9:35 AM Monday1 - December 2025
ಬ್ರೇಕಿಂಗ್ ನ್ಯೂಸ್
ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ… ಪ್ರಧಾನಿ ಮೋದಿ ಇಂದು ಉಡುಪಿಗೆ: ಶ್ರೀಕೃಷ್ಣ ಮಠದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ… ಉಡುಪಿಗೆ ಪ್ರಧಾನಿ ಭೇಟಿ: ಎಸ್‌ಪಿಜಿ ಜತೆಗೆ ಖಾಕಿ ಸರ್ಪಗಾವಲು: ನಿಗದಿತ ಸಮಯಕ್ಕೆ ಮುಂಚಿತವಾಗಿಯೇ…

ಇತ್ತೀಚಿನ ಸುದ್ದಿ

ಅಂಡರ್​ 19 ವಿಶ್ವಕಪ್: ಬಿಸಿಸಿಐಯಿಂದ ಟೀಮ್ ಇಂಡಿಯಾ ಪ್ರಕಟ; ದಿಲ್ಲಿಯ ಯಶ್​ ಧುಲ್​ ನಾಯಕ

20/12/2021, 11:45

ಹೊಸದಿಲ್ಲಿ(reporterkarnataka.com):

ವೆಸ್ಟ್​ ಇಂಡೀಸ್​​ನಲ್ಲಿ ಜನವರಿ 14ರಿಂದ ಫೆಬ್ರವರಿ 5ರವರೆಗೆ ನಡೆಯುವ 2022ರ ಅಂಡರ್​ 19 ವಿಶ್ವಕಪ್​ಗಾಗಿ ಬಿಸಿಸಿಐ 17 ಸದಸ್ಯರ ಭಾರತ ತಂಡವನ್ನು ಪ್ರಕಟಿಸಿದೆ. 

ದಿಲ್ಲಿಯ ಯಶ್​ ಧುಲ್​ ನಾಯಕನಾಗಿ ಮತ್ತು ಆಂಧ್ರಪ್ರದೇಶದ ಎಸ್​ ಕೆ ರಶೀದ್ ಉಪನಾಯಕನಾಗಿ ನೇಮಕವಾಗಿದ್ದಾರೆ.

ಈ 14ನೇ ಆವೃತ್ತಿಯ ಟೂರ್ನಿಯಲ್ಲಿ 16 ದೇಶಗಳು ಭಾಗವಹಿಸಲಿವೆ. ಒಟ್ಟು 48 ಪಂದ್ಯಗಳು 4 ಕೆರಿಬಿಯನ್ ದೇಶಗಳಲ್ಲಿ ನಡೆಯಲಿವೆ.

ಯಶ್​ ಧುಲ್(ನಾಯಕ, ಡೆಲ್ಲಿ), ಹರ್ನೂರ್ ಸಿಂಗ್(UTCA ಚಂಡೀಗಡ) ಅಂಗ್​ಕ್ರಿಶ್​ ರಘವಂಶಿ(ಮುಂಬೈ), ಎಸ್​ಕೆ ರಶೀದ್(ಆಂದ್ರ ಪ್ರದೇಶ)​, ನಿಶಾಂತ್ ಸಿಂಧು(ಹರಿಯಾಣ), ಸಿದ್ಧಾರ್ಥ್​ ಯಾದವ್​(ಉತ್ತರಪ್ರದೇಶ), ಅನೀಶ್ವರ್ ಗೌತಮ್(ಕರ್ನಾಟಕ)​, ದಿನೇಶ್ ಬಾನ(ವಿಕೀ, ಹರಿಯಾಣ) ಆರಾಧ್ಯ ಯಾದವ್​(ವಿಕೆಟ್ ಕೀಪರ್, ಉತ್ತರಪ್ರದೇಶ), ರಾಜ್​ ಅಂಗದ್ ಬಾವಾ(UTCA ಚಂಡೀಗಢ), ಮನವ್ ಪ್ರಕಾಶ್(ತಮಿಳುನಾಡು), ಕೌಶಾಲ್ ತಾಂಬೆ(ಮಹಾರಾಷ್ಟ್ರ), ಆರ್​ಎಸ್​ ಹಂಗಾರ್ಗೆಕರ್ (ಮಹಾರಾಷ್ಟ್ರ), ವಾಸು ವತ್ಸ್(ಉತ್ತರಪ್ರದೇಶ)​, ವಿಕಿ ಒಸ್ತ್ವಾಲ್(ಮಹಾರಾಷ್ಟ್ರ) , ರವಿಕುಮಾರ್(ಬೆಂಗಾಲ್), ಗರ್ವ್​ ಸಂಗ್ವಾನ್(ಹರಿಯಾಣ).

ಮೀಸಲು ಆಟಗಾರರು
ರಿಶಿತ್ ರೆಡ್ಡಿ(ಹೈದರಾಬಾದ್​), ಉದಯ್ ಶಹರನ್(ಪಂಜಾಬ್), ಅನಶ್​ ಗೋಸಾಯ್(ಸೌರಾಷ್ಟ್ರ), ಅಮೃತ್​ ರಾಜ್ ಉಪಾಧ್ಯಾಯ್(ಬೆಂಗಾಲ್), ಪಿಎಂ ಸಿಂಗ್ ರಾಥೋರ್(ರಾಜಸ್ಥಾನ್)

ಭಾರತ U19 ಬಿ ಗುಂಪಿನಲ್ಲಿದ್ದು, ಜನವರಿ 15 ರಂದು ದಕ್ಷಿಣ ಆಫ್ರಿಕಾ, ಜನವರಿ 18ರಂದು ಐರ್ಲೆಂಡ್ ಮತ್ತು ಜನವರಿ 22ರಂದು ಉಗಾಂಡ ವಿರುದ್ಧ ಸೆಣಸಾಡಲಿದೆ.

ಇತ್ತೀಚಿನ ಸುದ್ದಿ

ಜಾಹೀರಾತು