2:05 PM Monday10 - August 2026
ಬ್ರೇಕಿಂಗ್ ನ್ಯೂಸ್
ತೊಕ್ಕೊಟ್ಟು | ಬಾರ್ ಮುಂಭಾಗ ತಲವಾರು ಝಳಪಿಸಿ ದಾಂಧಲೆ ; ರೌಡಿ ಶೀಟರ್… ವೀರಾಜಪೇಟೆ | ಮಾಲ್ದಾರೆಯಲ್ಲಿ ಮಹಿಳೆ ಮೇಲೆ ಅಟ್ಟಹಾಸ ಮೆರೆದ ಚಿರತೆ ಸೆರೆ ವಿರಾಜಪೇಟೆ | ಮಾಲ್ದಾರೆಯಲ್ಲಿ ಮಹಿಳೆ ಮೇಲೆ ಚಿರತೆ ದಾಳಿ; ಗಂಭೀರ ಗಾಯ Kodagu | ವಿರಾಜಪೇಟೆ ಬಿಇಒ ಹೃದಯಾಘಾತದಿಂದ ಬಸ್ನಲ್ಲೇ ನಿಧನ ಚಿಕ್ಕಮಗಳೂರು | ಅಜ್ಜಂಪುರ ಬಳಿ ಸಚಿವ ಕೆ.ಜೆ.ಜಾರ್ಜ್ ಬೆಂಗಾಲು ವಾಹನ ಅಪಘಾತ ರಾಜೀನಾಮೆ ವಾಪಸ್ ಪಡೆದ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್: ಸಚಿವ ಲಕ್ಷ್ಮಣ ಸವದಿ… ರಾಜ್ಯ ಸಂಪುಟ ವಿಸ್ತರಣೆ | ಅಪ್ಪ ಸಿದ್ದರಾಮಯ್ಯರ ಪಾತ್ರ ಬಿಚ್ಚಿಟ್ಟ ಪುತ್ರ ಯತೀಂದ್ರ;… ಚಂದ್ರನಿಗೆ ಅಪ್ಪಳಿಸಿದ ಇಲಾನ್ ಮಸ್ಕ್ ಸ್ಪೇಸ್‌ ಎಕ್ಸ್‌ನ ರಾಕೆಟ್‌: 100 ಅಡಿ ಕುಳಿ… 2029ರಲ್ಲಿ ರಾಹುಲ್ ಗಾಂಧಿ ಪ್ರಧಾನಿ ಮಾಡುವುದೇ ನಮ್ಮ ಗುರಿ: ಕೊಡಗು ಜಿಲ್ಲಾ ಉಸ್ತುವಾರಿ… ಮಹಾಮಳೆಗೆ ಕೇರಳ ತತ್ತರ; ಬಹುತೇಕ ಪ್ರದೇಶ ಮುಳುಗಡೆ; ಅಪಾಯ ಮಟ್ಟ ಮೀರಿ ಹರಿಯುತ್ತಿರುವ…

ಇತ್ತೀಚಿನ ಸುದ್ದಿ

ಕಾರಿನ ಬ್ರೇಕ್ ಫೈಲ್: ಪ್ರತಿಪಕ್ಷ ಉಪ ನಾಯಕ ಯು. ಟಿ. ಖಾದರ್ ಅಪಾಯದಿಂದ ಪಾರು

09/12/2022, 21:48

ಮಂಗಳೂರು(reporterkarnataka.com): ಪ್ರತಿಪಕ್ಷದ ಉಪನಾಯಕ ಹಾಗೂ ಮಂಗಳೂರು ಶಾಸಕ ಯು. ಟಿ. ಖಾದರ್ ಅವರು ಪ್ರಯಾಣಿಸುತ್ತಿದ್ದ ಕಾರ್ ಬ್ರೇಕ್ ಫೈಲ್ ಆಗಿದ್ದು, ಅದೃಷ್ಟವಶಾತ್ ಖಾದರ್ ಅವರು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.

ಶುಕ್ರವಾರ ಅಪರಾಹ್ನ ಈ ಘಟನೆ ಬಂಟ್ವಾಳ ಬಂಟರ ಭವನ ಕಡೆಯಿಂದ ಮಂಗಳೂರಿಗೆ ಬರುತ್ತಿದ್ದಾಗ ನಡೆದಿದೆ. ಪಡೀಲ್ ಬಳಿಯ ಕಣ್ಣೂರು ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿ ಸಮೀಪ ಕಾರಿನ ಬ್ರೇಕ್ ಫೈಲ್ ಆಗಿದ್ದು, ಚಾಲಕ ಲಿಬ್ಜಿತ್ ತಕ್ಷಣ ಕಾರು ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಂತರ ಬದಲಿ ಕಾರಿನಲ್ಲಿ ಖಾದರ್ ಅವರು ಮಂಗಳೂರಿಗೆ ಪ್ರಯಾಣ ಬೆಳೆಸಿದರು. ಅದೃಷ್ಟವಶತ್ ಶಾಸಕರು ಹಾಗೂ ಕಾರಲ್ಲಿದ್ದವರು ಏನೂ ಅಪಾಯವಾಗದೆ ಪಾರಾಗಿದ್ದಾರೆ.

ಈ ಬಗ್ಗೆ ಕಾರಿನ ಚಾಲಕ ಲಿಬ್ಜಿತ್ ರಿಪೋಟರ್ ಕರ್ನಾಟಕಕ್ಕೆ ಪ್ರತಿಕ್ರಿಸಿ, ನಗರದ ಪಡೀಲ್ ನ ಟೊಯೋಟಾ ಶೋರೂಮ್ ನಲ್ಲಿ ಕಾರನ್ನು ಸರ್ವಿಸ್ ಆಗಿ ತಂದು ಇಂದಿಗೆ 5 ದಿನ ಮಾತ್ರ ಆಗಿದ್ದು. ಅದಲ್ಲದೆ ಶಾಸಕರಿಲ್ಲದೆ ದಿನಕ್ಕೆ 10 ಕಿ.ಮೀ. ಓಡಿರಬಹದು. ಗೇರ್ ನಿಂದ ಕಂಟ್ರೋಲ್ ಮಾಡಿ ಕಾರು ನಿಲ್ಲಿಸಿದ್ದೇನೆ. ದೇವರ ದಯೆಯಿಂದ ಅವಘಡ ಏನು ಆಗಿಲ್ಲ. ಶಾಸಕರಿಗೆ ಏನು ಆಗಿಲ್ಲ. ನಂತರ ಬೇರೆ ಕಾರಿನ ವ್ಯವಸ್ಥೆ ಮಾಡಿದ್ದೇನೆ. ಈ ಬಗ್ಗೆ ಶೋರೂಮ್ ತೆರಳಿ ಕೇಳಿದ್ರೆ. ಬ್ರೇಕ್ ಲಿಕ್ವಿಡ್ ಹೋಗಿರಬಹುದು ಎಂದು ಉಡಾಫೆ ಉತ್ತರ ನೀಡಿದ್ದಾರೆ.
ಒಬ್ಬ ಜನ ಪ್ರತಿನಿಧಿಗೆ ಸರಿಯಾದ ಸರ್ವಿಸ್ ನೀಡಲಾಗಿಲ್ಲವಾದರೆ ಜನ ಸಾಮಾನ್ಯರಿಗೆ ಸಮಾಧಾನಕರ ಉತ್ತರಸಿಗಬಹುದೇ ಎಂಬುದು ಅವರ ಅಳಲು ವ್ಯಕ್ತಪಡಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು