ಇತ್ತೀಚಿನ ಸುದ್ದಿ
ಕಾರ್ಕಳ: ಮಾನಸಿಕ ಅಸ್ವಸ್ಥತೆ; ನೇಣು ಬಿಗಿದು ವೃದ್ಧ ಆತ್ಮಹತ್ಯೆ
09/05/2022, 15:07
ಕಾರ್ಕಳ(reporterkarnataka.com) : ಮಾನಸಿಕವಾಗಿ ಕಾಯಿಲೆಯಿಂದ ಬಳಲುತಿದ್ದ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾರ್ಕಳ ತಾಲೂಕಿನ ಮಿಯ್ಯಾರು ಆ ರ್ಪದೆ ಎಂಬಲ್ಲಿ ನಡೆದಿದೆ .
ಜೇಮ್ಸ್ ಗೋರಿಯಸ್ (77) ಆತ್ಮಹತ್ಯೆ ಮಾಡಿಕೊಂಡವರು.
ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದು ಅಲ್ಲದೇ ಅವರ ಹೆಂಡತಿ ಮತ್ತು ಮಗಳು ದೂರದ ಊರಿನಲ್ಲಿ ಇರುವುದರಿಂದ ಮನನೊಂದು ವಾಸವಾಗಿರುವ ಮನೆ ಬಳಿ ಹಿಂದುಗಡೆ ಇರುವ ಶೆಡ್ಡಿಗೆ ಅಳವಡಿಸಿದ ಕಬ್ಬಿಣದ ಜಂತಿಗೆ ನೈಲಾನ್ ಹಗ್ಗದಿಂದ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.














