3:41 PM Monday15 - December 2025
ಬ್ರೇಕಿಂಗ್ ನ್ಯೂಸ್
ಓಟ್ ಚೋರಿ ಸುಳ್ಳನ್ನು ಸತ್ಯ ಮಾಡಲು ಕಾಂಗ್ರೆಸ್ ಯತ್ನ: ಬಸವರಾಜ ಬೊಮ್ಮಾಯಿ ಆರೋಪ ಸರಪಾಡಿ: ಅಕ್ರಮ ಗೋಸಾಗಾಟ ಪ್ರಕರಣ; ಆರೋಪಿಯ ಮನೆ, ಕೊಟ್ಟಿಗೆ ಜಫ್ತಿ ತಪ್ಪು ಕಲ್ಪನೆಯಿಂದ ಬೆಡ್ತಿ ವರದಾ ನದಿ ಜೋಡಣೆಗೆ ವಿರೋಧ ಬೇಡ: ಮಾಜಿ ಸಿಎಂ… ಸಂವಿಧಾನ ಪ್ರತಿ ಹಿಡಿದು ಈಗದನ್ನೇ ಗಾಳಿಗೆ ತೂರುತ್ತಿದ್ದಾರೆ; ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ… ಮಹಿಳೆಯರು ಅನ್ಯಾಯದ ವಿರುದ್ದ ಕಿತ್ತೂರು ಚೆನ್ನಮ್ಮ, ದುರ್ಗಾದೇವಿ ಆಗಬೇಕು: ಮಾಜಿ ಸಿಎಂ ಬಸವರಾಜ… ಮಡಿಕೇರಿ ಆಂಟಿ ಹನಿಟ್ರ್ಯಾಪ್ ಗೆ ಸಿಕ್ಕಿಬಿದ್ದ ಮಂಡ್ಯದ ಯುವಕ: ರಾತ್ರಿಯಿಡೀ ಗೂಸಾ; ಹಣ್ಣಕ್ಕೆ… ಮಡಿಕೇರಿಯಲ್ಲಿ ಆಂಧ್ರದ ನಕಲಿ ಪೊಲೀಸರ ಓಡಾಟ: ಪ್ರಕರಣ ದಾಖಲು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಿಭಜನೆಗೆ ಕ್ರಮ: ವಿಧಾನ ಸಭೆಯಲ್ಲಿ ಸಚಿವ ಬಿ.ಎಸ್.ಸುರೇಶ್ ದ್ವೇಷ ಭಾಷಣಕ್ಕೆ 10 ವರ್ಷ ಜೈಲು ಶಾಸನ ಕಾಂಗ್ರೆಸ್ ನ ಕ್ರೂರ ಸಂಪ್ರದಾಯದ… ಚಿಕ್ಕಮಗಳೂರಿನಲ್ಲಿ ಪಿಪಿಪಿ ಮಾದರಿಯಲ್ಲಿ ಸ್ಪೈಸ್ ಪಾರ್ಕ್ ಅಭಿವೃದ್ಧಿ: ವಿಧಾನ ಪರಿಷತ್ ನಲ್ಲಿ ಸರಕಾರ…

ಇತ್ತೀಚಿನ ಸುದ್ದಿ

ವಿಟಮಿನ್ ‘ಎ’ ಪ್ರಾಮುಖ್ಯತೆ: ಯಾವುದರಲೆಲ್ಲ ಇದು ಸಿಗುತ್ತದೆ?; ಕೊರತೆಯ ಲಕ್ಷಣಗಳೇನು ?

28/01/2022, 23:31

ಮೊಟ್ಟ ಮೊದಲು ಕಂಡುಹಿಡಿದ ವಿಟಮಿನ್ ಅಂದರೆ ವಿಟಮಿನ್ A. ಇದು ಕಣ್ಣಿನ ಆರೋಗ್ಯಕ್ಕೆ ಬೇಕಾದ ಅತೀ ಮುಖ್ಯವಾದ ಅಂಶವಾಗಿದೆ. ಇದು ಸಸ್ಯಾಹಾರ ಹಾಗು ಮಾಂಸಾಹಾರ ಎರಡೂ ಮೂಲಗಳಿಂದ ದೊರೆಯುತ್ತದೆ.

ಮೊಟ್ಟೆ, ಕೋಳಿ ಮಾಂಸ, ಲಿವರ್, ಹಾಲು, ತುಪ್ಪ ,ಬೆಣ್ಣೆ, ಕಾಳುಗಳು , ಹಸಿರು ತರಕಾರಿ, ಕ್ಯಾರಟ್, ಸಿಹಿಗುಂಬಳಕಾಯಿ, ಹಳದಿ ಬಣ್ಣದ ಹಣ್ಣು ಪಪ್ಪಾಯ, ಮಾವಿನಕಾಯಿ, ಫಿಶ್ ಲಿವರ್ ಆಯಿಲ್ ಇವುಗಳಲ್ಲಿ ಹೇರಳವಾಗಿ ವಿಟಮಿನ್ A ಕಂಡು ಬರುತ್ತದೆ.

