6:04 PM Tuesday7 - May 2024
ಬ್ರೇಕಿಂಗ್ ನ್ಯೂಸ್
ಹಾಸನ: ಮಹಿಳೆಯರ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯ ಸಂತ್ರಸ್ತರು ಹಾಗೂ ಮಾಹಿತಿದಾರರಿಗೆ ಸಹಾಯವಾಣಿ… ರಾಜ್ಯದ 2ನೇ ಹಂತದ ಚುನಾವಣೆಯ ಬಹಿರಂಗ ಪ್ರಚಾರ ಅಂತ್ಯ; ಇಬ್ಬರು ಮಾಜಿ ಸಿಎಂ,… ಮಾಜಿ ಪ್ರಧಾನಿ ದೇವೇಗೌಡರಿಗೆ ನೀಡಿದ್ದ, ಸಂಸದ ಪ್ರಜ್ವಲ್ ರೇವಣ್ಣ ಬಳಸುತ್ತಿದ್ದ ಹಾಸನದ ಸರಕಾರಿ… ಎಸ್ಐಟಿ ತಂಡಕ್ಕೆ ಸ್ವತಃ ತಾನೇ ಗೇಟ್ ತೆರೆದ ಎಚ್.ಡಿ. ರೇವಣ್ಣ!: ಪುತ್ರನ ಬಂಧನದ… ಸೂರ್ಯಾಘಾತ: ವಿಟ್ಲ ಸಮೀಪ ಬಸ್ಸಿನ ಗ್ಲಾಸ್ ಒಡೆದು ಬಾಲಕ ಸಹಿತ 3 ಮಂದಿಗೆ… ಸುಬ್ರಹ್ಮಣ್ಯ: ನವ ವಿವಾಹಿತ ಸಿಡಿಲು ಬಡಿದು ದಾರುಣ ಸಾವು; 15 ದಿನಗಳ ಹಿಂದೆಯಷ್ಟೇ… ತುಂಬೆ ವೆಂಟೆಡ್ ಡ್ಯಾಮ್ ನಲ್ಲಿ ನೀರಿನ ಒಳಹರಿವು ಸ್ಥಗಿತ: ಮೇ 5ರಿಂದ ಪಾಲಿಕೆ… ಮುಳ್ಳೇರಿಯ: ಇತ್ತ ಮಗಳ ಮದುವೆಯ ಮದರಂಗಿ ಶಾಸ್ತ್ರ ನಡೆಯುತ್ತಿದ್ದಂತೆ ಅತ್ತ ಅಪ್ಪ ಆತ್ಮಹತ್ಯೆ ಕೊರೊನಾ ಲಸಿಕೆ ಕೋವಿಶೀಲ್ಡ್‌ ಅಡ್ಡ ಪರಿಣಾಮಗಳು: ಅಧ್ಯಯನ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ… ಸೆಕ್ಸ್ ವೀಡಿಯೊ ಪ್ರಕರಣ: ಜೆಡಿಎಸ್ ನಾಯಕ ರೇವಣ್ಣಗೆ ಬಂಧನ ಭೀತಿ: ನಿರೀಕ್ಷಣಾ ಜಾಮೀನು…

ಇತ್ತೀಚಿನ ಸುದ್ದಿ

ಅನ್ ಲಾಕ್ ಆಗುತ್ತಿದ್ದಂತೆ ರಥಬೀದಿಯಲ್ಲಿ ಫುಟ್ ಪಾತ್ ಏರುವ ವಾಹನಗಳು !: ಕಣ್ಮುಚ್ಚಿ ಕುಳಿತ ಪೊಲೀಸ್ ಇಲಾಖೆ !!

05/07/2021, 14:52

ಮಂಗಳೂರು(reporterkarnataka news): 

ಇಡೀ ರಾಜ್ಯವೇ ಅನ್ ಲಾಕ್ ಆಗುತ್ತಿದ್ದಂತೆ ಕಡಲನಗರಿ ಮಂಗಳೂರು ಕೂಡ ಸೋಮವಾರದಿಂದ ಪೂರ್ಣ ಪ್ರಮಾಣದಲ್ಲಿ ತೆರೆದುಕೊಂಡಿದೆ. ಎರಡು ತಿಂಗಳ ಲಾಕ್ ಡೌನ್ ಬಳಿಕ ನಗರದಲ್ಲಿ ಮತ್ತೆ ಚಟುವಟಿಕೆಗಳು ಗರಿಗೆದರುತ್ತಿದ್ದಂತೆ, ಇತ್ತ ನಗರದ ರಥಬೀದಿಯಲ್ಲಿ ಮಾನವ ನಿರ್ಮಿತ ಸಮಸ್ಯೆಗಳು ತಲೆ ಎತ್ತಲಾರಂಭಿದೆ. ‘ಹಿರಿಯಕ್ಕನ ಚಾಳಿ ಮನೆ ಮಂದಿಗೆ’ ಎನ್ನುವಂತೆ ರಥಬೀದಿಯಲ್ಲಿ ಫುಟ್ ಪಾತ್ ಮೇಲೆ ವಾಹನ ಪಾರ್ಕ್ ಮಾಡುವ ಕೆಟ್ಟ ಪರಂಪರೆ ಮತ್ತೆ ಮುಂದುವರಿದಿದೆ.

ಕಡಲನಗರಿಯ ಒಡಲಿನಲ್ಲಿರುವ ರಥಬೀದಿಯ ನಿವಾಸಿಗಳ ದಶಕಗಳ ಹೋರಾಟದ ಫಲವಾಗಿ ಇಲ್ಲಿನ ರಸ್ತೆ ಅಗಲೀಕರಣ ನಡೆದಿದೆ. ಕಿತ್ತು ಹೋದ ಫುಟ್ ಪಾತ್ ಗಳಿಗೆ ಬಣ್ಣದ ಹಾಸುಗಲ್ಲುಗಳನ್ನು ಹಾಸಲಾಗಿದೆ. ಆದರೆ ಇವೆಲ್ಲವೂ ‘ಎಲ್ಲ ಬಣ್ಣವನ್ನು ಮಸಿ ನುಂಗಿತು’ ಎನ್ನುವ ಹಾಗೆ ಆಗಿದೆ. ಜನರು ಓಡಾಡಲು ಮಾಡಿರುವ ಸುಸಜ್ಜಿತ ಫುಟ್ ಪಾತ್ ಕೆಲವರಿಗೆ ಕಾರು ಪಾರ್ಕಿಂಗ್ ಮಾಡುವ ಸ್ಥಳವಾಗಿ ಪರಿವರ್ತನೆಗೊಂಡಿದೆ. ಇದರಿಂದ ಪಾದಚಾರಿಗಳು ತೊಂದರೆ ಅನುಭವಿಸಬೇಕಾಗಿದೆ.

ಈ ಕುರಿತು ರಿಪೋರ್ಟರ್ ಕರ್ನಾಟಕ ಮಾರ್ಚ್ 13 ಮತ್ತು ಮಾರ್ಚ್ 21ರ ಸಂಚಿಕೆಯಲ್ಲಿ ಸಚಿತ್ರ ವರದಿ ಮಾಡಿತ್ತು. ಇದರ ಪರಿಣಾಮ ಕೆಲವು ದಿನ ಇಲ್ಲಿನ ಫುಟ್ ಪಾತ್ ಗಳು ವಾಹನ ಮುಕ್ತವಾಗಿದ್ದರೂ ಇದೀಗ ಮತ್ತೆ ಅದೇ ದೃಶ್ಯ ಕೆಲವು ಕಡೆ ಕಂಡು ಬರಲಾರಂಭಿಸಿದೆ. ಮಂಗಳೂರು ಅನ್ ಲಾಕ್ ಆಗುತ್ತಿದ್ದಂತೆ ಫುಟ್ ಪಾತ್ ಗೆ ಅಡ್ಡವಾಗಿ ಕಾರು, ದ್ವಿಚಕ್ರ ವಾಹನಗಳನ್ನು ನಿಲ್ಲಿಸುವುದು ಶುರುವಾಗಿದೆ.

ಫುಟ್ ಪಾತ್ ನಲ್ಲಿ ಒಂದಿಬ್ಬರು ವಾಹನಗಳನ್ನು ನಿಲ್ಲಿಸಿದರೆ ಸಾಕು. ನಂತರ ವಾಹನಗಳ ಮಾಲೀಕರು ಸ್ಪರ್ಧೆಗೆ ಇಳಿದಂತೆ ತಮ್ಮ ವಾಹನಗಳನ್ನು ಫುಟ್ ಪಾತ್ ಏರಿಸುತ್ತಾರೆ. ಇವರಿಗಂತು ತಾನು ನಿಯಮ ಮುರಿಯುತ್ತಿದ್ದೇನೆ, ಕಾನೂನು ಉಲ್ಲಘಿಸುತ್ತಿದ್ದೇನೆ ಎಂಬ ಪಾಪ ಪ್ರಜ್ಞೆಯೇ ಇರುವುದಿಲ್ಲ. ಆದರೆ ಜನರು ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡುವಂತೆ ಮಾಡುವ ಪೊಲೀಸ್ ಇಲಾಖೆಯಾದರೂ ಏನು ಮಾಡುತ್ತಿದೆ? ಟ್ರಾಫಿಕ್ ಪೊಲೀಸರು ಇಲ್ಲಿಗೆ ಡ್ಯೂಟಿಗೆ ಬರುವುದಿಲ್ವೇ? ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು