6:36 AM Tuesday16 - December 2025
ಬ್ರೇಕಿಂಗ್ ನ್ಯೂಸ್
Belagavi | ಶ್ಯಾಮನೂರು ಶಿವಶಂಕರಪ್ಪ ಅವರ ನಿಧನಕ್ಕೆ ಸದನದಲ್ಲಿ ಮುಖ್ಯಮಂತ್ರಿ ಸಂತಾಪ ಓಟ್ ಚೋರಿ ಸುಳ್ಳನ್ನು ಸತ್ಯ ಮಾಡಲು ಕಾಂಗ್ರೆಸ್ ಯತ್ನ: ಬಸವರಾಜ ಬೊಮ್ಮಾಯಿ ಆರೋಪ ಸರಪಾಡಿ: ಅಕ್ರಮ ಗೋಸಾಗಾಟ ಪ್ರಕರಣ; ಆರೋಪಿಯ ಮನೆ, ಕೊಟ್ಟಿಗೆ ಜಫ್ತಿ ತಪ್ಪು ಕಲ್ಪನೆಯಿಂದ ಬೆಡ್ತಿ ವರದಾ ನದಿ ಜೋಡಣೆಗೆ ವಿರೋಧ ಬೇಡ: ಮಾಜಿ ಸಿಎಂ… ಸಂವಿಧಾನ ಪ್ರತಿ ಹಿಡಿದು ಈಗದನ್ನೇ ಗಾಳಿಗೆ ತೂರುತ್ತಿದ್ದಾರೆ; ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ… ಮಹಿಳೆಯರು ಅನ್ಯಾಯದ ವಿರುದ್ದ ಕಿತ್ತೂರು ಚೆನ್ನಮ್ಮ, ದುರ್ಗಾದೇವಿ ಆಗಬೇಕು: ಮಾಜಿ ಸಿಎಂ ಬಸವರಾಜ… ಮಡಿಕೇರಿ ಆಂಟಿ ಹನಿಟ್ರ್ಯಾಪ್ ಗೆ ಸಿಕ್ಕಿಬಿದ್ದ ಮಂಡ್ಯದ ಯುವಕ: ರಾತ್ರಿಯಿಡೀ ಗೂಸಾ; ಹಣ್ಣಕ್ಕೆ… ಮಡಿಕೇರಿಯಲ್ಲಿ ಆಂಧ್ರದ ನಕಲಿ ಪೊಲೀಸರ ಓಡಾಟ: ಪ್ರಕರಣ ದಾಖಲು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಿಭಜನೆಗೆ ಕ್ರಮ: ವಿಧಾನ ಸಭೆಯಲ್ಲಿ ಸಚಿವ ಬಿ.ಎಸ್.ಸುರೇಶ್ ದ್ವೇಷ ಭಾಷಣಕ್ಕೆ 10 ವರ್ಷ ಜೈಲು ಶಾಸನ ಕಾಂಗ್ರೆಸ್ ನ ಕ್ರೂರ ಸಂಪ್ರದಾಯದ…

ಇತ್ತೀಚಿನ ಸುದ್ದಿ

ನೀ ಸದಾ ನನ್ನವನು’: ಪತಿಯ ನೆನಪು ಹಂಚಿಕೊಂಡು ನಟಿ ಮೇಘನಾ; ಇಂದು ಚಿರು ಪ್ರಥಮ ಪುಣ್ಯತಿಥಿ

07/06/2021, 09:14

ಕೃಷ್ಣಪ್ರಿಯಾ ನೆಲಮಂಗಲ ಬೆಂಗಳೂರು

info.reporterkarnataka@gmail.com

‘ನೀ ಸದಾ ನನ್ನವನು’ ಪತಿ ಜತೆಗಿನ ಫೋಟೋ ಹಂಚಿಕೊಂಡಿರುವ ನಟಿ ಮೇಘನಾ ರಾಜ್ ನೀಡಿರುವ ಸಂದೇಶ ಇದು. ಮಗನ ನೆನಪಿನಲ್ಲಿ ಸರ್ಕಾರದ ಕುಟುಂಬ ಸಂದೇಶ ಹಂಚಿಕೊಂಡು ಬೆನ್ನಲ್ಲೇ ಮೇಘನಾರ ಭಾವುಕ ಸಂದೇಶ ಹೊರಬಿದ್ದಿದೆ.

ನಟ, ಯುವ ಹೃದಯಗಳ ಸಾಮ್ರಾಟ ಚಿರಂಜೀವಿ ಸರ್ಜಾ ನಮ್ಮನ್ನೆಲ್ಲ ಅಗಲಿ ಇಂದಿಗೆ ಒಂದು ವರ್ಷ ತುಂಬುತ್ತಿದೆ.  ಚಿರು ಮೊದಲ ಪುಣ್ಯತಿಥಿ ಇಂದು ನಡೆಯಲಿದೆ. 

ಚಿರಂಜೀವಿ ಸರ್ಕಾರದ ಅವರು 2020 ರ ಜೂನ್ 7 ರಂದು ತೀವ್ರ ಹೃದಯಾಘಾತದಿಂದ ನಿಧನರಾಗಿದ್ದರು. ಆರೋಗ್ಯವಾಗಿ ಮನೆಯಲ್ಲಿದ್ದ ಚಿರು, ದೀಢೀರ್ ಹೃದಯಾಘಾತಕ್ಕೆ ಒಳಗಾಗಿ ಅವರ ಕುಟುಂಬವನ್ನು ಮಾತ್ರವಲ್ಲದೆ ಇಡೀ ಕನ್ನಡ ಚಿತ್ರರಂಗವನ್ನು ಕಣ್ಣೀರ ಕಡಲಿನಲ್ಲಿ ಮುಳುಗಿಸಿತ್ತು. 

ಗರ್ಭೀಣಿಯಾಗಿದ್ದ ಮೇಘನಾ ರಾಜ್ ಅಕ್ಟೋಬರ್ ನಲ್ಲಿ ಗಂಡು ಮಗುವಿಗೆ ಜನ್ಮನೀಡಿದ್ದರು.

ಚಿರು ಎಲ್ಲೂ ಹೋಗಿಲ್ಲ. ಮಗನ ರೂಪದಲ್ಲಿ ನನ್ನೊಂದಿಗೆ ಇದ್ದಾರೆ. ಅವರ ಕನಸಿನಂತೆ ಜ್ಯೂನಿಯರ್ ಚಿರುವನ್ನು ಬೆಳೆಸುತ್ತೇನೆ ಎಂದು ಮಗನ ತೊಟ್ಟಿಲ ಶಾಸ್ತ್ರದ ವೇಳೆ ಭಾವುಕರಾಗಿ ಮಾಧ್ಯಮಗಳ ಜೊತೆ ಮೇಘನಾ ಹೇಳಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು