4:10 AM Tuesday8 - July 2025
ಬ್ರೇಕಿಂಗ್ ನ್ಯೂಸ್
ಪುನರ್ವಸು ಮಳೆ ಅಬ್ಬರ: ಕೊಚ್ಚಿ ಹೋಗುವ ಭೀತಿಯಲ್ಲಿ ತೀರ್ಥಹಳ್ಳಿಯ ಕುನ್ನಿಕೇವಿ ಸೇತುವೆ! ತುಂಗಾ ಕಮಾನು ಸೇತುವೆ ಮೇಲೆ ಹರಿಯುತ್ತಿದೆ ನೀರು!: ಹೆದ್ದಾರಿ ಇಂಜಿನಿಯರ್ ಗಳ ಅದ್ಬುತ… ಶೈಕ್ಷಣಿಕ ಧನ ಸಹಾಯ ಪಾವತಿಸಲು ಆಗ್ರಹಿಸಿ ಜುಲೈ 9ರಂದು ಕಟ್ಟಡ ಕಾರ್ಮಿಕರ ರಾಜ್ಯವ್ಯಾಪಿ… Kodagu | 19 ವರ್ಷದಲ್ಲಿ ದಾಖಲೆ ಸೃಷ್ಟಿಸಿದ ಹಾರಂಗಿ ಡ್ಯಾಮ್: ಜಲಾಶಯಕ್ಕೆ ಹರಿದು… Madikeri | ಕೊಡಗಿನಲ್ಲಿ ವ್ಯಾಪಕ ಅಬ್ಬರದ ಬಿರುಗಾಳಿ ಸಹಿತ ಮಳೆ: ಇಂದು ಶಾಲಾ-… ಕಾಫಿನಾಡು ಪ್ರವೇಶಿಸದಂತೆ ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ ವೆಲ್ ಗೆ… Madikeri | ಕೊಡಗು ಜಿಲ್ಲೆ: ಜು. 6ರಿಂದ ಆಗಸ್ಟ್ 5ರ ವರೆಗೆ ಭಾರೀ… ಕೊಡವ ಸಮುದಾಯದಿಂದ ಚಿತ್ರರಂಗಕ್ಕೆ ಬಂದಿದ್ದು ನಾನೊಬ್ಬಳೇ ಎಂದ ರಶ್ಮಿಕಾಳಿಗೆ ಟೀಕೆಗಳ ಸುರಿಮಳೆ! ಮೆಟ್ರೋ ಹಳದಿ ಮಾರ್ಗ ಆಗಸ್ಟ್‌ ನಲ್ಲಿ ಸಾರ್ವಜನಿಕ ಸೇವೆಗೆ ಮುಕ್ತವಾಗದಿದ್ದರೆ ಪ್ರತಿಭಟನೆ: ಸಂಸದ… ವಿದ್ಯುತ್ ಆಘಾತಕ್ಕೆ ಯುವಕ ಬಲಿ: ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ…

ಇತ್ತೀಚಿನ ಸುದ್ದಿ

ಜೆಸಿಐ ಸುರತ್ಕಲ್ ನಿಂದ ಗೋವಿಂದ ದಾಸ ಪಿಯು ಕಾಲೇಜಿನಲ್ಲಿ ನವಗ್ರಹ ವನ ಉದ್ಘಾಟನೆ; ಕ್ಯೂ ಆರ್ ಕೊಡ್ ಅಳವಡಿಕೆ

22/09/2021, 08:47

ಸುರತ್ಕಲ್( reporterkarnataka.com): ಜೆಸಿಐ ಸುರತ್ಕಲ್ ಘಟಕದ ವತಿಯಿಂದ ಆಯೋಜಿಸಿದ ಜೆಸಿಐ ಭಾರತದ ರಾಷ್ಟ್ರೀಯ ಅಧ್ಯಕ್ಷ ರಾಖೀ ಜೈನ್ ಅವರ ಅಧಿಕೃತ ಭೇಟಿಯ ಸಂದರ್ಭದಲ್ಲಿ ಸುರತ್ಕಲ್ ಗೋವಿಂದ ದಾಸ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಔಷಧೀಯ ಸಸ್ಯಗಳು ಉದ್ಯಾನ ಹಾಗೂ ನವಗ್ರಹ ವನದ ಉದ್ಘಾಟನಾ ಸಮಾರಂಭ ನಡೆಯಿತು.


ವನವನ್ನು ಉದ್ಘಾಟಿಸಿ ಜೇಸಿ ರಾಖೀ ಜೈನ್ ಅವರು ಜೆಸಿಐ ಸುರತ್ಕಲ್ ಹಾಗೂ ಕಾಲೇಜಿನ ಬಾಂಧವ್ಯದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿ, ಆರೋಗ್ಯದ ರಕ್ಷಣೆಗಾಗಿ ಔಷಧೀಯ ವನಗಳ ಪ್ರತಿ ಸಂಸ್ಥೆ, ಮನೆಗಳಲ್ಲಿ ಅತ್ಯಗತ್ಯ ಹಾಗೂ ನವಗ್ರಹ ವನದ ಯೋಜನೆಯ ಕುರಿತು ಶ್ಲಾಘಿಸಿದರು. 


