2:07 AM Monday14 - September 2026
ಬ್ರೇಕಿಂಗ್ ನ್ಯೂಸ್
‘ಮಂಗಳೂರು ಟೆಕ್ನೋವಾಂಜಾ 2026’: ಕರಾವಳಿಯಲ್ಲಿ ತಂತ್ರಜ್ಞಾನ ಕ್ರಾಂತಿ ಸೆ. 23ರಂದು ಅನಾವರಣ ಬಹುರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೊ ದಾಖಲೆ ಸಾಧನೆ: 2025-26ನೇ ಸಾಲಿನಲ್ಲಿ 3,735 ಕೋಟಿ… ಮಹಿಳಾ ಉದ್ಯೋಗಿಗಳಿಗೆ ಕಾರ್ಪೊರೇಟ್ ಎನ್‌ಪಿಎಸ್: ಪೆನ್ಷನ್‌ ಬಜಾರ್ -ಉಬುಂಟು ಒಪ್ಪಂದ ಪುತ್ತೂರು ಶಾಸಕರ ಆರೋಪ | ಕೆಆರ್ ಐಡಿಎಲ್ ಸಂಸ್ಥೆಗೆ ಗುತ್ತಿಗೆ: ಉಸ್ತುವಾರಿ ಸಚಿವ… ಕ್ರೈಂ ಡೈರಿ | ಸೆರೆ ಸಿಕ್ಕ ‘ರಿಪ್ಪರ್ ಚಂದ್ರನ್’ ಎಂಬ ಸರಣಿ ಹಂತಕ:… ತುಮಕೂರು-ರಾಯದುರ್ಗ- ಚಿತ್ರದುರ್ಗ | 2027 ಡಿಸೆಂಬರ್ ಅಂತ್ಯಕ್ಕೆ ರೈಲು ಮಾರ್ಗ ಆರಂಭ ಕಸ್ತೂರಿ ರಂಗನ್ ವರದಿ ವಿರೋಧಿಸಿ ನವೆಂಬರ್ 16ರಿಂದ ತೀರ್ಥಹಳ್ಳಿ ಟು ಶಿವಮೊಗ್ಗ ಪಾದಯಾತ್ರೆ:… *ಡಿಸೆಂಬರ್ ಒಳಗೆ ಜಗತ್ತಿಗೆ ಗಂಡಾತರ: ‘ಅಷ್ಟಮಂಗಲ ಪ್ರಶ್ನೆ’ಯಲ್ಲಿ ಕಾಳಸರ್ಪ ದೋಷದ ಭವಿಷ್ಯ* ಚಾಮರಾಜನಗರ | ಒಂಟಿ ಸಲಗದ ಜತೆ ಪ್ರಾಣ ಪಣಕ್ಕಿಟ್ಟು ಸೆಲ್ಫಿ; ಬೈಕ್ ಸವಾರರ… ಸೆಪ್ಟೆಂಬರ್ 8 ಮಾತೆ ಮರಿಯಮ್ಮನವರ ಜನ್ಮದಿನ ಹಬ್ಬಕ್ಕೆ ಸಾರ್ವತ್ರಿಕ ರಜೆ ಘೋಷಿಸಲು ಆಗ್ರಹ

ಇತ್ತೀಚಿನ ಸುದ್ದಿ

ದೈವಜ್ಞ ಬ್ರಾಹ್ಮಣ ಮಠಾಧೀಶ.ಶ್ರೀ ಸಚ್ಚಿದಾನಂದ ಜ್ಞಾನೇಶವರಿ ಭಾರತೀ ಮಹಾಸ್ವಾಮೀಜಿಯವರ ಪಟ್ಟಾಭಿಷೇಕ ರಜತ ಮಹೋತ್ಸವ

