6:49 AM Sunday6 - July 2025
ಬ್ರೇಕಿಂಗ್ ನ್ಯೂಸ್
Madikeri | ಕೊಡಗು ಜಿಲ್ಲೆ: ಜು. 6ರಿಂದ ಆಗಸ್ಟ್ 5ರ ವರೆಗೆ ಭಾರೀ… ಕೊಡವ ಸಮುದಾಯದಿಂದ ಚಿತ್ರರಂಗಕ್ಕೆ ಬಂದಿದ್ದು ನಾನೊಬ್ಬಳೇ ಎಂದ ರಶ್ಮಿಕಾಳಿಗೆ ಟೀಕೆಗಳ ಸುರಿಮಳೆ! ಮೆಟ್ರೋ ಹಳದಿ ಮಾರ್ಗ ಆಗಸ್ಟ್‌ ನಲ್ಲಿ ಸಾರ್ವಜನಿಕ ಸೇವೆಗೆ ಮುಕ್ತವಾಗದಿದ್ದರೆ ಪ್ರತಿಭಟನೆ: ಸಂಸದ… ವಿದ್ಯುತ್ ಆಘಾತಕ್ಕೆ ಯುವಕ ಬಲಿ: ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ… ಸಂಸದರು ಕೊಟ್ಟಿರುವ ಬ್ಯಾಗುಗಳು ಧೂಳು ತಿನ್ನುತ್ತಿವೆ!: ಬೆನ್ನು ಬಾಗಿದ ಮೇಲೆ ಕೊಡ್ತಾರಾ ಶಾಲಾ… ಕಾಂಗ್ರೆಸ್ ಗೆ ಅಧಿಕಾರ, ಆರೆಸ್ಸೆಸ್‌ ಬ್ಯಾನ್‌ ಹಗಲುಗನಸು: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ… ಚಿಕ್ಕಮಗಳೂರು: ಶಾಲೆಗೆ ರಜೆ; ಕೆರೆಯಲ್ಲಿ ಈಜಲು ಹೋದ ಬಾಲಕ ದಾರುಣ ಸಾವು ನಾಪತ್ತೆಯಾಗಿದ್ದ ಕೊಡಗಿನ ಫಾರೆಸ್ಟ್ ಗಾರ್ಡ್ ಶವವಾಗಿ ಪತ್ತೆ: ಸಾವಿನ ಸುತ್ತ ಅನುಮಾನದ ಹುತ್ತ ಭೂ ಸ್ವಾಧೀನ; ಕಾನೂನು ತೊಡಕು ನಿವಾರಿಸಿ ರೈತರ ಸಭೆ: ಮುಖ್ಯಮಂತ್ರಿ ಸಿದ್ದರಾಮಯ್ಯ Virajpete | ಎರಡು ಮಕ್ಕಳ ತಾಯಿಯೊಂದಿಗೆ ಲಿವಿಂಗ್ ರಿಲೇಶನ್ ಶಿಪ್: ಯುವಕ ಆತ್ಮಹತ್ಯೆಗೆ…

ಇತ್ತೀಚಿನ ಸುದ್ದಿ

ಸ್ಮಾರ್ಟ್ ಸಿಟಿ: ಗಟ್ಟಿ ಮುಟ್ಟಾದ ರಸ್ತೆ ಅಗೆದು ಕಾಂಕ್ರೀಟ್ ಹಾಕಿದರೂ ಮೂಲ ಸಮಸ್ಯೆ ಜನಪ್ರತಿನಿಧಿಗಳಿಗೆ ಕಾಣಿಸ್ಲೇ ಇಲ್ಲ!

14/12/2023, 22:06

ಮಂಗಳೂರು(reporterkarnataka.com): ನೀವು ನೋಡುತ್ತಿರುವ ಈ ಚಿತ್ರಗಳು ನೀವು ಅಂದುಕೊಂಡಂತೆ ಸ್ಮಾರ್ಟ್ ಸಿಟಿ ಮಂಗಳೂರಿನದ್ದೇ ಆಗಿದೆ. ಅದಲ್ಲದೆ ನೀವು ತಿಳ್ಕೊಂಡಂತೆ ಹಂಪನಕಟ್ಟೆಯ ಪಿರೇರಾ ಹೊಟೇಲ್ ಸಮೀಪದ ಚಿತ್ರಣವಾಗಿದೆ.


