6:33 PM Thursday3 - July 2025
ಬ್ರೇಕಿಂಗ್ ನ್ಯೂಸ್
ಸೋರುತ್ತಿದೆ ಸೂರು; ಕೊಠಡಿ ತುಂಬಾ ನೀರು: ರಾಷ್ಟ್ರಕವಿ ಕುವೆಂಪು ಓದಿದೆ ಶಾಲೆಯ ಕೇಳುವವರೇ… ಮಲೆನಾಡಲ್ಲಿ ಮುಂದುವರಿದ ಮಳೆ: ಶೃಂಗೇರಿಯ ಗಾಂಧಿ ಮೈದಾನದ ರಸ್ತೆಗೆ ನುಗ್ಗಿ ನೆರೆ ನೀರು;… ಮುಖ್ಯಮಂತ್ರಿ ಸ್ಥಾನಕ್ಕೆ ಯಾವುದೇ ಪೈಪೋಟಿಯಿಲ್ಲ: ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ Accident | ಸುರತ್ಕಲ್ ಬಳಿ ಎರಡು ಖಾಸಗಿ ಬಸ್ಸುಗಳು ಮುಖಾಮುಖಿ ಡಿಕ್ಕಿ: 28… Chikkaballapura | ರಾಜ್ಯ ಸಚಿವ ಸಂಪುಟ ಸಭೆ: ಮುಖ್ಯಮಂತ್ರಿ ಘೋಷಿಸಿದ ಯೋಜನೆ, ತೀರ್ಮಾನಗಳೇನು? JDS Protest | ರಾಜ್ಯದಲ್ಲಿ ಆರ್ಥಿಕ ಅರಾಜಕತೆ: ಬೆಂಗಳೂರು ಪ್ರತಿಭಟನೆಯಲ್ಲಿ ಜೆಡಿಎಸ್ ಆರೋಪ Dharwad | ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರದಿಂದ ಕ್ರಾಂತಿಕಾರಕ ಯೋಜನೆ ಜಾರಿ: ಕಾರ್ಮಿಕ… ಬೆಂಗಳೂರು ಕಾಲ್ತುಳಿತದ ಪ್ರಕರಣ; ಸಿಎಟಿ ಆದೇಶ ವಿರುದ್ಧ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ: ಮುಖ್ಯಮಂತ್ರಿ Karnataka CM | ಮಾಧ್ಯಮಗಳು ನನ್ನನ್ನೂ ಸೇರಿ ಅಧಿಕಾರಸ್ಥರ ಓಲೈಕೆ ಮಾಡಬಾರದು: ಮುಖ್ಯಮಂತ್ರಿ… Kodagu | ಕುಶಾಲನಗರದ ಕೂಡಿಗೆಯಲ್ಲಿ ಚಿನ್ನದಂಗಡಿ ಮಾಲೀಕನ ಮನೆಗೆ ಕನ್ನ: 14 ಲಕ್ಷ…

ಇತ್ತೀಚಿನ ಸುದ್ದಿ

ಪರಿಸರ ಸ್ನೇಹಿ ಗಣೇಶೋತ್ಸವ ಆಚರಣೆ ಮಾಡಿ; ಸಾರ್ವಜನಿಕರಿಗೆ ಮಾರಕವಾಗುವ ಡಿಜೆ ಬೇಡ: ಡಿವೈಎಸ್’ಪಿ ಗಜಾನನ ವಾಮನ ಸುತಾರ

03/09/2024, 16:15

ರಶ್ಮಿ ಶ್ರೀಕಾಂತ್ ನಾಯಕ್ ತೀರ್ಥಹಳ್ಳಿ ಶಿವಮೊಗ್ಗ

info.reporterkarnataka@gmail.com

ಗಣಪತಿ ಹಬ್ಬದ ಸಂದರ್ಭದಲ್ಲಿ ದಯವಿಟ್ಟು ಪೊಲೀಸರ ಜೊತೆಗೆ ನೀವು ಕೂಡ ಸಹಕರಿಸಿ. ಗಣೇಶೋತ್ಸವಕ್ಕೆ ಸಂಬಂಧಪಟ್ಟಂತೆ ಪ್ರತಿ ಇಲಾಖೆಯಿಂದ ತಹಸೀಲ್ದಾರ್ ಕಚೇರಿಯಲ್ಲೇ ಒಂದೇ ಕಡೆ ಅನುಮತಿ ಪಡೆಯಬಹುದು. ಇದರಿಂದ ನಿಮ್ಮ ಸಮಯ ಮತ್ತು ಪದೇ ಪದೇ ಅಲೆದಾಟ ಇರುವುದಿಲ್ಲ. ಇನ್ನುಳಿದಂತೆ ಏನಾದರು ಸಮಸ್ಯೆ ಅಥವಾ ಅನುಮಾನ ಇದ್ದರೆ ನಮ್ಮನ್ನು ಸಂಪರ್ಕಿಸಬಹುದು ಎಂದು ಡಿವೈಎಸ್’ಪಿ ಗಜಾನನ ವಾಮನ ಸುತಾರ ಹೇಳಿದರು.
ಮಂಗಳವಾರ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಸಾರ್ವಜನಿಕ ಗಣಪತಿ ಉತ್ಸವದ ಸಮಿತಿ ಜೊತೆಗೆ ಮಾತನಾಡಿದ ಅವರು, ಛತ್ರಕೇರಿಯ ಗಣಪತಿ ಪ್ರತಿಯೊಬ್ಬರಿಗೂ ಆದರ್ಶವಾಗಿದೆ.
ಛತ್ರಕೇರಿ ಗಣಪತಿ ಸಮಿತಿಯಿಂದ ವಿಸರ್ಜನೆ ಸಮಯದಲ್ಲಿ ಡಿಜೆ, ಸೌಂಡ್, ಅಶ್ಲೀಲತೇ ಗೀತೆ ಇರುವುದಿಲ್ಲ. ಹಾಗಾಗಿ ಡಿಜೆ ಬದಲಾಗಿ ಜಾನಪದ, ಚಂಡೆಯಂತೆ ಏನಾದರು ಈ ಬಾರಿ ಬದಲಾವಣೆಯನ್ನು ಪ್ರತಿಯೊಬ್ಬರು ಗಣಪತಿ ಸಮಿತಿಯವರು ಮಾಡಿಕೊಳ್ಳಿ. ಯಾವ ರಸ್ತೆಯಲ್ಲಿ ಹೋಗಬೇಕು ಎಂದು ಮೊದಲು ತೀರ್ಮಾನ ತೆಗೆದುಕೊಂಡಿರುತ್ತಿರೋ ಅದೇ ರಸ್ತೆಯಲ್ಲಿ ಗಣಪತಿ ಮೆರವಣಿಗೆ ಹೋಗಬೇಕು, ಖಡ್ಡಾಯವಾಗಿ ಯಾವುದೇ ಕಾರಣಕ್ಕೂ ಗಣಪತಿ ಮೆರವಣಿಗೆಯ ರಸ್ತೆ ಬದಲಾವಣೆ ಮಾಡುವಂತಿಲ್ಲ, ಹಾಗೆ ಮದ್ಯಪಾನ ಮಾಡಿ ಕೊಂಡು ಗಣಪತಿ ವಿಸರ್ಜನೆ ಮೆರವಣಿಗೆ ಮಾಡುವಂತಿಲ್ಲ ಎಂದರು.
ಆದಷ್ಟು ಪರಿಸರ ಸ್ನೇಹಿ ಗಣಪತಿಯನ್ನು ಇಡುವಂತೆ ನೋಡಿಕೊಳ್ಳಿ. ನದಿ , ಕೆರೆ, ಬಾವಿ ಜಲಚರಗಳಿಗೆ ತೊಂದರೆ ಆಗದಂತೆ ಮಣ್ಣಿನ ಗಣಪತಿ ಇಡಿ. ಸಮಿತಿಯಿಂದ ಊಟ ಹಾಗೂ ಸತ್ಯನಾರಾಯಣ ಪೂಜೆಯನ್ನು ಪ್ರತಿಯೊಬ್ಬರು ಮಾಡುತ್ತೀರಾ ಊಟದ ಸ್ವಚ್ಛತೆ ಬಗ್ಗೆ ಹೆಚ್ಚಿನ ಗಮನ ಇಡಬೇಕು, ಆ ಸಮಯದಲ್ಲಿ ಬ್ಯಾರಿಕೇಡ್ ಹಾಗೂ ಪೊಲೀಸ್ ವ್ಯವಸ್ಥೆ ಬೇಕಾದರೆ ಮೊದಲೇ ತಿಳಿಸಬೇಕು. ಗಣಪತಿ ಪೆಂಡಾಲ್ ಬಳಿ ಸಮಿತಿಯವರು ಇರಲೇಬೇಕು, ಗಣಪತಿಯನ್ನು ಒಬ್ಬನ್ನನ್ನೇ ಬಿಟ್ಟು ಹೋಗುವಂತಿಲ್ಲ ಎಂದು ಅವರು ತಿಳಿಸಿದರು.
ವಿಸರ್ಜನೆ ಸಮಯದಲ್ಲಿ ಮುನ್ನೆಚ್ಚರಿಕೆ ವಹಿಸದೆ ಕೆಲವು ಅವಘಡ ಅಗುವ ಸಂಭವ ಸಾಧ್ಯತೆ ಇದ್ದು ಕೆಲವು ಕಡೆಗಳಲ್ಲಿ ನಾವು ಅವಘಡ ಸಂಭವಿಸಿದ್ದು ನೊಡಿದ್ದೇವೆ. ಇದರ ಬಗ್ಗೆ ತಾವೆಲ್ಲರೂ ಎಚ್ಚರಿಕೆ ವಹಿಸಬೇಕು. ಈಜು ಬರುವವರು ಮಾತ್ರ ಗಣಪತಿಯನ್ನು ನೀರಿನಲ್ಲಿ ವಿಸರ್ಜನೆಗೆ ಬಿಡಲು ನದಿಗೆ ಇಳಿಯಬೇಕು. ಗಣಪತಿ ಇಡುವಂತಹ ಸ್ಥಳದಲ್ಲಿ ಸಿಸಿಟಿವಿ ಅಳವಡಿಕೆ ಮಾಡಬೇಕು. ಹಬ್ಬವನ್ನು ಸಾಮರಸ್ಯದಿಂದ ಮಾಡಬೇಕು, ವಿವಾದಿತ ಘೋಷಣೆ ಕೂಗುವ, ಪೋಸ್ಟ್ ಹಾಕುವುದು ಅಥವಾ ಇತರ ಕೋಮು ಸಂಘರ್ಷಕ್ಕೆ ಕಾರಣವಾದರೆ ಕೇಸ್ ದಾಖಲು ಮಾಡಲಾಗುತ್ತದೆ.
ಮಸೀದಿ, ಚರ್ಚ್, ದೇವಸ್ಥಾನ ಬಳಿ ಗಲಾಟೆ, ಅಥವಾ ಡಿಜೆ ಸೌಂಡ್ ಹಾಕಿ ಕುಣಿಯುವುದು ಸರಿಯಲ್ಲ. ಬ್ಯಾನರ್, ಬಂಟಿಂಗ್ಸ್ ಹಾಕುವಾಗ ಅದರಲ್ಲಿ ಯಾರಿಗಾದರೂ ನೋವು ಮಾಡುವಂತೆ ಇದ್ದರೆ ಅಂತಹ ಪೋಸ್ಟರ್ ಹಾಕುವಂತಿಲ್ಲ. ಜಾಹಿರಾತು ಹಾಕುವುದಾದರೆ ಪೊಲೀಸ್ ಇಲಾಖೆಯ 112, ಮಾದಕ ವಸ್ತು ನಿಷೇಧ, ಆನ್ಲೈನ್ ಗೇಮ್ ನಿಷೇಧ ಇರುವ , ಇತರ ಜಾಹಿರಾತು ಹಾಕಿ ಅದರಿಂದ ಪ್ರತಿಯೊಬ್ಬರಿಗೂ ಅನುಕೂಲ ಎಂದರು.

