6:50 PM Sunday30 - November 2025
ಬ್ರೇಕಿಂಗ್ ನ್ಯೂಸ್
ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ… ಪ್ರಧಾನಿ ಮೋದಿ ಇಂದು ಉಡುಪಿಗೆ: ಶ್ರೀಕೃಷ್ಣ ಮಠದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ… ಉಡುಪಿಗೆ ಪ್ರಧಾನಿ ಭೇಟಿ: ಎಸ್‌ಪಿಜಿ ಜತೆಗೆ ಖಾಕಿ ಸರ್ಪಗಾವಲು: ನಿಗದಿತ ಸಮಯಕ್ಕೆ ಮುಂಚಿತವಾಗಿಯೇ…

ಇತ್ತೀಚಿನ ಸುದ್ದಿ

ಅನ್ ಲಾಕ್ ಆಗುತ್ತಿದ್ದಂತೆ ರಥಬೀದಿಯಲ್ಲಿ ಫುಟ್ ಪಾತ್ ಏರುವ ವಾಹನಗಳು !: ಕಣ್ಮುಚ್ಚಿ ಕುಳಿತ ಪೊಲೀಸ್ ಇಲಾಖೆ !!

05/07/2021, 14:52

ಮಂಗಳೂರು(reporterkarnataka news): 

ಇಡೀ ರಾಜ್ಯವೇ ಅನ್ ಲಾಕ್ ಆಗುತ್ತಿದ್ದಂತೆ ಕಡಲನಗರಿ ಮಂಗಳೂರು ಕೂಡ ಸೋಮವಾರದಿಂದ ಪೂರ್ಣ ಪ್ರಮಾಣದಲ್ಲಿ ತೆರೆದುಕೊಂಡಿದೆ. ಎರಡು ತಿಂಗಳ ಲಾಕ್ ಡೌನ್ ಬಳಿಕ ನಗರದಲ್ಲಿ ಮತ್ತೆ ಚಟುವಟಿಕೆಗಳು ಗರಿಗೆದರುತ್ತಿದ್ದಂತೆ, ಇತ್ತ ನಗರದ ರಥಬೀದಿಯಲ್ಲಿ ಮಾನವ ನಿರ್ಮಿತ ಸಮಸ್ಯೆಗಳು ತಲೆ ಎತ್ತಲಾರಂಭಿದೆ. ‘ಹಿರಿಯಕ್ಕನ ಚಾಳಿ ಮನೆ ಮಂದಿಗೆ’ ಎನ್ನುವಂತೆ ರಥಬೀದಿಯಲ್ಲಿ ಫುಟ್ ಪಾತ್ ಮೇಲೆ ವಾಹನ ಪಾರ್ಕ್ ಮಾಡುವ ಕೆಟ್ಟ ಪರಂಪರೆ ಮತ್ತೆ ಮುಂದುವರಿದಿದೆ.

ಕಡಲನಗರಿಯ ಒಡಲಿನಲ್ಲಿರುವ ರಥಬೀದಿಯ ನಿವಾಸಿಗಳ ದಶಕಗಳ ಹೋರಾಟದ ಫಲವಾಗಿ ಇಲ್ಲಿನ ರಸ್ತೆ ಅಗಲೀಕರಣ ನಡೆದಿದೆ. ಕಿತ್ತು ಹೋದ ಫುಟ್ ಪಾತ್ ಗಳಿಗೆ ಬಣ್ಣದ ಹಾಸುಗಲ್ಲುಗಳನ್ನು ಹಾಸಲಾಗಿದೆ. ಆದರೆ ಇವೆಲ್ಲವೂ ‘ಎಲ್ಲ ಬಣ್ಣವನ್ನು ಮಸಿ ನುಂಗಿತು’ ಎನ್ನುವ ಹಾಗೆ ಆಗಿದೆ. ಜನರು ಓಡಾಡಲು ಮಾಡಿರುವ ಸುಸಜ್ಜಿತ ಫುಟ್ ಪಾತ್ ಕೆಲವರಿಗೆ ಕಾರು ಪಾರ್ಕಿಂಗ್ ಮಾಡುವ ಸ್ಥಳವಾಗಿ ಪರಿವರ್ತನೆಗೊಂಡಿದೆ. ಇದರಿಂದ ಪಾದಚಾರಿಗಳು ತೊಂದರೆ ಅನುಭವಿಸಬೇಕಾಗಿದೆ.

ಈ ಕುರಿತು ರಿಪೋರ್ಟರ್ ಕರ್ನಾಟಕ ಮಾರ್ಚ್ 13 ಮತ್ತು ಮಾರ್ಚ್ 21ರ ಸಂಚಿಕೆಯಲ್ಲಿ ಸಚಿತ್ರ ವರದಿ ಮಾಡಿತ್ತು. ಇದರ ಪರಿಣಾಮ ಕೆಲವು ದಿನ ಇಲ್ಲಿನ ಫುಟ್ ಪಾತ್ ಗಳು ವಾಹನ ಮುಕ್ತವಾಗಿದ್ದರೂ ಇದೀಗ ಮತ್ತೆ ಅದೇ ದೃಶ್ಯ ಕೆಲವು ಕಡೆ ಕಂಡು ಬರಲಾರಂಭಿಸಿದೆ. ಮಂಗಳೂರು ಅನ್ ಲಾಕ್ ಆಗುತ್ತಿದ್ದಂತೆ ಫುಟ್ ಪಾತ್ ಗೆ ಅಡ್ಡವಾಗಿ ಕಾರು, ದ್ವಿಚಕ್ರ ವಾಹನಗಳನ್ನು ನಿಲ್ಲಿಸುವುದು ಶುರುವಾಗಿದೆ.

ಫುಟ್ ಪಾತ್ ನಲ್ಲಿ ಒಂದಿಬ್ಬರು ವಾಹನಗಳನ್ನು ನಿಲ್ಲಿಸಿದರೆ ಸಾಕು. ನಂತರ ವಾಹನಗಳ ಮಾಲೀಕರು ಸ್ಪರ್ಧೆಗೆ ಇಳಿದಂತೆ ತಮ್ಮ ವಾಹನಗಳನ್ನು ಫುಟ್ ಪಾತ್ ಏರಿಸುತ್ತಾರೆ. ಇವರಿಗಂತು ತಾನು ನಿಯಮ ಮುರಿಯುತ್ತಿದ್ದೇನೆ, ಕಾನೂನು ಉಲ್ಲಘಿಸುತ್ತಿದ್ದೇನೆ ಎಂಬ ಪಾಪ ಪ್ರಜ್ಞೆಯೇ ಇರುವುದಿಲ್ಲ. ಆದರೆ ಜನರು ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡುವಂತೆ ಮಾಡುವ ಪೊಲೀಸ್ ಇಲಾಖೆಯಾದರೂ ಏನು ಮಾಡುತ್ತಿದೆ? ಟ್ರಾಫಿಕ್ ಪೊಲೀಸರು ಇಲ್ಲಿಗೆ ಡ್ಯೂಟಿಗೆ ಬರುವುದಿಲ್ವೇ? ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು