ಇತ್ತೀಚಿನ ಸುದ್ದಿ
Kodagu | ಕುಶಾಲನಗರ: 15 ದಿನದೊಳಗೆ ದುಷ್ಕರ್ಮಿಗಳ ಗುಂಡೇಟಿಗೆ 2 ಕಾಡು ಕೋಣಗಳು ಬಲಿ
28/05/2026, 10:57
ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಕಳೆದ ಎರಡು ವಾರದ ಅಂತರದಲ್ಲಿ ಎರಡು ಬೈಸನ್ (ಕಾಟಿ ) ಗಳು ಕುಶಾಲನಗರ ಅರಣ್ಯ ವಲಯದ ಕೆದಕಲ್ ವ್ಯಾಪ್ತಿಯಲ್ಲಿ ನಡೆದಿದೆ.
ಮೇ 5ರಂದು ಕೆದಕಲ್ ವ್ಯಾಪ್ತಿಯ ಮಠದ ಕಾಡು ಎಸ್ಟೇಟ್ ಬಳಿ ಗುಂಡೇಟು ಗೆ ಬೃಹತ್ ಗಾತ್ರದ ಬೈಸನ್ ಬಲಿಯಾದರೆ, ಇದೆ 24 ರಂದು ಅಧಿಕಾರಿಯೊಬ್ಬರ ಮನೆಯ ಬಳಿ ಮತ್ತೊಂದು ಹತ್ಯೆಯಾಗಿದೆ. ವನ್ಯಜೀವಿಗಳು ಗುಂಡೇಟು ಇಂದ ಹತ್ಯೆಯಾದರೂ ಎರಡೂ ಪ್ರಕರಣಗಳ ಆರೋಪಿಗಳು ಇನ್ನೂ ಪತ್ತೆ ಆಗಿಲ್ಲ. ಸ್ಥಳಕ್ಕೆ ಕುಶಾಲನಗರ ವಲಯ ಅರಣ್ಯ ಅಧಿಕಾರಿ ರಕ್ಷಿತ್, ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಅಭಿಷೇಕ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ, ತನಿಖೆ ಮುಂದುವರೆದಿದೆ.