ಸರಿ, ಹಾಗಾದರೆ ಇದರಲ್ಲೇನು ವಿಶೇಷ ಅಂದು ಕೊಳ್ಳಬಹುದು ನೀವು. ಪಿರೇರಾ ಹೊಟೇಲ್ ಬಳಿ ನಿಂತರೆ ಅಲ್ಲೇ ಸೆಂಟ್ರಲ್ ಮಾರ್ಕೆಟ್ ಕಡೆ ಹೋಗುವ ಕ್ರಾಸ್ ರೋಡ್ ಇದೆ. ಈ ರಸ್ತೆಯಲ್ಲಿ ಸಾಗಿದರೆ ರಥಬೀದಿಯತ್ತಲೂ ಹೋಗಬಹುದು, ಇಲ್ಲವೇ ಕೆ.ಎಸ್. ರಾವ್ ರಸ್ತೆಗೂ ಸೇರಬಹುದು. ಆದರೆ ಈ ಪಿರೇರಾ ಹೊಟೇಲ್ ಬಳಿಯ ಸಮಸ್ಯೆ ಏನೆಂದರೆ ಇಲ್ಲೇ ಸಿಟಿ ಬಸ್ ಸ್ಟಾಪ್ ಕಲ್ಪಿಸಲಾಗಿದೆ. ಬಸ್ ಶೆಲ್ಟರ್ ಕೂಡ ಇದೆ. ರೋಡ್ ಟರ್ನ್ ಆಗುವ ಜಾಗದಲ್ಲೇ ಪ್ರಭಾವಿಗಳಿಗೆ ತೊಂದರೆಯಾಗದಂತೆ ಅವೈಜ್ಞಾನಿಕ ಮಾದರಿಯಲ್ಲಿ ಬಸ್ ಶೆಲ್ಟರ್ ನಿರ್ಮಿಸಲಾಗಿದೆ. ಅಷ್ಟೇ ಅಲ್ಲದೆ ಇಲ್ಲಿ ರಸ್ತೆ ಬದಿಯೂ ಸರಿ ಇಲ್ಲ. ಗಟ್ಟಿಮುಟ್ಟಾದ ರಸ್ತೆಯನ್ನು ಅಗೆದು ಸ್ಮಾರ್ಟ್ ಸಿಟಿ ಹಣದಲ್ಲಿ ಕಾಂಕ್ರೀಟ್ ಹಾಕಿದವರಿಗೆ ಇದೆಲ್ಲ ಕಾಣಿಸೋಲ್ಲ. ರಸ್ತೆ ಬದಿ ತಗ್ಗು ದಿಣ್ಣೆಗಳಿಂದ ಕೂಡಿದೆ. ಪೀಕ್ ಅವರ್ ನಲ್ಲಿ ಇಲ್ಲಿ ಟ್ರಾಫಿಕ್ ಜಾಮ್ ಉಂಟಾಗುತ್ತದೆ. ಬಸ್ ಸೇರಿದಂತೆ ವಾಹನಗಳು ರಸ್ತೆ ಬಿಟ್ಟು ಕೆಳಗಿಳಿಯುತ್ತವೆ. ತಗ್ಗು ದಿಣ್ಣೆಯಲ್ಲಿ ಸಂಚರಿಸುತ್ತವೆ. ಇಂತಹ ನೂರಾರು ಸಮಸ್ಯೆಗಳು ನಿತ್ಯ ಜನರನ್ನು ಹಿಂಡಿ ಹಿಪ್ಪೆ ಮಾಡುತ್ತಿದೆ. ಆದರೆ ಅಧಿಕಾರಸ್ಥರಿಗೆ ಕಾಣಿಸೋದೇ ಇಲ್ಲ.

ಇತ್ತೀಚಿನ ಸುದ್ದಿ

ಜಾಹೀರಾತು