ಇತ್ತೀಚಿನ ಸುದ್ದಿ
ಬೆಂಗಳೂರು: ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಗಣ್ಯವ್ಯಕ್ತಿಗಳ ಹೆಸರಿನಲ್ಲಿ ರಾಜ್ಯ ಪ್ರಶಸ್ತಿ ಪ್ರದಾನ
22/06/2026, 23:25
ಮುರುಡೇಗೌಡ ಚಳ್ಳಕೆರೆ ಚಿತ್ರದುರ್ಗ
info.reporterkarnataka@gmail.com
ಕೊಪ್ಪಳ ಹಿರೇಮನ್ನಾಪುರ ಸೌರಭ ಸಾಂಸ್ಕೃತಿಕ ಕಲಾ ಬಳಗದ ವತಿಯಿಂದ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಆರು ಗಣ್ಯ ವ್ಯಕ್ತಿಗಳ ಹೆಸರಿನಲ್ಲಿ ರಾಜ್ಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಬೆಂಗಳೂರಿನ ಅಕ್ಕ ಮಹಾದೇವಿ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಹೆಸರಿನಲ್ಲಿ ರಚಿತವಾದ ‘ಸಮಾನತೆಯ ಬೆಳಕು’ ಡಾ. ಬಿ. ಆರ್. ಅಂಬೇಡ್ಕರ್ ಅವರ ನಡೆದ ಹಾದಿ ನುಡಿದ ಕವಿತೆ ಪುಸ್ತಕ ಬಿಡುಗಡೆ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತು. ಕಾರ್ಯಕ್ರಮದಲ್ಲಿ ಪುಸ್ತಕದ ಲೇಖಕರಾದ ಶಫಿವುಲ್ಲಾ ಅವರಿಗೆ ಗಾನ ಗಂಧರ್ವ ಡಾ.ರಾಜ್ ಕುಮಾರ್ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.



ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ನ್ಯಾಯಾಂಗ ಇಲಾಖೆಯ ನಾಗರಾಜು, ಹಿರಿಯ ಶಿರಸ್ತೇದಾರರಾದ ರವಿ ಕುಮಾರ್, ಶಿರಸ್ತೇದಾರರಾದ ಸುರೇಶ ಕುಮಾರ್, ಶಿರಸ್ತೇದಾರರಾದ ಮಂಜುನಾಥ್ ಬೆಂಗಳೂರು,ಮತ್ತು ಹಜರತ್ ಅಲಿ,ಸಾಹಿತ್ಯಕರಾರು, ಗಾಯಕರು, ಚಲನಚಿತ್ರ ಸಂಗೀತ ನಿರ್ದೇಶಕರರಾದ ಎಂ. ಎಚ್. ಮರಿಸ್ವಾಮಿ, ರಂಗಭೂಮಿ ಕಲಾವಿದರು ಮದಕರಿಪುರ ಚಿತ್ರದುರ್ಗ, ಸತೀಶ್ ರಾಜ್, ನಟರು,ನಿರ್ದೇಶಕರು,ನಿರ್ಮಾಪಕರು,ಬೆಂಗಳೂರು,
ಎಸ್ ಕೆ ನಾಗೇಶ್, ರಂಗಭೂಮಿ ಕಲಾವಿದರು, ಮದ್ದೂರು ಹಾಗೂ ಅನೇಕ ಗಣ್ಯರು ಉಪಸ್ಥಿತರಿದ್ದರು.












