8:02 AM Sunday12 - October 2025
ಬ್ರೇಕಿಂಗ್ ನ್ಯೂಸ್
ಕೃಷಿ ಅಭಿವೃದ್ಧಿಯಾದರೆ ಮಾತ್ರ ದೇಶದ ಅಭಿವೃದ್ಧಿ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕೃಷಿ ಅಭಿವೃದ್ಧಿಯಾದರೆ ಮಾತ್ರ ದೇಶದ ಅಭಿವೃದ್ಧಿ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಡಿಕೇರಿಯಲ್ಲಿ ಡಿಜಿಟಲ್ ಸ್ಟುಡಿಯೋ ಕಳ್ಳತನ ಪ್ರಕರಣ: ಐವರು ಚೋರರ ಬಂಧನ ಆಶ್ರಮ ಶಾಲೆಯಲ್ಲಿ ಬೆಂಕಿ ಅವಘಡ: ಮೃತ ವಿದ್ಯಾರ್ಥಿ ಪುಷ್ಪಕ್ ಕುಟುಂಬಕ್ಕೆ 5 ಲಕ್ಷ… ಕಾವೇರಿ ಸಂಕ್ರಮಣ: ಅ. 17ರಂದು ಕೊಡಗು ಜಿಲ್ಲೆಯಲ್ಲಿ ಸಾರ್ವತ್ರಿಕ ರಜೆ; ಮಧ್ಯಾಹ್ನ 1.44ಕ್ಕೆ… 2005ರ ಪೂರ್ವ ಅರಣ್ಯಭೂಮಿಯಲ್ಲಿ ಬದುಕು ಕಟ್ಟಿಕೊಂಡವರಿಗೆ ಭೂಮಿಯ ಹಕ್ಕು: ಮುಖ್ಯಮಂತ್ರಿ ಸಿದ್ದರಾಮಯ್ಯ ‘ನೀರಿದ್ದರೆ ನಾಳೆ – ವಾಟರ್ ಇಸ್ ಫ್ಯೂಚರ್’: ಯೋಜನೆಗೆ ಚಾಲನೆ’: ಬರುವ ಡಿಸೆಂಬರ್… ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ನಿರೀಕ್ಷಣಾ ಜಾಮೀನು ಅರ್ಜಿ ವಜಾ Chikkamagaluru | ಮೂಡಿಗೆರೆ: ‘PRESS’ ಎಂದು ಬರೆದ ಬೈಕ್ ನಲ್ಲಿ ಶ್ರೀಗಂಧ ಕಳ್ಳಸಾಗಣೆ;… ಸೋಮವಾರಪೇಟೆ ಹಂಡ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲೋಕಾಯುಕ್ತರ ಬಲೆಗೆ: 25 ಸಾವಿರ ಲಂಚ…

ಇತ್ತೀಚಿನ ಸುದ್ದಿ

ಮಾಸ್ಕೋದಿಂದ ಪುಟ್ಟ ಮಗಳಿಗೆ ಒಂದು ಸೂಟ್ ಕೇಸ್ ಚಾಕಲೇಟ್ ತಂದಿದ್ದ ವಿಜ್ಞಾನಿ ಸುಧೀಂದ್ರ ಹಾಲ್ದೊಡ್ಡೇರಿ !

02/07/2021, 20:22

ಬೆಂಗಳೂರು(reporterkarnataka news): ಪ್ರಸಿದ್ಧ ವಿಜ್ಞಾನ ಬರಹಗಾರ, ಡಿಆರ್​​​​ಡಿಒ ಮಾಜಿ ವಿಜ್ಞಾನಿ ಸುಧೀಂದ್ರ ಹಾಲ್ದೊಡ್ಡೇರಿ ಇಂದು ಮಧ್ಯಾಹ್ನ ನಿಧನರಾಗಿದ್ದಾರೆ. ವಾರದ ಹಿಂದೆ ಅವರು ತೀವ್ರ ಹೃದಯಾಘಾತಕ್ಕೀಡಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಕೆಲಸ ನಿಮಿತ್ತ ಈ ಹಿಂದೆ ರಷ್ಯಾಕ್ಕೆ ಹೋಗಿದ್ದಾಗ ಒಂದು ಸೂಟ್ ಕೇಸ್ ತುಂಬಾ ಚಾಕಲೇಟ್ ತಂದಿರುವುದನ್ನು ಅವರ ಪುತ್ರಿ ಮೇಘನಾ ಸುಧೀಂದ್ರ ನೆನಪಿಸಿಕೊಳ್ಳುತ್ತಾರೆ.

ಫಾದರ್ಸ್ ಡೇ ಬಗ್ಗೆ ಮೇಘನಾ ಅವರು ಬರೆದ ಲೇಖನದಲ್ಲಿ ಇದನ್ನು ಉಲ್ಲೇಖಿಸಿದ್ದಾರೆ.

ಮೇಘನಾ ಅವರು ಆಗ ಸಣ್ಣವರಿದ್ದರಂತೆ. ಸ್ಕೂಲಿಗೆ ಹೋಗುವ ಪ್ರಾಯ. ಆಗ ತಂದೆ ಸುಧೀಂದ್ರ ಹಾಲ್ದೊಡ್ಡೇರಿ ಕೆಲಸದ ಮೇಲೆ ರಷ್ಯಾದ ಮಾಸ್ಕೋಕ್ಕೆ ಹೋಗಿದ್ದರಂತೆ. ಮಗಳು ದಿನಾ ಕಾಲ್ ಮಾಡಿ ‘ಅಪ್ಪಾ… ಯಾವಾಗ ಬರ್ತೀರಿ’ ಅಂತ ವಿಚಾರಿಸುತ್ತಿದ್ದರಂತೆ. ಒಂದು ವಾರ ಬಿಟ್ಟು, ಎರಡು ವಾರ ಬಿಟ್ಟು ಎಂದು ಸಾಬೂಬು ಹೇಳುತ್ತಿದ್ದ ತಂದೆ ಸುಧೀಂದ್ರ ಅವರು ‘ಮಗಳೇ… ನಿನಗೆ ಏನು ತರಬೇಕು’ ಎಂದು ಕೇಳಿದ್ರಂತೆ. ತಕ್ಷಣ ಮಗಳು ಹೇಳಿದ್ದು ಒಂದು ಸೂಟ್ ಕೇಸ್ ಫುಲ್ ಚಾಕಲೇಟ್ ಬೇಕಪ್ಪ ಎಂದು.

ಮಗಳ ಕೋರಿಕೆಯಂತೆ ಸುಧೀಂದ್ರ ಒಂದು ಸೂಟ್ ಕೇಸ್ ಪೂರ್ತಿ ಚಾಕಲೇಟ್ ತಂದು ಮಗಳಿಗೆ ಶಾಕ್ ಕೊಟ್ಟಿದ್ದರಂತೆ. ಅದು ಕೂಡ ಬರೋಬ್ಬರಿ 35 ಕೆಜಿ ಚಾಕಲೇಟ್.

ಮಗಳು ಸುಮ್ಮನೇ ಹೇಳುವ ಮಾತನ್ನು ನಿಜ ಮಾಡುವವರೇ ಅಪ್ಪ ಎಂದು ಒಕ್ಕಣೆ ಬರೆಯಲು ಪುತ್ರಿ ಮೇಘನಾ ಮರೆಯಲಿಲ್ಲ.

ಇತ್ತೀಚಿನ ಸುದ್ದಿ

ಜಾಹೀರಾತು