3:53 PM Thursday26 - March 2026
ಬ್ರೇಕಿಂಗ್ ನ್ಯೂಸ್
ತುಮಕೂರು | ಮಧ್ಯರಾತ್ರಿ ಕುಡುಕ ಪುಂಡರ ಅಟ್ಟಹಾಸ: 10ಕ್ಕೂ ಅಧಿಕ ವಾಹನಗಳ ಗ್ಲಾಸ್… ರಾಜ್ಯ ಸರ್ಕಾರಕ್ಕೆ ಪ್ರತಿಷ್ಠೆಯಾದ ಉಪ ಚುನಾವಣೆ: ಪೈಲ್ವಾನ್ ಮನವೊಲಿಸಲು ಜಮೀರ್‌ಗೆ ಮುಖ್ಯಮಂತ್ರಿ ಸೂಚನೆ ಮಾಜಿ ಶಾಸಕರ ಪುತ್ರನ ಕೊಲೆ ಪ್ರಕರಣ: ಮಹಿಳೆ ಸೇರಿ ಮೂವರು ಪೊಲೀಸ್ ವಶಕ್ಕೆ ಹೈಕಮಾಂಡ್ ಹೇಳಿದಾಗ ಡಿಕೆಶಿ ಸಿಎಂ: ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಫೋಟಕ ಹೇಳಿಕೆ ಕಾಂಗ್ರೆಸ್ ಮೋಸ ಮಾಡಿದೆ; ನಾಮಪತ್ರ ಹಿಂತೆಗೆಯುವ ಮಾತೇ ಇಲ್ಲ: ತೊಡೆ ತಟ್ಟಿದ ಪೈಲ್ವಾನ್‌ ದಾವಣಗೆರೆ ದಕ್ಷಿಣ: ಬಿಜೆಪಿ ಅಭ್ಯರ್ಥಿಯ ಪತ್ನಿಗೆ ಮುಸ್ಲಿಂ ಮಹಿಳೆಯರಿಂದ ಭವ್ಯ ಸ್ವಾಗತ, ಉಡಿ… ಲ್ಯಾಂಬೊರ್ಗಿನಿ ಕಾರು ಗಿರಿಗಿಟ್ಲೆ ಹೊಡೆಸಿದ ಪ್ರಕರಣ: ಮುತ್ತಪ್ಪ ರೈ ಪುತ್ರ ರಿಕ್ಕಿ ರೈ,… ಮತ್ತೆ ಬಾಬಾ ಬುಡನ್ ಗಿರಿ ದತ್ತಪೀಠ ವಿವಾದ: ಪೂಜಾ-ವಿಧಿ ವಿಧಾನದ ವಿಚಾರದಲ್ಲಿ ಮುಸ್ಲಿಮರ… ದಾವಣಗೆರೆ ದಕ್ಷಿಣ ಬಿಜೆಪಿ ಅಭ್ಯರ್ಥಿ ನಾಮಪತ್ರ ಸಲ್ಲಿಕೆ: ಯಡಿಯೂರಪ್ಪ ನೇತೃತ್ವದಲ್ಲಿ ಬೃಹತ್‌ ರೋಡ್‌… ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣ: ಮರುತನಿಖೆ ಕೋರಿ ಸಲ್ಲಿಸಿದ ಮೇಲ್ಮನವಿ ಸುಪ್ರೀಂ ಕೋರ್ಟ್…

ಇತ್ತೀಚಿನ ಸುದ್ದಿ

ವೀರಾಜಪೇಟೆ: ಅನ್ನ ನೀಡಿದ ಸಂಸ್ಥೆಗೆ ಕನ್ನ;  1 ಲಕ್ಷ ರೂ. ದೋಚಿದ ಇಬ್ಬರು ಡೆಲಿವರಿ ಬಾಯ್ ಗಳ ಬಂಧನ

25/06/2022, 12:18

ಮಡಿಕೇರಿ(reporterkarnataka.com):  ಅನ್ನ ನೀಡಿದ ಸಂಸ್ಥೆಗೆ ಕನ್ನ ಹಾಕಲು ಹೋಗಿ ಇಬ್ಬರು ಆರೋಪಿಗಳು ಪೊಲೀಸ್ ಅತಿಥಿಯಾದ ಘಟನೆ ವೀರಾಜಪೇಟೆ ನಗರದ ಮಲಬಾರ್ ರಸ್ತೆಯಲ್ಲಿ ನಡೆದಿದೆ.

ವೆಬ್ ಸಿರೀಸ್ ನಲ್ಲಿ ಬರುವ ಸೀರಿಯಲ್ ಗಳನ್ನು ವೀಕ್ಷಿಸಿ ಅದೇ ತಂತ್ರವನ್ನು ಬಳಸಿ ನಗದು ಕಳ್ಳತನ ಮಾಡಲು ಹೊರಟು ವೀರಾಜಪೇಟೆ ತಾಲೂಕು ಬೇಟೋಳಿ ಗ್ರಾಮದ ಹೆಗ್ಗಳ ನಿರ್ಮಲಗಿರಿ ಗ್ರಾಮದ ನಿವಾಸಿ ಎಸ್. ಸಿವಿನ್  (೨೦)  ಮತ್ತು ಸೆಬಾಸ್ಟೀನ್ ಡಿಸೋಜಾ (೨೦) ಬಂಧನಕ್ಕೀಡಾಗಿದ್ದಾರೆ.

ಘಟನೆಯ ವಿವರ: ವಿರಾಜಪೇಟೆ ನಗರದ ಮಲಬಾರ್ ರಸ್ತೆಯಲ್ಲಿರುವ ಇನ್ಪಾಕಾರ್ಟ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯಲ್ಲಿ 12ರಂದು ರಾತ್ರಿ ನಗದು ಕಳ್ಳತನ ನಡೆದಿತ್ತು. ಬಂಧಿತ ಇಬ್ಬರು ಆರೋಪಿಗಳು  ಬಡ ಕುಟುಂಬದಿಂದ ಬಂದಿರುವರಾಗಿದ್ದಾರೆ. ಕೆಲಸ ಅರಿಸಿಕೊಂಡಿರುವ ವೇಳೆಯಲ್ಲಿ ಸಂಸ್ಥೆಯಲ್ಲಿ ಡೆಲೆವರಿ ಬಾಯ್ ಗಳಾಗಿ ಕೆಲಸಕ್ಕೆ ಸೇರಿಕೊಂಡಿದ್ದರು.

ಮೊದಲಿಗೆ ಪ್ರಕರಣದ ಎರಡನೇ ಆರೋಪಿಯಾಗಿರುವ ಸೆಬಾಸ್ಟೀನ್ ಕೆಲಸ ಗಿಟ್ಟಿಸಿಕೊಳ್ಳುತ್ತಾನೆ. ನಂತರ ಸ್ನೇಹಿತನಾದ ಸಿವಿನ್ ಕೆಲಸಕ್ಕೆ ಸೇರ್ಪಡೆಯಾಗುತ್ತಾನೆ. ಒಂದೇ ಊರಿನವರಾದ ಇರ್ವರು ಸೇವೆಯಲ್ಲಿ ಮುಂದುವರೆಯುತ್ತಾರೆ. ಸಿವಿನ್ ಗೆ ಮೋಬೈಲ್ ನಲ್ಲಿ ಬರುವ  ಮನಿ ಹ್ಯಾಕ್ ವೆಬ್ ಸಿರೀಸ್ ನೋಡುವ ಹುಚ್ಚು ತೆಲೆಗೇರುತ್ತದೆ. ಸಿರೀಸ್ ನಿಂದ ಪ್ರಭಾವಿತನಾದ ಸಿವಿನ್ ತನ್ನ ಮಿತ್ರನಿಗೂ ತಿಳಿಸಿಕೊಡುತ್ತಾನೆ. ನಂತರದಲ್ಲಿ ಫ್ರೀ ಪ್ಲೇನ್ ಸಿದ್ದವಾಗುತ್ತದೆ. ದಿನ ನಿತ್ಯ ಸಂಸ್ಥೆಗೆ ಲಕ್ಷದ ವ್ಯವಹಾರ ನಡೆಯುತ್ತಿದೆ. ಹೇಗಾದರು ಮಾಡಿ ಹಣ ಲಪಾಟಯಿಸಬೇಕು ಎಂದು ಇರ್ವರ ಪ್ಲಾನ್ ಹಾಕುತ್ತಾರೆ. ಅದರಂತೆ ಸಂಸ್ಥೆಗೆ ಸೇರಿದ ಸುಮಾರು 1 ಲಕ್ಷ ರೂ. ಲಪಟಾಯಿಸಿದ್ದರು ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.

ಇತ್ತೀಚಿನ ಸುದ್ದಿ

ಜಾಹೀರಾತು