12:48 PM Monday1 - December 2025
ಬ್ರೇಕಿಂಗ್ ನ್ಯೂಸ್
ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ… ಪ್ರಧಾನಿ ಮೋದಿ ಇಂದು ಉಡುಪಿಗೆ: ಶ್ರೀಕೃಷ್ಣ ಮಠದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ… ಉಡುಪಿಗೆ ಪ್ರಧಾನಿ ಭೇಟಿ: ಎಸ್‌ಪಿಜಿ ಜತೆಗೆ ಖಾಕಿ ಸರ್ಪಗಾವಲು: ನಿಗದಿತ ಸಮಯಕ್ಕೆ ಮುಂಚಿತವಾಗಿಯೇ…

ಇತ್ತೀಚಿನ ಸುದ್ದಿ

ವಿಷಪೂರಿತ ಫಲ್ಗುಣಿ ನದಿ ನೀರು ; ಸಾಯುತ್ತಿವೆ ಮೀನುಗಳು ನೂರಾರು ! ಪಂಜರ ಮೀನು ಕೃಷಿಕರ ಕಣ್ಣೀರಿಗೆ ಹೊಣೆ ಯಾರು ?

15/05/2022, 21:27

ಗಣೇಶ್ ಅದ್ಯಪಾಡಿ ಮಂಗಳೂರು
info.reporterkarnataka@gmail.com

ಲಕ್ಷಗಟ್ಟಲೆ ಬಂಡವಾಳ ಹಾಕಿ ಹದಿನೆಂಟು ತಿಂಗಳು ಕಾಳಜಿಯಿಂದ ಸಾಕಿ ಇನ್ನೇನು ಮಾರಾಟಕ್ಕೆ ಅಣಿಯಾಗುವಾಗಲೆ ರಾಶಿ ರಾಶಿ ಮೀನುಗಳ ಮಾರಣ ಹೋಮ ನಡೆಯುತ್ತಿದೆ.

ಹೌದು, ಮಂಗಳೂರಿನ‌ ಬಂಗ್ರ ಕೂಳೂರು ಸಮೀಪ ಪಂಜರ ಮೀನು ಕೃಷಿ ಮಾಡುತ್ತಿರುವ ಮೀನುಗಾರರ ವ್ಯಥೆಯಿದು. ನಗರದ ಫಲ್ಗುಣಿ ನದಿಯಲ್ಲಿ ಪಂಜರ ಅಳವಡಿಸಿ ಮೀನು ಕೃಷಿ ಮಾಡುತ್ತಿರುವ ಸ್ಥಳೀಯರಾದ ರಾಯ್ಸ್ ಡಿಸೋಜಾ, ರುಫಿನಾ ಡಿಸೋಜಾ ಹಾಗೂ ಆಸ್ಟಿನ್ ಅವರ ಮೀನುಗಳು ಕಲುಷಿತಗೊಂಡ ನದಿಯ ನೀರಿನಿಂದಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದು, ಶನಿವಾರ ಒಂದೇ ದಿನ ತಲ ಒಂದೂವರೆ ಕೆ.ಜಿ ತೂಕದ 47 ಮೀನುಗಳು ಸತ್ತು ಹೋಗಿದ್ದು,‌ಕೃಷಿಕರನ್ನು ಚಿಂತೆಗೀಡು ಮಾಡಿದೆ.

ನದಿಯ ಕಿನಾರೆಯಲ್ಲಿರುವ ಅನೇಕ ಕಾರ್ಖಾನೆಗಳು ರಾಸಾಯನಿಕಯುಕ್ತ ನೀರನ್ನು ನದಿಗೆ ಬಿಡುತ್ತಿರುವುದೇ ಇದಕ್ಕೆ ಕಾರಣವಾಗಿದ್ದು, ಮಾಲಿನ್ಯ ನಿಯಂತ್ರಣ ಮಂಡಳಿ ಸೇರಿದಂತೆ‌ ಸಂಬಂಧಪಟ್ಟ ಇಲಾಖೆಗಳು ಕಣ್ಣು ಮುಚ್ಚಿ ಕೂತಿದ್ದು, ಮೀನುಗಾರರ ಕಣ್ಣೀರಿಗೆ ಬೆಲೆಯೆ ಇಲ್ಲದಂತಾಗಿದೆ.

ರಾಯ್ಸ್ ಅವರು ಹೇಳುವ ಪ್ರಕಾರ 2020ರ ಡಿಸೆಂಬರ್‌ನಲ್ಲಿ ಮೀನಿನ ಮರಿಗಳನ್ನು ಹಾಕಲಾಗಿತ್ತು, ಮಾರ್ಚ್ ತಿಂಗಳಲ್ಲಿ ಕಲುಷಿತ ನೀರು ಬರಲು ಶುರುವಾಗಿತ್ತು, ಆಗಲೇ ಹಲವಾರು ಮೀನುಗಳನ್ನು ಬಿಸಾಡಲಾಗಿತ್ತು.

