1:24 PM Friday17 - July 2026
ಬ್ರೇಕಿಂಗ್ ನ್ಯೂಸ್
ವಿರಾಜಪೇಟೆ | ಬೇತ್ರಿ ಸೇತುವೆ ಮೇಲಿಂದ ಯುವತಿಯ ಕಾವೇರಿ ನದಿಗೆ ತಳ್ಳಿ ಕೊಲೆಗೆ… ಬೆಂಗಳೂರಿನಲ್ಲಿ ಘೋರ ದುರಂತ: ಹೋಟೆಲ್ ಲಿಫ್ಟ್ ನಲ್ಲಿ ತಲೆ ಸಿಲುಕಿ ಧಾರವಾಡ ಯುವಕ… ಮೂಡಿಗೆರೆ ಕಾಂಗ್ರೆಸ್ ನಲ್ಲಿ ಶೀತಲ ಸಮರ: ಚಿಕ್ಕಮಗಳೂರಿನಲ್ಲಿ ಭಿನ್ನಮತೀಯರ ಸಭೆ; ಶಾಸಕಿ ನಯನಾ… ಬಿಎಂಟಿಸಿ ಕಂಡಕ್ಟರ್ ಟಿಕೆಟ್ ಬ್ಯಾಗ್ ಕದ್ದ ಚಾಲಾಕಿ ಮಹಿಳೆ!: ನೋಡೋಕೆ ಸೈಲೆಂಟು, ಮಾಡಿದ… ಧರ್ಮಸ್ಥಳ ಪ್ರಕರಣ: ಎಸ್ ಐಟಿಯಿಂದ ಬೆಳ್ತಂಗಡಿ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಕೆ ಬೆಂಗಳೂರು: ಮಹಿಳೆ ಜತೆ ಅಸಭ್ಯ ವರ್ತನೆ; ಡೆಲಿವರಿ ಬಾಯ್ ಬಂಧನ *ಕೊಡ್ಲಿಪೇಟೆಯ ನದಿಯಲ್ಲಿ ನಾಪತ್ತೆಯಾಗಿದ್ದ ನಾಗರಾಜು, ಶಿವರಾಜು ಶವ ಪತ್ತೆ* ಹಿರಿಯ ಗಾಯಕಿ ಎಸ್​​. ಜಾನಕಿ ನಿಧನ: ಅಜ್ಜಿ ನೆನೆದು ಮೊಮ್ಮಗಳು ಅಪ್ಸರಾ ಭಾವುಕ ಆಸ್ಟ್ರೇಲಿಯಾ | ಪ್ರಧಾನಿ ಮೋದಿ ತಂಗಿದ್ದ ಆಸೀಸ್‌ ಹೋಟೆಲ್‌ಗೆ ನುಗ್ಗಿ ಭಾರತ ವಿರೋಧಿ… ಬೆಂಗಳೂರು: ಶಾಸಕಿ ನಯನ ಮೋಟಮ್ಮ ಪರ ಕಾರ್ಯಕರ್ತರ ಬ್ಯಾಟಿಂಗ್; ಕೆಪಿಸಿಸಿ ಅಧ್ಯಕ್ಷರಿಗೆ ವಿವರಣೆ

ಇತ್ತೀಚಿನ ಸುದ್ದಿ

ಪೀಠ ಸೇವಕರ ವಾರ್ಷಿಕ ದಿನ: ಆಂಜೆಲೋರ್ ಚರ್ಚ್‌ನಲ್ಲಿ ಹರ್ಷಭರಿತ ಆಚರಣೆ

25/10/2024, 13:47

ಮಂಗಳೂರು(reporterkarnataka.com): ನಗರದ ನಾಗುರಿಯ ಗಾರ್ಡಿಯನ್ ಏಂಜಲ್ ಚರ್ಚ್ ಆಂಜೆಲೋರ್ ನಲ್ಲಿ, ಇದೇ ಅಕ್ಟೋಬರ್ 20ರಂದು ಪೀಠ ಸೇವಕರ ವಾರ್ಷಿಕ ದಿನವನ್ನು ಹರ್ಷಭರಿತವಾಗಿ ಆಚರಿಸಲಾಯಿತು.
ಬೆಳಗ್ಗೆ 9:30ಕ್ಕೆ ಚರ್ಚ್‌ನಲ್ಲಿ ಬಲಿಪೂಜೆಯನ್ನು ಸಲ್ಲಿಸಲಾಯಿತು. ಈ ಬಲಿಪೂಜೆಗೆ ಆಂಜೆಲೋರ್ ಚರ್ಚಿನ ಧರ್ಮಗುರು ವಂ. ಫ್ರೆಡ್ರಿಕ್ ಮೊಂತೇರೊರವರು ಪ್ರಧಾನ ಯಾಜಕರಾಗಿದ್ದರು. ಬಲಿಪೂಜೆಯ ಬಳಿಕ ಚರ್ಚಿನ ಸ್ವರ್ಣ ಮಹೋತ್ಸವ ಸ್ಮಾರಕ ಸಭಾಂಗಣದಲ್ಲಿ ಸಣ್ಣ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ವಾರ್ಷಿಕ ವರದಿಯನ್ನು ಹಾಗೂ ವರುಷದ ಹಿಂದೆ ನಡೆದ ಸ್ಪರ್ಧೆಗಳ ಬಹುಮಾನಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದ ಮುಖ್ಯ ಭಾಷಣವನ್ನು ನೀಡಿದ ವಸತಿ ಯಾಜಕರಾದ, ವಂ. ಸ್ಟ್ಯಾನಿ ಫೆರ್ನಾಂಡಿಸ್ ಅವರು ಬಲಿ ಪೂಜಾ ಸೇವೆಯಲ್ಲಿ ಪೀಠ ಸೇವಕರ ಪಾತ್ರದ ಮಹತ್ವವನ್ನು ವಿವರಿಸಿ, ಅವರ ನಿಷ್ಠೆಯ ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಅಧ್ಯಕ್ಷೀಯ ಭಾಷಣದಲ್ಲಿ ವಂ. ಫ್ರೆಡ್ರಿಕ್ ಮೊಂತೇರೊರವರು ಪೀಠ ಸೇವೆ, ಧರ್ಮಗುರು ಮತ್ತು ಧಾರ್ಮಿಕ ಜೀವನದ ಕರೆಗೆ ನೆಲೆ ಎಂದು ವಿವರಿಸಿದರು. ಅಲ್ಲದೆ, ಮಕ್ಕಳು ಪೀಠ ಸೇವೆಗೆ ತೊಡಗಿಸಿಕೊಳ್ಳಲು ಸಹಕರಿಸಿದ ಪಾಲಕರಿಗೆ ಧನ್ಯವಾದಗಳನ್ನು ತಿಳಿಸಿದರು.
ವೇದಿಕೆ ಕಾರ್ಯಕ್ರಮದ ನಂತರ ಪೀಠ ಸೇವಕರು ಸುಂದರ ಮತ್ತು ಅರ್ಥಪೂರ್ಣ ಸಾಂಸ್ಕೃತಿಕ ಕಾರ್ಯಕ್ರಮವನ್ನು ಪ್ರಸ್ತುತಪಡಿಸಿದರು.
ಈ ಸಂದರ್ಭದಲ್ಲಿ ಸೇವಾದರ್ಷಿ ಜೀವನ್ ಲೋಬೊ, ಪಾವ್ಲ್ ರೋಡ್ರಿಗಸ್ (ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷರು), ಲೋಲಿನಾ ಡಿಸೋಜಾ (ಕಾರ್ಯದರ್ಶಿ), ರೆನಿಟಾ ಮೆನೇಜಸ್ (21 ಆಯೋಗಗಳ ಸಂಯೋಜಕಿ), ಮರಿಯಾ ಡೆಸಾ, ಜ್ಯೋತಿ ಮೊಂತೇರೊ, ಸರಿತಾ ಡಿಸಿಲ್ವಾ (ಪ್ರೇರಕರು) ಮತ್ತು ಪೀಠ ಸೇವಕರ ಸಂಘದ ಅಧ್ಯಕ್ಷೆ ರಿವಾ ಪಿಂಟೊ ಹಾಗೂ ಕಾರ್ಯದರ್ಶಿ ಗ್ಲೆನಿತ್ ಡಿಕುನ್ಹಾ ಹಾಜರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು