1:11 AM Thursday18 - September 2025
ಬ್ರೇಕಿಂಗ್ ನ್ಯೂಸ್
ಪಂಚ ಗ್ಯಾರಂಟಿ ಯೋಜನೆಗಳಿಗೆ 98 ಸಾವಿರ ಕೋಟಿ; ಅಭಿವೃದ್ಧಿಗೆ 8 ಸಾವಿರ ಕೋಟಿ:… New Delhi | ಕಾಂಗ್ರೆಸ್ ಸರಕಾರದ ಪಂಚೇಂದ್ರಿಯಗಳು ನಿಷ್ಕ್ರಿಯವಾಗಿವೆ: ಕೇಂದ್ರ ಸಚಿವ ಕುಮಾರಸ್ವಾಮಿ… Bangaluru | ರೈತ ಮುಖಂಡರ ನಿಯೋಗ ಸಿಎಂ ಸಿದ್ದರಾಮಯ್ಯ ಭೇಟಿ: ರೈತರ ಸಮಸ್ಯೆ… ಕೃಷ್ಣಾ ಮೇಲ್ದಂಡೆ ಯೋಜನೆ: ಮುಳುಗಡೆ ರೈತರ ನೀರಾವರಿ ಜಮೀನಿಗೆ 40 ಲಕ್ಷ, ಒಣಭೂಮಿಗೆ… Belagavi | ಶೀಘ್ರವೇ ಅಂಗನವಾಡಿ ಕಾರ್ಯಕರ್ತೆಯರು, ಸಿಬ್ಬಂದಿಗೆ ಬಡ್ತಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭೂ ಸ್ವಾಧೀನ ಪ್ರಕ್ರಿಯೆ ಅಕ್ರಮ ಕೂಡಲೇ ಕೈಬಿಡಿ: ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಆಗ್ರಹ ಪಾಲಿಕೆಯೇ ಪಾಪರ್‌ ಆಗಿರುವಾಗ ಹೊಸದಾಗಿ ಇಂಜಿನಿಯರ್‌ಗಳನ್ನು ಹೇಗೆ ನೇಮಿಸುತ್ತಾರೆ: ಪ್ರತಿಪಕ್ಷದ ನಾಯಕ ಆರ್.… ಮತಗಳ್ಳತನಕ್ಕೆ ಅವಕಾಶ ನೀಡಬೇಡಿ: ರಾಜ್ಯದ ಜನರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ಪರಿಹಾರದಾಸೆಗೆ ಪತಿಯ ಕೊಲೆಗೈದು ಹುಲಿ ಕೊಂದಿದೆ ಎಂದು ಕಥೆ ಕಟ್ಟಿ ಸಿಕ್ಕಿಬಿದ್ದ ಪತ್ನಿ;… Kodagu | ಮಡಿಕೇರಿ ದಸರಾ: ರಾಜ್ಯ ಸರಕಾರದಿಂದ1.50 ಕೋಟಿ ಅನುದಾನ ಬಿಡುಗಡೆ

ಇತ್ತೀಚಿನ ಸುದ್ದಿ

ಶೃಂಗೇರಿ ಶಾಸಕರ ವಿರುದ್ಧ ಲೋಕಾಯುಕ್ತ ದೂರು ಐದೇ ದಿನದಲ್ಲಿ ವಾಪಸ್: ದೂರುದಾರರಿಗೆ ಆಮಿಷೆ ಆರೋಪ

22/12/2022, 18:47

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು

info.reporter Karnataka@gmail.com

ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಅವರ ವಿರುದ್ಧ ಲೋಕಾಯುಕ್ತಕ್ಕೆ ನೀಡಿದ ದೂರನ್ನು ಐದೇ ದಿನದಲ್ಲಿ ದೂರುದಾರ ವಾಪಸ್ ಪಡೆದಿರುವುದು ಹಲವು ಸಂಶಯಗಳಿಗೆ ಎಡೆಮಾಡಿ ಕೊಟ್ಟಿದೆ. ದೂರುದಾರರಿಗೆ ಆಮಿಷೆಯೊಡ್ಡಿ ದೂರು ವಾಪಸ್ ಪಡೆಯಲಾಗಿದೆ ಎಂಬ ಆರೋಪ ಕೇಳಿ ಬರುತ್ತಿದೆ.

ನವೆಂಬರ್ 18ರಂದು ಶೃಂಗೇರಿಯ ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡ ಮೇಲೆ ಲೋಕಾಯುಕ್ತ ದೂರು ನೀಡಲಾಗಿತ್ತು. ಶಾಸಕರಿಗೆ
ಅಕ್ರಮ ತೋಟ ಖರೀದಿಗೆ 100 ಕೋಟಿಗೂ ಅಧಿಕ ಹಣ ಎಲ್ಲಿಂದ ಬಂತು ಅಂತ ದೂರುದಾರರು ಪ್ರಶ್ನಿಸಿದ್ದರು. ಆದರೆ ಇದೀಗ ದೂರು ನೀಡಿದ ಐದೇ ದಿನಕ್ಕೆ ಕೇಸನ್ನು ದೂರುದಾರ ವಿಜಯಾನಂದ ಅವರು ವಾಪಸ್ ಪಡೆದಿದ್ದಾರೆ. ಇದೀಗ ದೂರು ಹಿಂಪಡೆದ ಪ್ರಕರಣ ಟ್ವಿಸ್ಟ್ ಮೇಲೆ ಟ್ವಿಸ್ಟ್ ಪಡೆಯುತ್ತಿದೆ.


ಶಾಸಕರ ಸಂಬಂಧಿ ಪಿಎ ಅವರು ವಿಜಯಾನಂದ ಹೆಸರಲ್ಲಿ ಛಾಪಾ ಕಾಗದ ಪಡೆದಿದ್ದಾರೆ ಎನ್ನಲಾಗಿದೆ. ಶಾಸಕರ ಸಂಬಂಧಿ ಪಿಎ ಛಾಪ ಕಾಗದ ತೆಗೆದಿರುವ ವಿಷಯ ವೈರಲ್ ಆಗುತ್ತಿದೆ.

ಛಾಪಾ ಕಾಗದದ ಪೇಪರ್ ನಲ್ಲಿ ವಿಜಯಾನಂದರ ಹೆಸರಿದ್ದರೆ,
ಫೋನ್ ನಂಬರ್ ಪಿಎ ಅವರದ್ದಾಗಿದೆ ಎಂಬ ಮಾಹಿತಿ ಇದೆ. ಬೆಂಗಳೂರು ಲೋಕಾಯುಕ್ತದಲ್ಲಿ ದಾಖಲಾಗಿದ್ದ ಕೇಸ್ ಹಿಂಪಡೆಯಲು ಅಫಿಡವಿಟ್ ಮಾಡಲಾಗಿದೆ. ಕೇಸ್ ಪಡೆಯಲು ಶಾಸಕ ಟಿ.ಡಿ. ರಾಜೇಗೌಡ ಆಪ್ತರಿಂದಲೇ ಷಡ್ಯಂತ್ರ ನಡೆದಿದೆ
ಎಂದು ಬಿಜೆಪಿ ಆರೋಪಿಸಿದೆ.

ಸದ್ಯದಲ್ಲೇ ವಿಧಾನಸಭೆ ಚುನಾವಣೆ ನಡೆಯಲಿರುವುದರಿಂದ ಪ್ರಕರಣ ರಾಜಕೀಯವಾಗಿಯೂ ಪ್ರಾಮುಖ್ಯತೆಯನ್ನು ಪಡೆಯುತ್ತಿದೆ. ವಿಜಯಾನಂದ ಕೇಸ್ ಹಿಂಪಡೆದ ಮೇಲೆ ಚಿಕ್ಕಮಗಳೂರಲ್ಲಿ ಲೋಕಾಯುಕ್ತದಲ್ಲಿ 2ನೇ ದೂರು ದಾಖಲಾಗಿದೆ. ಕಾಫಿ ಡೇ ಸಂಸ್ಥಾಪಕ ದಿ. ಸಿದ್ದಾರ್ಥ ಹೆಗ್ಡೆ ಅವರ ಟ್ರಸ್ಟ್ ನ ತೋಟ ಖರೀದಿಯಲ್ಲಿ ಅಕ್ರಮದ ಆರೋಪ ದೂರಿನ ಪ್ರಕರಣ ಇದಾಗಿದೆ.

ಟಿ.ಡಿ.ರಾಜೇಗೌಡ ಚಿಕ್ಕಮಗಳೂರು ಜಿಲ್ಲೆಯ ಏಕೈಕ ಕಾಂಗ್ರೆಸ್ ಶಾಸಕ

ಇತ್ತೀಚಿನ ಸುದ್ದಿ

ಜಾಹೀರಾತು