ಬೇರೆ ಬೇರೆ ಕಾರಣಗಳಿಂದ ಇದರ ಅಂಶದ ಕೊರತೆ  ನಮ್ಮ ದೇಹದಲ್ಲಿ ಕಂಡುಬರುತ್ತದೆ.

* ಜೀರ್ಣನಾಂಗವ್ಯೂಹದಲ್ಲಿನ ತೊಂದರೆಯಿಂದಾಗಿ ನಾವು ಸೇವಿಸಿದ ವಿಟಮಿನ್ಅನ್ನು ನಮ್ಮ ದೇಹ ಸರಿಯಾಗಿ ಹೀರಿಕೊಳ್ಳದೇ ಇರುವುದರಿಂದ

* ಲಿವರ್ /ಪಿತ್ತಜನಕಾಂಗದ ಖಾಯಿಲೆ

* ಗರ್ಭಿಣಿಯರಲ್ಲಿ, ಬೆಳೆಯುವ ಮಕ್ಕಳಲ್ಲಿ ಅಧಿಕ  ಬೇಡಿಕೆ  ಇದ್ದಾಗ ಸರಿಯಾಗಿ ಆಹಾರದಲ್ಲಿ ಪೂರೈಕೆ ಆಗದೇ ಇರುವುದರಿಂದ ವಿಟಮಿನ್ A ಕೊರತೆ ಉಂಟಾಗುತ್ತದೆ.

ಲಕ್ಷಣಗಳು ಏನು?:

ಮೊತ್ತ ಮೊದಲಿಗೆ ಕಂಡು ಬರುವ ಲಕ್ಷಣ ಎಂದರೆ ಇರುಳುಗಣ್ಣು, ಮಂದ ಬೆಳಕಿನಲ್ಲಿ ಸರಿಯಾಗಿ ಕಾಣಿಸದೇ ಇರುವುದು, ಒಣ ಚರ್ಮ, ಮೂಳೆಗಳ ಸರಿಯಾದ ಬೆಳವಣಿಗೆ ಆಗದೆ ಮಕ್ಕಳಲ್ಲಿ ಬೆಳವಣಿಗೆ ಕುಂಠಿತವಾಗುವುದು, ರೋಗ ನಿರೋಧಕ ಶಕ್ತಿ ಕಡಿಮೆ ಆಗಿ ಸೋಂಕು  ಸುಲಭವಾಗಿ ತಗಲುವುದು , ನರಗಳ ಕಾರ್ಯಕ್ಷಮತೆ ತಗ್ಗುವುದು, ಕಣ್ಣಿನ ಬಿಳಿಭಾಗಕ್ಕೆ ಸಂಬಂಧಿಸಿದ ತೊಂದರೆ, ಕೆಲವೊಮ್ಮೆ ಶಾಶ್ವತವಾಗಿ ದೃಷ್ಟಿಹೀನರನ್ನಾಗಿ ಮಾಡಬಹುದು.

RDA ಪ್ರಕಾರ ಒಬ್ಬ ಆರೋಗ್ಯವಂತನಿಗೆ, ಮಗುವಿನಿಂದ ಹಿಡಿದು ವಯಸ್ಕರವರೆಗೆ ದಿನವೊಂದಕ್ಕೆ ಸುಮಾರು 350ರಿಂದ 950 ಮೈಕ್ರೋ ಗ್ರಾಂನಷ್ಟು ವಿಟಮಿನ್ A ಆಹಾರದ ಮೂಲಕ ಸೇವನೆ ಮಾಡುವುದದಿಂದ ಈ ಎಲ್ಲಾ ತೊಂದರೆಗಳು ಬಾರದಂತೆ ತಡೆಗಟ್ಟಬಹುದು. ಹಾಗೆಂದು ಅತಿಯಾದ ಸೇವನೆಯೂ ಸಹ ತೊಂದರೆಯನ್ನ ಉಂಟುಮಾಡಬಹುದು. ಆದ್ದರಿಂದ ದೇಹಕ್ಕೆ ಅನುಗುಣವಾಗಿ ಸರಿಯಾದ ಪ್ರಮಾಣವನ್ನು ಸೇವನೆ ಮಾಡುವುದು ಒಳಿತು.

✍️ ಡಾ. ಭವ್ಯ ಶೆಟ್ಟಿ

ಹೋಮಿಯೋಪತಿ ವೈದ್ಯರು

ಶ್ರೀ ಗುರು ಹೋಮಿಯೋಪತಿ ಕ್ಲೀನಿಕ್ ಬೆಳುವಾಯಿ

ಇತ್ತೀಚಿನ ಸುದ್ದಿ

ಜಾಹೀರಾತು