1:02 AM Wednesday5 - August 2026
ಬ್ರೇಕಿಂಗ್ ನ್ಯೂಸ್
2029ರಲ್ಲಿ ರಾಹುಲ್ ಗಾಂಧಿ ಪ್ರಧಾನಿ ಮಾಡುವುದೇ ನಮ್ಮ ಗುರಿ: ಕೊಡಗು ಜಿಲ್ಲಾ ಉಸ್ತುವಾರಿ… ಮಹಾಮಳೆಗೆ ಕೇರಳ ತತ್ತರ; ಬಹುತೇಕ ಪ್ರದೇಶ ಮುಳುಗಡೆ; ಅಪಾಯ ಮಟ್ಟ ಮೀರಿ ಹರಿಯುತ್ತಿರುವ… *ಬಿರುಗಾಳಿಗೆ ಸಿಲುಕಿ ಆಗಸದಲ್ಲೇ 300 ಅಡಿ ಕೆಳಗೆ ಕುಸಿದ ಏರ್ ಇಂಡಿಯಾ ವಿಮಾನ:… *10 ಲಕ್ಷ ರೂ. ಲಂಚಕ್ಕೆ ಬೇಡಿಕೆ; ಲೋಕಾಯುಕ್ತ ಬಲೆಗೆ ಬಿದ್ದ ಹುಣಸೂರು ಉಪವಿಭಾಗಾಧಿಕಾರಿ… ವಿಧಾನ ಪರಿಷತ್‌ ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ ರಾಜೀನಾಮೆ ಸಂಪುಟ ವಿಸ್ತರಣೆ | ಕೊನೆ ಕ್ಷಣದಲ್ಲಿ 3 ಬಾರಿ ಪಟ್ಟಿ ಬದಲು: ಗಾಯತ್ರಿ… ಸಂಪುಟ ವಿಸ್ತರಣೆ | ಈ ಬಾರಿಯೂ ಕೊಡಗಿಗೆ ಒಲಿಯದ ಮಂತ್ರಿಗಿರಿ: ವಿರಾಜಪೇಟೆ ಶಾಸಕ… ಮೈಸೂರಿಗೆ ಪ್ರಧಾನಿ ಮೋದಿ: ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಯುವ ಕೇಂದ್ರ ವಿವೇಕ ಸ್ಮಾರಕ… ಭಾರತದ ಭವ್ಯ ಪರಂಪರೆ ಮೈಸೂರಿನ ಕಣಕಣದಲ್ಲಿದೆ: ವಿವೇಕ ಸ್ಮಾರಕ ಉದ್ಘಾಟಿಸಿ ಪ್ರಧಾನಿ ಮೋದಿ… ಸಿದ್ದಾಪುರ: ದೇವಾಲಯ ಆವರಣದಲ್ಲಿ ಗೋರಿ ನಿರ್ಮಾಣ ಪ್ರಕರಣ; 8 ಮಂದಿ ಬಂಧನ

ಇತ್ತೀಚಿನ ಸುದ್ದಿ

ಮಾಸ್ಕೋದಿಂದ ಪುಟ್ಟ ಮಗಳಿಗೆ ಒಂದು ಸೂಟ್ ಕೇಸ್ ಚಾಕಲೇಟ್ ತಂದಿದ್ದ ವಿಜ್ಞಾನಿ ಸುಧೀಂದ್ರ ಹಾಲ್ದೊಡ್ಡೇರಿ !

02/07/2021, 20:22

ಬೆಂಗಳೂರು(reporterkarnataka news): ಪ್ರಸಿದ್ಧ ವಿಜ್ಞಾನ ಬರಹಗಾರ, ಡಿಆರ್​​​​ಡಿಒ ಮಾಜಿ ವಿಜ್ಞಾನಿ ಸುಧೀಂದ್ರ ಹಾಲ್ದೊಡ್ಡೇರಿ ಇಂದು ಮಧ್ಯಾಹ್ನ ನಿಧನರಾಗಿದ್ದಾರೆ. ವಾರದ ಹಿಂದೆ ಅವರು ತೀವ್ರ ಹೃದಯಾಘಾತಕ್ಕೀಡಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಕೆಲಸ ನಿಮಿತ್ತ ಈ ಹಿಂದೆ ರಷ್ಯಾಕ್ಕೆ ಹೋಗಿದ್ದಾಗ ಒಂದು ಸೂಟ್ ಕೇಸ್ ತುಂಬಾ ಚಾಕಲೇಟ್ ತಂದಿರುವುದನ್ನು ಅವರ ಪುತ್ರಿ ಮೇಘನಾ ಸುಧೀಂದ್ರ ನೆನಪಿಸಿಕೊಳ್ಳುತ್ತಾರೆ.

ಫಾದರ್ಸ್ ಡೇ ಬಗ್ಗೆ ಮೇಘನಾ ಅವರು ಬರೆದ ಲೇಖನದಲ್ಲಿ ಇದನ್ನು ಉಲ್ಲೇಖಿಸಿದ್ದಾರೆ.

ಮೇಘನಾ ಅವರು ಆಗ ಸಣ್ಣವರಿದ್ದರಂತೆ. ಸ್ಕೂಲಿಗೆ ಹೋಗುವ ಪ್ರಾಯ. ಆಗ ತಂದೆ ಸುಧೀಂದ್ರ ಹಾಲ್ದೊಡ್ಡೇರಿ ಕೆಲಸದ ಮೇಲೆ ರಷ್ಯಾದ ಮಾಸ್ಕೋಕ್ಕೆ ಹೋಗಿದ್ದರಂತೆ. ಮಗಳು ದಿನಾ ಕಾಲ್ ಮಾಡಿ ‘ಅಪ್ಪಾ… ಯಾವಾಗ ಬರ್ತೀರಿ’ ಅಂತ ವಿಚಾರಿಸುತ್ತಿದ್ದರಂತೆ. ಒಂದು ವಾರ ಬಿಟ್ಟು, ಎರಡು ವಾರ ಬಿಟ್ಟು ಎಂದು ಸಾಬೂಬು ಹೇಳುತ್ತಿದ್ದ ತಂದೆ ಸುಧೀಂದ್ರ ಅವರು ‘ಮಗಳೇ… ನಿನಗೆ ಏನು ತರಬೇಕು’ ಎಂದು ಕೇಳಿದ್ರಂತೆ. ತಕ್ಷಣ ಮಗಳು ಹೇಳಿದ್ದು ಒಂದು ಸೂಟ್ ಕೇಸ್ ಫುಲ್ ಚಾಕಲೇಟ್ ಬೇಕಪ್ಪ ಎಂದು.

ಮಗಳ ಕೋರಿಕೆಯಂತೆ ಸುಧೀಂದ್ರ ಒಂದು ಸೂಟ್ ಕೇಸ್ ಪೂರ್ತಿ ಚಾಕಲೇಟ್ ತಂದು ಮಗಳಿಗೆ ಶಾಕ್ ಕೊಟ್ಟಿದ್ದರಂತೆ. ಅದು ಕೂಡ ಬರೋಬ್ಬರಿ 35 ಕೆಜಿ ಚಾಕಲೇಟ್.

ಮಗಳು ಸುಮ್ಮನೇ ಹೇಳುವ ಮಾತನ್ನು ನಿಜ ಮಾಡುವವರೇ ಅಪ್ಪ ಎಂದು ಒಕ್ಕಣೆ ಬರೆಯಲು ಪುತ್ರಿ ಮೇಘನಾ ಮರೆಯಲಿಲ್ಲ.

ಇತ್ತೀಚಿನ ಸುದ್ದಿ

ಜಾಹೀರಾತು