ಇತ್ತೀಚಿನ ಸುದ್ದಿ
ಚಿಕ್ಕಮಗಳೂರು ಜಿಲ್ಲೆಯ ಹಲವೆಡೆ ಆಲಿಕಲ್ಲು ಮಳೆ: ಕಾಫಿ ತೋಟದಲ್ಲಿ ಮಲ್ಲಿಗೆ ಹೂವಿನ ಚಿತ್ತಾರ
18/03/2026, 21:25
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಚಿಕ್ಕಮಗಳೂರು ತಾಲೂಕಿನ ಮಾಗಲು, ಸಂಗಮೇಶ್ವರಪೇಟೆ, ಖಾಂಡ್ಯ ಭಾಗದಲ್ಲಿ ಭಾರೀ ಆಲಿಕಲ್ಲು ಮಳೆಯಾಗಿದ್ದು,
ಕಾಫಿತೋಟದಲ್ಲಿ ಮಲ್ಲಿಗೆ ಹೂವು ಹಾಡಿದಂತೆ ಭಾಸವಾಗುತ್ತಿದೆ.
ತೋಟದಲ್ಲಿ ನೆಲ ಕಾಣದಂತೆ ಆಲಿಕಲ್ಲು ಹರಡಿದೆ. ಕಾಫಿತೋಟ, ಮನೆಯಂಗಳದಲ್ಲಿ ರಾಶಿ-ರಾಶಿ ಆಲಿಕಲ್ಲು ಬಿದ್ದಿದೆ.
ಧಾರಾಕಾರ ಆಲಿಕಲ್ಲು ಮಳೆಗೆ ಮಲೆನಾಡಿಗರು ಹೈರಾಣಾಗಿದ್ದಾರೆ.
ಆಲಿಕಲ್ಲಿನೊಂದಿಗೆ ಮಕ್ಕಳ ಆಟವಾಡುತ್ತಿದ್ದು,ಪಾತ್ರೆಯಲ್ಲಿ ತುಂಬಿಟ್ಟು ಖುಷಿ ಪಡುತ್ತಿದ್ದಾರೆ.
ಕಳೆದ ಮೂರು ದಿನಗಳಿಂದ ಮಧ್ಯಾಹ್ನದ ಮೇಲೆ ಮಳೆರಾಯನ ಅಬ್ಬರ ತೀವ್ರಗೊಂಡಿದೆ.