16/04/2023, 21:42

ಮಂಗಳೂರು(reporterkarnataka.com): ಶ್ರೀ ಕ್ಷೇತ್ರ ಕರ್ಕಿ, ಹೊನ್ನಾವರ ತಾಲೂಕು ಉತ್ತರ ಕನ್ನಡ ಜಿಲ್ಲೆಯ ಶ್ರೀ ಜ್ಞಾನೇಶವರಿ ಪೀಠ, ದೈವಜ್ಞ ಬ್ರಾಹ್ಮಣ ಮಠಾಧೀಶರಾದ.ಶ್ರೀ ಸಚ್ಚಿದಾನಂದ ಜ್ಞಾನೇಶವರಿ ಭಾರತೀ ಮಹಾಸ್ವಾಮೀಜಿಯವರ ಪಟ್ಟಾಭಿಷೇಕ” ರಜತ ಮಹೋತ್ಸವ” ಕಾರ್ಯಕ್ರಮ ಭಾನುವಾರ
ನಗರದ ಉರ್ವ ಸಮೀಪದ ಆಶೋಕನಗರದ ದೈವಜ್ಞ ಕಲ್ಯಾಣ ಮಂಟಪದಲ್ಲಿ ಜರಗಿತು.
ಕಾರ್ಯಕ್ರಮವನ್ನು ದೀಪ ಪ್ರಜ್ವಲನೆ ಮೂಲಕ ಉದ್ಘಾಟಿಸಿ ಆಶೀರ್ವಾದ ನೀಡಿದ.ಶ್ರೀ ಸಚ್ಚಿದಾನಂದ ಜ್ಞಾನೇಶವರಿ ಭಾರತೀ ಮಹಾಸ್ವಾಮೀಜಿಯವರು, ಕಾಯಾ- ವಾಚಾ- ಮನಸ್ಸು ಸಂಸ್ಕಾರ ಶುದ್ಧಿಯಿಂದ ನಮ್ಮ ಉನ್ನತಿಯನ್ನು ನಾವೇ ಮಾಡಿಕೊಳ್ಳಬೇಕು. ಶ್ರದ್ಧೆ- ಬದ್ದತೆ- ಪ್ರಾಮಾಣಿಕತೆ ಇದ್ದರೆ ದೇವರ, ಗುರುಹಿರಿಯರ ಕೃಪೆ ಆಶೀರ್ವಾದ ಖಂಡಿತಾ ಇರುತ್ತದೆ ಎಂದರು.
ದೈವಜ್ಞ ಬ್ರಾಹಣ ಸಮಾಜಕ್ಕೆ ಒಂದು ಗುರುಪೀಠ ಸ್ಥಾಪನೆಗೆ ಹಗಲಿರುಳೂ ದುಡಿದು, ಸಾಕಷ್ಟು ವಿರೋಧಗಳ ಮಧ್ಯೆಯೂ ಶ್ರೀ ಜ್ಞಾನೇಶ್ವರಿ ದೇವಿಯ ಕೃಪೆಯಿಂದ ಯಶಸ್ಸು ಸಾಧಿಸಿದ ನಮ್ಮ ಹಿರಿಯರಾದ ದಿ. ಶ್ರೀ ಎಂ. ಮೋಹನ್ ಶೇಟ್ ಅವರು ದೈವಜ್ಞ ಬ್ರಾಹ್ಮಣ ಸಮಾಜಕ್ಕೆ ಕುಲಗುರುಗಳು ಹಾಗೂ ಸ್ವತಂತ್ರ ಗುರುಪೀಠ ಸ್ಥಾಪಿಸಿದರು. ಇಂದು ನಮ್ಮ ಸಮಾಜವು ಕುಲದೇವರ, ಕುಲಗುರುಗಳ ಅನುಗ್ರಹದಿಂದ ಸರ್ವ ರಂಗಳಲ್ಲಿಯೂ ಅಭಿವೃದ್ಧಿ ಹೊಂದುತ್ತಿದೆ ಎಂದು ಶ್ಲಾಘನೆ ವ್ಯಕ್ತ ಪಡಿಸಿದರು.
ಕಾರ್ಯಕ್ರಮದಲ್ಲಿ ಹಲವಾರು ಮಂದಿ ಸೇವಾ ಕರ್ತರನ್ನು ಸ್ವಾಮೀಜಿಯವರು ಗೌರವಿಸಿದರು. ಇದೇ ವೇಳೆ ಸ್ವಾಮೀಜಯವರಿಗೆ ಸ್ವರ್ಣ ಕಿರೀಟೋತ್ಸವ ಹಾಗೂ ರಜತ ಸಿಂಹಾಸನವನ್ನು ಸಮರ್ಪಿಸಲಾಯಿತು.
ಎಸ್. ರಮಾನಂದ ಶೇಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಂಜುನಾಥ್ ಶೇಟ್ ಮುಖ್ಯ ಅತಿಥಿಗಳಾಗಿದ್ದರು. ಕೆ.ಸುಧಾಕರ್ ಶೇಟ್, ಪುಷ್ಪ ಕೃಷ್ಣಾನಂದ ಶೇಟ್, ಮಂಜುನಾಥ್ ಶೇಟ್ ಕೆ, ಶ್ರೀಪಾದ ರಾಯ್ಕರ್, ಎಸ್. ಸುಬ್ರಹ್ಮಣ್ಯ ಶೇಟ್, ಕಲ್ಪನಾ ಎಸ್. ಶೇಟ್, ನಾಗರಾಜ್ ಶೇಟ್, ಜಯಶ್ರೀ ನಾಗರಾಜ್ ಶೇಟ್, ಸುಲೋಚನಾ ಚಂದ್ರ ಶೇಟ್, ಎಮ್. ಆಶೋಕ್ ಶೇಟ್, ಮೋಹನ್ ಎಸ್. ರೇವಣ್ಕರ್, ವಿದ್ಯಾ ಅಶೋಕ್ ಶೇಟ್ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ದೈವಜ್ಞ ಶ್ರೀ ಶ್ರೀಗಳ ಪಟ್ಟಾಭಿಷೇಕ ರಜತ ಮಹೋತ್ಸವ ಆಚರಣಾ ಸಮಿತಿಯ ಅಧ್ಯಕ್ಷರಾದ ಕೆ.ಸುಧಕರ್ ಶೇಟ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯದರ್ಶಿ ಎಸ್. ರಾಜೇಂದ್ರಕಾಂತ್ ಶೇಟ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಜೊತೆ ಕಾರ್ಯದರ್ಶಿ ಎಸ್. ಪ್ರಶಾಂತ್ ಶೇಟ್ ವಂದಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು