8:29 PM Thursday2 - May 2024
ಬ್ರೇಕಿಂಗ್ ನ್ಯೂಸ್
ಮನೆಯ ಮೇಲೆ ಸಿಸಿಬಿ ದಾಳಿ: ಡ್ರಗ್ಸ್ ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ; 16… ಈಶ್ವರಪ್ಪ ಪುತ್ರನಿಗೂ ಅಶ್ಲೀಲ ವೀಡಿಯೊ, ಫೋಟೋ, ವರದಿ ಭೀತಿ: ನ್ಯಾಯಾಲಯದಿಂದ ತಡೆಯಾಜ್ಞೆ ತಂದ… ತಾತನಿಂದಲೇ ಮೊಮ್ಮಗನ ಮೇಲೆ ಕ್ರಮ: ಜೆಡಿಎಸ್ ನಿಂದ ಹಾಸನ ಸಂಸದ ಪ್ರಜ್ವಲ್ ರೇವಣ್ಣ… ಸಂಸದ, ಕೇಂದ್ರ ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ನಿಧನ: ಪ್ರಧಾನಿ ಮೋದಿ ಸಹಿತ… ಅಶ್ಲೀಲ ವೀಡಿಯೊ ಪ್ರಕರಣ: ಬಂಧನದಿಂದ ತಪ್ಪಿಸಿಕೊಳ್ಳಲು ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿದೇಶಕ್ಕೆ… ದತ್ತಪೀಠ ಬಳಿ 100 ಅಡಿ ಆಳಕ್ಕೆ ಉರುಳಿ ಬಿದ್ದ ಪ್ರವಾಸಿಗರ ಮಿನಿ ಬಸ್:… ರಾಜ್ಯದಲ್ಲಿ ಅಭಿವೃದ್ಧಿ ಸ್ಥಗಿತ, ಕಾನೂನು ಸುವ್ಯವಸ್ಥೆ ಚಿಂತಾಜನಕ: ಬೆಳಗಾವಿಯಲ್ಲಿ ಪ್ರಧಾನಿ ಮೋದಿ ವಾಗ್ದಾಳಿ ಬೆಳಗಾವಿಯಲ್ಲಿ ಉತ್ತರ ಕರ್ನಾಟಕ ಶೈಲಿಯ ಜೋಳ ರೊಟ್ಟಿ ಸವಿದ ಪ್ರಧಾನಿ ಮೋದಿ ವಿಜಯಪುರದ ಶಿರನಾಳದಲ್ಲಿ ಶತಾಯುಷಿ ಭಾಗವ್ವ ಮತ ಚಲಾವಣೆ: 108ರ ಹರೆಯದ ಹಿರಿಯಜ್ಜಿ ಪ್ರಧಾನಿ ಮೋದಿ ಏ.28ರಂದು ಶಿರಸಿಗೆ: ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಪರ…

ಇತ್ತೀಚಿನ ಸುದ್ದಿ

ಆದಿ ಗ್ರಾಮೋತ್ಸವ ಬೆಳ್ಳಿಹಬ್ಬ ಸರಣಿ ಆರಂಭ: ಸದ್ದಿಲ್ಲದ ಸಾಧಕಿ ಶಿರ್ತಾಡಿ ಗಂಗಮ್ಮಗೆ ಗೌರವ

19/03/2023, 21:09

ಅಜೆಕಾರು(reporterkarnataka.com): ಸದ್ದಿಲ್ಲದ ಸಾಧಕಿ,ಜ್ಯೋತಿಷಿ, ಸಮಾಜ ಮುಖಿ ಚಿಂತಕಿ ಶಿರ್ತಾಡಿಯ ಗಂಗಮ್ಮ ಸುಬ್ಬರಾವ್ ಅವರಿಗೆ ಅಜೆಕಾರಿನ ಆದಿಗ್ರಾಮೋತ್ಸವ ಬೆಳ್ಳಿ ಹಬ್ಬದ ತುಳುವ ಸಾಧಕರಿಗೆ ನಮ್ಮ ನಮನ ಸರಣಿಯ ಪ್ರತಿಷ್ಠಿತ ಗೌರವವನ್ನು ಶಿರ್ತಾಡಿಯ ಅವರ ನಿವಾಸ ಆಂಗಿರಸದಲ್ಲಿ ಶನಿವಾರ ಪ್ರದಾನಿಸಲಾಯಿತು.

ಹಿರಿಯ ಸಾಧಕರನ್ನು ಹುಡುಕಿ ನಡೆಸುವ ಇಂತಹ ಕಾರ್ಯಕ್ರಮಗಳು ಪ್ರಶಂಸಾರ್ಹ ಎಂದು ಪುನರೂರು ಪ್ರತಿಷ್ಠಾನದ ಅಧ್ಯಕ್ಷ ದೇವಪ್ರಸಾದ್ ಹೇಳಿದರು.

