3:09 AM Wednesday22 - April 2026
ಬ್ರೇಕಿಂಗ್ ನ್ಯೂಸ್
ಪ್ರಧಾನಿ ಮೋದಿಗೆ ಭಯೋತ್ಪಾದಕ ಎಂದು ನಿಂದನೆ: ಎಐಸಿಸಿ ಅಧ್ಯಕ್ಷ ಖರ್ಗೆಗೆ ಚುನಾವಣಾ ಆಯೋಗ… ಚಾಮರಾಜನಗರ | ಮಲೆ ಮಹದೇಶ್ವರ ವನ್ಯಜೀವಿ ಧಾಮದ ದಟ್ಟ ಕಾಡಿನಲ್ಲಿ ಮಾನವನ ಅಸ್ಥಿಪಂಜರ… ಅಮಾನತು ಅಂತ್ಯವಲ್ಲ, ಅಬ್ದುಲ್ ಜಬ್ಬಾರ್‌ಗೆ ಇನ್ನೂ ಅವಕಾಶ ಇದೆ: ಸಚಿವ ದಿನೇಶ್ ಗುಂಡೂರಾವ್ ವರ್ಗಾವಣೆ ಆದೇಶವಿದ್ದರೂ ಪೊಲೀಸ್ ಕಮಿಷನರ್ ಕರ್ತವ್ಯದಿಂದ ಬಿಡುಗಡೆಗೊಳಿಸಿಲ್ಲ: ಮಂಗಳೂರಿನಲ್ಲಿ ಪೊಲೀಸ್ ಮಹಾ ನಿರ್ದೇಶಕ… ಕೊಡಗಿನ ಹೋಂಸ್ಟೇಯಲ್ಲಿ ವಿದೇಶಿ ಮಹಿಳೆಗೆ ಲೈಂಗಿಕ ಕಿರುಕುಳ ಆರೋಪ: ಮಾಲೀಕ ಸೇರಿ ಇಬ್ಬರ… ಇಡಿ ದಾಳಿಗೂ ತಂದೆ ಹ್ಯಾರಿಸ್ ಗೂ ಯಾವುದೇ ಸಂಬಂಧವಿಲ್ಲ; ನಾನೊಬ್ಬ ಒಳ್ಳೆಯ ಮಗನಾಗಲು… ಕಳಸ: ಕಾಫಿ ತೋಟದ ಕಾರ್ಮಿಕರ ಮಕ್ಕಳ ಮೇಲೆ ಸಾಕು ನಾಯಿಗಳ ದಾಳಿ; ಓರ್ವ… ಪ್ರಧಾನಿ ಮೋದಿ ಜತೆ ಗುಟ್ಟಾಗಿ ಮಾತನಾಡಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಇಡಿ ಶಾಕ್: ಶಾಸಕ ಹ್ಯಾರಿಸ್, ನಲಪಾಡ್ ನಿವಾಸ ಸೇರಿ 17… ಚಿರತೆಯಿಂದ ಅತ್ತೆಯ ಕಾಪಾಡಿದ ಸೊಸೆಗೆ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ: ಸಚಿವ ಲಕ್ಷ್ಮಿ…

ಇತ್ತೀಚಿನ ಸುದ್ದಿ

ಇಂಧನ ಇಲಾಖೆಯಲ್ಲಿ ವಿದ್ಯುತ್ ಚಾಲಿತ ವಾಹನ ಬಳಕೆಗೆ ಚಿಂತನೆ: PIAGGIO ಸಂಸ್ಥೆಯ ವಿದ್ಯುತ್ ಚಾಲಿತ‌ ತ್ರಿಚಕ್ರ ವಾಹನ‌ ಶೋ ರೂಂ ಉದ್ಘಾಟಿಸಿ ಸಚಿವ ಸುನಿಲ್ 

16/10/2021, 18:43

ಮಂಗಳೂರು(reporterkarnataka.com): ರಾಜ್ಯ ಸರಕಾರದ ಇಂಧನ ಇಲಾಖೆಯಲ್ಲಿ ಬಳಕೆ ಮಾಡುತ್ತಿರುವ ಸರ್ಕಾರಿ ವಾಹನಗಳು‌ ವಿದ್ಯುತ್ ಚಾಲಿತ ವಾಹನಗಳಾಗಬೇಕು‌ ಎನ್ನುವ ಚಿಂತನೆಯಿದೆ ಎಂದು ಇಂಧನ ಸಚಿವ ವಿ‌. ಸುನಿಲ್‌ ಕುಮಾರ್ ಹೇಳಿದರು.

ಅವರು ಶನಿವಾರ ನಗರದ ಪಂಪ್ ವೆಲ್ ಬಳಿ ನೂತನ PIAGGIO ಸಂಸ್ಥೆಯ ವಿದ್ಯುತ್ ಚಾಲಿತ‌ ತ್ರಿಚಕ್ರ ವಾಹನ‌ ಶೋ ರೂಂ ಉದ್ಘಾಟಿಸಿ ಮಾತನಾಡಿದರು.

ಇಂದು‌ ದೇಶಾದ್ಯಂತ ವಿದ್ಯುತ್ ‌ಚಾಲಿತ ವಾಹನ‌ಗಳ‌ ಬೇಡಿಕೆ ಹೆಚ್ಚಾಗುತ್ತಿದೆ. ಸರ್ಕಾರವೂ ಕೂಡ ಎಲ್ಲ ಹಂತದಲ್ಲಿ ವಿದ್ಯುತ್ ಚಾಲಿತ ವಾಹಗಳಿಗೆ ಹೆಚ್ಚಿನ ಒತ್ತು‌ ನೀಡುತ್ತಿದೆ‌ ಎಂದರು. ಪೆಟ್ರೋಲ್ ಹಾಗೂ ಡೀಸಲ್ ವಾಹನಗಳಿಂದಾಗಿ ವಾಯು ಮಾಲಿನ್ಯ, ಶಬ್ದ ಮಾಲಿನ್ಯ ಹಾಗೂ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ‌, ಬೆಲೆಯೂ ಹೆಚ್ಚು ಎನ್ನು‌ವ ಕೂಗುಗಳು ಕೇಳಿ ಬರುತ್ತವೆ. ಹೀಗಿರುವಾಗ ವಿದ್ಯುತ್ ಚಾಲಿತ ವಾಹನಗಳು ಇಂದಿನ ದಿನಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಮಾರುಕಟ್ಟೆಗೆ ಬರುತ್ತಿದೆ.

ಇಂಧನ ಇಲಾಖೆ‌ ವಹಿಸಿಕೊಂಡ‌ ನಂತರ ವಿದ್ಯುತ್ ಚಾಲಿತ ವಾಹನ ತಯಾರಕ ಕಂಪನಿಗಳ‌ ಸಭೆ‌ ನಡೆಸಲಾಗಿತ್ತು. ವಿದ್ಯುತ್ ಚಾಲಿತ ವಾಹನಗಳು ಮುನ್ನಲೆಗೆ ಬರಬೇಕು, ಜನರು ಹೆಚ್ಚು ಆಕರ್ಷಿತರಾಗಬೇಕು. ಇಂದಿನ‌ ವ್ಯವಸ್ಥೆಯಿಂದ‌ ಸುಧಾರಣೆ ಹೊಂದಬೇಕೆಂದು.  ಪೆಟ್ರೋಲ್‌, ಡೀಸಲ್ ವಾಹನಗಳಿಂದ ವಿದ್ಯುತ್ ಚಾಲಿತ ವಾಹನಗಳ‌ ಕಡೆ‌ ಮುಖ ಮಾಡೋದು ಸುಧಾರಣೆಯ ಒಂದು ಭಾಗ, ಜನರು ಬದಲಾವಣೆ ಕಡೆಗೆ ಹೆಜ್ಜೆಯನ್ನ‌ ಇಡಬೇಕು ಎಂದರು.

ವಿದ್ಯುತ್ ಚಾಲಿತ ವಾಹನಗಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ೨೦-೪೦% ಸಬ್ಸಿಡಿ ನೀಡಲಾಗುತ್ತಿದೆ. ತ್ರಿಚಕ್ರ ವಾಹನಗಳಿಗೆ ಸುಮಾರು 60 ಸಾವಿರ ರೂ. ಸಬ್ಸಿಡಿ‌ ದೊರೆಯುವುದರಿಂದ ಗ್ರಾಹಕರಿಗೆ‌‌ ಹೆಚ್ಚಿನ‌ ಅನುಕೂಲವಾಗಲಿದೆ ಎಂದು‌ ಸಚಿವರು ಅಭಿಪ್ರಾಯ ಪಟ್ಟರು. 

ಇನ್ನು‌ ಇಲಾಖೆ ರಾಜ್ಯದ ವಿವಿಧ ಭಾಗಗಳಲ್ಲಿ ಒಂದು ಸಾವಿರ ವಿದ್ಯುತ್ ವಾಹನ‌ ಚಾರ್ಜಿಂಗ್ ಕೇಂದ್ರ ನಿರ್ಮಿಸಲು ಯೋಜನೆ ರೂಪಿಸಲಾಗಿದೆ ಎಂದರು.


ವಾಹನಗಳ ವಿಚಾರದಲ್ಲಿ ವಿದ್ಯುತ್ ವಾಹನಗಳು‌ ಮುಂದಿನ‌ ಭವಿಷ್ಯ,ಹಾಗಾಗಿ ಆ ನಿಟ್ಟಿನಲ್ಲಿ ಆಲೋಚನೆ‌ ಮಾಡಬೇಕಿದೆ. ವಿದ್ಯುತ್ ಚಾಲಿತ ವಾಹನಗಳ‌ ಬಳಕೆಗೆ ಉತ್ತೇಜನ‌ ಇಂಧನ ಇಲಾಖೆಯಿಂದಲೇ‌ ಆರಂಭವಾಗಲೆಂದು, ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಬಳಸುವ ಸರ್ಕಾರಿ ವಾಹನಗಳು ವಿದ್ಯುತ್ ಚಾಲಿತ ವಾಹನಗಳಾಗಬೇಕು ಎನ್ನುವ ಚಿಂತನೆ‌ ಇದೆ ಎಂದು ಅವರು ಹೇಳಿದರು.

ಇತ್ತೀಚಿನ ಸುದ್ದಿ

ಜಾಹೀರಾತು