2:23 PM Wednesday29 - April 2026
ಬ್ರೇಕಿಂಗ್ ನ್ಯೂಸ್
ರಾಜ್ಯದಲ್ಲಿ ಹೊಸ ಕನಿಷ್ಠ ವೇತನ ಜಾರಿಗೆ ತರಲು ಯತ್ನ: ಸಂಡೂರಿನಲ್ಲಿ ಕಾರ್ಮಿಕ ಸಚಿವ… ಬಿಜೆಪಿ ಪಕ್ಷದಿಂದಲೇ ಮಹಿಳೆಯರಿಗೆ ಶೇ. 30ರಷ್ಟು ಮೀಸಲಾತಿ ಪ್ರಕಟಿಸಲಿ: ಸಚಿವ ಸಂತೋಷ್ ಲಾಡ್… Mangaluru | ಕುಕ್ಕರ್‌ ಬಾಂಬ್‌ ಸ್ಫೋಟದ ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಬೇಕಿತ್ತು: ಸಂತ್ರಸ್ತ… ಗಾದಿ ಪೈಪೋಟಿ | ದೆಹಲಿಗೆ ಹೋಗಲು 50 ಶಾಸಕರ ಟಿಕೆಟ್‌ ಬುಕ್ಕಿಂಗ್‌: ಕೇಂದ್ರ… Koppala | ಕುಷ್ಟಗಿಯಲ್ಲಿ ಗುಡುಗು ಸಹಿತ ಮಳೆ: ಸಿಡಿಲು ಬಡಿದು ವ್ಯಕ್ತಿ ಬಲಿ ಕೊಡಗು-ಮೈಸೂರು ರಾಜ್ಯ ಹೆದ್ದಾರಿ ಬಳಿ ಹುಲಿ ದಾಳಿಗೆ ಹಸು ಬಲಿ: ರೊಚ್ಚಿಗೆದ್ದ ಗ್ರಾಮಸ್ಥರಿಂದ… New Delhi | 228 ಪ್ರಯಾಣಿಕರಿದ್ದ ವಿಮಾನದಲ್ಲಿ ಬೆಂಕಿ: ಸ್ವಲ್ಪದರಲ್ಲೇ ತಪ್ಪಿತು ಮತ್ತೊಂದು… ಶಿಕ್ಷಕರೇ ಇಲ್ಲದ ಶಾಲೆಗಳಿಗೆ ಶೇ. 94 ಬಂದಿದ್ದು ಹೇಗೆ? ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ದೊಡ್ಡ… ತಂದೆ ಬೈದ ಕ್ಷುಲ್ಲಕ ಕಾರಣಕ್ಕೆ ಯುವತಿ ಆತ್ಮಹತ್ಯೆಗೆ ಶರಣು ಬಳ್ಳಾರಿ | ಪೊಲೀಸ್ ಶ್ವಾನಗಳ ಬಗ್ಗೆ ವಿಶೇಷ ಕಾಳಜಿ: ತಂಪಿಗಾಗಿ ಕೂಲರ್; ಕುಡಿಯಲು…

ಇತ್ತೀಚಿನ ಸುದ್ದಿ

ಮೂಡುಬಿದರೆ ಆಳ್ವಾಸ್ ಆಯುರ್ವೇದ ವೈದ್ಯಕೀಯ ಕಾಲೇಜಿನಲ್ಲಿ ಪಿಜಿ ವಿದ್ಯಾರ್ಥಿಗಳಿಗಾಗಿ ವಿಶೇಷ ಪ್ರೇರಣಾ ಕಾರ್ಯಾಗಾರ

22/12/2023, 21:43

ಮೂಡುಬಿದಿರೆ(reporterkarnataka.com): ಇಲ್ಲಿನ ಆಳ್ವಾಸ್ ಆಯುರ್ವೇದ ವೈದ್ಯಕೀಯ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗಾಗಿ ವಿಶೇಷ ಪ್ರೇರಣಾ ಕಾರ್ಯಾಗಾರ ನಡೆಯುತ್ತಿದ್ದು ಡಾ ಸುರೇಶ ನೆಗಳಗುಳಿಯವರು ಓರ್ವ ಸಂಪನ್ಮೂಲ ವ್ಯಕ್ತಿಯಾಗಿ ನಡುಹಗಲ ಕಾರ್ಯಾಗಾರ ವನ್ನು ನಡೆಸಿ ಕೊಟ್ಟರು.

ಸ್ನಾತಕೋತ್ತರ ಪದವಿ ಪಡೆಯ ಬೇಕಾದರೆ ಕೇವಲ ಪ್ರವೇಶ ಗಿಟ್ಟಿಸಿದರೆ ಸಾಲದು ಪ್ರತ್ಯುತ್ಪನ್ನ ಮತಿ ಸಹಿತವಾದ ಸಾಧನೆ ಅಗತ್ಯ. ಗ್ರಂಥೋಕ್ತ ವಿಚಾರಗಳನ್ನು ದಾಖಲೀಕರಣ ಮಾಡಲು ಸರಿಯಾದ ಅನುಸಂಧಾನದ ಅಗತ್ಯವಿದೆ. ಆದ ಕಾರಣ ಯೋಗ್ಯ ಉಪದೇಶಕನ ಜೊತೆಗೆ ಪೂರ್ಣ ಪ್ರಮಾಣದ ಕ್ರಮ ಬದ್ಧವಾದ ಅನುಸಂಧಾನ ಪ್ರಕ್ರಿಯೆ ಅಗತ್ಯ. ತೌಲನಾತ್ಮಕ ಅಧ್ಯಯನ, ವೈಜ್ಞಾನಿಕ ಸಲಕರಣೆಗಳಾದ ಸಿ‌.ಟಿ.ಸ್ಕಾನ್,ಕ್ಷ ಕಿರಣ, ಲ್ಯಾಬೊರೇಟರಿ ಇತ್ಯಾದಿಗಳನ್ನು ಬಳಸಿ ಸತ್ಯಾನ್ವೇಷಣೆ ಮಾಡ ಬೇಕು.
ಎಷ್ಟೋ ಉತ್ತಮ ಅಂಶಗಳು ಅಧ್ಯಯನದ ಕೊರತೆಯಿಂದ ಮಾಸಿ ಹೋಗಿವೆ. ಅಂಥವುಗಳ ಪುನರುಜ್ಜೀವನಕ್ಕೆ ಈ ರೀತಿಯ ಅಧ್ಯಯನ ಅಗತ್ಯ ಎನ್ನುತ್ತಾ ಹಲವಾರು ಪೂರಕ ಉದಾಹರಣೆಗಳನ್ನೂ ಸ್ವರಚಿತ ಮುಕ್ತಕ ಮಾಲೆಯನ್ನೂ ವಾಚಿಸಿದರು.


ಕಾಲೇಜು ಪ್ರಾಚಾರ್ಯ ಡಾ ಸಜೀತ್ ಎಂ. ಹಾಗೂ ಸ್ನಾತಕೋತ್ತರ ಡೀನ್ ಡಾ ರವಿರಾಜ ಹೆಗ್ಡೆ ಸಹಿತ ಎಪ್ಪತ್ತು ಮಂದಿ ಸ್ನಾತಕೋತ್ತರ ಪದವಿ ವಿದ್ಯಾರ್ಥಿ ವಿದ್ಯಾರ್ಥಿನಿಯರು ಈ ಕಾರ್ಯಕ್ರಮದ ಸದುಪಯೋಗ ಪಡಿಸಿಕೊಂಡರು.
ಪ್ರಾಚಾರ್ಯರು ಪುಸ್ತಕ ಹಾರ ಹಾಗೂ ಶಾಲು ಹೊದೆಸಿ ಸನ್ಮಾನ ಮಾಡುವ ಮೂಲಕ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು.

ಇತ್ತೀಚಿನ ಸುದ್ದಿ

ಜಾಹೀರಾತು