4:03 AM Sunday17 - May 2026
ಬ್ರೇಕಿಂಗ್ ನ್ಯೂಸ್
ಕೊಡಗಿನ ತಮ್ಮ ಕಾಫಿ ಎಸ್ಟೇಟ್‌ಗೆ ನುಗ್ಗಿದ ಆನೆಗಳ ಹಿಂಡಿನ ವಿಡಿಯೋ ಹಂಚಿಕೊಂಡ ಉದ್ಯಮಿ… ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಪುನರ್ವಸತಿಗೆ ಹೆಚ್ಚುವರಿಯಾಗಿ 20 ಕೋಟಿ: ಮಂಗಳೂರಿನಲ್ಲಿ ಸಚಿವ ಖಂಡ್ರೆ ಚಿಕ್ಕಮಗಳೂರು | ದೇವನಗುಲ್ ಕಾಡಿನೊಳಗೆ ಅನಾಥ ಸ್ಥಿತಿಯಲ್ಲಿ ವೃದ್ಧನ ಶವ ಪತ್ತೆ ಬಳ್ಳಾರಿ | ಆಗಸ್ಟ್ 2ರಂದು ‘ಸ್ಟೀಲ್ ಸಿಟಿ ರನ್ 2026’ 5ನೇ ಆವೃತ್ತಿ:… ತರೀಕೆರೆ | ರೆವೆನ್ಯೂ ಇನ್ಸ್‌ಪೆಕ್ಟರ್ ಲೋಕಾಯುಕ್ತ ಬಲೆಗೆ: ರೈತನಿಂದ 30 ಸಾವಿರ ಲಂಚ… ಸ್ಯಾಂಡಲ್‌ವುಡ್‌ಗೆ ಬಿಗ್ ಶಾಕ್: ಹೃದಯಘಾತಕ್ಕೆ ನಟ ದಿಲೀಪ್ ರಾಜ್ ಬಲಿ ಪ್ರಧಾನಿ ಮೋದಿ ಕರೆ ಬೆನ್ನಲ್ಲೆ, ಅಡುಗೆ ಎಣ್ಣೆ ದರದಲ್ಲಿ ಭಾರಿ ಇಳಿಕೆ: ಅಕ್ಕಿ… ವಿದ್ಯುತ್ ಕಂಬದಲ್ಲಿ ಶಾರ್ಟ್ ಸರ್ಕ್ಯೂಟ್: ಬೈಕ್ ಸವಾರರ ನಿರ್ಲಕ್ಷ್ಯದ ಸವಾರಿ; ಅಪಾಯದಿಂದ ಪಾರು. ಬೆಂಗಳೂರು ಉಪನಗರ ರೈಲು ಯೋಜನೆ: 𝟭𝟱𝟯 ಮೆಟ್ರೋ ಕೋಚ್ ಗಳ ಖರೀದಿಗೆ ಐಸಿಎಫ್… ಚಿಕ್ಕಮಗಳೂರು | ಬ್ರೇಕ್ ಫೇಲ್: ಬಸ್ ನಿಲ್ದಾಣದ ಕಾಂಪೌಂಡ್‌ಗೆ ಡಿಕ್ಕಿ ಹೊಡೆದ ಸರಕಾರಿ…

ಇತ್ತೀಚಿನ ಸುದ್ದಿ

ಕೊರೊನಾದಿಂದ ಮೃತಪಟ್ಟವರ ಕುಟುಂಬಕ್ಕೆ ಬಸನಗೌಡ ಬಾದರ್ಲಿ ಭೇಟಿ: ಸಹಾಯ ಹಸ್ತ ವಿತರಣೆ

02/07/2021, 07:46

ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ ರಾಯಚೂರು

info.reporterkarnataka@gmail.com

ಕೋವಿಡ್‌ನಿಂದ ಮೃತಪಟ್ಟವರ ಕುಟುಂಬಕ್ಕೆ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಬಸನಗೌಡ ಬಾದರ್ಲಿ ಸಹಾಯ ಹಸ್ತ ಚಾಚಲು ಮುಂದೆ ಬಂದಿದ್ದಾರೆ.

