ಇತ್ತೀಚಿನ ಸುದ್ದಿ
ಜಪ್ಪಿನಮೊಗರು ವಾರ್ಡ್: ರಾಜಕಾಲುವೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ವೇದವ್ಯಾಸ್ ಕಾಮತ್ ಭೂಮಿಪೂಜೆ
05/04/2022, 21:35

ಮಂಗಳೂರು(reporterkarnataka.com): ಮಳೆಗಾಲದ ಸಂದರ್ಭದಲ್ಲಿ ರಾಜಕಾಲುವೆಗಳಲ್ಲಿ ನೀರು ಉಕ್ಕಿ ಸಾರ್ವಜನಿಕರಿಗೆ ಸಮಸ್ಯೆಯಾಗುವ ಕಡೆಗಳಲ್ಲಿ ರಾಜಕಾಲುವೆಗಳ ಇಕ್ಕೆಲಗಳನ್ನು ಅಭಿವೃದ್ಧಿಪಡಿಸಿ ಸಮಸ್ಯೆ ಪರಿಹರಿಸುವ ಕಾರ್ಯ ನಡೆಯುತ್ತಿದೆ ಎಂದು ಶಾಸಕ ಡಿ. ವೇದವ್ಯಾಸ ಕಾಮತ್ ಹೇಳಿದರು.
ಮಂಗಳೂರು ಮಹಾನಗರ ಪಾಲಿಕೆಯ ಜಪ್ಪಿನಮೊಗರು ವಾರ್ಡಿನ ಎಕ್ಕೂರಿನ ರಾಜಕಾಲುವೆಯ ಆಯ್ದ ಭಾಗಗಳಲ್ಲಿ ಅಭಿವೃದ್ಧಿ ಕಾಮಗಾರಿಗೆ ಶಾಸಕ ವೇದವ್ಯಾಸ್ ಕಾಮತ್ ಅವರು ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ನಗರದಲ್ಲಿರುವ ರಾಜಕಾಲುವೆಗಳ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದ್ದು ಅದರಂತೆ ಎಕ್ಕೂರು ರಾಜಕಾಲುವೆಯ ಆಯ್ದ ಭಾಗಗಳನ್ನು ಅಭಿವೃದ್ಧಿಪಡಿಸಲು 1.25 ಕೋಟಿ ಅನುದಾನ ಬಿಡುಗಡೆಗೊಳಿಸಲಾಗಿದೆ ಎಂದು ಶಾಸಕ ಕಾಮತ್ ನುಡಿದರು.
ಈ ಸಂದರ್ಭದಲ್ಲಿ ಕಾರ್ಪೊರೇಟರ್ ವೀಣಾ ಮಂಗಳ, ಪಾಲಿಕೆ ನಾಮನಿರ್ದೇಶಿತ ಸದಸ್ಯರಾದ ಭಾಸ್ಕರ್ ಚಂದ್ರ ಶೆಟ್ಟಿ, ರಮೇಶ್ ಕಂಡೆಟ್ಟು, ಪ್ರಮುಖರಾದ ರಾಮಪ್ರಸಾದ್ ಶೆಟ್ಟಿ, ಸಂದೇಶ ಶೆಟ್ಟಿ, ನವೀನ್ ಕೊಟ್ಟಾರಿ, ಪುಷ್ಪರಾಜ್, ದೀಪಕ್, ಸುಜಾತ ಕೊಟ್ಟಾರಿ, ಜನಾರ್ದನ್, ನಾಗೇಶ್, ರಾಘವೇಂದ್ರ, ರಾಜೇಂದ್ರ, ಶಿವಾನಂದ, ಲಿಲ್ಲಿ ವಿನ್ಸೆಂಟ್ ಡಿಸೋಜಾ, ಸುಜಾತ, ರೇಣುಕಾ ಶೆಟ್ಟಿ, ಪ್ರಶಾಂತ್, ರಾಜು, ಯಶೋಧರ್ ಚೌಟ, ಕಿರಣ್ ರೈ, ರವಿ ಎಕ್ಕೂರ್, ಪ್ರವೀಣ್ ಕುಮಾರ್, ಸುಜಾತ, ಸುಂದರ, ಮೀನಾಕ್ಷಿ, ಯೋಗೇಶ್, ನಾಗೇಶ್ ಎಕ್ಕೂರ್, ಬಚ್ಚನ್ನ, ಕಿಶೋರ್, ಸಂಧ್ಯಾರಾಣಿ, ಸೂರಜ್, ದೀಕ್ಷಾ ರಾವ್ ಮುಂತಾದವರು ಉಪಸ್ಥಿತರಿದ್ದರು