ಸಂಕಷ್ಟದಿಂದ ಬದುಕು ಕಟ್ಟಿಕೊಂಡೆ. ತನ್ನ ಮಕ್ಕಳು ಮತ್ತು ಉಳಿದವರ ಮಕ್ಕಳು ಎಂದು ಬೇಧ ಎಣಿಸಲಿಲ್ಲ. ಸರ್ವರ ಒಳಿತಿಗಾಗಿ ಯೋಚಿಸಿದರೆ ನೆಮ್ಮದಿಯ ಬದುಕು ಬದುಕುವುದು ಸಾಧ್ಯ ಎಂದು ಗಂಗಮ್ಮ ನುಡಿದರು.
ಗಂಗಮ್ಮ ಅವರು ತಮ್ಮ ಬದುಕಿನ ಅಮೂಲ್ಯ ಕ್ಷಣಗಳನ್ನು ಹಂಚಿಕೊಂಡರು. ವಿನೂತನ ಕಾರ್ಯಕ್ರಮಗಳನ್ನು ಮಾಡುವುದರಲ್ಲಿ ಅಜೆಕಾರು ಸಾಧನೆ ಮಾಡಿದ್ದಾರೆ ಎಂದು ಯುಗಪುರುಷ ಸಂಪಾದಕ ಭುವನಾಭಿರಾಮ ಉಡುಪ ಅಭಿಪ್ರಾಯ ಪಟ್ಟರು.
ನಮ್ಮ ಗ್ರಾಮದ ಹಿರಿಯರನ್ನು ಆದಿಗ್ರಾಮೋತ್ಸವ ಸಮಿತಿ ಗುರುತಿಸಿದ್ದು ಹೊಸ ಯೋಚನೆಗಳಿಗೆ ಸ್ಪೂರ್ತಿ ನೀಡಿದಂತಾಗಿದೆ ಎಂದು ಶಿರ್ತಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಸಂತೋಷ್ ಕೋಟ್ಯಾನ್ ಹೇಳಿದರು.
ಬೆಳ್ಳಿ ಹಬ್ಬ ಸಂಚಾಲಕ, ಆದಿಗ್ರಾಮೋತ್ಸವದ ರೂವಾರಿ ಶೇಖರ ಅಜೆಕಾರು ಅಧ್ಯಕ್ಷತೆ ವಹಿಸಿದ್ದರು. ಮಂದಾರ ಪ್ರತಿಷ್ಠಾನದ ಕಾರ್ಯದರ್ಶಿ ಮಂದಾರ ರಾಜೇಶ ಭಟ್, ಗ್ರಾಮೋತ್ಸವ ಸಮಿತಿಯ ಗೌರವಾಧ್ಯಕ್ಷ ಸಾಣೂರು ಅರುಣ್ ಶೆಟ್ಟಿಗಾರ್, ವಾಲ್ಪಾಡಿ ಕ್ರಿಕೆಟರ್ಸ್ ಅಧ್ಯಕ್ಷ, ಪತ್ರಕರ್ತ ಅಶ್ರಫ್ ವಾಲ್ಪಾಡಿ, ವಾಯ್ಸ್ ಆಫ್ ಆರಾಧನಾದ ನಿರ್ದೇಶಕಿ ಪದ್ಮಶ್ರೀ ನಿಡ್ಡೋಡಿ ಅತಿಥಿಗಳಾಗಿದ್ದರು. ಉಪನ್ಯಾಸಕ ಶ್ರೀಕಾಂತ್ ಹೊಳ್ಳ ಅವರು ಕುಟುಂಬದ ಪರವಾಗಿ ಸಂಘಟಕರಿಗೆ ಕೃತಜ್ಞತೆ ಸಲ್ಲಿಸಿದರು. ಸೋಮಶೇಖರ ಮಯ್ಯ ಸ್ವಾಗತಿಸಿದರು. ಅರ್ಚಿತ್ ಕಶ್ಯಪ್,ಅನನ್ಯ ಉಡುಪ, ಶ್ರೀವಾಣಿ ಮಯ್ಯ, ಶಿವಾನಿ, ಶರ್ವಾಣಿ ಕಾರ್ತಿಕ್, ಪ್ರದ್ಯುಮ್ನ ತಮ್ಮ ಹಾಡುಗಳ ಮೂಲಕ ರಂಜಿಸಿದರು. ಶಿಕ್ಷಕಿ ಶರಣ್ಯ ಬೆಳುವಾಯಿ ಕಾರ್ಯಕ್ರಮ ನಿರೂಪಿಸಿದರು. ಕವಯತ್ರಿ ಮಾನಸ ಪ್ರವೀಣ್ ಭಟ್ ವಂದಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು