4:04 AM Sunday23 - November 2025
ಬ್ರೇಕಿಂಗ್ ನ್ಯೂಸ್
ಐಸಿಡಿಎಸ್ ಸುವರ್ಣ ಮಹೋತ್ಸವ: ಎಐಸಿಸಿ ಅಧ್ಯಕ್ಷ ಖರ್ಗೆಗೆ ಆಹ್ವಾನ ನೀಡಿದ ಸಚಿವೆ ಲಕ್ಷ್ಮೀ… ಹದಗೆಟ್ಟ ರಸ್ತೆಯಲ್ಲಿ ಅವಘಡಗಳ ಸರಮಾಲೆ: ಮಾಕುಟ್ಟಾ ರಸ್ತೆ ಮದ್ಯ ಲಾರಿ ಮಗುಚ್ಚಿ ಸುಗಮ… Chikkamagaluru | ಎನ್.ಆರ್.ಪುರ: ರಾಜ್ಯ ಹೆದ್ದಾರಿಯಲ್ಲಿ ಒಂಟಿ ಸಲಗ ಪ್ರತ್ಯಕ್ಷ; ಜನರಲ್ಲಿ ಮತ್ತೆ… ಸಿದ್ದರಾಮಯ್ಯರ ಹಣಕಾಸು ಮಂತ್ರಿ ಮಾಡಿದ್ದೇ ನಾನು: ಸಿಎಂ ವಿರುದ್ದ ಮಾಜಿ ಪಿಎಂ ದೇವೇಗೌಡ… ಮೆಕ್ಕೆಜೋಳ ಖರೀದಿ-ಆಮದು ಬಗ್ಗೆ ಹಸಿ ಹಸಿ ಸುಳ್ಳು ಹೇಳುತ್ತಿದ್ದಾರೆ ಸಿಎಂ: ಕೇಂದ್ರ ಸಚಿವ… ರಾಜ್ಯಕ್ಕೆ ಯಾರು ಮುಖ್ಯಮಂತ್ರಿ ಎಂದು ಕಾಂಗ್ರೆಸ್‌ ಹೈಕಮಾಂಡ್‌ ಸ್ಪಷ್ಟವಾಗಿ ತಿಳಿಸಲಿ: ಪ್ರತಿಪಕ್ಷ ನಾಯಕ… ಕೇರಳದಿಂದ ಮಡಿಕೇರಿಗೆ ಅಕ್ರಮ ಕೆಂಪು ಕಲ್ಲು ಸಾಗಾಟ: ಸುಳ್ಯ ಪೊಲೀಸರಿಂದ ಲಾರಿ ವಶ ಡಿಕೆಶಿ ಮುಖ್ಯಮಂತ್ರಿ ಆಗಲಿ ಎಂದು 91 ಕೆಜಿ ಎಳ್ಳಿನ ತುಲಾಭಾರ: ಪಾವಗಡದಲ್ಲಿ ಅಭಿಮಾನಿಗಳ… ಮೀನುಗಾರಿಕಾ ವಿಶ್ವ ವಿದ್ಯಾಲಯ ಸ್ಥಾಪಿಸಲು ಸರಕಾರ ಸಿದ್ಧವಿದೆ: ಸಿಎಂ ಸಿದ್ದರಾಮಯ್ಯ ಘೋಷಣೆ ಮಂಡ್ಯ ಡಿಸಿಸಿ ಬ್ಯಾಂಕ್ ನೂತನ ಅಧ್ಯಕ್ಷರಾಗಿ ಸಚಿನ್ ಚಲುವರಾಯಸ್ವಾಮಿ ಆಯ್ಕೆ

ಇತ್ತೀಚಿನ ಸುದ್ದಿ

ಸ್ಮಾರ್ಟ್ ಸಿಟಿ: ಗಟ್ಟಿ ಮುಟ್ಟಾದ ರಸ್ತೆ ಅಗೆದು ಕಾಂಕ್ರೀಟ್ ಹಾಕಿದರೂ ಮೂಲ ಸಮಸ್ಯೆ ಜನಪ್ರತಿನಿಧಿಗಳಿಗೆ ಕಾಣಿಸ್ಲೇ ಇಲ್ಲ!

14/12/2023, 22:06

ಮಂಗಳೂರು(reporterkarnataka.com): ನೀವು ನೋಡುತ್ತಿರುವ ಈ ಚಿತ್ರಗಳು ನೀವು ಅಂದುಕೊಂಡಂತೆ ಸ್ಮಾರ್ಟ್ ಸಿಟಿ ಮಂಗಳೂರಿನದ್ದೇ ಆಗಿದೆ. ಅದಲ್ಲದೆ ನೀವು ತಿಳ್ಕೊಂಡಂತೆ ಹಂಪನಕಟ್ಟೆಯ ಪಿರೇರಾ ಹೊಟೇಲ್ ಸಮೀಪದ ಚಿತ್ರಣವಾಗಿದೆ.


ಸರಿ, ಹಾಗಾದರೆ ಇದರಲ್ಲೇನು ವಿಶೇಷ ಅಂದು ಕೊಳ್ಳಬಹುದು ನೀವು. ಪಿರೇರಾ ಹೊಟೇಲ್ ಬಳಿ ನಿಂತರೆ ಅಲ್ಲೇ ಸೆಂಟ್ರಲ್ ಮಾರ್ಕೆಟ್ ಕಡೆ ಹೋಗುವ ಕ್ರಾಸ್ ರೋಡ್ ಇದೆ. ಈ ರಸ್ತೆಯಲ್ಲಿ ಸಾಗಿದರೆ ರಥಬೀದಿಯತ್ತಲೂ ಹೋಗಬಹುದು, ಇಲ್ಲವೇ ಕೆ.ಎಸ್. ರಾವ್ ರಸ್ತೆಗೂ ಸೇರಬಹುದು. ಆದರೆ ಈ ಪಿರೇರಾ ಹೊಟೇಲ್ ಬಳಿಯ ಸಮಸ್ಯೆ ಏನೆಂದರೆ ಇಲ್ಲೇ ಸಿಟಿ ಬಸ್ ಸ್ಟಾಪ್ ಕಲ್ಪಿಸಲಾಗಿದೆ. ಬಸ್ ಶೆಲ್ಟರ್ ಕೂಡ ಇದೆ. ರೋಡ್ ಟರ್ನ್ ಆಗುವ ಜಾಗದಲ್ಲೇ ಪ್ರಭಾವಿಗಳಿಗೆ ತೊಂದರೆಯಾಗದಂತೆ ಅವೈಜ್ಞಾನಿಕ ಮಾದರಿಯಲ್ಲಿ ಬಸ್ ಶೆಲ್ಟರ್ ನಿರ್ಮಿಸಲಾಗಿದೆ. ಅಷ್ಟೇ ಅಲ್ಲದೆ ಇಲ್ಲಿ ರಸ್ತೆ ಬದಿಯೂ ಸರಿ ಇಲ್ಲ. ಗಟ್ಟಿಮುಟ್ಟಾದ ರಸ್ತೆಯನ್ನು ಅಗೆದು ಸ್ಮಾರ್ಟ್ ಸಿಟಿ ಹಣದಲ್ಲಿ ಕಾಂಕ್ರೀಟ್ ಹಾಕಿದವರಿಗೆ ಇದೆಲ್ಲ ಕಾಣಿಸೋಲ್ಲ. ರಸ್ತೆ ಬದಿ ತಗ್ಗು ದಿಣ್ಣೆಗಳಿಂದ ಕೂಡಿದೆ. ಪೀಕ್ ಅವರ್ ನಲ್ಲಿ ಇಲ್ಲಿ ಟ್ರಾಫಿಕ್ ಜಾಮ್ ಉಂಟಾಗುತ್ತದೆ. ಬಸ್ ಸೇರಿದಂತೆ ವಾಹನಗಳು ರಸ್ತೆ ಬಿಟ್ಟು ಕೆಳಗಿಳಿಯುತ್ತವೆ. ತಗ್ಗು ದಿಣ್ಣೆಯಲ್ಲಿ ಸಂಚರಿಸುತ್ತವೆ. ಇಂತಹ ನೂರಾರು ಸಮಸ್ಯೆಗಳು ನಿತ್ಯ ಜನರನ್ನು ಹಿಂಡಿ ಹಿಪ್ಪೆ ಮಾಡುತ್ತಿದೆ. ಆದರೆ ಅಧಿಕಾರಸ್ಥರಿಗೆ ಕಾಣಿಸೋದೇ ಇಲ್ಲ.

ಇತ್ತೀಚಿನ ಸುದ್ದಿ

ಜಾಹೀರಾತು