ದೇವಂಗಿಯಲ್ಲಿ ಕಳೆದ ಬಾರಿ ಸಮಸ್ಯೆ ಆಗಿತ್ತು. ಹಾಗಾಗಿ ಯಾರೇ ಆಗಲಿ 10 ಗಂಟೆಯ ನಂತರ ಸೌಂಡ್ ಬಳಕೆ ಮಾಡುವಂತಿಲ್ಲ. ಡಿಜೆಯನ್ನು ಯಾರು ಕೂಡ ಹಾಕುವಂತಿಲ್ಲ. ಈಗಾಗಲೇ ಜಿಲ್ಲಾಧಿಕಾರಿಗಳ ಆದೇಶ ಇದ್ದು ಅದನ್ನು ಮೀರಿ ಡಿಜೆ ಬಳಸಿದರೆ ಕೇಸ್ ದಾಖಲು ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ನಂತರ ಅಶ್ವಥ್ ಗೌಡ ಮಾತನಾಡಿ ಮೆರವಣಿಗೆ ಎಷ್ಟು ಹೊತ್ತು ಬೇಕಾದರೂ ಮಾಡಿ ಆದರೆ ಡಿಜೆ ಹಾಕುವಂತಿಲ್ಲ. ಬೇಗ ಮೆರವಣಿಗೆ ಪ್ರಾರಂಭ ಮಾಡಿ, ಬೇಗ ವಿಸರ್ಜನೆ ಮಾಡುವ ಕೆಲಸ ಮಾಡಿ. ನಾವು ಕೂಡ ಕಳೆದ ಬಾರಿ ಗಣೇಶ ಹಬ್ಬ ಮಾಡಿದ್ದೇವೆ. ಯಾವ ರೀತಿ ಮಾಡಬೇಕು ಎಂದು ಆದರ್ಶವಾಗಿ ತೋರಿಸಿದ್ದೇವೆ. ಇನ್ನೊಬ್ಬರಿಗೆ ತೊಂದರೆ ಮಾಡಿ ಹಬ್ಬ ಮಾಡುವ ಅವಶ್ಯಕತೆ ಇಲ್ಲ ಎಂದರು.
ಈ ಸಂದರ್ಭದಲ್ಲಿ ಇನ್ಸ್ಪೆಕ್ಟರ್ ಶಿವನಗೌಡ, ಪೊಲೀಸ್ ಸಿಬ್ಬಂದಿಗಳಾದ ದೀಪಕ್, ವೀರೇಂದ್ರ, ಸೇರಿದಂತೆ ಸುಮಾರು ಇನ್ನೂರಕ್ಕೂ ಹೆಚ್ಚು ಗಣಪತಿ ಸಮಿತಿ ಸದಸ್ಯರು ಇದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು