗೆಸಿದ ಪ್ರಕರಣ: ಶೃಂಗೇರಿಯಲ್ಲಿ ಪೇಜಾವರ ಸ್ವಾಮೀಜಿ ಅಸಮಾಧಾನ Gokarna | ಜನಿವಾರ ಪ್ರಕರಣ: ಸಂಘಟಿತ ಪ್ರತಿಭಟನೆಗೆ ಹೊಸನಗರ ಮಠದ ರಾಘವೇಶ್ವರ ಶ್ರೀ… ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ಶೋರೂಮ್ ಗೆ ನಾಳೆ ಪ್ರಸಿದ್ದ ಚಲನಚಿತ್ರ ನಟ… Mangaluru | ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ; ಅಡ್ಯಾರ್ ಮೈದಾನದಲ್ಲಿ… Karnataka BJP | ಕಲಬುರ್ಗಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ತುಘಲಕ್ ದರ್ಬಾರ್… Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ… ಮಹಿಳೆ ಮೇಲೆ ಲೈಂಗಿಕ ಕಿರುಕುಳ ಹಾಗೂ ಹಲ್ಲೆ: ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ… ಭಾರತದಲ್ಲಿ ಪ್ರಪ್ರಥಮವಾಗಿ ಮುಳಿಯದ ಮತ್ತೊಂದು ಸಾಧನೆ: ಲ್ಯಾಬ್ ಗ್ರೋನ್ ಡೈಮಂಡ್ ಟೆಸ್ಟಿಂಗ್ ಮಿಷನ್…

ಇತ್ತೀಚಿನ ಸುದ್ದಿ

ಸಿಐಒ ಕ್ಲಬ್ ಬೆಂಗಳೂರು ವಿಭಾಗದ 13ನೇ ವಾರ್ಷಿಕೋತ್ಸವ ಆಚರಣೆ: ನುರಿತ ತಂತ್ರಜ್ಞರಿಂದ ಮೇಳೈಸಿದ ಡಿಜಿಟಲ್‌ ಎನ್‌ಎಕ್ಸ್‌ಟಿ 2023

24/06/2023, 21:44

ಬೆಂಗಳೂರು(reporterkarnataka.com): ಸಿಐಒ ಸಂಘಟನೆ, ಮಾಹಿತಿ ತಂತ್ರಜ್ಞಾನ ಉದ್ಯಮದಲ್ಲಿ ನಾವೀನ್ಯತೆ ಮತ್ತು ಸಹಯೋಗವನ್ನು ಉತ್ತೇಜಿಸಲು ಮೀಸಲಾಗಿರುವ ಡಿಜಿಟಲ್ ನಾಯಕರ ಲಾಭರಹಿತ ಗುಂಪು, ಸಿಐಒ ಕ್ಲಬ್ ಬೆಂಗಳೂರು ವಿಭಾಗದ (CIOKlub Bangalore Chapter) 13ನೇ ವಾರ್ಷಿಕೋತ್ಸವವನ್ನು ಆಚರಿಸಲಾಯಿತು.
ಜೂನ್ 24 ರಂದು ಬೆಂಗಳೂರಿನ ಮಾನ್ಯತಾ ಬ್ಯುಸಿನೆಸ್ ಪಾರ್ಕ್‌ನ ಹಿಲ್ಟನ್ ಗಾರ್ಡನ್ ಇನ್‌ ನಲ್ಲಿ, ಸಿಐಒ ಕ್ಲಬ್ ಬೆಂಗಳೂರು ವಿಭಾಗದ (CIOKlub Bangalore Chapter) ವಾರ್ಷಿಕ ಶೃಂಗಸಭೆಯಾಗಿ ಆಚರಿಸಲಾಗುವ ಡಿಜಿಟಲ್‌ ಎನ್‌ಎಕ್ಸ್‌ಟಿ 2023 (Digital NXT 2023) ರಲ್ಲಿ ಸಿಐಒ ಕ್ಲಬ್ ನ (CIOKlub) ಪ್ಯಾನ್ ಇಂಡಿಯಾ ವಿಭಾಗಗಳಿಂದ 200 ಕ್ಕೂ ಹೆಚ್ಚು ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಶ್ರೇಷ್ಠ ನಾಯಕರು ಪಾಲ್ಗೊಂಡಿದ್ದರು. ಭಾರತೀಯ ಖ್ಯಾತ ಕ್ರಿಕೆಟಿಗರಾದ ಮತ್ತು ಪ್ರಸ್ತುತ ಐಸಿಸಿ (ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್) ಪಂದ್ಯದ ತೀರ್ಪುಗಾರರಾಗಿ ಸೇವೆ ಸಲ್ಲಿಸುತ್ತಿರುವ ಜಾವಗಲ್ ಶ್ರೀನಾಥ್ ಅವರ ಗೌರವಾನ್ವಿತ ಉಪಸ್ಥಿತಿಯಲ್ಲಿ ಸ್ವಾಗತ ಭಾಷಣದೊಂದಿಗೆ ಕಾರ್ಯಕ್ರಮವು ಬೆಳಿಗ್ಗೆ 9:30 ಕ್ಕೆ ಪ್ರಾರಂಭವಾಯಿತು.
ಡಿಜಿಟಲ್‌ ಎನ್‌ಎಕ್ಸ್‌ಟಿ 2023 (Digital Nxt 2023) ಶೃಂಗಸಭೆಯಲ್ಲಿ, ಉಮೇಶ್ ಮೆಹ್ತಾ (ಸಿಐಒ ಕ್ಲಬ್ ಆಡಳಿತ ಮಂಡಳಿಯ ಅಧ್ಯಕ್ಷರು), ವಿವೇಕ್ ಖರೆ (ಸಿಐಒ ಕ್ಲಬ್ ಬೆಂಗಳೂರು ಚಾಪ್ಟರ್‌ನ ಅಧ್ಯಕ್ಷರು), ಗಿರೀಶ್ ಕುಲಕರ್ಣಿ (ಉಪಾಧ್ಯಕ್ಷರು), ರಜತ್ ಗೋಯೆಲ್ (ಕಾರ್ಯದರ್ಶಿ), ಮತ್ತು ಮನೀಷ್ ಶಾ (ಖಜಾಂಚಿ), ರಾಮನ್ ಪಿಳ್ಳೈ, ವೆಂಕಟೇಶ್ ಬಾಬು, ಮಧು ಕುಮಾರ್, ಬಾಲಾಜಿ ವರ್ದಾಚಾರಿ ಇವರು ಪ್ರಮುಖ ಆತಿಥೇಯರಾಗಿದ್ದರು..