ಒಟ್ಟಾಗಿ ಎಂಟೂವರೆ ಸಾವಿರ ಮೀನು ಮರಿಗಳನ್ನು ಹಾಕಿದ್ದೇವೆ. ಅರವತ್ತೈದು ದಿನಗಳಲ್ಲಿಯೇ ಬಹುತೇಕ ಮೀನುಗಳನ್ನು ಬಿಸಾಡಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಆಗಲೂ ಬಿಸಾಡಿದ್ದೇವೆ ಈಗ ಹದಿನೆಂಟು ತಿಂಗಳು ಸಾಕಿದ ಮೀನನ್ನು ತೆಗೆದು ಹೂಳುವಂತಾಗಿದೆ ಎಂದು ನೋವಿನಿಂದ ಹೇಳುತ್ತಾರೆ.

ಇಲ್ಲಿ ಸಾಕಿರುವ ಮುಡಾವು ಎನ್ನುವ ಮೀನಿನ ಮರಿಗೆ 50ರೂ. ದರವಿದೆ ಇದನ್ನು ಆಂದ್ರದಿಂದ ತರಿಸಿಕೊಳ್ಳಬೇಕು. ನಾಲ್ಕೂವರೆ ಐದು ಲಕ್ಷ ರೂಪಾಯಿ ಮೀನಿನ ಮರಿಗಳಿಗೆ ಲಕ್ಷಾಂತರ ರೂಪಾಯಿ ಗೂಡುಗಳಿಗೆ ಹಾಕು ಪ್ರತಿ ತಿಂಗಳು ಮೀನಿನ ಆಹಾರಕ್ಕೆ ನಲವತ್ತು ಸಾವಿರ ಖರ್ಚು ಮಾಡಿ ಕೊನೆಗೆ ಸಾಕಿದ ಮೀನುಗಳ ಶವದ ರಾಶಿ ನೋಡಿ ಕಣ್ಣೀರು ಹಾಕುತ್ತಿರುವ ಮೀನು ಕೃಷಿಕರಿಗಾದ ಲಕ್ಷಾಂತರ ರೂಪಾಯಿ ನಷ್ಟಕ್ಕೆ ಹೊಣೆ ಯಾರು ?

ತೆರೆದ ಕಣ್ಣಿಗೆ ನದಿಯ ನೀರು ಹಾಲು ಹಾಕದ ಚಹಾ ದಂತೆ ಕಪ್ಪು ಕಪ್ಪಾಗಿ ಕಂಡರೂ ಮಾಲಿನ್ಯ ನಿಯಂತ್ರಣ ಮಂಡಳಿ ಕುರುಡಾಗಿದ್ದು ಯಾಕೆ ? ಮೀನುಗಾರರಿಗಾದ ಲಕ್ಷಾಂತರ ರೂಪಾಯಿ ನಷ್ಟಕ್ಕೆ ಹೊಣೆ ಯಾರು ? ಮೀನು ಕೃಷಿಕರ ಕಣ್ಣೀರು ಒರೆಸುವವರಾರು ? ಕೆಎಫ್‌ಡಿಸಿ ಕೂಡ ಸುಮ್ಮನೆ ಕೂತಿದ್ದು ಯಾಕೆ ? ಎನ್ನುವ ಪ್ರಶ್ನೆಗಳು ಹುಟ್ಟಿಕೊಂಡಿದ್ದು ಇದಕ್ಕೆ ಸೂಕ್ತ ಉತ್ತರಗಳು ಸಿಗಬೇಕಾಗಿದೆ.

ಹದಿನೆಂಟು ತಿಂಗಳು ಕಾಳಜಿಯಿಂದ ಸಾಕಿದ ಮೀನುಗಳು ಈಗ ಶವವಾಗಿ ಮೇಲೆ ಬರುತ್ತಿರುವಾಗ ಕರುಳು ಚುರುಕು ಎನ್ನುತ್ತಿದೆ. ಎಂಟು ಟನ್‌ನಷ್ಟು ಇಳುವರಿ ಬರಬೇಕಾದಲ್ಲಿ ಈಗ ಒಂದು ಟನ್‌ ನಷ್ಟು ಮೀನು ಸಿಗುವುದು ಅನುಮಾನವಾಗಿದೆ.‌ಕಳೆದ ಒಂದೂವರೆ ವರ್ಷದಿಂದ ನದಿಯ ನೀರು ಕಲುಷಿತಗೊಳ್ಳುತ್ತಿದ್ದರೂ ಯಾರೂ ಈ ಬಗ್ಗೆ ಕ್ರಮವನ್ನು ತೆಗೆದುಕೊಳ್ಳುತ್ತಿಲ್ಲ.
-ರಾಯ್ಸ್ ಡಿಸೋಜಾ, ಪಂಜರ ಮೀನು ಕೃಷಿಕರು

ಇತ್ತೀಚಿನ ಸುದ್ದಿ

ಜಾಹೀರಾತು