ಅಧ್ಯಕ್ಷತೆಯನ್ನು ಜೆಸಿಐ ಸುರತ್ಕಲ್ ಘಟಕದ ಅಧ್ಯಕ್ಷ ಜೇಸಿ ರಾಕೇಶ್ ಹೊಸಬೆಟ್ಟು ವಹಿಸಿದರು. ಜೆಸಿಐ ಭಾರತದ ವಲಯ ಹದಿನೈದರ ವಲಯಾಧ್ಯಕ್ಷ ಜೇಸಿ ಸೌಜನ್ಯ ಹೆಗ್ಡೆ, ಹಿಂದೂ ವಿದ್ಯಾದಾಯಿನಿ ಸಂಘದ ಕಾರ್ಯದರ್ಶಿ ಹೊಸಬೆಟ್ಟು ಶ್ರೀರಂಗ, ಕಾಲೇಜಿನ ಆಡಳಿತಾತ್ಮಕ ನಿರ್ದೇಶಕ ಪ್ರೊ.ವೈ.ವಿ.ರತ್ನಾಕರ ರಾವ್, ಕಾಲೇಜಿನ ಪ್ರಾಂಶುಪಾಲೆ ಲಕ್ಷ್ಮೀ ಪಿ. ಶುಭ ಹಾರೈಸಿದರು. 

ನವಗ್ರಹ ವನದ ಪ್ರತಿ ಸಸಿಗಳ ಫಲಕದಲ್ಲಿ ಕ್ಯೂ ಆರ್ ಕೊಡ್ ಅಳವಡಿಸಲಾಗಿದ್ದು, ಅದನ್ನು ಸ್ಕ್ಯಾನ್ ಮಾಡಿದಲ್ಲಿ ಆ ಸಸ್ಯದ ವಿಶೇಷತೆಗಳು ಸ್ಮಾರ್ಟ್ ಫೋನ್ ನಲ್ಲಿ ಲಾಭ್ಯವಾಗುವುದು. ಈ ಮೂಲಕ ವಿದ್ಯಾರ್ಥಿಗಳಿಗೆ ಸಸ್ಯಗಳ ಮಹತ್ವಗಳ ಬಗ್ಗೆ ಅರಿವು ಮಾಡಿಸಬಹುದು ಎಂದು ಅಧ್ಯಕ್ಷರು ತಿಳಿಸಿದರು.

ಯೋಜನೆಯ ಜವಾಬ್ದಾರಿ ವಹಿಸಿದ ಎಚ್.ವಿ.ಸಂಘದ ಎಂ.ಜಿ.ರಾಮಚಂದ್ರ, ವಿರಾಟ್ ಸಂಸ್ಥೆಯ ಕಾರ್ಯನಿರ್ವಹಣಾ ಅಧಿಕಾರಿ ಸತೀಶ್ ಸದಾನಂದ ಹಾಗೂ ವಿನ್ಯಾಸಕಾರ ಶಿವರಾಂ ಅಮೀನ್ ಅವರನ್ನು ಗೌರವಿಸಲಾಯಿತು.

ಈ ಸಂದರ್ಭದಲ್ಲಿ ವಲಯಾಧಿಕಾರಿಗಳಾದ ಜೇಸಿ ಸತ್ಯನಾರಾಯಣ ಭಟ್, ಜೇಸಿ ಲೋಕೇಶ್ ರೈ, ಜೇಸಿ ಅಬ್ದುಲ್ ಜಬ್ಬಾರ್ ಸಾಹೇಬ್, ಜೇಸಿ ಆಶಾ ಅಲೆನ್, ಜೇಸಿ ದೀಪಕ್ ಗಂಗೂಲಿ, ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಕೃಷ್ಣಮೂರ್ತಿ, ಪದವಿಪೂರ್ವ ಕಾಲೇಜಿನ ಉಪನ್ಯಾಸಕರಾದ ಡಾ. ಚೇತನಾ ಬಿ.ಕೆ, ಪೈಕ ವೆಂಕಟರಮಣ ರಾವ್, ಪಲ್ಲವಿ ರಾಜೇಶ್, ಜಯಂತಿ ಅಮೀನ್, ಜಯಶ್ರೀ, ಜೆಸಿಐ ಸುರತ್ಕಲ್ ಘಟಕದ ಸದಸ್ಯರಾದ ಜೇಸಿ ಚೆನ್ನಕೇಶವ, ಜೇಸಿ ಗುಣವತಿ ರಮೇಶ್, ಜೇಸಿ ವಿನೀತ್ ಶೆಟ್ಟಿ, ಜೇಸಿ ಸುಜೀರ್ ಶೆಟ್ಟಿ, ಜೇಸಿ ರಾಜೇಶ್ವರಿ ಶೆಟ್ಟಿ, ಜೇಸಿ ಜಯರಾಜ್ ಆಚಾರ್ಯ, ಜೇಸಿ ಜ್ಯೋತಿ ಪಿ ಶೆಟ್ಟಿ, ಜೇಸಿ ಭಾರತಿ, ಜೇಸಿ ಜ್ಯೋತಿ ಜೆ ಶೆಟ್ಟಿ,ಜೇಸಿ ಶಶಿಕುಮಾರ್ ಶೆಟ್ಟಿ, ಘಟಕದ ಯುವ ಜೇಸಿ ಸದಸ್ಯೆ ಜೇಜೆಸಿ ಹಿತಾ ಉಮೇಶ್ ಉಪಸ್ಥಿತರಿದ್ದರು. ಘಟಕದ ಕಾರ್ಯದರ್ಶಿ ಜೇಸಿ ನಿತೇಶ್ ಶೆಟ್ಟಿ ವಂದಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು