ಇತ್ತೀಚಿನ ಸುದ್ದಿ
ಚನ್ನಪಟ್ಟಣ | ಎಕ್ಸ್ಪ್ರೆಸ್ ರಸ್ತೆಯಲ್ಲಿ ಭೀಕರ ಅಪಘಾತ: ಕಾರಿನ ಚಕ್ರ ಸ್ಫೋಟಗೊಂಡು ಚಾಲಕ ಸಾವು; 4 ಮಂದಿ ಬಿಇಒಗಳು ಗಂಭೀರ
22/06/2026, 20:40
ಬೆಂಗಳೂರು(reporterkarnataka.com): ಮೈಸೂರು-ಬೆಂಗಳೂರು ಎಕ್ಸ್ಪ್ರೆಸ್ ರಸ್ತೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಸ್ಥಳದಲ್ಲೇ ಓರ್ವ ಮೃತಪಟ್ಟಿದ್ದಾನೆ.
ಸರ್ಕಾರಿ ಸಭೆ ಹಿನ್ನೆಲೆ ಮೈಸೂರಿನಿಂದ ಬೆಂಗಳೂರಿಗೆ ಬರ್ತಿದ್ದ ಬಿಇಒ ಅಧಿಕಾರಿಗಳಿದ್ದ ಕಾರು ಬೆಂಗಳೂರು ದಕ್ಷಿಣ ಜಿಲ್ಲೆ ಚನ್ನಪಟ್ಟಣದ ಗ್ರಾಮದ ಮುದುಗೆರೆ ಬಳಿ ಅಪಘಾತಕ್ಕೀಡಾಗಿದೆ. ಕಾರಿನಲ್ಲಿದ್ದ ನಾಲ್ವರು ಬಿಇಒ ಅಧಿಕಾರಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
*ಕಾರಿನ ಟೈರ್ ಬ್ಲಾಸ್ಟ್, ಓರ್ವ ಸಾವು:*
ನಾಲ್ವರು ಬಿಇಒ ಅಧಿಕಾರಿಗಳು ಬರುತ್ತಿದ್ದ ಕಾರಿನ ಟೈರ್ ಸ್ಫೋಟಗೊಂಡ ಹಿನ್ನೆಲೆ ಭೀಕರ ಅಪಘಾತ ಸಂಭವಿಸಿದ್ದು, ಕಾರು ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಕಾರಿನಲ್ಲಿದ್ದ ನಾಲ್ವರು ಸರ್ಕಾರಿ ಅಧಿಕಾರಿಗಳಿಗೂ ಗಂಭೀರ ಗಾಯಗಳಾಗಿದ್ದು, ಅವರ ಸ್ಥಿತಿ ಕೂಡ ಚಿಂತಾಜನಕವಾಗಿದೆ. ಬೆಂಗಳೂರು ದಕ್ಷಿಣ ಜಿಲ್ಲೆ ಚನ್ನಪಟ್ಟಣದ ಗ್ರಾಮ ಮುದುಗೆರೆ ಗ್ರಾಮದ ಬಳಿ ಘಟನೆ ನಡೆದಿದೆ.
*ಮೀಟಿಂಗ್ಗೆಂದು ಬರ್ತಿದ್ದ ಅಧಿಕಾರಿಗಳು*
ಮೈಸೂರು ಮೂಲದ ನಾಲ್ವರು ಬಿಇಒಗಳು ಉನ್ನತ ಅಧಿಕಾರಿಗಳ ಮೀಟಿಂಗ್ ಎಂದು ಬೆಂಗಳೂರಿಗೆ ತೆರಳಿದ್ರು. ಮೈಸೂರಿನಿಂದ ಬಂದ ಕಾರು ಚನ್ನಪಟ್ಟಣದ ಬಳಿ ಅಪಘಾತಕ್ಕೀಡಾಗಿದೆ. ಗಾಯಾಳುಗಳನ್ನ ಮಂಡ್ಯ ಹಾಗೂ ಚನ್ನಪಟ್ಟಣ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಈ ಸಂಬಂಧ ಚನ್ನಪಟ್ಟಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
*ಆಸ್ಪತ್ರೆಯಲ್ಲಿ ಗಾಯಾಳುಗಳಿಗೆ ಚಿಕಿತ್ಸೆ:*
ಚಾಲಕ ಆನಂದ್ ಮೃತ ದುರ್ದೈವಿ ಆಗಿದ್ದು, ಅಪಘಾತದಲ್ಲಿಪ್ರಕಾಶ್, ರಾಜು, ಕೃಷ್ಣ, ಮಹೇಶ್ ಎಂಬ ಬಿಇಒ ಅಧಿಕಾರಿಗಳು ಗಾಯಗೊಂಡಿದ್ದು, ಸ್ಥಳಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.













