ಇತ್ತೀಚಿನ ಸುದ್ದಿ
ಶಾಸಕ ಜಮೀರ್ ಅಹಮದ್ ವಿದೇಶಿ ಹೂಡಿಕೆ ಮೇಲೆ ಎಸಿಬಿ ಕಣ್ಣು?: ಕರೆನ್ಸಿ ಕನ್ವರ್ಟ್ ವರದಿ ನೀಡಲು ಸೂಚನೆ?
09/08/2022, 14:13
ಬೆಂಗಳೂರು(reporterkarnataka.com): ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಖಾನ್ ಅವರ ಬೆನ್ನು ಹತ್ತಿದ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳು ಸದ್ಯ ಅವರ ಬಿಡುವ ಲಕ್ಷಣ ಕಂಡು ಬರುತ್ತಿಲ್ಲ. ಈಗಾಗಲೇ ದಾಳಿ ನಡೆಸಿರುವ ಎಸಿಬಿ ಜಮೀರ್ ಅವರ ವಿದೇಶಿ ಹೂಡಿಕೆ ಮೇಲೆ ಕಣ್ಣಿಟ್ಟಿದೆ.
ಈ ಹಿಂದೆ ಜಮೀರ್ ಅವರ ನಿವಾಸ ಮತ್ತು ಕಚೇರಿ ಮೇಲೆ ದಾಳಿ ನಡೆಸಿದ.ಎಸಿಬಿ ಅಧಿಕಾರಿಗಳು, ಈಗ ಅವರ ವಿದೇಶಿ ಹೂಡಿಕೆಯನ್ನು ಕೆದಕಲು ಪ್ರಯತ್ನಿಸುತ್ತಿದೆ.
ಜಮೀರ್ ವಿದೇಶಗಳಲ್ಲಿ ಹೂಡಿಕೆ ಮಾಡಿರುವ ಬಗ್ಗೆ ಎಸಿಬಿಗೆ ಸುಳಿವು ಸಿಕ್ಕಿದ್ದು, ಇದರ ಬೆನ್ನಲ್ಲೇ ವಿದೇಶಿ ಪ್ರಯಾಣ, ವಿದೇಶದಲ್ಲಿ ಮಾಡಿರುವ ಖರ್ಚು, ಪಾಸ್ಪೋರ್ಟ್, ವಿದೇಶಕ್ಕೆ ಹೋಗುವ ಮುನ್ನ ಕರೆನ್ಸಿ ಕನ್ವರ್ಟ್ ಮಾಡಿರುವ ವರದಿ ನೀಡುವಂತೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.
ವಿದೇಶಕ್ಕೆ ಹೋದ ಸಂದರ್ಭದಲ್ಲಿ ಅಲ್ಲಿ ಬಳಕೆ ಮಾಡಿದ್ದ ಹಣದ ಮೂಲಗಳನ್ನು ತಿಳಿಸುವಂತೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.














