ಇತ್ತೀಚಿನ ಸುದ್ದಿ
Kodagu | ಹರದೂರು ಗುಂಡುಗುಟ್ಟಿಯಲ್ಲಿ ಶ್ರದ್ದಾಭಕ್ತಿಯಿಂದ ನಡೆದ 86ನೇ ವಾರ್ಷಿಕ ನೇಮೋತ್ಸವ
13/04/2026, 18:42
ಮಡಿಕೇರಿ(reporterkarnataka.com): ಶ್ರೀ ಆದಿ ನಾಗಬ್ರಹ್ಮ ಮೊಗೇರ್ಕಳ ಸೇವಾ ಸಮಿತಿ ಹರದೂರು ಮತ್ತು ಗರಗಂದೂರು ಇವರ ಆಶ್ರಯದಲ್ಲಿ ಕೊಡಗಿನ ಇತಿಹಾಸ ಪ್ರಸಿದ್ದವಾದ ಹರದೂರು ಗುಂಡುಗುಟ್ಟಿಯಲ್ಲಿ 86ನೇ ವಾರ್ಷಿಕ ನೇಮೋತ್ಸವ ಶ್ರದ್ದಾಭಕ್ತಿಯಿಂದ ನೆರವೇರಿತು.
ಏಪ್ರಿಲ್ 11ರ ಶನಿವಾರದಂದು ರಾತ್ರಿ ಮಂತ್ರವಾದಿ ಗುಳಿಗ ದೈವಗಳ ಎರಡು ನೇಮೊತ್ಸವ, ಶ್ರೀ ಆದಿ ನಾಗಬ್ರಹ್ಮ ಮೊಗೇರ ದೈವಗಳ ನೇಮೊತ್ಸವ,ಆದಿ ಮಾಯೆ ಶ್ರೀ ತನ್ನಿ ಮಾಣಿಗ ದೈವಗಳ ನೇಮೋತ್ಸವ ನೆರವೇರಿತು.
12ರ ಭಾನುವಾರದಂದು ಬೆಳಗ್ಗೆ ಶ್ರೀ ಕೊರಗ ತನಿಯ ದೈವಗಳ ನೇಮೊತ್ಸವ ನಡೆದವು.

ಬೆಂಗಳೂರು, ಮೈಸೂರು ಮಂಗಳೂರು, ಪುತ್ತೂರು, ಸುಳ್ಯ, ಕಾಸರಗೋಡು, ಹಾಸನ, ಸಕಲೇಶಪುರ, ಚಿಕ್ಕಮಗಳೂರು ಹಾಗೂ ಕೊಡಗಿನಾದ್ಯಂತದಿಂದ ಸಾವಿರಾರು ಭಕ್ತಾದಿಗಳು ಆಗಮಿಸಿ ಸತ್ಯದೈವಗಳ ದರ್ಶನ ಪಡೆದು ಗಂಧ ಪ್ರಸಾದ ಹಾಗೂ ಅನ್ನ ಪ್ರಸಾದ ಸ್ವೀಕರಿಸಿ ಧನ್ಯರಾದರು.