“ಕರ್ನಾಟಕವು ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿರುವ ರಾಜ್ಯವಾಗಿದೆ ಮತ್ತು ಕಳೆದ 2 ದಶಕಗಳಲ್ಲಿ ಗಮನಾರ್ಹ ತಾಂತ್ರಿಕ ಪ್ರಗತಿಗಳು ಮತ್ತು ರೂಪಾಂತರಗಳಿಗೆ ಸಾಕ್ಷಿಯಾಗಿದೆ. ಸಿಐಒ ಕ್ಲಬ್ ಬೆಂಗಳೂರು ವಿಭಾಗವು ತಾಂತ್ರಿಕ ಪ್ರಗತಿಗೆ ಮೀಸಲಾದ ತನ್ನ 13 ವರ್ಷಗಳ ಪ್ರಯಾಣವನ್ನು ಪೂರ್ಣಗೊಳಿಸುತ್ತಿರುವುದರಿಂದ, ಸಿಐಒ ಸಂಸ್ಥೆಗೆ ಸಂಬಂಧಿಸಿದ ಪ್ರತಿಯೊಬ್ಬ ತಂತ್ರಜ್ಞರನ್ನು, ಭಾರತೀಯ ತಂತ್ರಜ್ಞಾನ ಕ್ರಾಂತಿಯ ಜ್ಯೋತಿಧಾರಕರಾಗಿ ನಾನು ಅಭಿನಂದಿಸಲು ಬಯಸುತ್ತೇನೆ. ಈ ಮಹತ್ವದ ಸಂದರ್ಭದಲ್ಲಿ, ಹೆಸರಾಂತ ವೇಗದ ಬೌಲರ್ ಹಾಗೂ ನಮ್ಮ ಮೈಸೂರು ಎಕ್ಸ್‌ಪ್ರೆಸ್ ಆದ ಜಾವಗಲ್ ಶ್ರೀನಾಥ್ ಅವರು ನಮ್ಮೊಂದಿಗೆ ಸೇರಿಕೊಂಡಿರುವುದು ನಿಜಕ್ಕೂ ಗೌರವ ತಂದಿದೆ,” ಎಂದು ಸಿಐಒ ಕ್ಲಬ್ ಬೆಂಗಳೂರು ವಿಭಾಗದ ಅಧ್ಯಕ್ಷರಾದ ವಿವೇಕ್ ಖರೆ ಹೇಳಿದರು.
ಸಿಐಒ ಕ್ಲಬ್ (CIO Klub) ದೇಶದ ಪ್ರಮುಖ ತಂತ್ರಜ್ಞರ ಸಂಘಟಿತ ಸಂಸ್ಥೆಯಾಗಿದ್ದು, ಭಾರತ ಮತ್ತು ಮಧ್ಯಪ್ರಾಚ್ಯದಾದ್ಯಂತ ವಿವಿಧ ಉದ್ಯಮ ವಲಯಗಳಿಂದ ಮುಖ್ಯ ಮಾಹಿತಿ ಅಧಿಕಾರಿಗಳು (CIO), ಮುಖ್ಯ ಮಾಹಿತಿ ಭದ್ರತಾ ಅಧಿಕಾರಿಗಳು (CISO) ಮತ್ತು ಮುಖ್ಯ ಡಿಜಿಟಲ್ ಅಧಿಕಾರಿಗಳನ್ನು ಒಳಗೊಂಡಿದೆ. ಪ್ರತಿ ವರ್ಷ ಸಿಐಒ ಕ್ಲಬ್ ಬೆಂಗಳೂರು ವಿಭಾಗವು ತನ್ನ ವಾರ್ಷಿಕ ಶೃಂಗಸಭೆಯಾಗಿ ಡಿಜಿಟಲ್‌ಎನ್‌ ಎನ್‌ಎಕ್ಸ್‌ಟಿ (Digital NXT) ಯನ್ನು ಆಯೋಜಿಸುತ್ತದೆ. ಈ ವರ್ಷ, ಡಿಜಿಟಲ್ ಎನ್‌ಎಕ್ಸ್‌ಟಿ 2023 ಯನ್ನು ಕರ್ನಾಟಕದ ಶ್ರೀಮಂತ ಸಂಸ್ಕೃತಿ ಮತ್ತು ತಂತ್ರಜ್ಞಾನದ ವಿಷಯದ ಮೇಲೆ ಆಚರಿಸಲಾಯಿತು. ದಕ್ಷಿಣ ರಾಜ್ಯವು ನಿರಂತರವಾಗಿ ವಿಕಸನಗೊಳ್ಳುವ ಸಂಸ್ಕೃತಿಯನ್ನು ಪ್ರೋತ್ಸಾಹಿಸುತ್ತದೆ, ಇದು ಅದರ ಶ್ರೀಮಂತ ಪರಂಪರೆ ಮತ್ತು ತಾಂತ್ರಿಕ ಪ್ರಗತಿಗಳ ವಿಷಯದಲ್ಲಿ ಕರ್ನಾಟಕದ ಶಕ್ತಿಯನ್ನು ಎತ್ತಿ ಹಿಡಿಯುತ್ತದೆ. ಡಿಜಿಟಲ್‌ ಎನ್‌ಎಕ್ಸ್‌ಟಿ 2023 ನಲ್ಲಿ, ಸಿಐಒ ಕ್ಲಬ್‌ನ ಪಾಲುದಾರರು ವಿವಿಧ ಕೈಗಾರಿಕೆಗಳು ಮತ್ತು ವಲಯಗಳಲ್ಲಿ ಕಾರ್ಯನಿರ್ವಹಿಸುವ ದೊಡ್ಡ, ಸ್ಥಾಪಿತ ಸಂಸ್ಥೆಗಳು ಮತ್ತು ಆರಂಭಿಕ-ಹಂತದ ಸಂಸ್ಥೆಗಳು ಒಳಗೊಂಡಂತೆ ಮಾಹಿತಿ ತಂತ್ರಜ್ಞಾನ ಮತ್ತು ಭಾರತದಲ್ಲಿನ ಒಟ್ಟಾರೆ ಪರಿಸರ, ಪರಿಸ್ಥಿತಿಗಳು ಮತ್ತು ವ್ಯಾಪಾರ ಕ್ಷೇತ್ರಗಳಲ್ಲಿನ ಪ್ರಸ್ತುತ ಸಮಸ್ಯೆಗಳಿಗೆ ತಮ್ಮ ತಾಂತ್ರಿಕ ಪರಿಹಾರಗಳನ್ನು ಪ್ರಸ್ತುತಪಡಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು