ಇತ್ತೀಚಿನ ಸುದ್ದಿ
Kodagu | ಅಕಾಲಿಕ ಮಳೆ: ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ ಹಲವು ಮನೆಗಳಿಗೆ ಹಾನಿ
17/03/2026, 19:04
ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಕುಶಾಲನಗರ ತಾಲ್ಲೂಕಿನ ಹೆಬ್ಬಾಲೆ, ತೊರೆನೂರು, ಶಿರಂಗಾಲ ಭಾಗದಲ್ಲಿ ಸುರಿದ ಮಳೆಗೆ ಹಲವು ಮನೆಗಳಿಗೆ ಹಾನಿ ಉಂಟಾಗಿದ್ದು, ಅಲ್ಲಲ್ಲಿ ಜಮೀನುಗಳಿಗೆ ನೀರು ನುಗ್ಗಿ ನಷ್ಟ ಉಂಟಾಗಿದೆ.



ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರೈತರೊಬ್ಬರ ಮನೆ ಮೇಲೆ ತೆಂಗಿನ ಮರ ಬಿದ್ದು ಹಾನಿ ಯಾದರೆ, ಕೆಲವೆಡೆ ಮನೆಯ ಸೂರುಗಳು ಹಾರಿಹೋಗಿ ಸಂಗ್ರಹಿಸಿ ಇಟ್ಟಿದ್ದ ರಾಗಿ, ಭತ್ತ ನಷ್ಟ ಉಂಟಾಗಿದೆ. ಚಿಕ್ಕನಾಯಕನ ಹೊಸಹಳ್ಳಿಯಲ್ಲಿ ಸಹ ಮನೆಗಳು ಮತ್ತು ದನದ ಕೊಟ್ಟಿಗೆ, ಹೊಗೆಸೊಪ್ಪು ಬೇಯಿಸುವ ಮನೆ ಸೇರಿದಂತೆ ಟ್ರ್ಯಾಕ್ಟರ್ ವೊಂದು ಹಾನಿಗೆ ಈಡಾಗಿದೆ. ಸ್ಥಳಕ್ಕೆ ತಹಸೀಲ್ದಾರ್ ಕಿರಣ್ ಗೌರಯ್ಯ ಸೇರಿದಂತೆ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.












