ಇತ್ತೀಚಿನ ಸುದ್ದಿ
ಮಸ್ಕಿ ಇರಕಲ್ ಶ್ರೀ ಮಠದ ಜಾತ್ರಾ ಮಹೋತ್ಸವ: ಹಸೆಮಣೆ ಏರಿದ 12 ಜೋಡಿಗಳು
26/02/2026, 23:18
ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ ರಾಯಚೂರು
info.reporterkarnataka@gmail.com
ಮಸ್ಕಿ ಪಟ್ಟಣದ ಜಗದ್ಗುರು ಶಿವ ಶಕ್ತಿ ಪೀಠದ ಸುಕ್ಷೇತ್ರ ಇರಕಲ್ ಮಠದ ಶ್ರೀ ಬಸವ ಪ್ರಭು ಪೂಜ್ಯರಿಂದ ಪ್ರತಿ ವರ್ಷದಂತೆ ಈ ವರ್ಷವೂ 26ನೇ ವರ್ಷದ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನಡೆಯಿತು.




ವೇದಿಕೆಯನ್ನು ಉದ್ದೇಶಿಸಿ ಮಾತನಾಡಿದ ಮುದುಗಲ್ ಶ್ರೀ ಮಹಾಂತ ಸ್ವಾಮೀಜಿ ಸಾಲಿಮಠ ಕಲ್ಯಾಣ ಆಶ್ರಮ ತಿಮ್ಮಾಪುರ ಮಾತನಾಡಿ ಜೀವನದಲ್ಲಿ ಮಾಡಿದ ಪಾಪಗಳು ದೂರವಾಗಬೇಕಾದರೆ
ಶರಣರ ದರ್ಶನ ಶರಣರ ಪ್ರವಚನ ಕೇಳುವುದರಿಂದ ಮನಸ್ಸಿಗೆ ಶಾಂತಿ ನೆಮ್ಮದಿ ಸಿಗುತ್ತದೆ ಹಾಗೂ ಮಾಡಿದ ಪಾಪಗಳು ದೂರವಾಗುತ್ತವೆ ಎಂದು ಸಲಹೆ ನೀಡಿದರು.
ನಾಡಿನ ಅರ ಗುರು ಚರಮೂರ್ತಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮ ಅನಿಸಿಕೆಗಳನ್ನು ಹೇಳಲಾಯಿತು.
ಮಸ್ಕಿ ಶಾಸಕ ಬಸವನಗೌಡ ತುರುವಿಹಾಳ ಮಾತನಾಡಿ ಇಂತಹ ಕಾರ್ಯಕ್ರಮ ನಡೆಯುತ್ತಿರುವುದು ಬಹಳ ಸಂತೋಷದ ವಿಷಯ ಪ್ರತಿ ವರ್ಷವೂ ಇದೇ ತರ ಶ್ರೀಮಠದಲ್ಲಿ ನಡೆಯಲಿ ನಾವು ಜೊತೆಗಿರುತ್ತೇವೆ ಎಂದು ಭರವಸೆ ನೀಡಿದರು.
ಎಲ್ಲಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಗೌರವಿಸಲಾಯಿತು.
*ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ:*
12 ನವ ಜೋಡಿಗಳ ಸಾಮೂಹಿಕ ವಿವಾಹಕ್ಕೆ ಪೂಜ್ಯರಿಂದ ನವ ಜೋಡಿಗಳಿಗೆ ಆಶಿರ್ವಾದಿಸಿ ಅವರ ಜೀವನ ಸುಖವಾಗಿರಲೆಂದು ಶುಭ ಹಾರೈಸಿದರು.
ಆರೋಗ್ಯ ಜಾತ್ರೆ ಪರಿಸರ ಜಾತ್ರೆ ಸುಜ್ಞಾನ ಸಂಗಮ ಕ್ರೀಡಾ ಜಾತ್ರೆ ಇನ್ನು ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು .
ದೂರ ದೂರಗಳಿಂದ ಭಕ್ತಾದಿಗಳ ಆಗಮಿಸಿ ಶ್ರೀಗಳ ಆಶೀರ್ವಾದ ಪಡೆದು ಪುನೀತರಾದರು.












