ಇತ್ತೀಚಿನ ಸುದ್ದಿ
Mysore | ಹುಣಸೂರು: ಸಿಡಿಲು ಬಡಿದು ವೃದ್ದ ಮಹಿಳೆ ದಾರುಣ ಸಾವು
27/05/2026, 19:33
ಗಿರಿಧರ್ ಕೊಂಪುಳಿರ ಮೈಸೂರು
info.reporterkarnataka@gmail.com
ಸಿಡಿಲು ಬಡಿದು ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆ ಹುಣಸೂರು ತಾಲೂಕಿನ ಹೊಸಪುರದಲ್ಲಿ ಸಂಜೆ ನಡೆದಿದೆ.
ಹುಣಸೂರು ತಾಲೂಕಿನ. ಬಿಳಿಕೆರೆ ಹೋಬಳಿಯಹೊಸಪುರ ಗ್ರಾಮದ 65 ವರ್ಷ ವಯಸ್ಸಿನ ಯಶೋಧಮ್ಮ (65) ಮೃತಪಟ್ಟವರು. ಅವರಿಗೆ ಪತಿ ಹಾಗೂ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.
ಯಶೋದಮ್ಮ ಜಮೀನಿನಲ್ಲಿ ಕೃಷಿ ಚಟುವಟಿಕೆಯಲ್ಲಿ ನಿರತರಾಗಿದ್ದ ವೇಳೆ ಒಮ್ಮೆಲೆ ಮೋಡಕವಿದು ಬಿರುಗಾಳಿಯೊಂದಿಗೆ ಮಳೆ ಆರಂಭವಾಗಿದೆ. ಕುಟುಂಬದವರು ಹಾಗೂ ಕೆಲಸ ಮಾಡುತ್ತಿದ್ದ ಕಾರ್ಮಿಕರೊಂದಿಗೆ ಜಮೀನಿನಲ್ಲಿದ್ದ ಮರದ ಬುಡದಲ್ಲಿ ಆಶ್ರಯ ಪಡೆದಿದ್ದರು.ಈ ವೇಳೆ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ.
ವಿಷಯ ತಿಳಿದು ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ಇತ್ತು ಪರಿಶೀಲಿಸಿದರು.
ಈ ಸಂಬಂದ ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಇನ್ಸ್ ಪೆಕ್ಟರ್ ಪುನಿತ್ ತಿಳಿಸಿದ್ದಾರೆ.












