5:32 AM Wednesday11 - March 2026
ಬ್ರೇಕಿಂಗ್ ನ್ಯೂಸ್
ಚಿಕ್ಕಮಗಳೂರು: ಹಸುವನ್ನು ತುಳಿದು ಕೊಂದ ಕಾಡಾನೆ; ಮಾಣಿಮಕ್ಕಿ ಗ್ರಾಮಸ್ಥರಲ್ಲಿ ಆತಂಕ ತೀರ್ಥಹಳ್ಳಿ: ಕುವೆಂಪು ಜೈವಿಕ ಅರಣ್ಯದಲ್ಲಿ ಹತ್ತಿಕೊಂಡ ಬೆಂಕಿ; ಅರಣ್ಯಾಧಿಕಾರಿಗಳ ದೌಡು ಝೂ ಅಭಿ ಇನ್ನಿಲ್ಲ: ಕಾಲು ನೋವಿನಿಂದ ಬಳಲುತ್ತಿದ್ದ ಮತ್ತಿಗೋಡು ಶಿಬಿರದ ಸಾಕಾನೆ ವಿವಿಧ ಬೇಡಿಕೆ ಆಗ್ರಹಿಸಿ ವಿದ್ಯುತ್ ಗುತ್ತಿಗೆದಾರರ ಸಂಘದಿಂದ ಮಾ.11ರಂದು ಪ್ರತಿಭಟನೆ ಮೋದಿ ದೇಶದ ಮಾರ್ಯಾದೆ ಹಾಳು‌‌ ಮಾಡುತ್ತಿದ್ದಾರೆ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಟು‌… ಕಂಬಳಕ್ಕೆ ರಾಜ್ಯ ಸರಕಾರದಿಂದ ಹಣಕಾಸಿನ ನೆರವು: ಬಂಟ್ವಾಳದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ಹೈಕಮಾಂಡ್ ಸೂಚಿಸಿದರೆ ಕ್ಷಣಾರ್ಧದಲ್ಲಿ ಕುರ್ಚಿ ಬಿಡಲು ಸಿದ್ಧ: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ಜನಾಶೀರ್ವಾದವಿದ್ದರೆ ಮಾತ್ರ ಮುಖ್ಯಮಂತ್ರಿಯಾಗಲು ಸಾಧ್ಯ: ಮೈಸೂರಿನಲ್ಲಿ‌ ಸಿಎಂ ಸಿದ್ದರಾಮಯ್ಯ Kodagu | ಮಹಿಳೆಯ ಗರ್ಭಾಶಯದಲ್ಲಿ 7 ಕೆಜಿ ಗೆಡ್ಡೆ: ಶಸ್ತ್ರಚಿಕಿತ್ಸೆ ಮೂಲಕ ಹೊರಕ್ಕೆ Kodagu | ದೊಡ್ಡಕೊಡ್ಲಿ ಗ್ರಾಮದಲ್ಲಿ ಕೋವಿಯಿಂದ ಗುಂಡು ಸಿಡಿದು ಯುವಕ ಸಾವು

ಇತ್ತೀಚಿನ ಸುದ್ದಿ

ಸ್ಮಾರ್ಟ್ ಸಿಟಿ: ಗಟ್ಟಿ ಮುಟ್ಟಾದ ರಸ್ತೆ ಅಗೆದು ಕಾಂಕ್ರೀಟ್ ಹಾಕಿದರೂ ಮೂಲ ಸಮಸ್ಯೆ ಜನಪ್ರತಿನಿಧಿಗಳಿಗೆ ಕಾಣಿಸ್ಲೇ ಇಲ್ಲ!

14/12/2023, 22:06

ಮಂಗಳೂರು(reporterkarnataka.com): ನೀವು ನೋಡುತ್ತಿರುವ ಈ ಚಿತ್ರಗಳು ನೀವು ಅಂದುಕೊಂಡಂತೆ ಸ್ಮಾರ್ಟ್ ಸಿಟಿ ಮಂಗಳೂರಿನದ್ದೇ ಆಗಿದೆ. ಅದಲ್ಲದೆ ನೀವು ತಿಳ್ಕೊಂಡಂತೆ ಹಂಪನಕಟ್ಟೆಯ ಪಿರೇರಾ ಹೊಟೇಲ್ ಸಮೀಪದ ಚಿತ್ರಣವಾಗಿದೆ.


ಸರಿ, ಹಾಗಾದರೆ ಇದರಲ್ಲೇನು ವಿಶೇಷ ಅಂದು ಕೊಳ್ಳಬಹುದು ನೀವು. ಪಿರೇರಾ ಹೊಟೇಲ್ ಬಳಿ ನಿಂತರೆ ಅಲ್ಲೇ ಸೆಂಟ್ರಲ್ ಮಾರ್ಕೆಟ್ ಕಡೆ ಹೋಗುವ ಕ್ರಾಸ್ ರೋಡ್ ಇದೆ. ಈ ರಸ್ತೆಯಲ್ಲಿ ಸಾಗಿದರೆ ರಥಬೀದಿಯತ್ತಲೂ ಹೋಗಬಹುದು, ಇಲ್ಲವೇ ಕೆ.ಎಸ್. ರಾವ್ ರಸ್ತೆಗೂ ಸೇರಬಹುದು. ಆದರೆ ಈ ಪಿರೇರಾ ಹೊಟೇಲ್ ಬಳಿಯ ಸಮಸ್ಯೆ ಏನೆಂದರೆ ಇಲ್ಲೇ ಸಿಟಿ ಬಸ್ ಸ್ಟಾಪ್ ಕಲ್ಪಿಸಲಾಗಿದೆ. ಬಸ್ ಶೆಲ್ಟರ್ ಕೂಡ ಇದೆ. ರೋಡ್ ಟರ್ನ್ ಆಗುವ ಜಾಗದಲ್ಲೇ ಪ್ರಭಾವಿಗಳಿಗೆ ತೊಂದರೆಯಾಗದಂತೆ ಅವೈಜ್ಞಾನಿಕ ಮಾದರಿಯಲ್ಲಿ ಬಸ್ ಶೆಲ್ಟರ್ ನಿರ್ಮಿಸಲಾಗಿದೆ. ಅಷ್ಟೇ ಅಲ್ಲದೆ ಇಲ್ಲಿ ರಸ್ತೆ ಬದಿಯೂ ಸರಿ ಇಲ್ಲ. ಗಟ್ಟಿಮುಟ್ಟಾದ ರಸ್ತೆಯನ್ನು ಅಗೆದು ಸ್ಮಾರ್ಟ್ ಸಿಟಿ ಹಣದಲ್ಲಿ ಕಾಂಕ್ರೀಟ್ ಹಾಕಿದವರಿಗೆ ಇದೆಲ್ಲ ಕಾಣಿಸೋಲ್ಲ. ರಸ್ತೆ ಬದಿ ತಗ್ಗು ದಿಣ್ಣೆಗಳಿಂದ ಕೂಡಿದೆ. ಪೀಕ್ ಅವರ್ ನಲ್ಲಿ ಇಲ್ಲಿ ಟ್ರಾಫಿಕ್ ಜಾಮ್ ಉಂಟಾಗುತ್ತದೆ. ಬಸ್ ಸೇರಿದಂತೆ ವಾಹನಗಳು ರಸ್ತೆ ಬಿಟ್ಟು ಕೆಳಗಿಳಿಯುತ್ತವೆ. ತಗ್ಗು ದಿಣ್ಣೆಯಲ್ಲಿ ಸಂಚರಿಸುತ್ತವೆ. ಇಂತಹ ನೂರಾರು ಸಮಸ್ಯೆಗಳು ನಿತ್ಯ ಜನರನ್ನು ಹಿಂಡಿ ಹಿಪ್ಪೆ ಮಾಡುತ್ತಿದೆ. ಆದರೆ ಅಧಿಕಾರಸ್ಥರಿಗೆ ಕಾಣಿಸೋದೇ ಇಲ್ಲ.

ಇತ್ತೀಚಿನ ಸುದ್ದಿ

ಜಾಹೀರಾತು