ಇತ್ತೀಚಿನ ಸುದ್ದಿ
ಮಡಿಕೇರಿಯ ರಾಜಕಾಲುವೆಗೆ ಹಾರಿ ಯುವಕ ಆತ್ಮಹತ್ಯೆಗೆ ಯತ್ನ: ಸ್ಥಳೀಯರಿಂದ ರಕ್ಷಣೆ
18/03/2026, 21:23
ಮಡಿಕೇರಿ(reporterkarnataka.com): ನಗರದ ಹಳೆಯ ಖಾಸಗಿ ಬಸ್ ನಿಲ್ದಾಣ ಬಳಿ ಇರುವ ರಾಜ ಕಾಲುವೆಗೆ ಹಾರಿ ಯುವಕನೊಬ್ಬ ಆತ್ಮಹತ್ಯೆಗೆ ಯತ್ನಿಸಿದ್ದು, ಸ್ಥಳೀಯರು ಆತನನ್ನು ರಕ್ಷಿಸಿದ್ದಾರೆ.
ಕೆಎಸ್ಸಾರ್ಟಿಸಿ ಬಸ್ ನಿಲ್ದಾಣಕ್ಕೆ ಹೋಗುವ ಮಾರ್ಗದಿಂದ ಕಾಲುವೆಗೆ ಯುವಕ ಹಾರಿದ್ದ.ಕೂಲಿ ಅರಸಿ ಅನ್ಯ ರಾಜ್ಯದಿಂದ ಯುವಕ ಬಂದಿದ್ದ. ಸ್ಥಳೀಯರ ಸಹಾಯದಿಂದ ಯುವಕನ ರಕ್ಷಣೆ ಮಾಡಲಾಗಿದೆ.
ಮಡಿಕೇರಿ ನಗರ ಪೊಲೀಸರು ಯುವಕನ ವಿಚಾರಣೆ ನಡೆಸುತ್ತಿದ್ದಾರೆ.