ತಾಲೂಕಿನಲ್ಲಿ ಕೊರೊನಾದಿಂದ ಸಾವು-ನೋವು ಹಾಗೂ ಉದ್ಯೋಗ ಕಳೆದುಕೊಂಡವರ, ಆರ್ಥಿಕವಾಗಿ ಸಂಕಷ್ಟಕೀಡಾದ ರೈತರು, ಕಾರ್ಮಿಕರ, ಬಡವರ, ಕಷ್ಟಗಳನ್ನು ಆಲಿಸಿದ ಬಾದರ್ಲಿ ಅವರು ಬಾದರ್ಲಿ ಜಿಪಂ ವ್ಯಾಪ್ತಿಯಲ್ಲಿ ಮೃತರಾದ ಬಾದರ್ಲಿಯ ದೂಗಪ್ಪ ನಾಯಕ, ಅಲಬನೂರಿನ ಕೆ. ಬಸವರಾಜಪ್ಪ, ಹರೇಟನೂರನ ದೇವರಾಜ ನಾಯಕ, ಗಿಣಿವಾರದ ವೆಂಕನಗೌಡ ಕೋಟೆಗೋಡೆ ಮತ್ತು ಬಿ.ವೆಂಕಟೇಶ ಅವರ ಕುಂಟುಬಕ್ಕೆ ಭೇಟಿ ನೀಡಿ ಮೃತರ ಕುಂಟುಂಬಸ್ಥರಿಗೆ ಆತ್ಮಸ್ಥೆರ್ಯ ತುಂಬಿ ತಲಾ 10 ಸಾವಿರ ರೂ.ಗಳ ಧನ ಸಹಾಯ ನೀಡಿದ್ದಾರೆ.ಈ ಸಂದರ್ಭದಲ್ಲಿ ಮಾತನಾಡಿದ ಅವರು,

ಸರಕಾರ ಮೃತರ ಸಂಖ್ಯೆಯಲ್ಲಿ ಸುಳ್ಳು ವರದಿ ನೀಡುತ್ತಿದ್ದು, ಸರಿಯಾದ ವರದಿಯನ್ನು ತರಿಸಿಕೊಂಡು ಮೃತರಿಗೆ ತಲಾ 5 ಲಕ್ಷ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು. 

ಇಂತಹ ಕಾರ್ಯಗಳು ಮಾಡುವುದರಿಂದ ಅವರಿಗೆ ಅವರ ಕುಟುಂಬ ಶಾಂತಿ ನಮ್ಮದೇ ಸಿಗುತ್ತದೆಂದು ಸೋಮನಾಥ ಶಿವಾಚಾರ್ಯರು ಬಾಳೆಹೊನ್ನೂರು ಪೀಠ ಮೆಚ್ಚಿಗೆ ವ್ಯಕ್ತಪಡಿಸಿದ್ದಾರೆ.

ಈ ಸಂದರ್ಭದಲ್ಲಿ ವೆಂಕಟೇಶ ರಾಗಲಪರ್ವಿ, ಶಿವಕುಮಾರ ಜವಳಿ, ಫಕೀರಯ್ಯ ರಾಗಲಪರ್ವಿ ದೇವಪ್ಪ ಅಲಬನೂರು ಆರ್. ಪಂಪಾಪತಿ, ಮುನ್ನಾ, ಹಾಗೂ ಗ್ರಾಮ ಪಂ.ಸ. ಹುಚ್ಚಪ್ಪ ಹರೇಟನೂರು ಚನ್ನಪ್ಪ ಅಲಬನೂರು ಯಂಕನಗೌಡ ಮಾಜಿ ತಾ.ಪಂ.ಸ ಮಲ್ಲರಡ್ಡಿ, ಗ್ರಾ.ಪಂ.ಸ. ಮಾಹಾದೇವ, ಪಕೀರಪ್ಪ, ನಾಗಪ್ಪ ಮಾ.ಗ್ರಾ.ಪಂ.ಸ. ರಾಮನಗೌಡ, ಸಿದ್ದನಗೌಡ, ಬಸವರಾಜ ನಾಯಕ, ಬಸವರಾಜ, ವೆಂಕಟೇಶ ಯದ್ದಲದೊಡ್ಡಿ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಊರಿನ ಹಿರಿಯರು ಇದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು