ಇತ್ತೀಚಿನ ಸುದ್ದಿ
ಪಂಜಾಬ್ | ಕಾರ್ಖಾನೆಯಲ್ಲಿ ವಿಷ ಅನಿಲ ಸೋರಿಕೆ: ಮೂವರು ಸಾವು
01/06/2026, 15:45
ಚಂಡೀಗಡ(reporterkarnataka.com): ಪಂಜಾಬ್ನಲ್ಲಿ ವಿಷಾನಿಲ ಸೋರಿಕೆ ಪರಿಣಾಮ ದುರಂತದಲ್ಲಿ ಮೂವರು ಕಾರ್ಮಿಕರ ಸಾವನಪ್ಪಿದ್ದಾರೆ.
ಪಂಜಾಬ್ನ ಲುಧಿಯಾನದಲ್ಲಿರುವ ಕೈಗಾರಿಕಾ ಪ್ರದೇಶದ ಕಾರ್ಖಾನೆಯೊಂದರಲ್ಲಿ ವಿಷಾನಿಲ ಸೋರಿಕೆಯಾದ ಪರಿಣಾಮ ಮೂವರು ಕಾರ್ಮಿಕರು ಸಾವನ್ನಪ್ಪಿದ್ದಾರೆ ಮತ್ತು ನಾಲ್ವರು ತೀವ್ರವಾಗಿ ಅಸ್ವಸ್ಥಗೊಂಡಿದ್ದಾರೆ. ಈ ದುರಂತವು ಕಾರ್ಖಾನೆಯಲ್ಲಿ ಕೆಲಸ ನಡೆಯುತ್ತಿದ್ದ ಸಂದರ್ಭದಲ್ಲಿ ಸಂಭವಿಸಿದೆ. ಅನಿಲದ ತೀವ್ರತೆಗೆ ಸಿಲುಕಿ ಸ್ಥಳದಲ್ಲಿದ್ದ ಮೂವರು ಕಾರ್ಮಿಕರು ಉಸಿರುಗಟ್ಟಿ ಮೃತಪಟ್ಟಿದ್ದಾರೆ.












