12:09 PM Monday23 - March 2026
ಬ್ರೇಕಿಂಗ್ ನ್ಯೂಸ್
ರಷ್ಯಾದಿಂದ ಮಂಗಳೂರಿಗೆ ಕಚ್ಚಾತೈಲ ತಂದ ಹಡಗು: ಅನ್‌ಲೋಡಿಂಗ್‌ ಆರಂಭ; ಎಂಆರ್‌ಪಿಎಲ್‌ಗೆ ರವಾನೆ ಶುರು ವಿರಾಜಪೇಟೆ ವಲಯ ಅರಣ್ಯ ವ್ಯಾಪ್ತಿಯ ಚೆಂಬೆಬೆಳ್ಳೂರು ಗ್ರಾಮದಲ್ಲಿ ಒಂಟಿ ಸಲಗ ಸೆರೆ ಕೈಗೆ ಕಂಟಕ? | ದಾವಣಗೆರೆ ಉಪ ಚುನಾವಣೆ: ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿಯಾಗಿ ಸಾದಿಕ್… ಮಸ್ಕಿ ಪುರಸಭೆ ಮುಖ್ಯಾಧಿಕಾರಿಗೆ ಹೆಚ್ಚುವರಿ ಹೊಣೆ: ಹೆಚ್ಚುತ್ತಿರುವ ರಸ್ತೆ, ನೀರು, ಸ್ವಚ್ಛತೆ ಸಮಸ್ಯೆ ರಂಗೇರಿದ ದಾವಣಗೆರೆ ಉಪ ಚುನಾವಣೆ ಸಮರ: ಕೈ-ಕಮಲ ಅಭ್ಯರ್ಥಿಗಳ ಆಸ್ತಿ ವಿವರ ಘೋಷಣೆ ದಾವಣಗೆರೆ ದಕ್ಷಿಣ ಬೈ ಎಲೆಕ್ಷನ್: ಬಿಜೆಪಿ ಅಭ್ಯರ್ಥಿಯಾಗಿ ಶ್ರೀನಿವಾಸ್ ದಾಸಕರಿಯಪ್ಪ ನಾಮಪತ್ರ ಸಲ್ಲಿಕೆ ದಾವಣಗೆರೆ ದಕ್ಷಿಣ ಉಪ ಚುನಾವಣೆ: ಕಾಂಗ್ರೆಸ್‌ ಟಿಕೆಟ್‌ ಘೋಷಣೆಗೂ ಮುನ್ನವೇ ಸಮರ್ಥ್‌ ಶಾಮನೂರು… ಬಾಗಲಕೋಟೆ ಉಪ ಚುನಾವಣೆ: ನಾಮಪತ್ರ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಬಿಸಿಲ‌ ಧಗೆ: ಕುದುರೆಮುಖ ರಾಷ್ಟ್ರೀಯ ಉದ್ಯಾನವನದ 25ಕ್ಕೂ ಹೆಚ್ಚು ಕಡೆಯಲ್ಲಿ ಶೋಲಾ ಹುಲ್ಲುಗಾವಲಿಗೆ… Kodagu | ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ಆರೋಪ: ಆಟೋ ಚಾಲಕ ಅರೆಸ್ಟ್

ಇತ್ತೀಚಿನ ಸುದ್ದಿ

ರಷ್ಯಾದಿಂದ ಮಂಗಳೂರಿಗೆ ಕಚ್ಚಾತೈಲ ತಂದ ಹಡಗು: ಅನ್‌ಲೋಡಿಂಗ್‌ ಆರಂಭ; ಎಂಆರ್‌ಪಿಎಲ್‌ಗೆ ರವಾನೆ ಶುರು

23/03/2026, 11:58

ಮಂಗಳೂರು(reporterkarnataka.com): ರಷ್ಯಾದ ಪ್ರಿಮೋರ್ಸ್ಕ್ ಎಂಬಲ್ಲಿಂದ “ಉರಾಲ್‌’ ಕಚ್ಚಾತೈಲ ಹೇರಿಕೊಂಡು ಬಂದ “ಅಕ್ವಾ ಟೈಟಾನ್‌’ ಈಗಾಗಲೇ ಮಂಗಳೂರು ಬಂದರಿನ ಹೊರ ವಲಯದಲ್ಲಿ ಸುಮಾರು 12 ನಾಟಿಕಲ್‌ ಮೈಲು ದೂರದ ತೇಲುವ ಜಟ್ಟಿಯಲ್ಲಿ ಲಂಗರು ಹಾಕಿದೆ. ಭಾನುವಾರ ಬೆಳಗ್ಗೆ 7 ಗಂಟೆಯಿಂದ ಕಚ್ಚಾ ತೈಲ ಅನ್‌ ಲೋಡಿಂಗ್‌ ಪ್ರಕ್ರಿಯೆ ಆರಂಭವಾಗಿದೆ. ಅಲ್ಲಿಂದ ಎಂಆರ್‌ಪಿಎಲ್‌ಗೆ ಈ ತೈಲ ರವಾನೆಯಾಗಿ ಸಂಸ್ಕರಣೆಗೊಳ್ಳಲಿದೆ. ಒಂದೆರಡು ದಿನದಲ್ಲಿ ಅನ್‌ ಲೋಡಿಂಗ್‌ ಪೂರ್ಣವಾಗಿ ಬಳಿಕ ಸುಮಾರು ಒಂದು ವಾರದ ಸಂಸ್ಕರಣೆ ಪ್ರಕ್ರಿಯೆ ಎಂಆರ್‌ಪಿಎಲ್‌ನಲ್ಲಿ ನಡೆಯಲಿದೆ. ಸಂಸ್ಕರಣೆ ಆದ ಬಳಿಕ ಪೆಟ್ರೋಲ್‌, ಡೀಸೆಲ್‌ ಉತ್ಪಾದನೆ ಆಗಲಿದೆ. ಎಚ್‌ಪಿಸಿಎಲ್‌ ಸಹಿತ ವಿವಿಧ ಕಂಪೆನಿಗಳು ಇದರ ವಿತರಣೆ ಅವಕಾಶ ಪಡೆಯುವ ಸಾಧ್ಯತೆ ಇದೆ. ರಾಜ್ಯಕ್ಕೆ ಇದು ಪೂರೈಕೆಯಾಗುವ ನಿರೀಕ್ಷೆ ಇದೆ.
ಚೀನದತ್ತ ಹೊರಟಿದ್ದ ಒಟ್ಟು ಏಳು ಕಚ್ಚಾತೈಲ ಹೊತ್ತ ಹಡಗುಗಳು ಭಾರತದತ್ತ ಹಾದಿ ಬದಲಾಯಿಸಿದ್ದು, ಅಕ್ವಾ ಟೈಟಾನ್‌ ಇವುಗಳಲ್ಲಿ ಒಂದು. ಇನ್ನುಳಿದ ಹಡಗುಗಳು ಮುಂದಿನ ದಿನಗಳಲ್ಲಿ ಬರಲಿವೆ ಎನ್ನಲಾಗಿದೆ. ಇವೆಲ್ಲವೂ ರಷ್ಯ ಸರಕಾರದ ನೇರ ನಿಯಂತ್ರಣದಲ್ಲಿರುವ ಹಡಗುಗಳಾ ಗಿದ್ದು, ರಷ್ಯಾದಿಂದ ಕಚ್ಚಾತೈಲ ಆಮದಿಗೆ ನಿರ್ಬಂಧ ತೆರವಾದ ತತ್‌ಕ್ಷಣ ಭಾರತದತ್ತ ತಿರುಗಿರುವುದು ಮಹತ್ವದ ಬೆಳವಣಿಗೆಯಾಗಿದೆ.

*ಸೌದಿಯಿಂದ ಮತ್ತೊಂದು ಹಡಗು?*
ಎಚ್‌ಪಿಸಿಎಲ್‌ಗೆ ಸಂಬಂಧಿಸಿದ ಎಲ್‌ಪಿಜಿ ಹೊತ್ತ ಹಡಗು ಮಾ.25ರ ವೇಳೆಗೆ ಸೌದಿಯಿಂದ ಮಂಗಳೂರಿಗೆ ಆಗಮಿಸುವ ಬಗ್ಗೆ ಮಾಹಿತಿ ಇದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ನವಮಂಗಳೂರು ಬಂದರಿಗೆ ಲಭ್ಯವಾಗಿಲ್ಲ. ಒಂದು ವೇಳೆ ಈ ಹಡಗು ಮಂಗಳೂರಿಗೆ ಆಗಮಿಸಿದರೆ ಎಲ್‌ಪಿಎಜಿ ಆತಂಕ ಕೊಂಚ ಮಟ್ಟಿಗೆ ನಿವಾರಣೆಯಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಇತ್ತೀಚಿನ ಸುದ್ದಿ

ಜಾಹೀರಾತು