4:29 AM Sunday16 - August 2026
ಬ್ರೇಕಿಂಗ್ ನ್ಯೂಸ್
ಭಾಗಮಂಡಲಕ್ಕೆ ಮಳೆ ನಡುವೆಯೇ ಬಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜಿಲ್ಲಾ ಉಸ್ತುವಾರಿ ಸಚಿವ ಜವಾಬ್ದಾರಿ ಬೇಡ: ದಿಢೀರನೇ ಸಿಎಂ ಡಿಕೆಶಿಗೆ ಸಚಿವ ಜಮೀರ್… ಕಾವಳಪಡೂರು: ನಿಷೇಧಿತ ಎಂಡಿಎಂಎ ಸೇರಿದಂತೆ 4.90 ಲಕ್ಷ ಮೌಲ್ಯದ ಮೌಲ್ಯದ ಸೊತ್ತು ವಶ;… ಎಚ್‌ಡಿಕೆ ದೊಡ್ಡ ನಾಟಕರತ್ನ: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಶಾಸಕ ಪ್ರದೀಪ್ ಈಶ್ವರ್… ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಗಸ್ಟ್ 16ರಂದು ಕೊಡಗಿಗೆ ಭೇಟಿ: ತಲಕಾವೇರಿಯಲ್ಲಿ ಪೂಜೆ ಸಲ್ಲಿಕೆ ಯು.ಟಿ. ಖಾದರ್‌ಗೆ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆ ಹೆಚ್ಚುವರಿ ಖಾತೆ… Surathkal | ಸುರತ್ಕಲ್ : ಶೀಟ್ ಅಳವಡಿಸುವ ಸಂದರ್ಭ ವಿದ್ಯುತ್ ತಂತಿ ಸ್ಪರ್ಶಿಸಿ… ಆಗುಂಬೆ | ಚಲಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ ನಿಂದ ಕಳಚಿ ಬಿದ್ದ ಟಯರ್ :… Maravoor | ಮರವೂರಿನ ಹೋಟೆಲ್‌ನಲ್ಲಿ ಕೇರಳದ ಕಾಸರಗೋಡು ಮೂಲದ 24 ವರ್ಷದ ಯುವಕ… ತೊಕ್ಕೊಟ್ಟು | ಬಾರ್ ಮುಂಭಾಗ ತಲವಾರು ಝಳಪಿಸಿ ದಾಂಧಲೆ ; ರೌಡಿ ಶೀಟರ್…

ಇತ್ತೀಚಿನ ಸುದ್ದಿ

ವೀರಾಜಪೇಟೆ: ಅನ್ನ ನೀಡಿದ ಸಂಸ್ಥೆಗೆ ಕನ್ನ;  1 ಲಕ್ಷ ರೂ. ದೋಚಿದ ಇಬ್ಬರು ಡೆಲಿವರಿ ಬಾಯ್ ಗಳ ಬಂಧನ

25/06/2022, 12:18

ಮಡಿಕೇರಿ(reporterkarnataka.com):  ಅನ್ನ ನೀಡಿದ ಸಂಸ್ಥೆಗೆ ಕನ್ನ ಹಾಕಲು ಹೋಗಿ ಇಬ್ಬರು ಆರೋಪಿಗಳು ಪೊಲೀಸ್ ಅತಿಥಿಯಾದ ಘಟನೆ ವೀರಾಜಪೇಟೆ ನಗರದ ಮಲಬಾರ್ ರಸ್ತೆಯಲ್ಲಿ ನಡೆದಿದೆ.

ವೆಬ್ ಸಿರೀಸ್ ನಲ್ಲಿ ಬರುವ ಸೀರಿಯಲ್ ಗಳನ್ನು ವೀಕ್ಷಿಸಿ ಅದೇ ತಂತ್ರವನ್ನು ಬಳಸಿ ನಗದು ಕಳ್ಳತನ ಮಾಡಲು ಹೊರಟು ವೀರಾಜಪೇಟೆ ತಾಲೂಕು ಬೇಟೋಳಿ ಗ್ರಾಮದ ಹೆಗ್ಗಳ ನಿರ್ಮಲಗಿರಿ ಗ್ರಾಮದ ನಿವಾಸಿ ಎಸ್. ಸಿವಿನ್  (೨೦)  ಮತ್ತು ಸೆಬಾಸ್ಟೀನ್ ಡಿಸೋಜಾ (೨೦) ಬಂಧನಕ್ಕೀಡಾಗಿದ್ದಾರೆ.

ಘಟನೆಯ ವಿವರ: ವಿರಾಜಪೇಟೆ ನಗರದ ಮಲಬಾರ್ ರಸ್ತೆಯಲ್ಲಿರುವ ಇನ್ಪಾಕಾರ್ಟ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯಲ್ಲಿ 12ರಂದು ರಾತ್ರಿ ನಗದು ಕಳ್ಳತನ ನಡೆದಿತ್ತು. ಬಂಧಿತ ಇಬ್ಬರು ಆರೋಪಿಗಳು  ಬಡ ಕುಟುಂಬದಿಂದ ಬಂದಿರುವರಾಗಿದ್ದಾರೆ. ಕೆಲಸ ಅರಿಸಿಕೊಂಡಿರುವ ವೇಳೆಯಲ್ಲಿ ಸಂಸ್ಥೆಯಲ್ಲಿ ಡೆಲೆವರಿ ಬಾಯ್ ಗಳಾಗಿ ಕೆಲಸಕ್ಕೆ ಸೇರಿಕೊಂಡಿದ್ದರು.

ಮೊದಲಿಗೆ ಪ್ರಕರಣದ ಎರಡನೇ ಆರೋಪಿಯಾಗಿರುವ ಸೆಬಾಸ್ಟೀನ್ ಕೆಲಸ ಗಿಟ್ಟಿಸಿಕೊಳ್ಳುತ್ತಾನೆ. ನಂತರ ಸ್ನೇಹಿತನಾದ ಸಿವಿನ್ ಕೆಲಸಕ್ಕೆ ಸೇರ್ಪಡೆಯಾಗುತ್ತಾನೆ. ಒಂದೇ ಊರಿನವರಾದ ಇರ್ವರು ಸೇವೆಯಲ್ಲಿ ಮುಂದುವರೆಯುತ್ತಾರೆ. ಸಿವಿನ್ ಗೆ ಮೋಬೈಲ್ ನಲ್ಲಿ ಬರುವ  ಮನಿ ಹ್ಯಾಕ್ ವೆಬ್ ಸಿರೀಸ್ ನೋಡುವ ಹುಚ್ಚು ತೆಲೆಗೇರುತ್ತದೆ. ಸಿರೀಸ್ ನಿಂದ ಪ್ರಭಾವಿತನಾದ ಸಿವಿನ್ ತನ್ನ ಮಿತ್ರನಿಗೂ ತಿಳಿಸಿಕೊಡುತ್ತಾನೆ. ನಂತರದಲ್ಲಿ ಫ್ರೀ ಪ್ಲೇನ್ ಸಿದ್ದವಾಗುತ್ತದೆ. ದಿನ ನಿತ್ಯ ಸಂಸ್ಥೆಗೆ ಲಕ್ಷದ ವ್ಯವಹಾರ ನಡೆಯುತ್ತಿದೆ. ಹೇಗಾದರು ಮಾಡಿ ಹಣ ಲಪಾಟಯಿಸಬೇಕು ಎಂದು ಇರ್ವರ ಪ್ಲಾನ್ ಹಾಕುತ್ತಾರೆ. ಅದರಂತೆ ಸಂಸ್ಥೆಗೆ ಸೇರಿದ ಸುಮಾರು 1 ಲಕ್ಷ ರೂ. ಲಪಟಾಯಿಸಿದ್ದರು ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.

ಇತ್ತೀಚಿನ ಸುದ್ದಿ

ಜಾಹೀರಾತು