2:22 AM Monday26 - January 2026
ಬ್ರೇಕಿಂಗ್ ನ್ಯೂಸ್
ಸುನಿಲ್ ಕುಮಾರ್ ಪರಶುರಾಮನ ಮೂರ್ತಿಯ ಫೈಬರ್ ನಲ್ಲಿ ಮಾಡಿಸಿ ಕಂಚಿನದ್ದು ಎಂದು ನಂಬಿಸಿದ್ದರು:… ಸೋಮವಾರಪೇಟೆ ಕಾಜೂರಿನಲ್ಲಿ ಭಾರೀ ಬೆಂಕಿ ಅವಘಡ: ಮನೆಯೊಳಗೆ ನಿದ್ರಿಸುತ್ತಿದ್ದ ಬಾಲಕ ಬಚಾವ್ ಮಾಡಿದ… ಕೊಡಗಿನ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರ ಬದ್ಧ: ಉಸ್ತುವಾರಿ ಸಚಿವ ಬೋಸರಾಜ್ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಾರ್ಯಾಲದಲ್ಲಿ ಗಣರಾಜ್ಯೋತ್ಸವ: 130ಕ್ಕೂ ಅಧಿಕ ವಾಹನ ಚಾಲಕಿಯರಿಗೆ… ರಾಜ್ಯದಲ್ಲಿದ್ದಾರೆ ಒಟ್ಟು 10,365 ಟ್ರಾನ್ಸ್ ಜೆಂಡರ್: ಸಮೀಕ್ಷೆಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಸ್ಥಿತಿಗತಿ ಬಗ್ಗೆ… ಹುಬ್ಬಳ್ಳಿ | ಕೊಳೆಗೇರಿ ನಿವಾಸಿಗಳ ಮುಖ್ಯವಾಹಿನಿಗೆ ತರಲು ಬೃಹತ್ ಪ್ರಮಾಣದಲ್ಲಿ ಮನೆ ವಿತರಣೆ:… ಪ್ರೀತಿಯಲ್ಲಿ ಒಂದಾದ ಭಾರತ- ಚೀನಾ!: ಚೈನಾದ ಬೆಡಗಿಯ ಕೈ ಹಿಡಿದ ಕಾಫಿನಾಡ ಯುವಕ ಗೋಣಿಕೊಪ್ಪ- ತಿತಿಮತಿ ಮುಖ್ಯ ರಸ್ತೆಯಲ್ಲಿ‌ ರಾತ್ರಿ ವ್ಯಾಘ್ರನ ದರ್ಶನ; ಭಯಭೀತರಾದ ಗ್ರಾಮಸ್ಥರು ಸದನದ ಪಾವಿತ್ರ್ಯತೆ ಹಾಳು ಮಾಡುವ ಕೆಲಸ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಟೀಕೆ ನರೇಗಾ ಉಳಿಸಲು ಕಾಂಗ್ರೆಸ್ ಉಪವಾಸ ಸತ್ಯಾಗ್ರಹ

ಇತ್ತೀಚಿನ ಸುದ್ದಿ

‘ವಾಯ್ಸ್ ಆಫ್ ಆರಾಧನಾ’:  ಜುಲೈ ತಿಂಗಳ ಟಾಪರ್ ಆಗಿ ದೀಕ್ಷಾ ಎ.ಜೆ. ಹಾಗೂ ಶ್ರದ್ಧಾ ಎಂ.ಪಿ. ಆಯ್ಕೆ

10/08/2022, 22:19

ಮೂಡುಬಿದರೆ(reporterkarnataka.com): ಆರದಿರಲಿ ಬದುಕು ಆರಾಧನಾ ಸಂಸ್ಥೆಯು ರಿಪೋರ್ಟರ್ ಕರ್ನಾಟಕ ಸಹಯೋಗದೊಂದಿಗೆ ಪ್ರತಿ ತಿಂಗಳು ನಡೆಸುವ ‘ವಾಯ್ಸ್ ಆಫ್ ಆರಾಧನಾ’ ಕಾರ್ಯಕ್ರಮದಲ್ಲಿ ಜುಲೈ ತಿಂಗಳ ಟಾಪರ್ ಆಗಿ ಬಾಲಪ್ರತಿಭೆಗಳಾದ ದೀಕ್ಷಾ ಎ.ಜೆ. ಹಾಗೂ ಶ್ರದ್ಧಾ ಎಂ.ಪಿ. ಆಯ್ಕೆಗೊಂಡಿದ್ದಾರೆ.

ದೀಕ್ಷಾ, ಕಾಸರಗೋಡು ಜಿಲ್ಲೆಯ ಬೋವಿಕ್ಕಾನದ ಅಶ್ವಥ್ ಕುಮಾರ್ ಹಾಗೂ ಆಶಾ ದಂಪತಿ ಪ್ರಥಮ ಪುತ್ರಿ. ಈಕೆ ಒಂದನೇ ತರಗತಿಯಿಂದ ನಾಲ್ಕನೇ ತರಗತಿಯವರೆಗೆ ಸರಸ್ವತಿ ವಿದ್ಯಾಲಯ ಬೋವಿಕ್ಕಾನದಲ್ಲಿ ಕಲಿತು ಐದನೇ ತರಗತಿಯಿಂದ ಕಾಸರಗೋಡಿನ  ಬಿಇಎಂಎಚ್ ಎಸ್ ಎಸ್ ಶಾಲೆಯಲ್ಲಿ 10ನೇ ತರಗತಿಯಲ್ಲಿ ಕಲಿಯುತ್ತಿದ್ದಾಳೆ.


ಈಕೆ ಭರತನಾಟ್ಯ, ಜಾನಪದ ನೃತ್ಯವನ್ನು ಗುರುಗಳಾದ ಗಿರೀಜ ಪಂಡಿತ್ 
ಕಾಸರಗೋಡು ಅವರೊಂದು ನಾಟ್ಯತರಂಗಿಣಿ ಯಲ್ಲಿ 8 ವರ್ಷಗಳಿಂದ ಕಲಿಯುತ್ತಿದ್ದಾಳೆ.

ಕೊರೋನಾ ಮಹಾಮಾರಿಯಿಂದ  ನೃತ್ಯ ತರಬೇತಿಯನ್ನು ನಿಲಿಸಬೇಕ್ಕಾಗಿ ಬಂತು. ಇವಳ ರಂಗಪ್ರವೇಶವು ಮಲ್ಲ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆಯಿತು. ಶಾಲಾ ಕಲೋತ್ಸವ ಜಿಲ್ಲಾ ಕಲೋತ್ಸವ, ಸಬ್ ಜಿಲ್ಲಾ ಕಲೋತ್ಸವದಲ್ಲಿ ಜಾನಪದ ನೃತ್ಯದಲ್ಲಿ ಪ್ರಥಮ ಸ್ಥಾನ A ಗ್ರೇಡ್ ಹಾಗೂ ಗ್ರೂಪ್ ಡ್ಯಾನ್ಸ್ ನಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾಳೆ. 50ಕ್ಕಿಂತ ಹೆಚ್ಚಿನ ವೇದಿಕೆಯಲ್ಲಿ ನೃತ್ಯ ಪ್ರದರ್ಶನ ಮಾಡಿದ್ದಾಳೆ.

ಸ್ಪಂದನ ಟಿವಿಯಲ್ಲಿ ಮೂರು ಬಾರಿ ನೃತ್ಯ ಪ್ರದರ್ಶನ ನೀಡಿದ್ದಾಳೆ. ವಾಯ್ಸ್ ಆಫ್ ಆರಾಧನ ದಲ್ಲಿ ಎರಡು ಬಾರಿ ವಿಜೇತಳಾಗಿದ್ದಾಳೆ.

ಶ್ರದ್ಧಾ ಎಂ.ಪಿ.  8ನೇ ತರಗತಿ ವಿದ್ಯಾರ್ಥಿನಿ. ಈಕೆಗೆ ಡ್ಯಾನ್ಸ್, ಯಕ್ಷಗಾನ. ಅಭಿನಯ ಅಂದರೆ ತುಂಬಾನೇ ಇಷ್ಟ. ಶಾಲೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಇದ್ದರೆ ನಾನು ಎಲ್ಲ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಿಸುತ್ತೇನೆ. ನನ್ನ ಮೊದಲನೆಯ ಡ್ಯಾನ್ಸ್ ಜರ್ನಿ ನನ್ನ ಅಮ್ಮನಿಂದಲೇ ಶುರುವಾಯಿತು. ನನ್ನ ಟ್ಯಾಲೆಂಟ್ ಅನ್ನು ಹೊರ ತರಲು ಒಂದು ಒಳ್ಳೆ ವೇದಿಕೆ ನನಗೆ ಸಿಗಲು ತೊಡಗಿತು. ಅದರಲ್ಲಿ ಮುಖ್ಯವಾಗಿ ನನಗೆ ಥ್ಯಾಂಕ್ಸ್ ಹೇಳಬೇಕಂದ್ರೆ ವಾಯ್ಸ್ ಆಫ್ ಆರಾಧನಾ 

ತಂಡಕ್ಕೆ. ಯಾಕೆಂದರೆ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಾನು ಪಾಲ್ಗೊಂಡಿದ್ದೇನೆ.

ಸ್ಪಂದನ ಟಿವಿಯಲ್ಲಿ ಕೂಡ ನನಗೆ ಒಳ್ಳೆಯ ವೇದಿಕೆಯನ್ನು ಒದಗಿಸಿ ಕೊಟ್ಟಿದ್ದಾರೆ. ನೃತ್ಯದಿಂದಲೇ ನನ್ನ ಜರ್ನಿಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡು ಹೋಗಬೇಕೆಂದು ನನ್ನಾಸೆ.

ಇತ್ತೀಚಿನ ಸುದ್ದಿ

ಜಾಹೀರಾತು